ಶುಕ್ರವಾರ, ಮಾರ್ಚ್ 18, 2011

ಇಂದು ನಾಳೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 37 ನೇ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಭುವನವಿಜಯದಲ್ಲಿ. ಮಾರ್ಚ 18,19 ರಂದು ಎರಡು ದಿನಗಳ ಕಾಲ 37 ನೇ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ‘ಅರಣ್ಯವಾಸಿ ಜಾನಪದ ಸಮ್ಮೇಳನ’ ಜರುಗಲಿದೆ. ಕರ್ನಾಟಕ ವಿಶ್ವವಿದ್ಯಾಲಯದ, ಜಾನಪದ ಅಧ್ಯಯನ ವಿಭಾಗ ಮತ್ತು ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಮಾರ್ಚ 18 ರಂದು ಬೆಳಗ್ಗೆ 10.30 ಕ್ಕೆ ಕವಿವಿ ಕುಲಪತಿ ಡಾ.ಹೆಚ್.ಬಿ ವಾಲೀಕಾರ ಕಾರ್ಯಕ್ರಮ ಉದ್ಘಾಟಿಸುವರು. ಕುಪ್ಪಳ್ಳಿ ಕುವೆಂಪು ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಹಿ.ಚಿ.ಬೋರಲಿಂಗಯ್ಯ ಆಶಯ ಭಾಷಣ ಮಾಡುವರು. ಜಾನಪದ ತಜ್ಞರಾದ ಡಾ.ಸೋಮಶೇಖರ ಇಮ್ರಾಪುರ, ಡಾ.ತಿ.ನಂ.ಶಂಕರ ನಾರಾಯಣ, ಮುಖ್ಯ ಅಥಿತಿಗಳಾಗಿ ಭಾಗವಹಿಸುವರು. ಕನ್ನಡ ವಿವಿ ಕುಲಪತಿ ಎ.ಮುರಿಗೆಪ್ಪ ಅಧ್ಯಕ್ಷತೆ ವಹಿಸುವರು.

ಮಧ್ಯಾನ 12 ಗಂಟೆಗೆ ಅರಣ್ಯ ಮತ್ತು ಆಧಿವಾಸಿಗಳ ತಾತ್ವಿಕ ಪರಿಕಲ್ಪನೆ ಕುರಿತು ಗೋಷ್ಠಿ ನಡೆಯಲಿದೆ. ಹಂಪಿ ವಿವಿಯ ಡಾ.ಸ.ಚಿ.ರಮೇಶ್ ಅಧ್ಯಕ್ಷತೆ ವಹಿಸುವರು.

ಮಧ್ಯಾನ 3 ಗಂಟೆಗೆ ಅರಣ್ಯ ಮತ್ತು ಬುಡಕಟ್ಟುಗಳ ಪಾರಂಪರಿಕ ಸಂಬಂಧಗಳ ತಾತ್ವಿಕ ವಿವೇಚನೆ. 2 ನೇ ಗೋಷ್ಠಿಯಲ್ಲಿ ಹಂಪಿ ವಿವಿಯ ಬುಡಕಟ್ಟು ಅಧ್ಯಯನ ವಿಭಾಗದ ಕೆ.ಎಂ.ಮೈತ್ರಿ ಅಧ್ಯಕ್ಷತೆ ವಹಿಸುವರು.

ಸಂಜೆ 6 ಗಂಟೆಗೆ ಜಾನಪದ ಕಲಾಪ್ರದರ್ಶನ ನಡೆಯುವುದು.

ಮಾರ್ಚ 19 ರಂದು ಬೆಳಗ್ಗೆ 11 ಗಂಟೆಗೆ ಅರಣ್ಯ ಮತ್ತು ಬುಡಕಟ್ಟುಗಳ ಜ್ಞಾನಪರಂಪರೆಗಳ ವಿವೇಚನೆ ಕುರಿತು ನಡೆವ ಗೋಷ್ಠಿಯಲ್ಲಿ ಡಾ.ಗಂಗಾಧರ ದೈವಜ್ಞ ಅಧ್ಯಕ್ಷತೆ ವಹಿಸಲಿದ್ದು ನಿಸರ್ಗದ ಬಳಕೆ ಸಂರಕ್ಷಣೆ ಕುರಿತು ಡಾ.ಸಿದ್ದಗಂಗಮ್ಮ, ಸಾಹಿತ್ಯ ಕಲೆ ಕುರಿತು ಪನ್ನಂಗಧರ ಮಾತನಾಡುವರು.

ಮಧ್ಯಾನ 12 ಗಂಟೆಗೆ ನಡೆಯುವ ಆಧುನಿಕತೆ ಮತ್ತು ಜಾನಪದ ಕುರಿತು ನಡೆವ ಸಂವಾದ ಗೋಷ್ಠಿಯಲ್ಲಿ ಡಾ.ಶಾಲಿನಿ ರಘುನಾಥ ಅಧ್ಯಕ್ಷತೆ ವಹಿಸಲಿದ್ದು, ಹಂಪಿ ವಿವಿಯ ಪ್ರಾಧ್ಯಾಪಕ ಡಾ.ಮೊಗಳ್ಳಿ ಗಣೇಶ್ ಹಾಗೂ ಯುವ ಸಂಶೋಧಕರು ಮಾತನಾಡುವರು.

ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಪ್ರೊ.ಕಾಳೇಗೌಡ ನಾಗವಾರರು ಸಮಾರೋಪ ಭಾಷಣ ಮಾಡುವರು. ಕರ್ನಾಟಕ ವಿವಿಯ ಕುಲಸಚಿವರಾದ ಡಾ.ಎಸ್.ಬಿ. ಹಿಂಚಿಗೇರಿ, ಸಮ್ಮೇಳನದ ಸರ್ವಾಧ್ಯಕ್ಷ ಡಾ.ತಿ.ನಂ.ಶಂಕರನಾರಾಯಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಹಂಪಿ ವಿವಿಯ ಕುಲಸಚಿವ ಮಂಜುನಾಥ ಬೇವಿನಕಟ್ಟಿ ಅಧ್ಯಕ್ಷತೆ ವಹಿಸಿವರು.

1 ಕಾಮೆಂಟ್‌:

ಅಮಿತಾ ರವಿಕಿರಣ್ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.