ಗುರುವಾರ, ಜನವರಿ 22, 2015

ಊರು ಸುಟ್ಟರೂ ಹನಮಪ್ಪ ಹೊರಗ..

ಹನುಮಪ್ಪನ ಆಧುನಿಕ ಪುರಾಣದಲ್ಲಿ ಅನಾವರಣಗೊಂಡ ಸಾಮಾಜಿಕ ಅವ್ಯವಸ್ಥೆ

-ಶಶಿಕಾಂತ ಯಡಹಳ್ಳಿ
                                        
ಶ್ರೀರಾಮನ ಪರಮಭಕ್ತ ಹನುಮಂತನು ರಾಮಾಯಣ ಮಹಾಕಾವ್ಯದ ಒಂದು ವಿಶಿಷ್ಟ ಪಾತ್ರ.ಕೋತಿಯೊಂದು ತನ್ನ ಪರಾಕ್ರಮ ಮತ್ತು ಆತ್ಮಸ್ತೈರ್ಯದಿಂದ ವಿರಾಟರೂಪ ಪಡೆದು ಅವತಾರ ಪುರುಷರಾಮನಿಂದ ಅಸಾಧ್ಯವಾದುದನ್ನು ಸುಲಭವಾಗಿ ಮಾಡಿತೋರಿಸಿದ ಒಂದು ಪ್ಯಾಂಟಸಿ ಪಾತ್ರ.ಆಂಜನೇಯನಿಗೆ ಪುರಾಣ ಪರಿಕಲ್ಪಣೆಯಲ್ಲಿ ತನ್ನದೇ ಆದ ಒಂದು ಮಹತ್ವ ಇದೆಸ್ವಾಮಿನಿಷ್ಟೆಗೆಇನ್ನೊಂದು ಹೆಸರೆ ಹನುಮಂತ ಎನ್ನುವುದು ಪ್ರತೀಕವಾಗಿದೆಹಿಂದೂಗಳ ಆರಾಧ್ಯದೈವಗಳಪಟ್ಟಿಯಲ್ಲಿರುವ ಹನುಮಂತ ತನ್ನ ವಿಚಿತ್ರ ವಿರಾಟ ಆಕಾರ ಹಾಗೂ ಕೋತಿಯತ್ವದಿಂದಾಗಿ ಜನರಲ್ಲಿಭಯ ಭಕ್ತಿ ಹಾಗೂ ವಿನೋದವನ್ನು ಹುಟ್ಟಿಸುವಂತಹ ದೇವರಾಗಿದ್ದಾನೆ ನಮ್ಮ ಹನುಮನನ್ನುಕೇಂದ್ರವಸ್ತುವಾಗಿಟ್ಟುಕೊಂಡು ಪ್ರಸನ್ನರವರು ಮಹಿಮಾಪುರ ಎನ್ನುವ ನಾಟಕ ಬರೆದು ಧಾರ್ಮಿಕವ್ಯವಸ್ಥೆಯ ಬೂಟಾಟಿಕೆಯನ್ನು ಬಯಲು ಮಾಡಿದ್ದರುಈಗ ಹನುಮಂತ ಹಾಲಗೇರಿಯವರು ಊರುಸುಟ್ಟರೂ ಹನಮಪ್ಪ ಹೊರಗ ಎನ್ನುವ ತಮ್ಮದೇ ಕಥೆ ಆಧರಿಸಿದ ನಗೆನಾಟಕವನ್ನು ರಚಿಸಿ,ಹನುಮದೇವರನ್ನೇ ಕೇಂದ್ರವಾಗಿರಿಸಿಕೊಂಡು ಹಳ್ಳಿಯ ಅರಾಜಕಾರಣವನ್ನು ಅನಾವರಣಗೊಳಿಸಿದ್ದಾರೆ.

ಆಟ-ಮಾಟ ಎನ್ನುವ ಧಾರವಾಡ ಮೂಲದ ಅರೆರೆಪರ್ಟರಿ ತಂಡದ ಕಲಾವಿದರು ಯತೀಶಕೊಳ್ಳೇಗಾಲರ ನಿರ್ದೇಶನದಲ್ಲಿ ಊರು ಸುಟ್ಟರೂ..... ನಾಟಕವನ್ನು ಸಿದ್ದಪಡಿಸಿದ್ದು ಸಂಸ ಪತ್ರಿಕೆಆಯೋಜಿಸಿದ್ದ ಮೂರು ದಿನಗಳ ತಳ ಸಂಸ್ಕೃತಿಯ ನೆಲೆ ನಾಟಕೋತ್ಸವದಲ್ಲಿ 2014 ಎಪ್ರಿಲ್ 11ರಂದುರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಸಂಸ ಬಯಲು ಮಂದಿರದಲ್ಲಿ ಪ್ರದರ್ಶನಗೊಂಡುನೋಡುಗರನ್ನು ನಗೆಗಡಲಲ್ಲಿ ತೇಲಿಸಿತು.

  
 ನಾಟಕದ ಕಥಾವಸ್ತು ಹೀಗಿದೆವಜ್ರಮಟ್ಟಿ ಮತ್ತು ಧರಗಟ್ಟಿ ಎನ್ನುವ ಎರಡು ಅಕ್ಕಪಕ್ಕದ ಹಳ್ಳಿಗಳು.ಧರಗಟ್ಟಿಯ ಹನುಮಂತ ದೇವರ ವಿಗ್ರಹ ಮೂಲದಲ್ಲಿ ತಮ್ಮ ಊರಿನದೆಂದು ಆರೋಪಿಸಿದ ಕೆಲವರುರಾತ್ರೋ ರಾತ್ರಿ ವಜ್ರಮಟ್ಟಿಯಿಂದ ವಿಗ್ರಹ ಕದ್ದುತಂದು ತಮ್ಮೂರ ಗುಡಿಯಲ್ಲಿ ಪ್ರತಿಷ್ಟಾಪಿಸುತ್ತಾರೆ.ಇದರಿಂದಾಗಿ ಎರಡೂ ಊರಿನಲ್ಲಿ ವೈಷಮ್ಯದ ಬೆಂಕಿ ಹೊತ್ತಿಕೊಳ್ಳುತ್ತದೆಕೊನೆಗೆ ಪೊಲೀಸ ಕಂಪ್ಲೇಂಟ್ಆಗಿ ವಿಗ್ರಹವನ್ನು ಪೊಲೀಸ್ ಸ್ಟೇಶನ್ನಲ್ಲಿ ಇಡಲಾಗುತ್ತದೆಆಮೇಲೆ  ವಿವಾದ ಕೋರ್ಟ ಮೆಟ್ಟಲೇರಿಹನುಮಪ್ಪ ಕೋರ್ಟ ಸುಪರ್ಧಿಗೆ ಒಳಗಾಗುತ್ತದೆಎರಡೂ ಹಳ್ಳಿಯವರು ಪ್ರತಿಷ್ಟೆಯ ಪೈಪೋಟಿಗೆ ಬಿದ್ದುತಮ್ಮಲ್ಲಿ ಇದ್ದ ನಗನಾಣ್ಯ ಆಸ್ತಿಗಳನ್ನೆಲ್ಲಾ ಮಾರಿ ವಕೀಲರನ್ನಿಟ್ಟು ಕೇಸ್ ನಡೆಸಿ ಪಾಪರ್ ಆಗುತ್ತಾರೆ15ವರ್ಷ ಕೇಸ್ ನಡೆದು ಕೊನೆಗೆ ವಜ್ರಮಟ್ಟಿ ಊರವರಿಗೆ ಜಯ ಸಿಗುತ್ತದೆಆದರೆ ಅಷ್ಪೊತ್ತಿಗೆ ಬರ ಬಂದುಎರಡೂ ಊರವರೆಲ್ಲಾ ದುಡಿಯಲೆಂದು ಗುಳೆ ಹೋಗತೊಡಗಿರುತ್ತಾರೆಯಾವ ಹನುಮಂತನವಿಗ್ರಹಕ್ಕಾಗಿ ತಮ್ಮ ಪ್ರತಿಷ್ಟೆ ಪಣಕ್ಕೊಡ್ಡಿದ ಜನ ಎಲ್ಲವನ್ನೂ ಕಳೆದುಕೊಂಡರೋ ಅಂತವರ ಊರಿಗೆವಿಗ್ರಹ ಬಂದಾಗ ಯಾರಿಗೂ ಬೇಡವಾಗಿ ಹನುಮಂತ ಬೀದಿಪಾಲಾಗುತ್ತಾನೆಇಲ್ಲಿಗೆ ನಾಟಕಮುಗಿಯುತ್ತದೆಆದರೆ ಅದು ಹುಟ್ಟುಹಾಕಿದ ನಗು ನೋಡುಗರಿಗೆ ಮುದನೀಡುತ್ತದೆ.

ಇಡೀ ನಾಟಕ ನವೀರಾದ ಹಾಸ್ಯದೊಂದಿಗೆ ಮನುಷ್ಯನೊಳಗಿನ ಸ್ವಾರ್ಥದ್ವೇಷಮೌಡ್ಯತೆ ಹಾಗೂಹುಂಬುತನಗಳನ್ನು ತೆರೆದಿಡುತ್ತದೆಅದು ಹೇಗೆ ಸ್ವಪ್ರತಿಷ್ಟೆಗೆ ಬಿದ್ದು ಜನ ಹಾಳಾಗುತ್ತಾರೆ ಎನ್ನುವುದರಪ್ರಾತ್ಯಕ್ಷಿಕತೆ  ನಾಟಕದಲ್ಲಿದೆಇಲ್ಲಿ ಹನುಮಂತ ದೇವರು ಕೇವಲ ನೆಪವಾಗಿದ್ದರೂ ಆತನ ಹೆಸರಲ್ಲಿಮನುಷ್ಯರು ಮಾಡುವ ರಾಜಕೀಯ ಆಯಾಮಗಳು  ನಾಟಕದಲ್ಲಿ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ.ಪುರೋಹಿತಶಾಹಿ ಪೂಜಾರಿಗಳ ತಂತ್ರಹಳ್ಳಿಗರ ಜಗಳದಲ್ಲಿ ಮೂಗು ತೂರಿಸುವ ರಾಜಕಾರಣಿಗಳಕುತಂತ್ರಯಾವುದೋ ಒಂದು ಘಟನೆಗೆ ಇಲ್ಲದ್ದನ್ನು ಆರೋಪಿಸಿ ಬ್ರೇಕಿಂಗ್ ನ್ಯೂಸ್ ಮಾಡುವ ಪತ್ರಿಕೆಹಾಗೂ ಚಾನೆಲ್ಗಳ ಹೊನಗೇಡಿತನ,  ಸಮಸ್ಯೆಯನ್ನು ಶಮನಗೊಳಿಸುವ ಬದಲು ಕ್ಲಿಷ್ಟಗೊಳಿಸುವಪೊಲೀಸರ ಬೇಜವಾಬ್ದಾರಿತನನ್ಯಾಯಾಲಯದ ವಿಳಂಬ ನೀತಿ ಮತ್ತು ನ್ಯಾಯವಾಧಿಗಳಧನದಾಹಗಳನ್ನು ಲೇವಡಿ ಮಾಡುವಲ್ಲಿ  ನಾಟಕ ಯಶಸ್ವಿಯಾಗಿದೆ  ನಾಟಕ ನೋಡಿಸಿಕೊಂಡುಹೋಗುವುದು ಅದರಲ್ಲಿ ಬಳಸಲಾದ ಉತ್ತರ ಕರ್ನಾಟಕದ ಭಾಷಾ ಸೊಗಡು ಮತ್ತು ಅದರಿಂದಹೊರಹೊಮ್ಮುವ ನಗೆಯಿಂದಾಗಿ ನಾಟಕದಲ್ಲಿ ಹರಿಕತೆ ಮಾದರಿಯ ಆರಂಭ ಹಾಗೂ ತತ್ವಪದಗಳನ್ನು ಮತ್ತು ಹಳ್ಳಿಗಳ ಭಜನಾ ಶೈಲಿಯ ಹಾಡುಗಳನ್ನು ಬಳಸಿದ್ದು ನಾಟಕದ ಸೊಗಸನ್ನುಹೆಚ್ಚಿಸಿದೆ

ಮನುಷ್ಯರು ತಮ್ಮ ಸ್ವಯಂಕೃತ ಅಪರಾಧದಿಂದಾಗಿಮಾಡಿಕೊಳ್ಳಬಹುದಾದ ಎಲ್ಲಾ ಅವಘಟಗಳಿಗೆ ದೇವರನ್ನೇಆರೋಪಿಸುವುದು ನಮ್ಮ ಸಮಾಜದ ವೈಚಿತ್ರ್ಯವಾಗಿದೆ.   ಇಲ್ಲಿದೇವರು ಎನ್ನುವವ ಕೇವಲ ತೋರುಂಬ ಲಾಭ ಎನ್ನುವಪರಮಸತ್ಯವನ್ನು  ನಾಟಕದಲ್ಲಿ ತೋರಿಸಲಾಗಿದೆಜನತಮ್ಮ ಒಣಪ್ರತಿಷ್ಟೆಗಾಗಿ ಹನುಮವಿಗ್ರಹ ಬೇಕೆಂದು ಕೋರ್ಟಿಗೆಹೋಗಿ ಬಡಿದಾಡಿ ಅತಃಪತನ ಹೊಂದಿ ಕೊನೆಗೆ ದೇವರನ್ನೇಅದಕ್ಕೆ ಕಾರಣವಾಗಿಸಿ ವಿಗ್ರಹವನ್ನೇ ತಿರಸ್ಕರಿಸುವರೀತಿಯನ್ನು ಬಲು ವಿಡಂಬಣಾತ್ಮಕವಾಗಿ ಊರು ಸುಟ್ಟರೂ.... ನಾಟಕದಲ್ಲಿ ತೋರಿಸಲಾಗಿದೆಸಮಾಜದಗುನಾವಗುಣಗಳನ್ನು ವಿಶ್ಲೇಷಿಸುವ ನಾಟಕದ ಆಶಯವಿಶಿಷ್ಟವಾಗಿದೆಯಾದರೂ  ಆಶಯವನ್ನು ಹೇಳುವ ರೀತಿಯಲ್ಲಿ ಹಲವಾರು ಸಮಸ್ಯೆಗಳಿವೆ.ರಂಗಪಠ್ಯದ ಸಂದೇಶವನ್ನು ರಂಗಪ್ರದರ್ಶನ ಸಾಕಾರಗೊಳಸುವಲ್ಲಿ ಇನ್ನೂಪರಿಷ್ಕರಣೆಗೊಳಗಾಗಬೇಕಿದೆ.
 
ಇದು ಹಾಸ್ಯನಾಟಕ ಎನ್ನುವುದರಿಂದಲೋ ಏನೋ ನಾಟಕದಲ್ಲಿ ತರ್ಕ ಮಾಯವಾಗಿದೆಗೊಂದಲಗಳೂಅತಿಯಾಗಿವೆಜನರನ್ನು ನಗಿಸುವುದನ್ನೇ ಪ್ರಮುಖ ಗುರಿಯಾಗಿರಿಸಿಕೊಂಡಿದ್ದರಿಂದ ನಾಟಕದ ಬಂಧಜಾಳುಜಾಳಾದಂತೆನಿಸುತ್ತದೆವಿನೋದವೇ ಇಲ್ಲಿ ಸ್ಥಾಯಿಯಾಗಿ ಮೂಡಿಬಂದಿದ್ದು  ಅಂತಿಮವಾಗಿ ಅದುಮೂಡಿಸಬೇಕಾದ ವಿಷಾದ ಮಾಯವಾಗಿದೆನಗೆಯ ನಾಗಾಲೋಟದಲ್ಲಿ ನಾಟಕದ ನಿಜವಾದ ಆಶಯಮರೆಯಾಗಿದೆನಾಟಕದ ಕೊನೆಗೆ ಪ್ರತಿಷ್ಟೆಗೆ ಬಿದ್ದು ಪ್ರಪಾತಕ್ಕೆ ಬಿದ್ದ ಹಳ್ಳಿ ಜನರ ದಾರುಣ ಬದುಕನ್ನುಕಟ್ಟಿಕೊಡಬೇಕಾದಾಗ ವಿಷಾದವನ್ನು ಮೂಡಿಸಬೇಕಾಗಿತ್ತುಆದರೆ  ಪ್ರಮುಖವಾದ ಸನ್ನಿವೇಶವನ್ನುಕೇವಲ ಒಂದು ಹಾಡಿನ ಮೂಲಕ ಹೇಳಿ ಜನರ ದುರಂತತೆಯನ್ನು ತೇಲಿಸಿದಂತಿದೆನಿರ್ದೇಶಕರಿಗೆನಾಟಕದ ಆಶಯಕ್ಕಿಂತ ಅತಿಶಯವೇ ಮಹತ್ವದ್ದಾಗಿದ್ದು ನಾಟಕ ಹಿಡಿತಕ್ಕೆ ಸಿಗದೇ ಚಿತ್ತಬಂದತ್ತಹಾಸ್ಯಸವಾರಿ ಓಡಿದಂತಿದೆ.

  ನಾಟಕದ ಕ್ಯಾನ್ವಾಸ್ ಎರಡು ಹಳ್ಳಿ ಹಾಗೂ ಒಂದುಪಟ್ಟಣದಲ್ಲಿ ಆವರಿಸಿಕೊಂಡಿದೆಅನೇಕಾನೇಕ ಪಾತ್ರಗಳುಬರುತ್ತವೆಆದರೆ ಕೇವಲ ಎಂಟೇ ಜನ ಕಲಾವಿದರುಸಕಲೆಂಟು ಪಾತ್ರಗಳನ್ನು ಅಭಿನಯಿಸಿದ್ದರಿಂದನೋಡುಗರಲ್ಲಿ ಗೊಂದಲವನ್ನುಂಟು ಮಾಡುವಂತಿದೆಊರಿನವರು  ಊರಿನಲ್ಲೂ ಇರುತ್ತಾರೆ ಊರಿನ ಗುಡಿಪೂಜಾರಿ  ಊರಿನಲ್ಲೂ ಕಾಣಸಿಗುತ್ತಾನೆಹೀಗಾಗಿಯಾವ ಪಾತ್ರ ಯಾವ ಊರಿನದು ಎನ್ನುವುದೇ ಕನ್ಪೂಜ್.ಜೊತೆಗೆ ಒಬ್ಬೊಬ್ಬ ನಟ ನಾಲ್ಕೈದು ಪಾತ್ರಗಳನ್ನುಮಾಡುವುದರಿಂದ ಹಾಗೂ ಮುಖವಿನ್ಯಾಸದಲ್ಲಿ ಯಾವುದೇಬದಲಾವಣೆ ಇಲ್ಲದೇ ಇರುವುದರಿಂದ ಪ್ರೇಕ್ಷಕರಲ್ಲಿ ಇನ್ನೂಹೆಚ್ಚಿನ ಗೊಂದಲ ಮೂಡುತ್ತದೆಇಡೀ ನಾಟಕದ ಪ್ರದರ್ಶನದ ಪಾರ್ಮ್ಯಾಟ್ ಪಕ್ಕಾ ಬೀದಿನಾಟಕವೊಂದನ್ನು ನೋಡಿದಂತಾಯಿತುನಟರು ಅಭಿನಯಿಸುವ ರೀತಿಯಲ್ಲಿ ವೃತ್ತಿ ಕಂಪನಿ ಶೈಲಿಹಾಗು ಆಧುನಿಕ ನಾಟಕದ ಶೈಲಿಗಳು ಸಮ್ಮಿಶ್ರಗೊಂಡಿದ್ದವುಇದನ್ನೊಂದು ನಾಟಕಎನ್ನುವುದಕ್ಕಿಂತಲೂ ಸ್ಟ್ಯಾಂಡಅಪ್ ಕಾಮೆಡಿ ಶೋ ಎನ್ನುವುದು ಸರಿ ಎನ್ನಿಸುತ್ತದೆಯಾಕೆಂದರೆಯಾವುದೇ ಹೇಳಿಕೊಳ್ಳುವಂತಹ ಸೆಟ್ ಪ್ರಾಪರ್ಟಿಗಳಿಲ್ಲರಂಗವೇದಿಕೆಯ ಆಯಾಮಗಳನ್ನುಬಳಸಿಕೊಳ್ಳಲಿಲ್ಲ.  ಬೆಳಕಿನ ವಿನ್ಯಾಸದಲ್ಲಿ ವ್ಯತ್ಯಾಸವಿಲ್ಲಹಲವು ಪಾತ್ರಗಳು ಬರುತ್ತವೆ ತಮ್ಮ ಪಂಚ್ಡೈಲಾಗಗಳನ್ನು ಹೇಳುತ್ತವೆ ಮತ್ತು ಚಿತ್ತ ಬಂದತ್ತ ಹೊರಹೊಗುತ್ತವೆರಂಗಶಿಸ್ತು ಎನ್ನುವುದು ಇಡೀನಾಟಕದಲ್ಲಿ ಹುಡುಕಿದರೂ ಸಿಕ್ಕುವುದಿಲ್ಲ.

ಹಳ್ಳಿ ಜಾತ್ರೆಗಳಲ್ಲಿ ವರ್ಷಕ್ಕೊಮ್ಮೆ ಊರವರೆಲ್ಲಾ ಸೇರಿ ಒಂದು ನಾಟಕವನ್ನು ಕಲಿತು ಆಡುತ್ತಾರಲ್ಲಾಹಾಗೆಯೇ  ನಾಟಕ ಕೂಡಾ ಮೂಡಿ ಬಂದಿದೆಗ್ರಾಮೀಣ ಕಲಾವಿದರಾಗಿದ್ದರೆ ಅಥವಾ ನಾಟಕಕ್ಕೆಹೊಸದಾಗಿ ಬಂದ ನಟ-ನಿರ್ದೇಶಕರಾಗಿದ್ದರೆ ಪರವಾಗಿಲ್ಲ ಎನ್ನಬಹುದಾಗಿತ್ತುಆದರೆ ನಾಟಕದಲ್ಲಿರುವ ಎಲ್ಲಾ ನಟರೂ ರಂಗಭೂಮಿಯಲ್ಲಿ ಪಳಗಿದವರುನೀನಾಸಂಶಿವಸಂಚಾರ ಹಾಗೂಎನ್ಎಸ್ಡಿ ಬೆಂಗಳೂರು ಚಾಪ್ಟರ್ಗಳಲ್ಲಿ ತರಬೇತಿ ಪಡೆದು ರೆಪರ್ಟರಿ ಪ್ರೊಡಕ್ಷನ್ಗಳಲ್ಲಿ ಅನುಭವಹೊಂದಿದವರುಇಂತಹ ಅನುಭವಸ್ತ ನಟರಿಂದ ಶಿಸ್ತುಬದ್ದ ನಾಟಕವನ್ನು ಬೆಂಗಳೂರಿನ ಪ್ರೇಕ್ಷಕರುನಿರೀಕ್ಷಿಸಿದ್ದರುಆದರೆ ನಿರೀಕ್ಷೆ ನಿರಾಸೆಯಲ್ಲ ಬದಲಾಗಿ ಕೇವಲ ದಕ್ಕಿದಷ್ಟು ನಕ್ಕು ಖುಷಿಪಟ್ಟಿದ್ದಷ್ಟೇಸಾರ್ಥಕವಾಯಿತುಕನಿಷ್ಟ ಆಗಮನ ನಿರ್ಗಮನಗಳ ಅರಿವಾದರೂ ಬೇಕಾಗಿತ್ತುನಟರಿಗೆ ಸನ್ನಿವೇಶಹಾಗೂ ಸೆಟ್ ಪರಿಕಲ್ಪನೆ ಇರಬೇಕಾಗಿತ್ತುಹೋಗಲಿ ಕಂಟಿನ್ಯೂಟಿ ಸೆನ್ಸ ಆದರೂ ಬೇಕಾಗಿತ್ತು.ಹಳ್ಳಿಯಿಂದ ಜನರನ್ನು ಪೊಲೀಸರು ಇದ್ದಕ್ಕಿದ್ದಂತೆ ಬಂಧಿಸಿ ಜೀಪಿನಲ್ಲಿ ಹಾಕಿಕೊಂಡು ಬರುತ್ತಾರೆಗುಂಪಲ್ಲಿ ಬರಿಗೈಯಲ್ಲಿ ಬಂದ ಪೂಜಾರಿಯ ಕೈಗೆ  ಠಾಣೆಗೆ ಬರುವುದರೊಳಗೆ ಹಾರ್ಮೋನಿಯಂಪೆಟ್ಟಿಗೆ ಬಂದಿರುತ್ತದೆಹೋಗಲಿ ದಾರಿಯಲ್ಲಿ ತಂದಿರಬಹುದು ಎಂದುಕೊಳ್ಳೋಣ ಪೆಟ್ಟಿಗೆ ಸಮೇತಪೂಜಾರಿಯನ್ನು ಠಾಣೆಯ ಒಳಗೆ ಬಂಧಿಸಲಾಗುತ್ತದೆಅದು ಹೇಗೆ ಎಲ್ಲರೂ ಬಿಡುಗಡೆಗೊಂಡಾಗಬರಿಕೈಯಲ್ಲಿ ಪೂಜಾರಿ ಸಮೇತ ಎಲ್ಲರೂ ಹೊರಹೋಗುತ್ತಾರೆಆದರೆ ಅದೇ ಪೂಜಾರಿ ಮತ್ತೊಮ್ಮೆಪೊಲೀಸ್ ಠಾಣೆಗೆ ಬಂದಾಗ ಕೈಯಲ್ಲಿ ಹಾರಮೋನಿಯಂ ಪೆಟ್ಟಿಗೆ ಹಿಡಿದುಕೊಂಡೇ ಬರುತ್ತಾರೆರೀತಿಯ ಹಲವಾರು ಕಂಟಿನ್ಯೂಟಿ ಸಮಸ್ಯೆಗಳು ನಾಟಕದಲ್ಲಿವೆ.

  
ಕೇವಲ ಜನ ನಗುತ್ತಾರೆ ಎನ್ನುವುದು ನಾಟಕದ ಯಶಸ್ಸಿನ ಸಂಕೇತವಲ್ಲಒಂದು ನಾಟಕದಲ್ಲಿರಂಗಶಿಸ್ತು ಇಲ್ಲದೇ ಹೋದರೆ ಅದು ಪರಿಪೂರ್ಣ ನಾಟಕವಾಗಲಾರದುಜನರನ್ನು ನಗಿಸುವುದಕ್ಕೆಂದೇ ನಾಟಕದಲ್ಲಿ ಅಪರೂಪಕ್ಕೊಮ್ಮೆ ಡಬಲ್ ಮೀನಿಂಗ್ ಡೈಲಾಗ್ ಕೂಡಾ ಬಳಸಲಾಗಿದೆಹಳೆಯಜೋಕ್ಸಗಳಿವೆ ಜೊತೆಗೆ ಉತ್ತರ ಕರ್ನಾಟಕದ ದೇಸಿ ಬೈಗಳುಗಳು ಪುಂಕಾನುಪುಂಕವಾಗಿವೆಇನ್ನೇನುಬೇಕು ಬೇರೆ ಕಾರಣ ನಗು ಉಕ್ಕಿಸಲುಹಿಂದೆ ನಾಟಕದ ಪರದೆ ಮಾದರಿಯಲ್ಲಿ ಬ್ಯಾಕ್ ಡ್ರಾಪ್ಹಾಕಲಾಗಿದೆಅದರ ಎಡ ಬಲಕ್ಕೆ ಜನರ ಗುಂಪು ನಗುವ ಕಾರ್ಟೂನ್ ಚಿತ್ರಗಳನ್ನು ಬಿಡಿಸಲಾಗಿದೆ.ಅರ್ಧ ಭಾಗ ತೆರೆದಿದ್ದರೆ ಇನ್ನರ್ಧ ಭಾಗವನ್ನು  ನಾಟಕದಾದ್ಯಂತ ಬಿಳಿ ಬಟ್ಟೆಯಿಂದ ಮುಚ್ಚಲಾಗಿದೆ.ಇದೆಲ್ಲ ಅನಗತ್ಯವಾಗಿತ್ತುಇರುವ ಬ್ಯಾಕ್ಡ್ರಾಪನ್ನೂ ಸಹ ಸಮರ್ಪಕವಾಗಿ ಬಳಸದೆ ನಾಟಕದಲ್ಲಿಆಭಾಸವನ್ನು ಸೃಷ್ಟಿಸಲಾಯಿತುನೇರವಾಗಿ ಮುಖಮಾಡಿದ ಹನುಮಂತನನ್ನು   ನಾಟಕದಲ್ಲಿಮಾತ್ರ ಕಾಣಲು ಸಾಧ್ಯಬಹುತೇಕ ಹಳ್ಳಿಗಳಲ್ಲಿ ಹನುಮಂತ ದೇವರ ಮುಖ ಯಾವಾಗಲೂ ಎಡಕ್ಕೆಇಲ್ಲವೇ ಬಲಕ್ಕೆ ತಿರುಗಿರುತ್ತದೆ ನಾಟಕದ ವಿಶೇಷತೆ ನೇರ ಮೂತಿಯ ಹನುಮಪ್ಪ.
 
ಯತೀಶ್ ಕೊಳ್ಳೆಗಾಲ ಉತ್ತಮ ನಟ ಎನ್ನುವುದು  ನಾಟಕದಲ್ಲಿ ಅವರು ಮಾಡಿದ ವಿವಿಧ ಪಾತ್ರಗಳಅಭಿನಯದಿಂದ ಗೊತ್ತಾಗುತ್ತದೆಆದರೆ ಅವರು ನಿರ್ದೇಶನದ ಪಟ್ಟುಗಳನ್ನು ಇನ್ನೂರೂಢಿಸಿಕೊಳ್ಳಬೇಕಿದೆಬರೀ ಮಾತಿನ ಮೂಲಕ ನಾಟಕ ಕಟ್ಟದೇ ವಿವಿಧ ರಂಗ ಆಯಾಮಗಳನ್ನುಸಮರ್ಥವಾಗಿ ಬಳಸಿಕೊಳ್ಳುವುದನ್ನು ಕಲಿಯಬೇಕಿದೆರಂಗಶಿಸ್ತು ಹಾಗೂ ಕಂಟಿನ್ಯೂಟಿಗಳತ್ತಗಮನಹರಿಸಬೇಕಿದೆಪಾತ್ರಪೋಷಣೆಗಳನ್ನು ಸಮರ್ಥವಾಗಿ ನಿಭಾಯಿಸಬೇಕಿದೆಬ್ಲಾಕಿಂಗ್ ಮತ್ತುಮೂವಮೆಂಟ್ಗಳಲ್ಲಿ ಇನ್ನೂ ಶ್ರಮಿಸಬೇಕಿದೆಯುವತಿಯರಿಗೆ ಗಂಡು ವೇಷತೊಡಿಸಿ ಗಂಡಸಿನ ಪಾತ್ರಹಂಚಿಕೆ ಮಾಡಿದಾಗ ಕನಿಷ್ಟ ಆಕೆಯ ಮೂಗುನತ್ತನ್ನು ಬಿಚ್ಚಿಡಿಸಬೇಕು ಎನ್ನುವ ಸಾಮಾನ್ಯ ತಿಳುವಳಿಕೆಬೇಕಾಗುತ್ತದೆಯಾಕೆಂದರೆ ಜೋಗಪ್ಪಗಳನ್ನು ಹೊರತು ಪಡಿಸಿ ಯಾವುದೇ ಗಂಡಸು ಮೂಗುಬೊಟ್ಟುತೊಟ್ಟು ಓಡಾಡುವುದು ರೂಡಿಗತವಾದದ್ದಲ್ಲಕಾಸ್ಟೂಮ್ಸಗಳ ಆಯ್ಕೆಯಲ್ಲೂ ನಿರ್ದೇಶಕರುಗಮನಕೊಡಬೇಕಾಗಿದೆಉತ್ತರ ಕರ್ನಾಟಕದ ಹಳ್ಳಿಯಲ್ಲಿ ಅನಕ್ಷರಸ್ತರು ಪೈಜಾಮ ಹಾಕಿಕೊಳ್ಳುವುದು,ಪೂಜಾರಿ ನಾಟಕದಾದ್ಯಂತ ಬಿಳಿ ಲುಂಗಿ ತೊಟ್ಟಿರುವುದುಕೆಲವರಿಗೆ ದೋತರವನ್ನೂ ಸರಿಯಾಗಿಉಟ್ಟುಕೊಳ್ಳಲೂ ಬಾರದಿರುವುದುಪೊಲೀಸ್ ಡ್ರೆಸ್ನಲ್ಲಿ ವಾಸ್ತವತೆ ಇಲ್ಲದೇ ಇರುವುದು,ಬರ್ಮುಡಾದಂತಹ ಮುಕ್ಕಾಲು ಪ್ಯಾಂಟ್ಗಳನ್ನು ತೊಡಿಸಿರುವುದು... ಮುಂತಾದವು ನಾಟಕದಪ್ರಾದೇಶಿಕತೆ ಆಧರಿಸಿದ ಪಾತ್ರಗಳನ್ನು ಕಟ್ಟಿಕೊಡುವಲ್ಲಿ ವ್ಯತಿರಿಕ್ತವೆನಿಸುತ್ತವೆಬಹುಷಃ  ನಾಟಕದನಿರ್ದೇಶಕ ಕೊಳ್ಳೆಗಾಲದವರಾಗಿದ್ದರಿಂದ ಉತ್ತರ ಕರ್ನಾಟಕದ ಹಳ್ಳಿಗಳ ಸಂಸ್ಕೃತಿಯ ಅರಿವುಪೂರ್ಣಪ್ರಮಾಣದಲ್ಲಿ ಇಲ್ಲವಾಗಿದೆ.

  
ನಾಟಕದ ಪಾತ್ರದಾರಿಗಳಲ್ಲಿ ಲವಲವಿಕೆ ಇದೆಪೂಜಾರಿ ಹಾಗೂ ಭಾಗವತನಾಗಿ ಧನಂಜಯ ಮತ್ತುಚೇರಮನ್ ಹಾಗೂ ಹನುಮನಾಗಿ ಮಾರಪ್ಪ ಬೆಜ್ಜಿಹಳ್ಳಿ ಉತ್ತಮವಾಗಿ ಅಭಿನಯಿಸಿದ್ದಾರೆಪಿಎಸ್ಐಹಾಗು ಹುಚ್ಚ  ಪಾತ್ರದಲ್ಲಿ ಯತೀಶ್ ತಮ್ಮ ಓವರ್ ಆಕ್ಟಿಂಗ್ ಶೈಲಿಯಿಂದಾಗಿ ಗಮನಸೆಳೆದಿದ್ದಾರೆ.ಎಂಎಲ್ಎ ಹಾಗೂ ಪೊಲೀಸ್ ಪೇದೆಯಾಗಿ ಅಭಿನಯಿಸಿದ ಮಹದೇವ್ ಹಡಪದ ತಮ್ಮ ವಿಶಿಷ್ಟ ವೃತ್ತಿಕಂಪನಿ ನಾಟಕದ ನಟನಾ ಶೈಲಿಯಿಂದಾಗಿ ಜನರನ್ನು  ನಕ್ಕು ನಗಿಸುತ್ತಾರೆರೇಖಾ ಹೊಂಗಲ್ ಮತ್ತುಗೀತಾ  ಇಬ್ಬರೂ ಯುವತಿಯರು  ನಾಟಕದ ಗಂಡು ಹಾಗೂ ಹೆಣ್ಣು ಎರಡೂ ರೀತಿಯಪಾತ್ರಗಳಲ್ಲಿ ಸೊಗಸಾಗಿ ನಟಿಸಿದ್ದಾರೆಎಲ್ಲಾ ನಟರ ಟೈಂ ಸೆನ್ಸ ಹಾಗೂ ಪಂಚ್ ಡೈಲಾಗ್ ಡೆಲಿವರಿಚೆನ್ನಾಗಿ ವರ್ಕಔಟ್ ಆಗಿದೆಆದರೆ  ನಟರಿಗೆ ತಮ್ಮ ನಟನೆಯಲ್ಲಿದ್ದಷ್ಟೇ ಶ್ರದ್ದೆ ರಂಗತಂತ್ರಗಳಬಳಕೆಯಲ್ಲೂ ಇದ್ದರೆ ನಾಟಕ ಇನ್ನೂ ಸೊಗಸಾಗಿ ಮೂಡಿಬರಬಹುದಾಗಿತ್ತುಮೂವತ್ತರಷ್ಟುಪಾತ್ರಗಳನ್ನು  ಆರೇ ಜನ ಕಲಾವಿದರು ಹಂಚಿಕೊಂಡು ಅಭಿನಯಿಸುವುದು ಸವಾಲಿನ ಕೆಲಸಸವಾಲನ್ನು ಮೆಟ್ಟಿನಿಲ್ಲಲು ಇನ್ನೂ ಎಲ್ಲರೂ ಪ್ರಯತ್ನಿಸಬೇಕಿದೆಐದೈದು ನಿಮಿಷಕ್ಕು ಪ್ರತಿ ವ್ಯಕ್ತಿಯಪಾತ್ರಗಳು ಬದಲಾಗುತ್ತಿರುವುದರಿಂದ ಪಾತ್ರದೊಳಗೆ ಯಾವುದೆ ಕಲಾವಿದನಿಗೆ ಪ್ರವೇಶಿಸಲುಅವಕಾಶವೇ ಇಲ್ಲವಾಯಿತುಆಂಗಿಕ ಹಾಗೂ ವಾಚಿಕಾಭಿನಯಕ್ಕಿರುವ ಅವಕಾಶ ಸಾತ್ವಿಕಾಭಿನಯಕ್ಕೆಇಲ್ಲದೇ ಹೋಯಿತುಆಹಾರ್ಯಾಭಿನವಂತೂ ಅದ್ವಾನವಾಗಿತ್ತು.

ಸಾಮಾಜಿಕ ಅವ್ಯವಸ್ಥೆಯನ್ನು ಹಾಸ್ಯದ ಮೂಲಕ ಲೇವಡಿ ಮಾಡುವ ನಾಟಕಕಾರನ ಉದ್ದೇಶಉತ್ತಮವಾದದ್ದಾಗಿದೆಆದರೆ ಅದು ನಾಟಕ ಪ್ರದರ್ಶನದಲ್ಲಿ ಮೂಡಿ ಬರದಿರುವುದೇ ಕೊರತೆಯಾಗಿದೆ.ಇಡೀ ನಾಟಕದ ಅನಗತ್ಯ ಭಾಗವನ್ನು ಎಡಿಟ್ ಮಾಡಿದರೆಅನಗತ್ಯ ಹಾಗೂ ಪುನರಾವರ್ತನೆಗೊಳ್ಳುವಬೈಗುಳಗಳನ್ನು ನಿಯಂತ್ರಿಸಿದರೆನಾಟಕದಾದ್ಯಂತ ರಂಗಶಿಸ್ತನ್ನು ರೂಢಿಸಿಕೊಂಡಿದ್ದರೆಬೀದಿನಾಟಕದ ಮಾದರಿಯಲ್ಲಿ ಪ್ರದರ್ಶಿಸಲಾದ  ನಾಟಕದ ಫಾರ್ಮ್ಯಾಟನ್ನು ಪ್ರಿಸೀನಿಯಂ ನಾಟಕ ಶೈಲಿಗೆಬದಲಾಯಿಸಿದರೆನಾಟಕದಲ್ಲಿ ಬರುವ ಸನ್ನಿವೇಶಗಳಿಗೆ ತಾರ್ಕಿಕ ಲಿಂಕ್ಗಳನ್ನು ಒದಗಿಸಿದರೆ,ರಂಗತಂತ್ರಗಳನ್ನು ಸರಿಯಾಗಿ ಬಳಸಿಕೊಂಡರೆಗೊಂದಲಕಾರಿಯಾದ ಹಿನ್ನೆಲೆ ಬ್ಯಾಕ್ ಡ್ರಾಪ್ನಲ್ಲಿಸೂಕ್ತ ಮಾರ್ಪಾಡನ್ನು ಮಾಡಿಕೊಂಡರೆನಾಟಕದ ಕ್ಲೈಮ್ಯಾಕ್ಸಿನಲ್ಲಿ ಹಳ್ಳಿಗರ ದುರಂತತೆಯನ್ನುಸಾರುವಂತಹ ಹಾಗೂ  ಮೂಲಕ ವಿಷಾದವನ್ನು ಹುಟ್ಟಿಸುವಂತಹ ದೃಶ್ಯವನ್ನು ಸೃಷ್ಟಿಸಿದ್ದರೆ... ನಾಟಕ ಅತ್ಯುತ್ತಮ ನಾಟಕವಾಗಬಹುದಾದ ಎಲ್ಲಾ ಸಾಧ್ಯತೆಗಳಿವೆಇವುಗಳತ್ತ ನಿರ್ದೇಶಕರುಗಮನಕೊಡುವುದು ಉತ್ತಮ.

ನಿರ್ದೇಶಕ ಯತೀಶ್
ಏನೇ ಆದರೂ  ಆರು ಜನ ಯುವಕರು ಹಾಗೂ ಇಬ್ಬರು ಯುವತಿಯರರಂಗ ಪ್ರಯತ್ನ ಮಾತ್ರ ಎಲ್ಲರೂ ಮೆಚ್ಚುವಂತಹುದುನಾಡಿನ ಬೇರೆ ಬೇರೆರೆಪರ್ಟರಿಗಳಿಂದ ಬಂದ  ಕಲಾವಿದರುಗಳುಟಿವಿ ನಟನೆಯಆಕರ್ಷನೆಯಲ್ಲಿ ಕಳೆದು ಹೋಗದೆ ಅಥವಾ ಅವಕಾಶಗಳು ಸಿಗಲಿಲ್ಲವೆಂದುತಮ್ಮ ಮೂಲ ವೃತ್ತಿಗೆ ಮರಳದೇ ಆಟಾ-ಮಾಟ ಎನ್ನುವ ವ್ಯವಸ್ಥಿತತಂಡವೊಂದನ್ನು ೨೦೦೭ ರಲ್ಲಿ ಧಾರವಾಡದಲ್ಲಿ ಹುಟ್ಟುಹಾಕಿ ನಾಟಕಪ್ರದರ್ಶನಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆಯಾವುದೇ ಮಠದಸಂಪನ್ಮೂಲಗಳಿಲ್ಲದೇಯಾವುದೇ ಸ್ಥಾಪಿತ ಸಂಘಟನೆಯಾಗಿರದೇ,ಸರಕಾರ ಅಥವಾ ಸರಕಾರೇತರ ಸಂಸ್ಥೆಗಳ ಆರ್ಥಿಕ ಬೆಂಬಲವಿಲ್ಲದೇ,ಯಾವುದೇ ಫಾರೆನ್ ಫಂಡ್ಗಳ ಹಂಗಿಲ್ಲದೇ ಒಂದು ರೆಪರ್ಟರಿ ಮಾದರಿಯತಂಡವನ್ನು ಕೇವಲ ತಮ್ಮ ಇಚ್ಚಾಸಕ್ತಿ ಹಾಗೂ ರಂಗಪ್ರೀತಿಯಿಂದಮುನ್ನೆಡೆಸಿಕೊಂಡು ಬರುತ್ತಿರುವ  ಎಂಟೂ ಜನ ಕಲಾವಿದರಿಗೆರಂಗನಮನಕೇವಲ ರಂಗವೃತ್ತಿಯಿಂದಾಗಿ ವೃತ್ತಿಪರರೆನ್ನಿಸಿಕೊಳ್ಳದೇ ತಮ್ಮ ನಾಟಕಗಳಲ್ಲಿವೃತ್ತಿಪರತೆಯನ್ನು ರೂಢಿಸಿಕೊಂಡು ಅತ್ಯುತ್ತಮ ನಾಟಕಗಳನ್ನುವಿಭಿನ್ನ ಮಾದರಿಯರಂಗಪ್ರಯೋಗಗಳನ್ನು ಆಟಾ-ಮಾಟ ತಂಡ ನಿರ್ಮಿಸಿ ಪ್ರದರ್ಶಿಸಲಿ ಎಂದು ಆಶಿಸಬಹುದಾಗಿದೆಇಡೀಕರ್ನಾಟಕದ ಜನತೆ ಹಾಗೂ ಸಂಘ ಸಂಸ್ಥೆಗಳು  ಯುವಕರ ರಂಗಸಾಹಸಕ್ಕೆ ಪ್ರೋತ್ಸಾಹ ನೀಡಿಅವರ ಆಸಕ್ತಿಗೆ ಸಹಕರಿಸಬೇಕಿದೆಅಪಾತ್ರರಿಗೆಲ್ಲಾ ಹಣದಾನ ಮಾಡುವ ಸಂಸ್ಕೃತಿ ಇಲಾಖೆ ಹಾಗೂಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಗಳು ಇಂತಹ ನಿಜವಾದ ರಂಗಾಸಕ್ತಿಇರುವವರನ್ನು ಗುರುತಿಸಿ ಪೂರ್ಣಪ್ರಮಾಣದಲ್ಲಿ ಹಣ ಸಹಾಯ ಮಾಡಿ ಚಿಕ್ಕಪುಟ್ಟ ರೆಪರ್ಟರಿಗಳನ್ನುಬೆಂಬಲಿಸಿ ಬೆಳಸಬೇಕಿದೆಆಟಾ-ಮಾಟ ತಂಡದ ರಂಗಕ್ರಿಯೆ ನಿರಂತರವಾಗಿರಲಿ ಯುವಕಲಾವಿದರ ರಂಗಾಸಕ್ತಿ ಎಂದೂ ಬತ್ತದಿರಲಿ ಹಾಗೂ  ಆಟಾ-ಮಾಟ ತಂಡ ರಂಗಸಾಧನೆಯಉತ್ತುಂಗಕ್ಕೇರಲಿ ಎನ್ನುವುದು ರಂಗಾಸಕ್ತರ ಹಾರೈಕೆಯಾಗಿದೆ.  

ಕಾಮೆಂಟ್‌ಗಳಿಲ್ಲ: