ಸೋಮವಾರ, ಜುಲೈ 11, 2016

ಆತ್ಮಹತ್ಯೆ ಮತ್ತು ಅನೈತಿಕ ರಾಜಕಾರಣ

-ಹಾರೋಹಳ್ಳಿ ರವೀಂದ್ರ

ಕರ್ನಾಟಕದ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಬಹುಮತದೊಂದಿಗೆ 2008ರಲ್ಲಿ ಅಧಿಕಾರ ಹಿಡಿದುಕೊಂಡ ಮೇಲೆ. ಸಂಘಪರಿವಾರ ಚಿಗುರಿಕೊಂಡು ಇತರ ಧರ್ಮೀಯರ ವಿರುದ್ಧ ಗುಂಡಾವರ್ತನೆಗೆ ಇಳಿಯಬಹುದೆಂಬ ಆತಂಕ ಆ ಸಂದರ್ಭದಲ್ಲಿ ನಿಜವೇ ಆಗಿಹೋಯಿತು. ಮತಾಂತರಕ್ಕೆ ಪ್ರಚೋದನೆ ನೀಡುತ್ತಿರುವ ಆರೋಪದ ಮೇಲೆ ದಕ್ಷಿಣ ಕನ್ನಡ, ಉಡುಪಿ, ಮಂಗಳೂರು ಜಿಲ್ಲೆಗಳ ಹಲವು ಕಡೆ ಚರ್ಚ್ಗಳ ಮೇಲೆ ದಾಳಿ ನಡೆಸುವ ಮೂಲಕ ರಾಜ್ಯದಲ್ಲಿ ಧಾರ್ಮಿಕ ಸಂಘರ್ಷ ಬೀಜ ಭಿತ್ತಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದನಂತರ ತಮ್ಮನ್ನು ಕೇಳುವವರು ಯಾರು ಇಲ್ಲ, ತಾವು ಏನು ಮಾಡಿದರು ನಡೆಯುತ್ತದೆ ಎಂಬ ಅಹಂಕಾರದ ಧೋರಣೆ ಸಂಘಪರಿವಾರದಲ್ಲಿ ಬೆಳೆದು ನಿಂತಿತ್ತು. 

ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ರೈತರ ಮೇಲೆ ಗೋಲಿಬಾರ್ ಪ್ರಕರಣ ಜತೆಗೆ ಸರ್ಕಾರ ಆಸ್ತಿಯನ್ನು ಗೋಕರ್ಣ ಮಠಕ್ಕೆ ಕೊಡುವುದರ ಮೂಲಕ ಸ್ವಾಮೀಜಿ ಮಠಗಳಿಗೆ ಭೇಟಿ ನೀಡಿ ಅದರ ಅಭಿವೃದ್ಧಿಗೆ ಕ್ರಮಿಸುತ್ತಿರುವ ಯಡಿಯೂರಪ್ಪ ಚುನಾವಣಾ ಪ್ರಣಾಳಿಕೆಯಲ್ಲಿ ಜನತೆಗೆ ನೀಡಿದ ಪ್ರಮುಖ ಭರವಸೆಯನ್ನು ಈಡೇರಿಸದೆ, ಯಾವಾಗಲೂ ಮುಂದುವರಿದ ಜಾತಿಗಳ ಬಗ್ಗೆಯೇ ಯೋಚಿಸಿದ ಯಡಿಯೂರಪ್ಪನವರು ದಲಿತರ ಹಾಗೂ ಅಲ್ಪಸಂಖ್ಯಾತರ ಬಗ್ಗೆ ಚಿಂತಿಸಲು ಕಿಂಚಿತ್ತು ಬಿಡುವೇ ಸಿಗಲಿಲ್ಲ.

ಬಿಜೆಪಿಯು ಅಧಿಕಾರಕ್ಕೆ ಬಂದ ಮೇಲೆ ಕೈಗೆತ್ತಿಕೊಂಡ ಮೊದಲ ಕೆಲಸವೆಂದರೆ ಕ್ರೈಸ್ತ ಚಚಗಳ ಧಾಳಿ ಮತಾಂತರ ನಡೆಯುತ್ತಿದೆ ಎಂದು ಆಪಾದಿಸಿ ಕರಾವಳಿ ಭಾಗದಲ್ಲಿ ಹಾಗೂ ಬೆಂಗಳೂರು ಭಾಗದಲ್ಲಿ ಚರ್ಚ್ಗಳ ಮೇಲೆ ದಾಳಿ ಮಾಡುತ್ತ ಬಂದರು. ಸಂಘಪರಿವಾರದವರು ಈ ಕೆಲಸ ಮಾಡುವುದಕ್ಕೆ ಸರ್ಕಾರದ ಗೃಹ ಇಲಾಖೆ, ಅಧಿಕಾರಿಗಳು, ಪೊಲೀಸ್ ಇಲಾಖೆ ಸೇರಿದಂತೆ ಬಳಸಿಕೊಂಡಿದ್ದರು ಎಂಬುದಕ್ಕೆ ಯಾವುದೇ ಸಂದೇಹವಿಲ್ಲ. ಅದರಲ್ಲು ಪ್ರಮುಖವಗಿ ಇದು ಆತ್ಮಹತ್ಯೆ ಮಾಡಿಕೊಂಡಿರುವ ಮಂಗಳೂರು ಡಿವೈಎಸ್ಪಿ ಗಣಪತಿ ಪ್ರಮುಖರಾಗಿದ್ದರು. ಮೂಲತಹ ಕಾವಿ ಪ್ರದೇಶದಿಂದ ಬಂದ ಈತ ಖಾಕಿಯೊಳಗಡೆ  ಮತೀಯ ರಾಜಕಾರಣ ಮಾಡುವಲ್ಲಿ ನಿಸ್ಸೀಮ ಎಂದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. 

ಹಿಂದುತ್ವದ ಉಮೇದಿನಲ್ಲಿ ಕೆಳವರ್ಗ ಹಾಗೂ ಕೆಳಜಾತಿಯವರು, ದಲಿತರು ಲಕ್ಷಾಂತರ ಯುವಕರುಗಳಿದ್ದಾರೆ. ಆ ಸಾಲಿಗೆ ಭಜರಂಗಿ ಮಹೇಂದ್ರನು ಒಬ್ಬ, ಭಜರಂಗಿ ಮಹೇಂದ್ರಕುಮಾರ್ ತನ್ನ ಪುಂಡಾಟಿಕೆಯಿಂದ ಮೊದಲು ಗಮನ ಸೆಳೆದದ್ದು ಚಿಕ್ಕಮಗಳೂರು ಕೊಪ್ಪದಲ್ಲಿ, ಆ ಕ್ವಾಲಿಫಿಕೇಷನ್ನಿಂದಲೆ ಆತ ಭಜರಂಗದಳದ ಸಂಪರ್ಕಕ್ಕೆ ಬಂದ. ಮಲೆನಾಡು ಭಾಗದ ಹಳ್ಳಿ ಹಳ್ಳಿಗಳಲ್ಲಿ ಗಂಧದ ಕಳ್ಳರು, ನಾಡಕಳ್ಳರು, ಪುಂಡ ಹುಡುಗರ ಗುಂಪು ಕಟ್ಟಿಕೊಂಡು, ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರ ಮೇಲೆ ದಾಳಿ ನಡೆಸುತ್ತಾ ಲೀಡರ್ಆಗಿ ಬೆಳೆದ. ಚಿಕ್ಕಮಗಳೂರು ಜಿಲ್ಲೆ ಭಜರಂಗದಳದ ಸಂಚಾಲಕನಾಗಿ ಚಿಕ್ಕಮಗಳೂರಿನ ದತ್ತ ಅಭಿಯಾನದ ದಾಂಧಲೆಗಳಲ್ಲಿ ಬಜರಂಗದಳವನ್ನು ಹಳ್ಳಿ - ಹಳ್ಳಿ ಮಟ್ಟಕ್ಕೆ ಕೊಂಡೊಯ್ದು ಪುಂಡರ ಜಾಲ ನಿರ್ಮಿಸುವಲ್ಲಿ ಪ್ರಧಾನಪಾತ್ರವಹಿಸಿ, ಜಿಲ್ಲೆಯಲ್ಲಿ ಸಂಘಪರಿವಾರದ ಚಟುವಟಿಕೆಗೆ ಜೀವ ತುಂಬಿದ್ದೆ ಮಹೇಂದ್ರ ಕುಮಾರ್, ನಂತರ ರಾಜ್ಯ ಸಂಚಾಲಕನಾಗಿ ರಾಜ್ಯ ಮಟ್ಟದಲ್ಲಿ ಕಾಣಿಸಿಕೊಂಡ. ಒಂದು ಕಡೆ ಪುಂಡಾಟಿಕೆಯಿಂದ ಕೋಮುವಾದ ಮಾಡುತ್ತ ಮಹೇಂದ್ರ ಕುಮಾರ್ ಹೀರೋ ಆದರೆ, ಮತ್ತೊಂದು ಕಡೆ ಪೊಲೀಸ್ ಇಲಾಖೆಯಲ್ಲೆ ಇದ್ದು ಗಣಪತಿ ಹೀರೊ ಆಗಿದ್ದ. ಇವರಿಬ್ಬರ ಶಕ್ತಿಯಿಂದಲೇ ಕರಾವಳಿ ಕೋಮುವಾದಕ್ಕೆ ತುತ್ತಾಗಿದ್ದು.

2004ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು, ಉಡುಪಿ, ದ.ಕನ್ನಡ ಜಿಲ್ಲೆಗಳಲ್ಲಿ ಬಿಜೆಪಿಗೆಲ್ಲಲ್ಲು ಈತನ ಪುಂಡಾಟಿಕೆಯು ಕಾರಣವಾಯಿತು. ಅನಂತರ 2008ರಲ್ಲಿ ಬಿಜೆಪಿ ಸಂಪೂರ್ಣವಾಗಿ ಅಧಿಕಾರ ಹಿಡಿದ ನಂತರ ಮಹೇಂದ್ರ ಕುಮಾರನಿಗೆ ಸಂಘಪರಿವಾರದಿಂದ ಸೂಚನೆ ಬಂದಿತು. ಆ ಸೂಚನೆ ಏನೆಂದರೆ? ಚರ್ಚ್ ಗಳ ಮೇಲೆ ದಾಳಿ ಮಾಡುವುದು. ಭಾನುವಾರ ಒಂದೇ ದಿನ ಒಂದೇ ಸಮಯದಲ್ಲಿ ದಾಳಿಯಾಗಬೇಕೆಂದು ನಿಯೋಜಿಸಿದವನೇ ಮಹೇಂದ್ರಕುಮಾರ್, ಇದಕ್ಕೆ ಸಾತ್ ನೀಡಿದವರು ಅಂದಿನ ಗೃಹಮಂತ್ರಿ ವಿ.ಎಸ್.ಆಚಾರ್ಯರು ಹಾಗೂ ಹಣದ ವ್ಯವಸ್ಥೆ ಮಾಡಿಕೊಟ್ಟವರು ಅಲ್ಲಿನ ವರ್ತಕರು ಹಾಗೂ ಪೊಲೀಸ್ ಇಲಾಖೆಯಲ್ಲಿ ಕದ್ರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದ ಎಂ.ಕೆ.ಗಣಪತಿ. ಇವರ ಮಾಸ್ಟರ್ ಪ್ಲಾನ್ಗಳಿಂದಲೇ ಕರಾವಳಿ ಕ್ರೈಸ್ತರು ಚರ್ಚ್ ದಾಳಿಗಳಿಂದ ತತ್ತರಿಸಿದ್ದು. 

1. ಮಂಗಳೂರಿನ ಎಡೊರೇಷನ್ ಮೊನಾಸ್ಟರಿ ಮೇಲಣ ದಾಳಿ
2. ಮಂಗಳೂರಿನ ಮಿಲಾಗ್ರಿಸ್ ಚರ್ಚ್ ಸುತ್ತಮುತ್ತ ದಾಳಿ
3. ಮಂಗಳೂರಿನ ಕುಲಶೇಖರ ಹೋಲಿ ಕ್ರಾಸ್ ಚರ್ಚ್ ಮೇಲೆ ದಾಳಿ
4. ಮಂಗಳೂರಿನ ಪೆರ್ಮನ್ನೂರಿನ ಸಂತ ಸೆಬಾಸ್ಟಿಯನ್ ಚರ್ಚ್ ನಲ್ಲಿ ದಾಳಿ
5. ಮಂಗಳೂರಿನ ವಾಮಂಜೂರು ಚರ್ಚ್ ಮೇಲೆ ದಾಳಿ
6. ಮಂಗಳೂರಿನ ಬಜ್ಪೆ ಚರ್ಚ್ ಮೇಲೆ ದಾಳಿ
7. ಮಂಗಳೂರಿನ ಪೆರ್ಮುದೆ ಚರ್ಚ್ ಮೇಲೆ ದಾಳಿ
8. ಮಂಗಳೂರಿನ ಬೊಂದೆಲ್ ಚರ್ಚ್ ಗುಡ್ಡಕ್ಕೆ ದಾಳಿ
9. ಉಜಿರೆಯ ಸಂತ ಜಾರ್ಜ್ ಕ್ಯಾಥೋಲಿಕ್ ಚರ್ಚ್ ಮೇಲೆ ದಾಳಿ

2008 ರಲ್ಲಿ ಭಾಜಪ ಅಧಿಕಾರಕ್ಕೆ ಬಂದ ಮೇಲೆ ಕರಾವಳಿ ಭಾಗದಲ್ಲಿ ಅಲ್ಪಸಂಖ್ಯಾತರು ಉಸಿರನ್ನು ಬಿಗಿಹಿಡಿದು ಬದುಕುವಂತಾಗಿತ್ತು. ಅಂತಹ ಸಂಧಿಗ್ಧ ಸ್ಥಿತಿ ಅಲ್ಲಿ ಬಂದೋದಗಿತು. ಹಿಂದೂಮತೀಯವಾದಿಗಳ ಸಂಘಟಕರು ಕರಾವಳಿಯಲ್ಲಿರುವ ಚಚರ್್ಗಳನ್ನು ದಾಳಿ ಮಾಡಲು ಸಂಚು ಹಾಕಿದ್ದರು. ಅದರಲ್ಲಿ ಪ್ರಮುಖವಾಗಿ ಮೇಲೆ ಹೆಸರಿಸಿದ 9 ಚರ್ಚ್ ಗಳನ್ನು ದಾಳಿ ಮಾಡಲಾಯಿತು. ಅದರ ಒಟ್ಟು ನೇತೃತ್ವ ಭಜರಂಗಿ ಮಹೇಂದ್ರ ಕುಮಾರ್ ವಹಿಸಿದ್ದ. ಅದರ ಬೆನ್ನುಲುಬಾಗಿ ಡಾ.ವಿ.ಎಸ್.ಆಚಾರ್ಯರು ಇದ್ದರು. ಜತೆಗೆ ಕದ್ರಿ ಪೊಲೀಸ್ ಠಾಣೆಯ ಎಂ.ಕೆ.ಗಣಪತಿಯೂ ಇದ್ದರು. ಕರಾವಳಿಯಲ್ಲಿ ಚರ್ಚ್ ಗಳನ್ನು ದಾಳಿ ಮಾಡಲು ಬೇಕಾಗುವ ಸಾಮಾಗ್ರಿಗಳು ಮತ್ತು ಪುಂಡಾಟಿಕೆಗೆ ಹುಡುಗರು ಮತ್ತು ಒಳಗಿರವ ನನ್ಗಳನ್ನು ದಾಳಿ ಮಾಡಲು ಹರಳುಗಲ್ಲುಗಳನ್ನು ಪೂರೈಸಿದ್ದೆ ಪೊಲೀಸರು. ಅದರಲ್ಲು ಪ್ರಮುಖವಾಗಿ ಕದ್ರಿ ಠಾಣೆ ವ್ಯಾಪ್ತಿಗೆ ಬರುವ ಕುಲಶೇಖರ ಹೋಲಿಕ್ರಾಸ್ ಚರ್ಚ್ ದಾಳಿಗೆ ಕುಮ್ಮಕ್ಕು ನೀಡಿದ್ದೆ ಇಂದು ಆತ್ಮಹತ್ಯೆ ಮಾಡಿಕೊಂಡಿರುವ ಡಿವೈಎಸ್ಪಿ ಕೆ.ಗಣಪತಿ. 

ಮಂಗಳೂರಿನ ಕದ್ರಿ ಪೊಲಿಸ್ ಠಾಣೆಯಲ್ಲಿ ಅಂದು ಇನ್ಸ್ಪೆಕ್ಟರ್ ಆಗಿದ್ದರು. ಆದರೆ ಇಂದು ಮಂಗಳೂರಿನ ಐಜಿ ಕಛೇರಿಯಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ.ಕೆ.ಗಣಪತಿ ಅವರು ಮಡಿಕೇರಿಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಆತ್ಮಹತ್ಯೆಗೆ ವೈಯಕ್ತಿಕ ಕಾರಣಗಳಿರಬಹುದು? ಅಥವಾ ಇನ್ಯಾವುದೋ ಕಾರಣಗಳಿರಬಹುದು? ಆದರೂ ಕೂಡ ಕೆಲವು ಬಿಜೆಪಿ ನಾಯಕರು ದಾಳವಾಗಿ ಬಳಸಿಕೊಂಡು ಆತ್ಮಹತ್ಯೆಯ ಅನೈತಿಕ ರಾಜಕಾರಣ ಮಾಡುತ್ತಿರುವುದು ಯಾವ ಸಂದೇಶ ನೀಡಲಿಕ್ಕೆ? ಸಾಮಾಜಿಕ ಜಾಲತಾಣದಲ್ಲಿ ಗಣಪತಿ ಅವರನ್ನು ಒಬ್ಬ ಪೊಲೀಸ್ ಇಲಾಖೆಯ ಹಿರೋ. ಸಮಾಜದ ದೃಷ್ಟಿಯಲ್ಲಿ ಆತ ಒಬ್ಬ ಸುಧಾರಕ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ವಾಸ್ತವವಾಗಿ ಈತನು ಕೂಡ ಒಬ್ಬ ಆರೋಪಿ. ಇವರನ್ನು ಮೂರು ಸಲ ಅಮಾನತ್ತು ಮಾಡಲಾಗಿತ್ತು. ಅದರ ವಿವಿರಗಳನ್ನು ತಿಳಿಯುವ ಅಗತ್ಯವಿದೆ. 2010 ರಲ್ಲಿ ಯಶವಂತಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದಾಗ ನಕಲಿ ಎನ್ಕೌಂಟರ್ ಮಾಡಿ ಅಮಾನತ್ತುಗೊಂಡಿದ್ದರು. ಮಡಿವಾಳ ಠಾಣೆಯಲ್ಲಿದ್ದಾಗ ಇಲಾಖೇಯ ರಿವಾಲ್ವಾರನ್ನ ದುರ್ಬಳಕೆ ಮಾಡಿಕೊಂಡಿದ್ದರು. ರಾಜಗೋಪಾಲ ನಗರದಲ್ಲಿದ್ದಾಗ ಕರ್ತವ್ಯ ಲೋಪದಲ್ಲಿ ಅಮಾನತ್ತಾಗಿದ್ದರು. ಅದಲ್ಲದೆ ಮನೆಗಳವು ಆರೋಪಿಯಿಂದ ವಶಪಡಿಸಿಕೊಳ್ಳುತ್ತಿದ್ದ ಹಣ ಅಥವಾ ಇನ್ನಿತರ ವಸ್ತುಗಳನ್ನು ವಂಚಿಸುತ್ತಿದ್ದರು ಎಂಬ ಆರೋಪವು ಕೂಡ ಇವರ ಮೇಲಿದೆ. ಇಂತಹ ವ್ಯಕ್ತಿಯನ್ನು ಯಾವ ಮಾನದಂಡದ ಮೇಲೆ ದಕ್ಷ ಅಧಿಕಾರಿ ಪ್ರಾಮಾಣಿಕ ವ್ಯಕ್ತಿ ಎನ್ನುತ್ತೀರಿ? ಈತನ ಆತ್ಮಹತ್ಯೆಯನ್ನು ಇಟ್ಟುಕೊಂಡು ಸಿಬಿಐ ಗೆ ವಹಿಸಿ ಎಂದು ಬಿಜೆಪಿ ಪಟ್ಟು ಹಿಡಿದಿದೆ. ರಾಜ್ಯದ ಎಲ್ಲಾ ಕಡೆ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಇವರದೇ ಸರ್ಕಾರವಿದ್ದಾಗ ಕರಾವಳಿಯಲ್ಲಿ ನಡೆದ ಚರ್ಚ್ ದಾಳಿಗೆ ಇದೇ ಬಿಜೆಪಿ ಸರ್ಕಾರ ಯಾವ ನ್ಯಾಯ ದೊರಕಿಸಿ ಕೊಟ್ಟಿದೆ? ಆದರೆ ಇಂದು ಇದೇ ಗಣಪತಿ ಆತ್ಮಹತ್ಯೆಯ ಮುಂದೆ ಅನೈತಿಕ ರಾಜಕಾರಣ ಮಾಡುತ್ತಿರುವುದು ಸರ್ಕಾರವನ್ನು ದುರ್ಬಲ ಮಾಡುವುದಕ್ಕೆ ವಿನಃ ಮತ್ತೇನು ಇದರೊಳಗಿಲ್ಲ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ವಿಷಾದವಿದೆ. ಆದರೆ ಅದನ್ನು ಬಂಡವಾಳ ಮಾಡಿಕೊಳ್ಳುವ ಅಗತ್ಯವಿಲ್ಲ. ಹಾಗೆಯೆ ಸತ್ಯಾಸತ್ಯತೆಗಳನ್ನು ಅರಿಯದೇ ದೈವೀಕರಿಸುವುದು ಕೂಡ ಅನವಶ್ಯಕ.


ಕಾಮೆಂಟ್‌ಗಳಿಲ್ಲ: