ಬುಧವಾರ, ಮಾರ್ಚ್ 5, 2014

ತಲ್ಲಣಗಳ ನಡುವೆ ಮತ್ತೊಂದು ಮಹಿಳಾ ದಿನ



-ಕೆ.ನೀಲಾ






ಸೌಜನ್ಯ: ವಿಜಯ ಕರ್ನಾಟಕ

   ಭಾರತದಲ್ಲಿ ಜಯಂತಿ, ದಿನಾಚರಣೆಗಳು ನಿತ್ಯ ನಿರಂತರ ನಡೆದೇ ಇರುತ್ತವೆ. ಮಹಿಳಾ ದಿನಾಚ ರಣೆಯು ಇವುಗಳಲ್ಲಿದೆ. ಆದರೆ ಅಂತಾರಾ ಷ್ಟ್ರೀಯ ಮಹಿಳಾ ದಿನಾಚರಣೆ ಸಾಂಪ್ರ ದಾ ಯಿ ಕ ಸ್ವರೂಪದಲ್ಲಿ ಆಚರಿಸುವ ದಿನವಲ್ಲ. ಅದು ಹೋರಾಟದ ಗಾಥೆ ಯನ್ನು ಒಡಲೊಳಗಿಟ್ಟು ಕೊ ಂ ಡಿದೆ. ಪಾರ್ಲಿ ಮೆಂಟು ಚುನಾ ವ ಣೆಗಳನ್ನು ಎದುರು ಗೊಳ್ಳು ತ್ತಿರುವ ಈ ಹೊತ್ತಿ ನಲ್ಲಿ ಮಹಿಳಾ ದಿನಾಚರಣೆ ಚರಿತ್ರೆಯನ್ನು ನೆನಪಿಸಿಕೊಳ್ಳ ಬೇಕು. 1908ರ ಮಾರ್ಚ್ 8ರಂದು ಅಮೆರಿಕೆಯ ನ್ಯೂಯಾರ್ಕ್ ಮಹಾ ನಗರದ ಮಹಿಳಾ ಕಸೂತಿ ಕಾರ್ಮಿಕರು ತಮ್ಮ ಯೂನಿ ಯನ್ನಿನ ಇತರ ಬೇಡಿಕೆಗಳೊಂದಿಗೆ ಮಹಿಳೆಯರ ಮತದಾನದ ಹಕ್ಕನ್ನು ಮಂಡಿಸಿ ಹೋರಾಟ ನಡೆಸಿದರು. ಈ ಹೋರಾಟ ಪರಂ ರೆ ಮುಂದುವರೆಸುವ ಉದ್ದೇಶದಿಂದ ಅಂತಾ ರಾಷ್ಟ್ರೀಯ ಮಹಿಳಾ ಸಮ್ಮೇಳನ, ಮಾರ್ಚ್ 8ನ್ನು ಅಂತಾ ರಾಷ್ಟ್ರೀಯ ಮಹಿಳಾ ಕಾರ್ಮಿಕರ ದಿನವನ್ನಾಗಿ ಆಚರಿಸು ವಂತೆ ಘೋಷಿಸಿತು.

ಮರುವರ್ಷವೇ ಅನೇಕ ದೇಶಗಳಲ್ಲಿ ಮಹಿಳಾ ದಿನವನ್ನು ಆಚರಿಸಲಾಯಿತು. ಆಂದೋಲನ ದೊಂ ದಿಗೆ ಬೆಸೆದುಕೊಂಡು ಮಹಿಳಾ ಹಕ್ಕಿನ ಹೋರಾಟವಾಗಿ, ಮಹಿಳಾ ಸಂಕುಲದ ವಿಮೋಚನೆ ಉದ್ದೇಶದೊಂದಿಗೆ, ಸಮಗ್ರ ಸಮಾನತೆಯ ಸಮಾಜ ರಚನೆಯ ಗುರಿಯೊಂದಿಗೆ ದಾಪುಗಾಲಿ ಟ್ಟಿತು. ಈ ಪ್ರೇರಣೆಯಲ್ಲಿ 1917 ಮಾರ್ಚ್ 8ರಂದು ರಷ್ಯಾದ ಕಾರ್ಮಿಕ ಮಹಿಳೆಯರು ಝಾರ್‌ನ ನಿರಂಕುಶ ಪ್ರಭುತ್ವದ ದಬ್ಬಾಳಿಕೆ ವಿರುದ್ಧ ಚಳುವಳಿ ನಡೆಸಿದರು. ಅಂತೆಯೇ 1936ರಲ್ಲಿ 'ಲ್ಯಾಪಾಶನೇರಿಯಾ'ದ 80 ಸಾವಿ ರಕ್ಕೂ ಹೆಚ್ಚು ಮಹಿಳೆಯರು ಫ್ಯಾಸಿಸ್ಟ್ ಫ್ರಾಂಕೋನ ವಿರುದ್ಧ ಬಹುದೊಡ್ಡ ಪ್ರತಿಭಟನೆಯಿಂದ ಪ್ರಭುತ್ವ ನಡುಗಿಸಿದರು. 1950ರ ಮಾರ್ಚ್ 8ರಂದು ಸುಮಾರು 3ಲಕ್ಷ ಮಹಿಳೆಯರು ನಿಶ್ಯಸ್ತ್ರೀಕರಣ ಮತ್ತು ಶಾಂತಿಗಾಗಿ ಪಶ್ಚಿಮ ಜರ್ಮನಿಯ ಚಾನ್ಸ ಲರ್‌ಗೆ ಪೋಸ್ಟ್ ಕಾರ್ಡುಗಳನ್ನು ಕಳಿಸಿದರು. ಇದೇ ದಿನದಂದು ಇರಾನಿನ 50 ಸಾವಿರಕ್ಕೂ ಹೆಚ್ಚು ಟೆಕ್ಸ್‌ಟೈಲ್ ಕಾರ್ಮಿಕ ಮಹಿಳೆಯರು ತೈಲ ಉದ್ಯಮದ ರಾಷ್ಟ್ರೀಕರಣದ ಬೇಡಿಕೆ ಯನ್ನಿ ಟ್ಟು ಚಳುವಳಿ ನಡೆಸಿದರು. 1975ರಿಂದ ಎಲ್ಲ ದೇಶ ಗಳ ಲ್ಲಿಯೂ ಮಹಿಳಾ ದಿನಾಚರಣೆ ಯನ್ನು ಆಚರಿಸಲಾಗುತ್ತಿದೆ.

ಮತದಾನದ ಹಕ್ಕಿಗಾಗಿ ಆರಂಭಗೊಂಡ ಮಹಿಳೆಯರ ಹೋರಾ ಟ ರಾಜಕೀಯ ತಿಳುವಳಿಕೆಯನ್ನು ಮತ್ತು ನೈಜ ಅಭಿ ವದ್ಧಿಯ ಕಣ್ಣೋಟ ಒಳಗೊಂಡಿತ್ತು. ಮಹಿಳೆಯನ್ನು ಬಿಟ್ಟಿ ಚಾಕ ರಿಗೆ ಬಳಸಿಕೊಳ್ಳುವ ದೇಶಗಳಲ್ಲಿ ಅವಳನ್ನು ಮತ ದಾ ನದ ಹಕ್ಕಿ ನಿಂದಲೂ ವಂಚಿಸಲಾಗಿತ್ತು. ರಾಜಕೀಯ ವಿದ್ಯ ಮಾನ ಗಳಲ್ಲಿ ತೊಡ ದಂತೆ ನೋಡಿಕೊಳ್ಳಲಾಗಿತ್ತು. ದಮನದ ವಿರುದ್ಧ ಮಹಿಳಾ ಲೋಕ, ದುಡಿವ ವರ್ಗದ ಚಳವಳಿಯೊಂದಿಗೆ ಕೈಗೂ ಡಿಸಿ ಸಮಗ್ರ ಬದಲಾವಣೆಗಾಗಿ ಹೋರಾಡಿತು. ಅನೇಕ ದೇಶ ಗಳಲ್ಲಿ ರಾಜಶಾಹಿ ಮತ್ತು ನಿರಂಕುಶ ಪ್ರಭುತ್ವವನ್ನು ಕಿತ್ತು ಹಾಕಿದ ಮೇಲೆಯೇ ಮತದಾನದ ಹಕ್ಕು ಪಡೆಯಲು ಸಾಧ್ಯವಾಯಿತು. ಮಾರ್ಚ್ ತಿಂಗಳುದ್ದಕ್ಕೂ ಸರಕಾರದಿಂದಲೂ ಸರಕಾರೇತರ ಸಂಸ್ಥೆ ಗಳಿಂದಲೂ ಮಹಿಳಾ ದಿನಾಚರಣೆ ಅತ್ಯಂತ ವೈಭವೋ ಪೇತ ವಾಗಿ ಆಚರಿಸಲಾಗುತ್ತಿದೆ. ಆದರೆ ಅದರ ಚಾರಿತ್ರಿಕ ಸಂಗತಿಯನ್ನು ಮರೆಮಾಚಲಾಗುತ್ತಿದೆ. ಅದರಲ್ಲೂ ಸರಕಾರದಿಂದ ಮಾರ್ಚ್ 8ರಂದು ಇಂಥದೇ ಹಾರ ತುರಾಯಿ, ಭರ್ಜರಿ ಭಾಷಣಗ ಳೊಂದಿಗೆ, ರೇಷ್ಮೆ ಸೀರೆಗಳ ಸರಬರದೊಂದಿಗೆ ಅದ್ಧೂರಿ ಕಾರ‌್ಯಕ್ರಮ ನಡೆಯುತ್ತಿರುತ್ತದೆ. ಸಾಧಕಿಯರಿಗೆ ಪ್ರಶಸ್ತಿ ಕೊಡಲಾಗುತ್ತದೆ. ಆದರೆ ಮಹಿಳೆ ಇಂದಿಗೂ ಅನುಭವಿಸುತ್ತಿರುವ ಅ ಮಾನ, ದೌರ್ಜನ್ಯ, ಸಂಕಟಗಳ ನಿವಾರಣೆಯ ಕುರಿತು ಅಸಡ್ಡೆ ಇದೆ.

ಅಪೌಷ್ಠಿಕತೆ, ರಕ್ತಹೀನತೆ, ಬಾಲ್ಯ ವಿವಾಹ, ಭ್ರೂಣ ಹತ್ಯೆ, ವರ ದಕ್ಷಿಣೆ ಕಾಟ, ಆಸ್ತಿ ಹಕ್ಕಿನಿಂದ ನಿರಾಕರಣೆ, ಒಂಟಿ ಮಹಿಳೆಯರ ಕೊಲೆ, ದಲಿತ, ಬುಡಕಟ್ಟು, ಆದಿವಾಸಿ ಮಹಿಳೆ ಯರ ಮೇಲಿನ ದಾಳಿ ದಬ್ಬಾಳಿಕೆ ಹೀಗೆ ಪಟ್ಟಿ ಬೆಳೆಯುತ್ತದೆ. ಎಲ್ಲಕ್ಕೂ ಮಿಗಿಲಾಗಿ ಹಾದಿ- ಬೀದಿಯಲ್ಲಿಯೇ ನೈತಿಕ ಪೋಲಿಸ್ ಗಿರಿಯ ಹಲ್ಲೆಯಾ ಗುತ್ತಿವೆ. ಜಾತಿ-ಲಿಂಗ ತಾರ ತಮ್ಯ ವಂತೂ ದಿನಗಳೆದಂತೆ ಹರಿತ ಗೊ ಳ್ಳು ತ್ತಿದೆ. ಮಹಿಳೆಯರನ್ನು ಕೀಳೀಕರಿಸುವ ಏಕಸಂಸ್ಕೃತಿಯ ದಾಳಿ ಯಿಂದ ವೈಧವ್ಯದ ಅಪಮಾನ ಮುಂದುವರೆದಿದೆ.

ಮಹಿಳೆಯರು ಈ ನೋವುಗಳ ಕಡಲನ್ನು ಹೊತ್ತೇ ಮೂರು ಪಟ್ಟು ದುಡಿಮೆಗೆ ಹೆಗಲು ಕೊಡುವುದು ತಪ್ಪಿಲ್ಲ. ಎಲ್ಲ ಹಂತ ದಲ್ಲಿಯೂ ಮಹಿಳೆಯ ರನ್ನು ಎರಡನೇ ದರ್ಜೆ ಪ್ರಜೆಯಾ ಗಿಯೇ ಉಳಿಸುವಂಥ, ಅವಳ ಶ್ರಮವನ್ನು ಪುಕ್ಕಟ್ಟೆಯಾಗಿ ಬಾಚುವಂಥ ಯೋಜನೆಗಳು ಅಸ್ತಿತ್ವ ಪಡೆದುಕೊಳ್ಳತೊಡಗಿವೆ. ಕುಟುಂಬ ದೊ ಳಗಿನ ಕೆಲಸಕ್ಕೆ ಆರ್ಥಿಕ ಮೌಲ್ಯವಿಲ್ಲ. ಕಡೆಪಕ್ಷ ಪ್ರತಿಫಲದಲ್ಲಿ ಆರ್ಥಿಕವಲ್ಲ ದಿದ್ದರೂ ಸಮಾನ ಗೌರವವೂ ನಿರೀಕ್ಷಿಸಬಾರದೇ? ಇಟ್ಟಂಗಿಭಟ್ಟಿ, ಕಟ್ಟಡ ಕೆಲಸ, ಮನೆಗೆಲಸ, ಕಷಿ ಕೆಲಸ, ಗಾರ್ಮೆಂಟ್ ಹೀಗೆ ಎಲ್ಲೆಡೆ ಅತ್ಯಂತ ಕಡಿಮೆ ಕೂಲಿಯಲ್ಲಿ ದುಡಿಸಿ ಕೊಳ್ಳ ಲಾ ಗುತ್ತಿದೆ. ಮಾತ್ರ ವಲ್ಲ ಸಾಧ್ಯವಾದಷ್ಟು ಹೆಚ್ಚು ದುಡಿಮೆ ಪಡೆಯುವ ತಂತ್ರವೂ ಇದರಲ್ಲಡಗಿರುತ್ತದೆ. ಅಂತೆಯೇ ಪ್ರಭುತ್ವ ಸಹ ಮಹಿಳೆಯ ದುಡಿಮೆ ಯನ್ನು ಬಿಟ್ಟಿ ಯಾಗಿ ಪಡೆ ಯು ತ್ತಿದೆ. ಯಾವುದೇ ಸೌಲಭ್ಯ ಕೊಡದೆ ದುಡಿಸಿ ಕೊಳ್ಳುತ್ತಿದೆ. ಅಂಗನ ವಾಡಿ, ಆಶಾ, ಅಕ್ಷರ ದಾಸೋಹ ಮುಂತಾದ ಅಕ್ಕಂದಿರನ್ನು ಸಂಬಂಧಪಟ್ಟ ಕೆಲ ಸಕ್ಕೆ ಮಾತ್ರ ತೊಡಗಿಸುವುದಿಲ್ಲ. ಕಡಿಮೆ ಗೌರವಧನ ಕೊಟ್ಟು ಹೆಚ್ಚುವರಿ ದುಡಿಮೆ ಪಡೆಯ ಲಾಗುತ್ತಿದೆ. ಸ್ತ್ರೀಶಕ್ತಿ ಸಂಘ , ಜನಗಣತಿ, ಸಮೀಕ್ಷೆ ಮುಂತಾದ ಕೆಲಸಗಳು ಇದ್ದೇ ಇರುತ್ತವೆ. ಹೀಗೆ ದುಡಿಸಿ ಕೊಳ್ಳು ವಾಗ ಮಹಿಳೆಯರಿಗೆ ಅತ್ಯವಶ್ಯಕ ವಿರುವ ಸೌಲಭ್ಯಗಳನ್ನಾ ದರೂ ಒದಗಿಸುವುದಿಲ್ಲ. ಅದರಲ್ಲಿಯೂ ಪಲ್ಸ್ ಪೋಲಿಯೋ ದಂಥ ರಾಷ್ಟ್ರೀಯ ಕಾರ‌್ಯಕ್ರಮಗಳಲ್ಲಿ ರಜೆಯನ್ನೂ ತೆಗೆದುಕೊಳ್ಳು ವಂತಿಲ್ಲ. ಚುನಾವಣೆಯ ಕೆಲಸದ ಸಂದರ್ಭದಲ್ಲ
ಿ ನಾಲ್ಕಾರು ಪುರುಷರೊಂದಿಗೆ ಒಬ್ಬೊಬ್ಬ ಮಹಿಳೆ ಯನ್ನೇ ನಿಯೋಜನೆ ಮಾಡ ುವರು. ಮತದಾನ ಕೇಂದ್ರಗಳಿರುವ ಹಳ್ಳಿಗಳಲ್ಲಿ ಮೂಲಭೂತ ಸೌಲಭ್ಯಗಳಿರುವುದಿಲ್ಲ. ಕನಿಷ್ಠ ಶೌಚಾಲ ಯವಿರುವುದಿಲ್ಲ. ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸಿ ಯಾದರೂ ಮಹಿಳೆಯನ್ನು ನಿಯೋಜಿಸಬೇಕು ಇಲ್ಲವೆ ಮೂಲ ಭೂತ ಸೌಲಭ್ಯಗಳಿರು ವೆಡೆ ಯಾದರೂ ನಿಯೋಜಿಸಬೇಕು. ಆದರೆ ಚುನಾವಣಾಧಿಕಾರಿ ಗಳಿಗೆ ಕನಿಷ್ಠ ಲಿಂಗಸಂವೇದನಾ ಶೀಲ ತೆ ಯಿಲ್ಲದರ ಪರಿಣಾಮವಿದು.

ಮಹಿಳೆಯರಿಗೆ ನ್ಯಾಯ ಮಾತ್ರ ಮರೀಚಿಕೆಯಾಗುತ್ತಿದೆ. ಇಂಥ ಹೊತ್ತಿನಲ್ಲಿ ರಾಜ್ಯದಲ್ಲಿ ಮಹಿಳಾ ಆಯೋಗವೂ ಇಲ್ಲ ದಾ ಗಿದೆ. ತಕ್ಷಣ ಆಯೋಗ ರಚಿಸುವ ಹೊಣೆಗಾರಿಕೆ ಪ್ರಭುತ್ವದ್ದಾಗಿದೆ. ಜಿಲ್ಲಾ ಮಟ್ಟದಲ್ಲಿಯೂ ಮಹಿಳಾ ಆಯೋಗಗಳ ಸಮಿತಿ ರಚನೆ ಯಾಗಬೇಕು. ಹೆಚ್ಚುತ್ತಿರುವ ದೌರ್ಜನ್ಯಗಳ ತಡೆಗಾಗಿ ವ್ಯಾಪಕ ಪ್ರಚಾರಾಂದೋಲನ ಕೈಗೊಳ್ಳುವಂಥ ಆಯೋಗ ಬೇಕಿದೆ. ಮಹಿಳಾ ಪರ ಕಾನೂನುಗಳನ್ನು ಪ್ರಚುರಗೊಳಿಸುವ ಜರೂರಿದೆೆ. ದೌರ್ಜನ್ಯ ತಡೆಗಾಗಿ ನ್ಯಾಯಮೂರ್ತಿ ವರ್ಮಾ ಕಮಿಟಿಯ ಶಿಫಾರಸ್ಸುಗಳು ಜಾರಿಯಾಗಬೇಕಿದೆ. ಮಹಿಳೆ- ಮಕ್ಕಳ ಕಾಣೆ ಪ್ರಕರಣಗಳು ಭಯಾನಕ ಸ್ವರೂಪದಲ್ಲಿ ಹೆಚ್ಚುತ್ತಿವೆ. 'ಗುಜ್ಜರ್ ಕೀ ಶ್ಯಾದಿ' ಹೆಸರಿನಲ್ಲಿ ನಡೆಯುವ ಮದುವೆಗಳು ಒಂದರ್ಥದಲ್ಲಿ ಹೆಣ್ಣುಮಕ್ಕಳ ಮಾರಾಟವೇ ಆಗಿವೆ. ಈ ಕುರಿತು ಸಮಗ್ರ ಸಮಿಕ್ಷೆ ನಡೆಸಿ ಸತ್ಯಾಂಶ ಬಯಲು ಮಾಡದಿದ್ದರೆ ಕಾಣೆಯಾಗುತ್ತಿರುವ ಹೆಣ್ಣು ಮಕ್ಕಳ ಪಟ್ಟಿ ಅಪಾಯಕಾರಿಯಾಗಿ ಬೆಳೆಯಬ ಹುದು. ಮಾಧ್ಯಮಗಳ ಮೂಲಕ ಲೈಂಗಿಕ ಅಪ ರಾಧಗಳು ಮತ್ತು ಮಹಿಳಾ ವಿರೋಧಿ ಪಾಳೇಗಾರಿಕೆ ಮೌಲ್ಯಗಳ ಪ್ರಚಾರವನ್ನು ತಕ್ಷಣ ನಿಷೇಧಿಸಲು ಕ್ರಮ ಕೈಗೊಳ್ಳಬೇಕಿದೆ. 

ಬದುಕಿನ ಬಂಡಿಗೆ ಹೆಗಲು ಕೊಟ್ಟು ಹೈರಾಣಾಗುವ ಮಹಿಳೆಗೆ ಗ್ರಾಮೀಣ ಪ್ರದೇಶದಲ್ಲಿ ಕೈಗೊಂದು ಕೆಲಸವೂ ಇಲ್ಲವಾಗಿದೆ. ಹಳ್ಳಿಯಲ್ಲಿರುವ ಉದ್ಯೋಗಖಾತ್ರಿ ಯೋಜನೆಯು ಭ್ರಷ್ಟರ ಕೈವಶವಾಗಿದೆ. ಹೆಚ್ಚುತ್ತಿರುವ ಬೆಲೆಗಳಿಒಂದ ಸಂಸಾರ ನಿಭಾ ಯಿ ಸ ಲಾಗದೆ ಮೈಕ್ರೊ ಫೈನಾನ್ಸ್‌ಗಳಿಂದ ಸಾಲ ಪಡೆದು ದುಪ್ಪಟ್ಟು ಬಡ್ಡಿ ಕಟ್ಟಲಾಗದೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ. ಸ್ತ್ರೀಶಕ್ತಿ ಸ್ವ ಸಹಾಯ ಸಂಘಗಳು ಸರಕಾರದ ಯೋಜನಾಬದ್ಧವಾದ ನೆರ ವಿ ಲ್ಲದೆ, ಸೊರಗುತ್ತಿವೆ. ಈ ಗುಂಪು ಗಳನ್ನು ರಾಜಕೀಯ ಉದ್ಧೇಶ ಕ್ಕಾಗಿ ಬಳಸಿಕೊಳ್ಳುವ ಅಪಾಯದಿಂದ ತಪ್ಪಿಸಬೇಕಿದೆ.

ನಮ್ಮ ಮಕ್ಕಳು ಓದುತ್ತಿರುವ ಪಠ್ಯವು ಲಿಂಗಸಂವೇದನಾಶೀಲತೆ ಮತ್ತು ಜಾತ್ಯಾತೀತ ಮೌಲ್ಯಗಳಿಂದ ಕೂಡಿರಬೇಕು. ಇದು ನಮ್ಮ ಸಂವಿಧಾನದ ಆಶಯವೂ ಆಗಿದೆ. ಆದರೆ ಅವೈಜ್ಞಾನಿಕವಾದ ಮತ್ತು ತಿರುಚಿದ ಇತಿಹಾಸವನ್ನು ನಮ್ಮ ಮಕ್ಕಳು ಓದುತ್ತಿದ್ದಾರೆ. ಶಾಲೆಗಳಲ್ಲಿಯೇ ಹುಡುಗಿಯರು (ವಿದ್ಯಾರ್ಥಿಗಳು ಸಹ) ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಈ ದೌರ್ಜನ್ಯ ತಡೆ ಗಟ್ಟಲು ಮಕ್ಕಳ ಹಕ್ಕುಗಳ ರಕ್ಷಿಸಲು ಪ್ರಭುತ್ವದಲ್ಲಿ ಯಾವ ಯೋಜನೆಗಳೂ ಇಲ್ಲ. ಕಡ್ಡಾಯ ಶಿಕ್ಷಣವೆನ್ನುವುದು ಸಮರ್ಪಕ ಜಾರಿ ಯಾಗದೆ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ.

ಕೊನೆಯ ಹಂತದವರೆಗೂ ಮಹಿಳಾ ಮೀಸಲಾತಿ ಮಸೂದೆ ಯನ್ನು ಲೋಕಸಭೆಯಲ್ಲಿ ಮಂಡಿಸುವುದಾಗಿ ಕೇಂದ್ರ ಪ್ರಭುತ್ವ ಹೇಳುತ್ತಲೇ, ಅಂತಿಮವಾಗಿ ಮೂಲೆಗೆ ತಳ್ಳಿ ಈಗ ಚುನಾವಣೆಗೆ ಸಜ್ಜಾಗಿದೆ. ಅರ್ಧಸಂಖ್ಯೆಯ ಮಹಿಳಾ ಸಮುದಾಯವನ್ನು ನಿರ್ಲಕ್ಷಿಸಿಯೇ ರಾಜಕೀಯ ಪಕ್ಷಗಳು ಚುನಾವಣೆ ಎದುರಿಸುವ ದಾರ್ಷ್ಟ್ಯತೆ ತೋರುತ್ತಿವೆ ಎನಿಸುತ್ತದೆ. ಇದು ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವ ಸಂಗತಿ. ಯಾವ ನೈತಿಕತೆಯೊಂದಿಗೆ ಮತ ಗಳನ್ನು ಯಾಚಿಸುವರು? ರಾಜಕೀಯ ಪಕ್ಷಗಳು ತಮ್ಮ ಪಕ್ಷದೊ ಳಗೂ ಮಹಿಳೆಯರಿಗೆ ಟಿಕೇಟು ಕೊಡದೆ, ಮೀಸಲಾತಿ ಯನ್ನೂ ಜಾರಿ ಮಾಡದೆ ಬಹಿರಂಗವಾಗಿಯೇ ಮಹಿಳಾ ವಿರೋಧಿಯಾಗಿ ನಡೆದುಕೊಳ್ಳುವ ತೀರ್ಮಾನ ಮಾಡಿದಂತಿದೆ. ಇದು ಮಹಿಳಾ ಲೋಕದಲ್ಲಿ ಮಾತ್ರವಲ್ಲ ಸಮಸ್ತ ಪ್ರಜ್ಞಾವಂತರಿಗೆ ಸವಾಲಾಗಿಯೇ ಪರಿಣಮಿಸುತ್ತದೆ.

ಆದ್ದರಿಂದಲೇ ಈ ಸಂದರ್ಭದ ಮಹಿಳಾ ದಿನಾಚರಣೆ ಎನ್ನುವುದು ಕೇವಲ ಕಾರ‌್ಯಕ್ರಮವಲ್ಲ, ಇದೊಂದು ಮಹಿಳೆಯರ ಅಸ್ಮಿತೆಯ, ಸ್ವಾಭಿಮಾನದ ಮತ್ತು ವಿಮೋಚನೆಯ ಹಕ್ಕಿಗಾಗಿನ ಹೋರಾಟವಾಗಿ ಎದುರುಗೊಳ್ಳಬೇಕಾಗುತ್ತದೆ.

ಕಾಮೆಂಟ್‌ಗಳಿಲ್ಲ: