ಮಂಗಳವಾರ, ಮಾರ್ಚ್ 14, 2017

ಅಭಿವೃದ್ಧಿ ದರದ ಊಹಂದಾಜುಗಳು




 ಅನುವಾದ: ಶಿವಸುಂದರ್

ಭಾರತದ ಆರ್ಥಿಕತೆ ಮುಗ್ಗರಿಸುತ್ತಿದೆಆದರೆ ಬದಲೀ ಸತ್ಯಗಳು ಮಾತ್ರ ನೋಟು ನಿಷೇಧದ ನಂತರವೂ ಅಭಿವೃದ್ಧಿ ದರ ಹೆಚ್ಚಾಗುತ್ತಿದೆಯೆಂದು ಹೇಳುತ್ತಿವೆ.
development rate ಗೆ ಚಿತ್ರದ ಫಲಿತಾಂಶ

 ಕೇಂದ್ರೀಯ ಅಂಕಿಅಂಶ ಕಚೇರಿಯು (ಸೆಂಟ್ರಲ್ ಸ್ಟಾಸ್ಟಿಕಲ್ ಆಫೀಸ್-ಸಿ.ಎಸ್.) ತನ್ನ ಎರಡನೇ ಮುಂದಂದಾಜಿ (ಅಡ್ವಾನ್ಸ್ಡ್ ಎಸ್ಟಿಮೇಟ್ಸ್) ವರದಿಯಲ್ಲಿ ೨೦೧೬ರ ಅಕ್ಟೊಬರ್-ಡಿಸೆಂಬರ್ ಅವಧಿಯ ಮೂರನೇ ತ್ರೈಮಾಸಿಕದಲ್ಲಿ ಭಾರತದ ಒಟ್ಟಾರೆ ಅಂತರಿಕ ಉತ್ಪತ್ತಿ (ಗ್ರಾಸ್ ಡೊಮೆಸ್ಟಿಕ್ ಪ್ರಾಡ್ಯೂಸ್-ಜಿ.ಡಿ.ಪಿ)ಯು ಶೇ.೭ರ ಗತಿಯಲ್ಲಿ ಅಭಿವೃದ್ಧಿ ಹೊಂದಿದೆಯೆಂದು ಅಂದಾಜು ಮಾಡಿದೆ. ನೋಟು ನಿಷೇಧದ ಪ್ರಭಾವದಿಂದ ಆರ್ಥಿಕತೆ ತತ್ತರಿಸುತ್ತಿರುವಾಗ ಅಂದಾಜು ಎಲ್ಲರ ನಿರೀಕ್ಷೆಗೂ ವ್ಯತಿರಿಕ್ತವಾಗಿದೆ. ಎರಡನೇ ಮುಂದಂದಾಜು ೨೦೧೬-೧೭ರ ಪೂರ್ಣಾವಧಿಯ ಅಭಿವೃದ್ಧಿಯ ದರದ ಅಂದಾಜನ್ನು ಸಹ ನೀಡಿದೆ. ತನ್ನ ಮೊದಲ ಮುಂದಂದಾಜಿನ ಊಹೆಯಾದ ಶೇ..೧ರ ಅಭಿವೃದ್ಧಿ ದರದ ಪ್ರಮಾಣವನ್ನೇ ಎರಡನೇ ಮುಂದಂದಾಜಿನಲ್ಲೂ ಅದು ಪುನರುಚ್ಚರಿಸಿದೆ. ಇದು ೨೦೧೫-೧೬ರ ಅಭಿವೃದ್ಧಿ ದರವಾದ ಶೇ..೬ಕ್ಕೆ ಹೋಲಿಸಿದರೆ ಶೇ. .೫ರಷ್ಟು ಕಡಿಮೆ. ಇದು ಸಿ.ಎಸ್. ಕಚೇರಿಯು ಅಭಿವೃದ್ಧಿ ದರದ ಪೂರ್ಣ ಮುಂದಂದಾಜು ಮಾಡುವಾಗ ಮತ್ತು ಹಂಗಾಮಿ ಅಂದಾಜು ಮಾಡುವಾಗ ಅನುಸರಿಸುವ ಪದ್ಧತಿಗಳ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿವೆ. ಭಾರತದ ಮುಖ್ಯ ಅಂಕಿಅಂಶ ಅಧಿಕಾರಿ ಟಿ.ಸಿ. ಅನಂತ್ ಅವರು ಅಭಿವೃದ್ಧಿಯ ದರದ ಇತ್ತೀಚಿನ ಉಹಂದಾಜಿನ ಹಿನ್ನೆಲೆಯಲ್ಲಿ ಆರ್ಥಿಕತೆಯ ಮೇಲೆ ನೋಟು ನಿಷೇಧದ ಕ್ರಮಗಳಿಂದ ಆಗಿರುವ ಪರಿಣಾಮದ ಕುರಿತು ತಾವು ಯಾವುದೇ ಟಿಪ್ಪಣಿ ಮಾಡಲು ಬಯಸುವುದಿಲ್ಲವೆಂದು ಒಪ್ಪಿಕೊಂಡಿದ್ದಾರೆ. ಹಾಗಿದ್ದರೂ ಕೇಂದ್ರ ಸರ್ಕಾರದ ವಕ್ತಾರರು ಇದನ್ನೇ ಅತ್ಯುತ್ಸಾಹದಿಂದ  ಬಳಸಿಕೊಳ್ಳುತ್ತಾ ನೋಟು ನಿಷೇಧದಿಂದ ಆರ್ಥಿಕತೆಯ ಮೇಲೆ ವ್ಯಗ್ರ ಪರಿಣಾಮವಾಯಿಗಿದೆಯೆಂಬ ವಿಶ್ಲೇಷಣೆ ಉತ್ಪ್ರೇಕ್ಷೆಯಿಂದ ಕೂಡಿತ್ತೆಂದು ಪ್ರಚಾರ ಮಾಡುತ್ತಿರುವುದು ಮಾತ್ರವಲ್ಲದೆ ನೋಟು ನಿಷೇಧವು ಆರ್ಥಿಕತೆಯ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರಿಲ್ಲವೆಂದೂ  ಹೇಳಿಕೊಳ್ಳುತ್ತಿದ್ದಾರೆ. ನಿರೀಕ್ಷೆಯಂತೆ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ದರದ ಊಹಂದಾಜನ್ನು ಉತ್ತರ ಪ್ರದೇಶದ ಚುನಾವಣಾ ಪ್ರಚಾರಗಳಲ್ಲೂ ಬಳಸಿಕೊಂಡರು.

ಸಿಎಸ್ ಕಚೇರಿಯು ಅಭಿವೃದ್ಧಿಯ ಬಗ್ಗೆ ಎರಡು ರೀತಿಯ ಅಂಕಿಅಂಶಗಳನ್ನು ಬಿಡುಗಡೆ ಮಾಡುತ್ತದೆ. ಮಾರುಕಟ್ಟೆ ದರದಲ್ಲಿ ಲೆಕ್ಕಹಾಕಿ ಅಂದಾಜು ಮಾಡುವ ಒಟ್ಟಾರೆ ಆಂತರಿಕ ಅಭಿವೃದ್ಧಿ (ಜಿಡಿಪಿ). ಮತ್ತೊಂದು ಮೂಲಭೂತ ದರದಲ್ಲಿ (ಅಂದರೆ ತೆರಿಗೆ ಅಥವಾ ರಿಯಾಯತಿಗಳನ್ನು ಸೇರಿಸದೆ ಬರಿ ಮೌಲ್ಯ ಸೇರ್ಪಡೆಯ ಲೆಕ್ಕ- ಅನು) ಲೆಕ್ಕಹಾಕುವ ಒಟ್ಟಾರೆ ಮೌಲ್ಯ ಸೇರ್ಪಡೆ (ಗ್ರಾಸ್ ವ್ಯಾಲ್ಯೂ ಆಡೆಡ್- ಜಿ.ವಿ.) ಅಂಕಿಅಂಶಗಳು. ೨೦೧೬-೧೭ರ ಸಾಲಿನಲ್ಲಿ ಜಿ.ವಿ.. ಶೇ..೭ರಷ್ಟು ಅಭಿವೃದ್ಧಿ ಕಂಡಿದೆ. ಇದು ೨೦೧೫-೧೬ರ ಜಿ.ವಿ. ಅಭಿವೃದ್ಧಿ ದರಕ್ಕೆ ಹೋಲಿಸಿದಲ್ಲಿ ಶೇ..೧ರಷ್ಟು ಇಳಿಕೆ. ಅಂದರೆ ಅಂದಾಜು .೧೫ಲಕ್ಷ ಕೋಟಿಯಷ್ಟು ಇಳಿಕೆ. ಅಂಕಿಅಂಶವು ನೋಟು ನಿಷೇಧದ ತರುವಾಯದಲ್ಲಿ ಕುಟುಂಬವಾರು ಮತ್ತು ಅಸಂಘಟಿತ ಕ್ಷೇತ್ರಗಳಲ್ಲಿ ಸಂಭವಿಸಿರುವ- ಆದಾಯ, ಉದ್ಯೋಗ ಮತ್ತು ಕೊಳ್ಳುವ ಶಕ್ತಿಗ- ಕುಸಿತವನ್ನು ಸ್ಪಷ್ಟವಾಗಿ ಕಟ್ಟಿಕೊಡುತ್ತದೆ.

 ಮೂಲಭೂತ ದರಗಳಲ್ಲಿ ಲೆಕ್ಕ ಹಾಕುವ ಜಿ.ವಿ. ಪದ್ಧತಿಯು ಪರೋಕ್ಷ ತೆರಿಗೆಯ ಲೆಕ್ಕಾಚಾರವನ್ನು ಒಳಗೊಳ್ಳುವುದಿಲ್ಲ. ಇದು ಹಿಂದೆ ಆರ್ಥಿಕತೆಯ ನಿಜವಾದ ಅಭಿವೃದ್ಧಿ ದರವನ್ನು ಅಂದಾಜು ಮಾಡಲು ಬಳಸುತ್ತಿದ್ದ ಪದ್ಧತಿಯ ರೀತಿ ಉತ್ಪಾದನೆಯನ್ನು ಆಗಗೊಳಿಸುವ ಘಟಕಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು ಜಿಡಿಪಿ ದರವನ್ನು ಅಂದಾಜು ಮಾಡುತ್ತದೆ. ವಾಸ್ತವವಾಗಿ ಪದ್ಧತಿಯು ಧೃಢವಾದ ಆರ್ಥಶಾಸ್ತ್ರೀಯ ನೆಲೆಗಟ್ಟಿನ ಮೇಲೆ ನಿಂತುಕೊಂಡಿದೆ. ಸ್ಪಷ್ಟವಾಗಿ ಗೋಚರವಾಗುವ ವಿಷಯವೆಂದರೆ ಸಿಎಸ್ ಕಚೇರಿಯು ಅಭಿವೃದ್ಧಿ ದರವನ್ನು ಲೆಕ್ಕಾಚಾರ ಮಾಡುವಾಗ ಪರೋಕ್ಷ ತೆರಿಗೆಯನ್ನೂ ಲೆಕ್ಕಾಚಾರಕ್ಕೆ ಪರಿಗಣಿಸಿದೆ. ಇದು ವಾಸ್ತವದಲ್ಲಿ ಒಂದೇ ಲೆಕ್ಕವನ್ನು ಎರಡೆರಡು ಬಾರಿ ಪರಿಗಣಿಸುವ ಡಬಲ್ ಅಕೌಂಟಿಂಗ್ ದೋಷವಾಗಿದೆ. ಏಕೆಂದರೆ ಪರೋಕ್ಷ ತೆರಿಗೆಯು ಸಾರಾಂಶದಲ್ಲಿ ಹೆಚ್ಚಿನ ವೆಚ್ಚಕ್ಕೆ ದಾರಿಮಾಡಿಕೊಟ್ಟು ಹೆಚ್ಚಿನ ಮೌಲ್ಯ ವರ್ಧನೆಯ ಲೆಕ್ಕವನ್ನು ತೋರಿಸುತ್ತದೆ. ತಪ್ಪು ಲೆಕ್ಕಾಚಾರದಿಂದಾಗಿಯೇ ಸಿಎಸ್ ವಾಸ್ತವಕ್ಕಿಂತೆ ಹೆಚ್ಚಿನ ಅಭಿವೃದ್ಧಿ ದರವನ್ನು ತೋರಿಸಲು ಸಾಧ್ಯವಾಗಿದೆ.

ಮೂಲಭೂತದರಗಳಲ್ಲಿ ಶೇ..೭ರಷ್ಟು ಜಿ.ವಿ. ಅಭಿವೃದ್ಧಿ ಆಗಿರುವುದೂ ಸಹ ಸತತ ಎರಡು ವರ್ಷಗಳ ಬರದ ನಂತರದಲ್ಲಿ ಕೃಷಿ ಉತ್ಪಾದನೆಯ  ಅಭಿವೃದ್ಧಿ ಶೇ..೩ರಿಂದ ಶೇ..೪ಕ್ಕೇ ಏರಿರುವುದರಿಂದ ಮತ್ತು ಸಾರ್ವಜನಿಕ ವೆಚ್ಚವೂ, ವಿಶೇಷವಾಗಿ ಸರ್ಕಾರಿ ನೌಕರರ ಸಂಬಳದ ಹೆಚ್ಚಳದಿಂದಾಗಿ, ಶೇ..೯ರಿಂದ ಶೇ.೧೧.೨ಕ್ಕೆ ಏರಿರುವುದರಿಂದ. ರಾಜಸ್ವ (ರೆವೆನ್ಯೂ) ವೆಚ್ಚದಲ್ಲಿ ಹೆಚ್ಚಳವಾಗಿರುವುದು ಪರೋಕ್ಷ ತೆರಿಗೆಯಲ್ಲಿ ಸಾಪೇಕ್ಷ ಹೆಚ್ಚಳವಾಗಿರುವುದರಿಂದ ಮತ್ತು ಎರಡು ಬಾರಿ ಪೂರಕ ವೆಚ್ಚದ ಬೇಡಿಕೆಗಳನ್ನು ಸಂಸತ್ತು ಅನುಮೋದಿಸಿದ್ದರಿಂದ. ಇವು ವಾರ್ಷಿಕ ಅಂಕಿಅಂಶಗಳಾಗಿದ್ದು ೨೦೧೬-೧೭ರ ಮೂರನೇ ತ್ರೈಮಾಸಿಕದಲ್ಲೂ ಕೃಷಿ ಮತ್ತು ಸಾರ್ವಜನಿಕ ವೆಚ್ಚಗಳು ಗಣನೀಯ ಹೆಚ್ಚಳವನ್ನೇ ತೋರಿಸಿದ್ದವು.

ಅದೇನೇ ಇದ್ದರೂ ವಾರ್ಷಿಕ ಆದಾಯದ ಲೆಕ್ಕಾಚಾರದಲ್ಲಿ ಇತರ  ಪ್ರಮುಖ ಕ್ಷೇತ್ರಗಳ ವಾರ್ಷಿಕ ಅಭಿವೃದ್ಧಿ ದರವು ಗಣನೀಯ ಕುಸಿತವನ್ನೇ ದಾಖಲಿಸಿವೆ. ಕೃಷಿ, ಸಾರ್ವಜನಿಕ ವೆಚ್ಚದ ಜೊತೆಗೆ ವಿದ್ಯುತ್ ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಐದು ಕ್ಷೇತ್ರಗಳ ಅಭಿವೃದ್ಧಿ ದರ ೨೦೧೫-೧೬ರಲ್ಲಿ .೮ರಷ್ಟಿದ್ದದ್ದು ೨೦೧೬-೧೭ರಲ್ಲಿ ಶೇ..೪ಕ್ಕೆ ಕುಸಿದಿದೆ. ಅದೇ ರೀತಿ ೨೦೧೬-೧೭ರ ಮೂರನೇ ತ್ರೈಮಾಸಿಕದಲ್ಲಿ ಎಲ್ಲಾ ಐದು ಕ್ಷೇತ್ರಗಳ ಅಭಿವೃದ್ಧಿ ದರ ಕಳೆದ ವರ್ಷದ ಅರ್ಧದಷ್ಟಕ್ಕೆ ಎಂದರೆ ಶೇ. ೧೦ರಿಂದ ಶೇ..೭ಕ್ಕೆ ಇಳಿದಿದೆ. ರಾಷ್ಟ್ರೀಯ ಆದಾಯದಲ್ಲಿ ಆಗಿರುವ ಭಾರಿ ನಷ್ಟವು ನೇರವಾಗಿ ನೋಟು ನಿಷೇಧದ ಪರಿಣಾಮಗಳ ಪ್ರಭಾವವೇ ಆಗಿದೆ. ಎಲ್ಲಾ ಐದು ಕ್ಷೇತ್ರಗಳ ಅಭಿವೃದ್ಧಿಯ ಬಗೆಗಿನ ಮೂರನೇ ತ್ರೈಮಾಸಿಕದ ಅಂದಾಜು ಮತ್ತು ಒಟ್ಟಾರೆಯಾಗಿ ಇಡೀ ವರ್ಷದ ಅಭಿವೃದ್ಧಿ ದರ ಅಂದಾಜುಗಳು ಮಾತ್ರ  ಉತ್ಪಾದನಾ ಮತ್ತು ಹಣಕಾಸೇತರ ಕ್ಷೇತ್ರಗಳಲ್ಲಿನ ಅಸಂಘಟಿತ ವಲಯಗಳ ಅಭಿವೃದ್ಧಿ ಅಂದಾಜುಗಳನ್ನೂ ಒಳಗೊಂಡಿರುತ್ತದೆ. ಅಸಂಘಟಿತ ವಲಯದ ಅಭಿವೃದ್ಧಿಯ ಲೆಕ್ಕಾಚಾರಗಳಿಗೆ ಪರಿಣಾಮಕಾರಿ ಶ್ರಾಮಿಕ ಹೂಡಿಕೆ (ಎಫೆಕ್ಟೀವ್ ಲೇಬರ್ ಇನ್ಪುಟ್) ಪದ್ಧತಿಯನ್ನು ಆಧರಿಸಿ ಲೆಕ್ಕಿಸಲಾದ ೨೦೧೧-೧೨ರ ಅಂದಾಜನ್ನು ಹೋಲಿಕೆ ಪ್ರಮಾಣವನ್ನಾಗಿ ಬಳಸಲಾಗುತ್ತಿತ್ತು.

 ಆದರೆ ಬಾರಿ ವಿಧಾನವನ್ನು ಕೇವಲ ಪರಿಷ್ಕೃತ ಅಂದಾಜುಗಳ ಲೆಕ್ಕಾಚಾರಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಮತ್ತು ಇತ್ತೀಚಿನ ಅಂದಾಜುಗಳನ್ನು ಮಾಡುವಾಗ ಮಾಮೂಲಿನಂತೆ ಔಪಚಾರಿಕ ಆರ್ಥಿಕತೆಯ ಸೂಚಕಗಳನ್ನೇ ಬಳಸಲಾಗಿದೆ. ಸಹಜವಾಗಿಯೇ ಲೆಕ್ಕಾಚಾರಗಳು ನಿಖರವಾಗಿರುವುದಿಲ್ಲಕ್ಷೇತ್ರಗಳ ಪ್ರತ್ಯಕ್ಷ ಅಧ್ಯಯನಗಳೆಲ್ಲವೂ ಸ್ಪಷ್ಟಪಡಿಸುತ್ತಿರುವಂತೆ ನೋಟುನಿಷೇಧದಿಂದ ತೀವ್ರವಾದ ಸಂಕಷ್ಟಕ್ಕೆ ಗುರಿಯಾಗಿರುವವರು ಸ್ವ-ಉದ್ಯೋಗಿಗಳು ಮತ್ತು ಅಸಂಘಟಿತ ಕ್ಷೇತ್ರದಲ್ಲಿರುವವರು. ಸಿಎಸ್ ನೀಡಿರುವ ದತ್ತಾಂಷಗಳು ಹಾನಿಯನ್ನು ಪ್ರತಿಫಲಿಸುವುದಿಲ್ಲ. ಹೀಗಾಗಿ ಮೂರನೇ ತ್ರೈಮಾಸಿಕದಲ್ಲಿ ಜಿವಿಎ ಗೆ ಆಗಿರುವ ನಷ್ಟವು ಸಿಎಸ್ ಮಾಡಿರುವ ಅಂದಾಜಿಗಿಂತ ಖಂಡಿತ ಹೆಚ್ಚಿರುತ್ತದೆ.

ಪ್ರತಿಬಾರಿ ಸಿಎಸ್ ಅಭಿವೃದ್ಧಿ ದರದ ಊಹಂದಾಜಿನ ಪರಿಷ್ಕೃತ ವರದಿಯನ್ನು ಬಿಡುಗಡೆ ಮಾಡಿದಾಗಲು ಅದು ಅದರ ಹಿಂದಿನ ಅಂದಾಜಿಗಿಂತ ಕಡಿಮೆಯಾಗುತ್ತಲೇ ಹೋಗುತ್ತಿದೆ. ಅನುಭವದ ಮೇಲೆ ಹೇಳುವುದಾದರೆ ಈಗ ಸಿಎಸ್ ಮಾಡಿರುವ ಮೂರನೇ ತ್ರೈಮಾಸಿಕದ ಮತ್ತು ಇಡೀ ವರ್ಷದ ಅಭಿವೃದ್ಧಿ ದರದ ಎರಡನೇ ಊಹಂದಾಜಿನ ದರಗಳು ಅದರ ಮುಂದಿನ ವರದಿಯಲ್ಲಿ ಇಳಿಕೆ ಕಾಣಲಿವೆ. ಇದು ಅದರ ನಂತರದ ಅವಧಿಯ ಅಭಿವೃದ್ಧಿಯ ದರದ ಊಹಂದಾಜನ್ನು ಹಿಗ್ಗಿಸಿ ತೋರಿಸಲು ಸಹಾಯ ಮಾಡುತ್ತದೆಏಕೆಂದರೆ ಒಂದು ಅವಧಿಯ ಮುಂದಂದಾಜುಗಳು ಅದರ ಹಿಂದಿನ ಅವಧಿಯ ಅಂದಾಜನ್ನು ಹೋಲಿಸಿ ಮಾಡುವ ಲೆಕ್ಕಾಚಾರವಾದ್ದದಿಂದ ಹಿಂದಿನ ಅವಧಿಯ ಅಭಿವೃದ್ಧಿ ದರವನ್ನು ಕಡಿಮೆ ತೋರಿಸಿದಷ್ಟೂ ಪ್ರಸ್ತುತ ಅವಧಿಯ ಅಭಿವೃದ್ಧಿ ದರ ತನ್ನಂತೆ ತಾನೇ ಹೆಚ್ಚಾಗಿ ಕಾಣತೊಡಗುತ್ತದೆ. ಮೂರನೇ ತ್ರೈಮಾಸಿಕದ ಅಭಿವೃದ್ಧಿದರದ ಘೋಷಣೆಯಲ್ಲೂ ಹಿಂದಿನ ಅವಧಿಯ ಅಭಿವೃದ್ಧಿ ದರವನ್ನು ಇಳಿಸಿ ಹೋಲಿಸಿದ ಪ್ರಭಾವವಿದೆ.

ಸಿಎಸ್ ಮಾಡಿರುವ ಮುಂದಂದಾಜನ್ನು ಬಳಸಿಕೊಂಡು ಅಧಿಕಾರರೂಢರು ನೋಟು ನಿಷೇಧವು ಆರ್ಥಿಕತೆಯ ಮೇಲೆ ಯಾವುದೇ ಹಾನಿಯನ್ನುಂಟುಮಾಡಿಲ್ಲವೆಂದು ಕೊಚ್ಚಿಕೊಳ್ಳುತ್ತಿದ್ದಾರೆ. ಒಂದು ಮುಂದಂದಾಜನ್ನು ಹೀಗೆ ಅರ್ಥಮಾಡಿಕೊಳ್ಳುವುದಾದರೆ ಅದರ ಲೆಕ್ಕಾಚಾರವು, ಪ್ರಾರಂಭದಿಂದ ಕೊನೆಯವರೆಗೆ , ಅಂದರೆ ಹಂಗಾಮಿ ಮುಂದಂದಾಜಿನಿಂz ಅಂತಿಮ ಅಂದಾಜಿನವರೆಗೆ ಹೆಚ್ಚು ವಿಶ್ವಸನೀಯ ಅಂಕಿಅಂಶ ಲೆಕ್ಕಾಚಾರ ಪದ್ಧತಿಗಳನ್ನು ಅನುಸರಿಸಬೇಕಾಗುತ್ತದೆ. ಔಪಚಾರಿಕ ಕ್ಷೇತ್ರಗಳ ದತ್ತಾಂಶಗಳನ್ನೇ ಅನೌಪಚಾರಿಕ ಕ್ಷೇತ್ರಗಳಿಗೂ ಅನ್ವಯಿಸುವುದು ತಪ್ಪು ಫಲಿತಾಂಶಗಳನ್ನು ನೀಡಬಲ್ಲದುತಪ್ಪು ಫಲಿತಾಂಶವನ್ನೇ ನೀಡಿದೆ. ಪ್ರಾಯಶಃ ಅಂದಾಜುಗಳಿಗೆ ಇನ್ನೂ ನೇರವಾದ ಸೂಚಕಗಳು ಬೇಕಿವೆ. ೨೦೧೧-೧೨ರಲ್ಲಿ ಅನುಸರಿಸಿ ನಿಗದಿಗೊಳಿಸಲಾದ ಹೋಲಿಕೆ ಪ್ರಮಾಣವನ್ನು ಬಳಸಿ ಅವಧಿಯಾಚೆಗೆ ವಿಸ್ತರಿಸುವ ಮಾದರಿ ಸರ್ವೇಕ್ಷಣಾ ಪದ್ಧತಿಯು ಹೆಚ್ಚು ಸಹಾಯ ಮಾಡಬಹುದು.

ಸಿಎಸ್ ನೀಡಿರುವ ೨೦೧೬-೧೭ರ ತ್ರೈಮಾಸಿಕ ದರಗಳು ನಿಸ್ಸಂದೇಹವಾಗಿ ಮುಂದಂದಾಜಿನ ಪದ್ಧತಿಯಲ್ಲಿರುವ ಅಂತರ್ಗತ ಮಿತಿಗಳನ್ನು ಬಯಲುಮಾಡಿದೆ. ಇದು ಒಂದೆಡೆ ನಿಷ್ಪಕ್ಷಪಾತಿ ಅರ್ಥಶಾಸ್ತ್ರಜ್ನರನ್ನು ದಿಗ್ಭ್ರಾಂತರನ್ನಾಗಿಸಿದ್ದರೆ ಮತ್ತೊಂದೆಡೆ ಆಳುವ ಸರ್ಕಾರಕ್ಕೆ ತನ್ನ ಹಾನಿಕಾರಕ ಮತ್ತು ವಿಧಂಸಕಾರಿ ಅರ್ಥನೀತಿಯನ್ನು ಸಮರ್ಥಿಸಿಕೊಳ್ಳಲು ಅವಕಾಶಮಾಡಿಕೊಟ್ಟಿದೆ. ಸಿಎಸ್ ತನ್ನ ಮುಂದಂದಾಜುಗಳ ಪದ್ಧತಿಯನ್ನು ಕೂಲಂಕಷವಾಗಿ ಪರಿಶೀಲಿಸುವ ತನಕ ಅದರ ವರದಿ ಮತ್ತು ಅಂದಾಜುಗಳು ಸರ್ಕಾರಕ್ಕೆ ರಕ್ಷಾ ಕವಚವನ್ನು ಒದಗಿಸಿದರೂ ಅನುಮಾನದಿಂದ ಮಾತ್ರ ಮುಕ್ತವಾಗುವುದಿಲ್ಲ.
                                                                               
                                                                 ಕೃಪೆ: Economic and Political Weekly
                                                                    March 11, 2017. Vol. 52, No.10
                                                                             
























































ಕಾಮೆಂಟ್‌ಗಳಿಲ್ಲ: