ಮಂಗಳವಾರ, ಸೆಪ್ಟೆಂಬರ್ 2, 2014

ಸಮಾಜಕ್ಕೆ ಯಾರ ಕೊಡುಗೆ ದೊಡ್ಡದು ಸ್ವಾಮಿ?


-ಶಶಿಧರ ಹೆಮ್ಮಾಡಿ
ನಮ್ಮಲ್ಲಿ ಕಳೆದ ಹಲವಾರು ವರ್ಷಗಳಿಂದ ಒಂದು ಚಾಳಿ ಚಾಲ್ತಿಯಲ್ಲಿದೆ. ರಾಜಕಾರಣಿಗಳು ಮತ್ತು ಗಣ್ಯರು ಕೆಲವು ನಿರ್ದಿಷ್ಟ ಜಾತಿಯವರು ಸಂಘಟಿಸಿದ ಸಮಾರಂಭಗಳಿಗೆ ಹೋಗೋದು ಮತ್ತೆ ಅಲ್ಲಿ ಹೋಗಿ ಸಮಾಜಕ್ಕೆ ನಿಮ್ಮ ಜಾತಿಯ/ಧರ್ಮದ ಕೊಡುಗೆ ದೊಡ್ಡದು ಎಂದು ಭಾಷಣ ಮಾಡುವುದು ಮತ್ತೆ ಅಲ್ಲಿ ನೆರೆದಿರುವ ಆಯಾ ಜಾತಿ ಬಾಂಧವರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವುದು. ಮರುದಿನ ಪತ್ರಿಕೆಗಳಲ್ಲಿ 'ಸಮಾಜಕ್ಕೆ ___ ಜಾತಿಯ/ಬಾಂಧವರ ಕೊಡುಗೆ ದೊಡ್ಡದು' ಎಂದು ಸುದ್ದಿ ಬರುವುದು.

ಈ ಜಾತಿ/ಧರ್ಮಗಳ ಕೊಡುಗೆ ದೊಡ್ಡದು ಅಂತ ಒಪ್ಪಿಕೊಳ್ಳೋಣ. ಅದಕ್ಕೆ ನನ್ನ ತಕರಾರು ಏನೂ ಇಲ್ಲ. ಆದರೆ ಸ್ವಾಮಿ, ಮಂಗ್ಳೂರು, ಬೆಂಗ್ಳೂರು ತರಹದ ನಗರಗಳನ್ನ ಕಟ್ಟುತ್ತಿರುವ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರು, ಬಿಹಾರ, ಒರಿಸ್ಸಾ ಮುಂತಾದ ಕಡೆಯ ಶ್ರಮಿಕರು ಈ ನಾಡಿಗೆ ಕೊಡುತ್ತಿರುವ ಕಾಣಿಕೆ-ಕೊಡುಗೆಗಳ ಬಗ್ಗೆ ನೀವು ಎಂದಾದರೂ ಮಾತಾಡಿದ್ದೀರಾ ಸ್ವಾಮಿ? 
 ಅವರ ಬಗ್ಗೆ ಒಂದೆರಡು ಒಳ್ಳೆಯ ಮಾತು ಹೇಳಿದ್ದೀರಾ ಸ್ವಾಮಿ? ಅವರ ಕಠಿಣ ಶ್ರಮ-ಪ್ರಾಮಾಣಿಕತೆ-ದುಡಿಮೆಯನ್ನ, ಅವರ ಕೊಡುಗೆಯನ್ನ ಎಂದಾದರೂ ಕೊಂಡಾಡಿದ್ದೀರಾ ಸ್ವಾಮಿ? ಈ ನಿರ್ಮಾಣ ಕಾರ್ಯಗಳಲ್ಲಿ ತಮ್ಮ ಪ್ರಾಣವನ್ನೂ ಸಹ ಬಲಿಕೊಟ್ಟವರ ಬಲಿದಾನಗಳನ್ನ ಎಂದಾದರೂ ಸ್ಮರಿಸಿದ್ದೀರಾ ಸ್ವಾಮಿ? ಸಮಾಜಕ್ಕೆ ಈ ದಮನಿತ ತಳ ಸಮುದಾಯಗಳ ಕೊಡುಗೆಗೆ ಸಾಟಿ ಯಾವುದಾದರೂ ಇದೆಯೆ ಸ್ವಾಮಿ?

ಕಾಮೆಂಟ್‌ಗಳಿಲ್ಲ: