ಸೋಮವಾರ, ಫೆಬ್ರವರಿ 27, 2017

ಆಜಾದಿ- ಭಾರತೀಯ ದಮನದಿಂದ ಸ್ವಾತಂತ್ರ್ಯ

ಅನು: ಶಿವಸುಂದರ್

ಕಾಶ್ಮೀರಿ ಮುಸ್ಲಿಮರು ಕಳೆದ 27 ವರ್ಷಗಳಿಂದ ಮಿಲಿಟರಿ ಅಡಳಿತವನ್ನು ಮತ್ತು ಭಾರತೀಯ ಸೈನಿಕ ಪಡೆಗಳಿಂದ ಎಲ್ಲಾ ಬಗೆಯ ದೌರ್ಜನ್ಯಗಳನ್ನೂ ಅನುಭವಿಸಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿನ ಭೀಕರ ಚಳಿ ಮೂಳೆಗಳನ್ನು ಕೊರೆಯುವಷ್ಟಿದ್ದರೂ ಅಲ್ಲಿನ ಜನರ ಇಚ್ಚಾಶಕ್ತಿಯನ್ನೇನೂ ತಣ್ಣಗಾಗಿಸಿಲ್ಲ. ಅಲ್ಲಿನ ಯಾವುದೋ ಜಾಗದ ಯಾವುದೋ ಮನೆಯಲ್ಲಿ ಬೆರಳೆಣಿಕೆಯಷ್ಟು ಮಿಲಿಟೆಂಟ್‍ಗಳು ಅಡಗಿಕೊಂಡಿದ್ದಾರೆಂದೂ ಭಾರತದ ಭದ್ರತಾ ಪಡೆಗಳ ನೂರಾರು ಸೈನಿಕರು ನುಗ್ಗಿದಾUಲೆಲ್ಲಾ ಸ್ಥಳೀಯ ಜನ ಕೊರೆವ ಚಳಿಯನ್ನೂ ಲೆಕ್ಕಿಸದೆ ಮಿಲೆಟೆಂಟ್‍ಗಳ ಬೆಂಬಲಕ್ಕೆ ಧಾವಿಸುತ್ತಾರೆ. ಮಾತ್ರವಲ್ಲದೆ ಭದ್ರತಾ ಪಡೆಗಳು ತಮ್ಮ ಕಾರ್ಯಾಚರಣೆ ಮಾಡದಂತೆ ತಡೆಯೊಡ್ಡುತ್ತಾ ಹಲವು ಬಾರಿ ಮಿಲಿಟೆಂಟ್‍ಗಳು ತಪ್ಪಿಸಿಕೊಳ್ಳಲೂ ಸಹಕರಿಸಿದ್ದಾರೆ. ಭಾರತದ ಭದ್ರತಾ ಪಡೆಗಳ ದೃಷ್ಟಿಯಲ್ಲಿ ಮಿಲಿಟೆಂಟ್‍ಗಳಿಗೆ ಬೆಂಬಲ ನೀಡುವ ಸ್ಥಳೀಯರು ನಿಶ್ಚಿತವಾಗಿ, “ದೇಶದ್ರೋಹಿಗಳೇ”. ಹೀಗಾಗಿ ಅವರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಯಾವ ಹಿಂಜರಿಕೆಯೂ ಭದ್ರತಾ ಪಡೆಗಳಿಗೆ ಇರುವುದಿಲ್ಲ.

ವಸ್ತುಸ್ಥಿತಿಯೇನೆಂದರೆ ಬಹಳಷ್ಟು ಸ್ಥಳೀಯರು ಮಿಲಿಟೆಂಟ್‍ಗಳನ್ನು ರಕ್ಷಿಸಲು ತಮ್ಮ ಪ್ರಾಣಗಳನ್ನೂ ಪಣಕ್ಕಿಡಲು ಸಿದ್ದವಿರುತ್ತಾರೆ. ಹತ್ಯೆಗೀಡಾಗುವ ಪ್ರತಿಯೊಬ್ಬ ಮಿಲಿಟೆಂಟ್ ಕೂಡಾ ಕಾಶ್ಮೀರಿಯೇ ಆಗಿರುತ್ತಾನೆ. ಪಾಕಿಸ್ತಾನದ ಆಡಳಿತಕೊಳ್ಳಪಟ್ಟಿರುವ ಪಶ್ಚಿಮ ಕಾಶ್ಮೀರದ ದೃಷ್ಟಿಯಿಂದ ಹೇಳುವುದಾದರೆ ಬಹಳಷ್ಟು ಮಿಲಿಟೆಂಟ್‍ಗಳು ಭಾರತದ ಆಡಳಿತಕ್ಕೊಳಪಟ್ಟಿರುವ ಪೂರ್ವ ಕಾಶ್ಮೀರಿಗಳೇ ಆಗಿರುತ್ತಾರೆ. ಇದು ಕಾಶ್ಮೀರಿಗಳಲ್ಲಿ ತೀವ್ರವಾದ ಆಕ್ರೋಶವನ್ನುಂಟುಮಾಡಿದೆ. ಈ ಮಿಲಿಟೆಂಟ್ ಅಥವಾ ಹಲವು ಮಿಲಿಟೆಂಟ್‍ಗಳ “ಎನ್‍ಕೌಂಟರ್ ಹತ್ಯೆಗಳು, ಮತ್ತು ಆ ಹೆಸರಿನಲ್ಲಿ ವಿಶೇಷವಾಗಿ ಸಾಮಾನ್ಯ ನಾಗರಿಕರು ಹತ್ಯೆಗೊಳಗಾಗುವಂಥ ವಿದ್ಯಮಾನಗಳೇ ಕೊರೆಯುವ ಚಳಿಯನ್ನೂ ಲೆಕ್ಕಿಸದಂಥಾ ದಿಡೀರ್ ಸಾರ್ವಜನಿಕ ಪ್ರತಿರೋಧಕ್ಕೆ ಕಾರಣವಾಗುತ್ತದೆ. ಅಂಥಾ ಪ್ರತಿರೋಧಗಳು ಹೆಚ್ಚೆಚ್ಚು ಕಸುವು ಪಡೆದುಕೊಳ್ಳುತ್ತಿದ್ದಂತೆ ಅವನ್ನು ಹತ್ತಿಕ್ಕಲು ಭದ್ರತಾ ಪಡೆಗಳು ಪ್ರತಿಭಟಿನಾ ನಿರತ ಜನರ ಗುಂಪುಗಳ ಮೇಲೆ ಗುಂಡು ಹಾರಿಸುತ್ತಾರೆ. ಇದು ಮತ್ತಷ್ಟು ಪ್ರತಿಭಟನೆಗಳ ಸರಣಿಗೆ ಕಾರಣವಾಗುತ್ತದೆ.
military
ಕಾಶ್ಮೀರಿ ಪ್ರಜೆಗಳು 27 ವರ್ಷಗಳ ಕಾಲ ಮಿಲಿಟರಿ ಆಡಳಿತಕ್ಕೆ ಸದೃಶವಾದ ಆಡಳಿತಕ್ಕೆ ಗುರಿಯಾಗಿದ್ದಾರೆ; ಹೆಚ್ಚೂಕಡಿಮೆ ಇಡೀ ಪ್ರದೇಶವನ್ನೇ “ಗಲಭೆಗ್ರಸ್ಠ”ವೆಂದು ಪರಿಗಣಿಸಲಾಗಿದೆ. ಹೀಗಾಗಿ ನಾಗರಿಕರ ಮೇಲೆ ಭದ್ರತಾಪಡೆಗಳು ಎಸಗುವ ಬಲಾತ್ಕಾರ, ಚಿತ್ರಹಿಂಸೆ, ಅಪಹರಣ, ಅಥವಾ ಕೊಲೆಗಳಂತ ಅಪರಾಧಗಳ ವಿರುದ್ಧ ಯಾವ ಶಿಕ್ಷೆಗೂ ಗುರಿಯಾಗದ ರೀತಿ ಅವು ಕಾನೂನು ರಕ್ಷಣೆಯನ್ನು ಪಡೆದುಕೊಂಡಿವೆ. ಕಾಶ್ಮೀರದ ಅಸೋಸಿಯೇಷನ್ ಆಫ್ ಪೇರೆಂಟ್ಸ್ ಆಫ್ ಡಿಸ್‍ಅಪಿಯರ್ಡ್ ಪರ್ಸನ್ (ಕಾಣೆಯಾದ ವ್ಯಕ್ತಿಗಳ ಪೆÇೀಷಕರ ಸಂಘ-APDP) ಸಂಸ್ಥೆಯ 2017ರ ಜನವರಿ 10 ರ ಹೇಳಿಕೆಯ ಪ್ರಕಾರ ಕಾಶ್ಮೀರ ಕಣಿವೆಯಲ್ಲಿ ಕಳೆದ ಜುಲೈ 8ರಿಂದ ಪ್ರಾರಂಭಗೊಂಡು ಸಾಗುತ್ತಲೇ ಇರುವ ಜನ ಬಂಡಾಯದಲ್ಲಿ ಒಂದು ನೂರಕ್ಕೂ ಹೆಚ್ಚು ಜನಸಾಮಾನ್ಯರನ್ನು ಕೊಲ್ಲಲಾಗಿದೆ.

ಭದ್ರತಾಪಡೆಗಳು ಪ್ರತಿಭಟನಾನಿರತರ ಮೇಲೆ ಸಿಡಿಸಿದ ಪೆಲೆಟ್‍ಗುಂಡುಗಳಿಂದಾಗಿ ಒಂದು ಸಾವಿರಕ್ಕೂ ಹೆಚ್ಚು ಜನರ ಕಣ್ಣುಗಳಿಗೆ ಗಂಭೀರವಾದ ಹಾನಿಯಾಗಿದೆ ಅಥವಾ ಕಣ್ಣುಗಳನ್ನೇ ಕಳೆದುಕೊಂಡು ಕುರುಡರಾಗಿದ್ದಾರೆ. ಕರಾಳವಾದ ಸಾರ್ವಜನಿಕ ಸುರಕ್ಷಾ ಕಾಯಿದೆ-1978 (ಪಬ್ಲಿಕ್ ಸೇಫ್ಟಿ ಆಕ್ಟ್) ಯಡಿ ಅಪಾರ ಸಂಖ್ಯೆಯ ಜನರನ್ನು ಬಂಧಿಸಲಾಗಿದೆ. ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರವೇ ವಿವಿಧ ಅಪರಾಧಗಳಡಿ 8000ದಷ್ಟು ಜನರನ್ನು ಬಂಧಿಸಲಾಗಿದೆ. ಸುದೀರ್ಘ ಕರ್ಫ್ಯೂಗಳು, ಮಾಧ್ಯಮ ಮತ್ತು ಇಂಟರ್‍ನೆಟ್ ಮೇಲಿನ ಪ್ರತಿಬಂಧಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಶಾಂತಿಯುತ ಪ್ರತಿಭಟನೆಗಳಂಥಾ ಮೂಲಭೂತ ಹಕ್ಕುಗಳ ಮೇಲಿನ ನಿರ್ಬಂಧಗಳು ಕಾಶ್ಮೀರದಲ್ಲಿ ಸರ್ವೇ ಸಾಮಾನ್ಯವಾಗಿಬಿಟ್ಟಿವೆ.

ಕಾಣೆಯಾದ ವ್ಯಕ್ತಿಗಳ ತಂದೆತಾಯಿಗಳ ಮತ್ತು ಪ್ರೀತಿಪಾತ್ರರ ವೇದನೆಗಳು ಯಾರಿಗಾದರೂ ಅರ್ಥವಾಗುತ್ತದೆ. ಂPಆP ಸಂಸ್ಥೆಯ ಅಧ್ಯಯನದ ಪ್ರಕಾರ 1989ರಿಂದಾಚೆಗೆ 8000-10000 ಕಾಶ್ಮೀರಿಗಳು ಬ¯ವಂತಕ್ಕೆ ಗುರಿಯಾಗಿ ಕಾಣೆಯಾಗಿದ್ದಾರೆ ಮತ್ತು ನಂತರದಲ್ಲಿ ಸುಳ್ಳು ಎನ್‍ಕೌಂಟರಿನಲ್ಲಿ ಹತರಾಗಿದ್ದಾರೆ. ಈ ಹಿಂದಿನ ಒಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರವೇ ಖುದ್ದು 3744 ಜನರು ಈ ರೀತಿ ಹತರಾಗಿರುವುದನ್ನು ಜಮ್ಮು-ಕಾಶ್ಮೀರ ವಿಧಾನ ಸಭೆಯಲ್ಲಿ ಒಪ್ಪಿಕೊಂಡಿತ್ತು. ಆದರೆ ಭಾರತ ಸರ್ಕಾರವು ಈ ಬಲಾತ್ಕಾರದ ಕಣ್ಮರೆ ಮತ್ತು ಹತ್ಯೆಗಳ ವಿದ್ಯಮಾನವನ್ನೇ ನಿರಾಕರಿಸುತ್ತಾ ಬಂದಿದೆ. ಅಷ್ಟು ಮಾತ್ರವಲ್ಲ, ಕಾಶ್ಮೀರದಲ್ಲಿನ ಹಿಂಸಾಚಾರಕ್ಕೆ ಈ ರೀತಿ ಹತ್ಯೆಗೆ ಗುರಿಯಾದವರೇ ಕಾರಣರೆಂದು ದೂರುತ್ತಾ, ಬಲಿಪಶುಗಳನ್ನೇ ಬೇಟೆಗಾರರೆಂದು ಆರೋಪಿಸುತ್ತಿದೆ.

ಜಮ್ಮು ಕಾಶ್ಮೀರದಲ್ಲಿ ಜಾರಿಯಲ್ಲಿರುವ ಈ ಬಲಾತ್ಕಾರದ ಕಣ್ಮರೆಯ ವಿರುದ್ಧ APDP ಸಂಸ್ಥೆಯು ಪ್ರತಿ ತಿಂಗಳ 10 ರಂದು ಮೌನ ಪ್ರತಿಭmನೆಯನ್ನು ಮಾಡುತ್ತದೆ ಮತ್ತು ಅದರ ಸ್ಮರಣೆಯಲ್ಲಿ ಒಂದು ಕ್ಯಾಲೆಂಡರನ್ನು ಪ್ರಕಟಿಸುತ್ತಿದೆ. ಅದು “ಬಲಾತ್ಕಾರವಾಗಿ ಕಣ್ಮರೆಯಾದವರ ಕುಟುಂಬಗಳ ವೇದನೆಗಳ ನೆನಪುಗಳು ಅಳಿದುಹೋಗದಂತೆ ಕಾಪಿಡುವ” ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ತದನಂತರದ ರಾಜ್ಯ ಸರ್ಕಾರಗಳು ಈ “ಬಲಾತ್ಕಾರದ ಕಣ್ಮರೆಯ” ವಿರುದ್ಧ ಈವರೆಗೆ ಶಾಸನ ಸಭೆಯಲ್ಲಿ ಯಾವುದೇ ಕಾನೂನುನನ್ನು ಅಂಗೀಕರಿಸದೆ ತಮ್ಮ ನಿರ್ದಯ ಕ್ರೌರ್ಯವನ್ನು ಮುಂದುವರೆಸಿವೆ. ತದನಂತರದ ಕೇಂದ್ರ ಸರ್ಕಾರಗಳು ಸಹ ಈ ರೀತಿಯ ಬಲಾತ್ಕಾರದ ಕಣ್ಮರೆಯಿಂದ ಜನರನ್ನು ರಕ್ಷಿಸುವ ಅಂತತರಾಷ್ಟ್ರೀಯ ಒಪ್ಪಂದಗಳನ್ನು ಅನುಮೋದಿಸದೆ ತಮ್ಮ ಸಂವೇದನಾ ಶೂನ್ಯತೆಯನ್ನು ಸಾಬೀತುಪಡಿಸಿವೆ.

militaryಮೂಲಭೂತವಾದ ವಿಷಯವೆಂದರೆ ಭಾರತದಲ್ಲಿರಲು ಇಚ್ಚಿಸದ ಬಹಳಷ್ಟು ಜನರಿರುವ ಕಾಶ್ಮೀರ ಕಣಿವೆಯ ಮೇಲೆ 27 ವರ್ಷಗಳಿಂದ ಭಾರತವು ಸೈನಿಕ ಬಲವನ್ನು ಪ್ರಯೋಗಿಸುತ್ತಿದೆ. ದೆಲ್ಲಿ ಸರ್ಕಾರವು ಈ ಎಲ್ಲವನ್ನೂ “ಭೌಗೋಳಿಕ ಸಮಗ್ರತೆ” ಮತ್ತು “ಧರ್ಮನಿರಪೇಕ್ಷತೆ”ಯ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತದೆ. ಕಾಶ್ಮೀರ ಕಣಿವೆಯಲ್ಲಿ ಸಂಭವಿಸುತ್ತಿರುವ ಎಲ್ಲದಕ್ಕೂ ಅದು ಪಾಕಿಸ್ತಾನವನ್ನು ದೂಷಿಸುತ್ತದೆ. ಅಲ್ಲಿ ನಡೆಯುತ್ತಿರುವ ಜನ ಬಂಡಾಯ ಮತ್ತು ಮಿಲಿಟೆಂಟ್ ದಾಳಿಗಳೆಲ್ಲವೂ ಪಾಕಿಸ್ತಾನ ಪ್ರಾಯೋಜಿತ ಎಂದು ಅದು ಭಾವಿಸುತ್ತದೆ. ಹಾಗೆ ನೋಡಿದಲ್ಲಿ ಪ್ರಸ್ತುತ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರದ ರಾಷ್ಟ್ರೀಯತೆಯು ಅಖಿಲ ಭಾರತ ರಾಷ್ಟ್ರೀಯತೆಯೇನೂ ಅಲ್ಲ; ಅದು ಭಾರತದ ಜನಸಂಖ್ಯೆಯ ಒಂದು ವಿಭಾಗವನ್ನು ಪ್ರತಿನಿಧಿಸುವ ಕೋಮುವಾದಿ ಹಿಂದೂತ್ವವಾದಿ ರಾಷ್ಟ್ರೀಯತೆಯಷ್ಟೇ ಆಗಿದೆ.

ಈಗ ಅಧಿಕಾರದಲ್ಲಿರುವ ಹಿಂದೂತ್ವವಾದಿ ರಾಷ್ಟ್ರೀಯವಾದಿಗಳು ಧರ್ಮನಿರಪೇಕ್ಷತೆಯ ಹೆಸರಿನಲ್ಲಿ ತಮ್ಮ ಆಳ್ವಿಕೆಯನ್ನು ಕಾಶ್ಮೀರದ ಮೇಲೆ ಹೇರಲು ಯಾವ ಅಳುಕು-ಅಂಜಿಕೆಯನ್ನೂ ತೋರುತ್ತಿಲ್ಲ. ಕಾಂಗ್ರೆಸ್ ಪ್ರಣೀತ ರಾಷ್ಟ್ರೀಯವಾದವೂ ಸಹ ಇದಕ್ಕಿಂತ ಹೆಚ್ಚೇನೂ ಭಿನ್ನವಿರಲಿಲ್ಲ ಎಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಹಾಗೆ ನೋಡಿದಲ್ಲಿ ಪಾಕಿಸ್ತಾನೀ ರಾಷ್ಟ್ರೀಯವಾದವೂ ಇದಕ್ಕಿಂತ ಉತ್ತಮವೇನಲ್ಲ. ಇದೀಗ, ಹಿಂದೂತ್ವವಾದಿ ರಾಷ್ಟ್ರೀಯವಾದಿಗಳು ಪಾಕಿಸ್ತಾನದಲ್ಲಿ ನಡೆಯುತ್ತಿರುವ ಬಲೋಚಿ ರಾಷ್ಟ್ರೀಯ ವಿಮೋಚನಾ ಹೋರಾಟವನ್ನು ಬೆಂಬಲಿಸುತ್ತೇವೆಂದು ಹೇಳುತ್ತಿರುವುದು ಅವರ ಬಗೆಗಿನ ಯಾವುದೇ ಪ್ರೀತಿ ಅಥವಾ ಸೌಹಾರ್ದತೆಯ ಕಾರಣಗಳಿಗಲ್ಲ ಎಂಬುದು ಸ್ಪಷ್ಟ.

ಮತ್ತೊಂದೆಡೆ ಪಾಕಿಸ್ತಾನ ರಾಷ್ಟ್ರೀಯವಾದಿಗಳು ಕಾಶ್ಮೀರವು ಭಾರತದಿಂದ ಆಜಾದಿಯನ್ನು ಪಡೆಯುವುದನ್ನು ಬೆಂಬಲಿಸುತ್ತೇವೆಂದು ಹೇಳುತ್ತಿರುವಾಗಲೇ ತಮ್ಮ ಭಾಗದಲ್ಲಿರುವ “ಆಜಾದ್ ಕಾಶ್ಮೀರವನ್ನು” ಹೆಚ್ಚೂ ಕಡಿಮೆ ಅಂತರಿಕ ವಸಾಹತುವನ್ನಾಗಿಸಿಕೊಂಡಿದ್ದಾರೆ. ಆದರೆ ದೆಲ್ಲಿ ಸರ್ಕಾರಗಳು ಕಳೆದ 27 ವರ್ಷಗಳಿಂದ ಕಾಶ್ಮೀರ ಕಣಿವೆಯ ಮೇಲೆ ನಿರಂತರ ಸೈನಿಕ ದುರಾಳ್ವಿಕೆಯನ್ನು ಹೇರಿರುವುದರಿಂದ, ಕಾಶ್ಮೀರಿ ಆಜಾದಿಯೆಂಬುದು, ಪ್ರಮುಖವಾಗಿ, ಭಾರತದ ದಮನದಿಂದ ಸ್ವತಂತ್ರವಾಗಬೇಕೆಂಬ ಕಾಶ್ಮೀರಿ ಜನತೆಯ ಹೃದಯಾಂತರಾಳದ ಕೂಗೇ ಆಗಿಬಿಟ್ಟಿದೆ.

February 18,2017. Vol 52, No. 7
Economic and Political Weekly

ಕಾಮೆಂಟ್‌ಗಳಿಲ್ಲ: