ಗುರುವಾರ, ಏಪ್ರಿಲ್ 17, 2014

ಇನ್ನಿಲ್ಲದ ವೀರೇಶ್ ಬಳ್ಳಾರಿ: ಜಾನಪದ ಬ್ಲಾಗ್ ಸಂತಾಪ

ಜನಪದ ಕಲಾವಿದರ ರಾಜ್ಯ ಸಂಘಟನೆ ಮಾಡಿಕೊಂಡು, ಒಂದೆರಡು ಕಲಾವಿದರ ರಾಜ್ಯ ಸಮಾವೇಶ ಮಾಡಿ, ಸ್ವತಃ ಜನಪದ ಗೀತೆಗಳ ಹಾಡಿಕೊಂಡಿದ್ದ ವೀರೇಶ್ ಬಳ್ಳಾರಿ ಇನ್ನಿಲ್ಲ  ಎನ್ನುವ ಸುದ್ದಿ ಬೇಸರವೆನಿಸಿತು. ತನ್ನ ಹೆಸರಿನಲ್ಲಿಯೇ ಬಳ್ಳಾರಿ ಎಂದಿಟ್ಟುಕೊಂಡಿದ್ದ ವೀರೇಶ ಅವರ  ಜತೆ ಹೆಚ್ಚು ಒಡನಾಟ  ಇಲ್ಲವಾದರೂ, ಜಾನಪದ ಕುರಿತಂತೆ ಒಂದೆರಡಯ ಕಡೆ ಮಾತು ಚರ್ಚೆ ಮಾಡಿದ್ದೆವು. ಆತನ ತಂಡದ ಜಾನಪದ ಹಾಡುಗಾರಿಕೆಯನ್ನೂ ಕೇಳಿದ್ದೆ. ಒಮ್ಮೆ ಸಂಸಾರ ಸಮೇತ ಕನ್ನಡ ವಿಶ್ವವಿದ್ಯಾಲಯಕ್ಕೆ ಬಂದಾಗ ಕ್ಯಾಂಟೀನಿನಲ್ಲಿ ಜತೆಯಾಗಿ ಊಟ ಮಾಡಿದ್ದೆವು. ಅಂದಹಾಗೆ ವೀರೇಶ್ ಪಿಹೆಚ್ ಡಿ ಪಡೆದದ್ದು ಕೂಡ ಕನ್ನಡ ವಿಶ್ವವಿದ್ಯಾಲಯದಲ್ಲಿ.
Photo: ಜನಪದ ಕಲಾವಿದರ ರಾಜ್ಯ ಸಂಘಟನೆ ಮಾಡಿಕೊಂಡು, ಒಂದೆರಡು ಕಲಾವಿದರ ರಾಜ್ಯ ಸಮಾವೇಶ ಮಾಡಿ, ಸ್ವತಃ ಜನಪದ ಗೀತೆಗಳ ಹಾಡಿಕೊಂಡಿದ್ದ ವೀರೇಶ್ ಬಳ್ಳಾರಿ ಇನ್ನಿಲ್ಲ  ಎನ್ನುವ ಸುದ್ದಿ ಬೇಸರವೆನಿಸಿತು. ತನ್ನ ಹೆಸರಿನಲ್ಲಿಯೇ ಬಳ್ಳಾರಿ ಎಂದಿಟ್ಟುಕೊಂಡಿದ್ದ ವೀರೇಶ ಅವರ  ಜತೆ ಹೆಚ್ಚು ಒಡನಾಟ  ಇಲ್ಲವಾದರೂ, ಜಾನಪದ ಕುರಿತಂತೆ ಒಂದೆರಡು ಕಡೆ ಮಾತು ಚರ್ಚೆ ಮಾಡಿದ್ದೆವು. ಆತನ ತಂಡದ ಜಾನಪದ ಹಾಡುಗಾರಿಕೆಯನ್ನೂ ಕೇಳಿದ್ದೆ. ಒಮ್ಮೆ ಸಂಸಾರ ಸಮೇತ ಕನ್ನಡ ವಿಶ್ವವಿದ್ಯಾಲಯಕ್ಕೆ ಬಂದಾಗ ಕ್ಯಾಂಟೀನಿನಲ್ಲಿ ಜತೆಯಾಗಿ ಊಟ ಮಾಡಿದ್ದೆವು. ಅಂದಹಾಗೆ ವೀರೇಶ್ ಪಿಹೆಚ್ ಡಿ ಪಡೆದದ್ದು ಕೂಡ ಕನ್ನಡ ವಿಶ್ವವಿದ್ಯಾಲಯದಲ್ಲಿ.
    ಜನಪದ ಕಲೆ, ಕಲಾವಿದರ ಬಗ್ಗೆ ಸೂಕ್ಷ್ಮತಿಳಿವು ಇರದಿದ್ದರೂ, ಅವರನ್ನೊಂದು ವೇದಿಕೆಯಾಗಿ ರೂಪಿಸಿಕೊಳ್ಳಲು, ತಾನೂ ಆ ಮೂಲಕ ಗುರುತಿಸಿಕೊಳ್ಳುವ ಹುಮ್ಮಸ್ಸು ವೀರೇಶ್ ಅವರಿಗಿತ್ತು. ಇಂತಹ ಸ್ನೇಹಜೀವಿ ಬಹುಕಾಲ ಇರಬೇಕಿತ್ತು. ಈ ಪಯಣವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಅವರಿಗೆ ಕನ್ನಡ ಜಾನಪದ ಬ್ಲಾಗ್ ಸಂತಾಪ ಸೂಚಿಸುತ್ತದೆ.

ಕಾಮೆಂಟ್‌ಗಳಿಲ್ಲ: