ಮಂಗಳವಾರ, ನವೆಂಬರ್ 22, 2016

ಅಪರಾಧಿ ಗುರುತಿನ ಪೊರೆ ಕಳಚುತ್ತಿರುವ ಗಂಟಿಚೋರರು.


--ಅರುಣ್ ಜೋಳದಕೂಡ್ಲಿಗಿ

ಸ್ವತಂತ್ರ್ಯ ಬಂದು 69 ವರ್ಷವಾದರೂ ಕೆಲವು ಚಿಕ್ಕಪುಟ್ಟ ಸಮುದಾಯಗಳ ಸಮಗ್ರ ಮಾಹಿತಿ ಅಲಭ್ಯವಾಗಿದೆ. ಹೀಗೆ ಸಮುದಾಯಗಳ ಸರಿಯಾದ ಮಾಹಿತಿಗಳೇ ಅಲಭ್ಯವಾದಾಗ ಸರಕಾರ ಅಥವಾ ಪ್ರಭುತ್ವಗಳು ಕೈಗೊಳ್ಳುವ ಜನಕಲ್ಯಾಣದ ಯೋಜನೆಗಳು ದಿಕ್ಕು ತಪ್ಪುವ ಸಾಧ್ಯತೆ ಇರುತ್ತದೆ. ಇಂದು ಬದಲಾದ ಕಾಲಘಟ್ಟದ ಸೆಳೆತಕ್ಕೆ ಸಿಕ್ಕಿ ಅಲ್ಪಸಂಖ್ಯಾತ ಸಮುದಾಯಗಳು ತಬ್ಬಲಿತನವನ್ನು ಅನುಭವಿಸುತ್ತಾ ಅನಾಥ ಪ್ರಜ್ಞೆಯಲ್ಲಿ ಬದುಕುತ್ತಿವೆ. ಇಂತಹ ಸಂದರ್ಭದಲ್ಲಿ ಸಮುದಾಯಗಳು ಪ್ರಜಾಪ್ರಭುತ್ವದ ಬಗೆಗೆ ಭರವಸೆ ಇಲ್ಲದೆ ತಮ್ಮ ಪಾಡಿನ ಬದುಕೇ ನಿಜವೇನೋ ಎನ್ನುವ ಸ್ಥಿತಿಗೂ ಬಂದಿವೆ. ಹಾಗಾಗಿ ಸಮುದಾಯಗಳ ಅಧ್ಯಯನ ಪರೋಕ್ಷವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗೆಗೆ ಜನರಲ್ಲಿ ಹೊಸ ಭರವಸೆ ಮೂಡಿಸುವ ಭಾಗವೂ ಆಗಿದೆ.
ಸಿರಿವಂತರ ಉಡುಪಿನಲ್ಲಿ ಭಾಮ್ಟಾ(ಗಂಟಿಚೋರ್) ಸಮುದಾಯದ ಸದಸ್ಯರು. 1908 ರಲ್ಲಿ ಎಂ.ಕೆನಡಿಯವರು ತಮ್ಮ ಪುಸ್ತಕದಲ್ಲಿ ಪ್ರಕಟಿಸಿದ ಚಿತ್ರ

ಸಿರಿವಂತರ ಉಡುಪಿನಲ್ಲಿ ಭಾಮ್ಟಾ(ಗಂಟಿಚೋರ್) ಸಮುದಾಯದ ಸದಸ್ಯರು. 1908 ರಲ್ಲಿ ಎಂ.ಕೆನಡಿಯವರು ತಮ್ಮ ಪುಸ್ತಕದಲ್ಲಿ ಪ್ರಕಟಿಸಿದ ಚಿತ್ರ


ಈ ಹಿನ್ನೆಲೆಯಲ್ಲಿ ಇಂತಹ ತಬ್ಬಲಿ ಸಮುದಾಯಗಳ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮತ್ತು ಅವರಲ್ಲಿ ಹೊಸ ಚೈತನ್ಯವನ್ನು ತುಂಬುವಂತೆ ಸಮುದಾಯ ಅಧ್ಯಯನಗಳು ನಡೆಯಬೇಕಾಗಿದೆ. ಅಂತೆಯೇ ನಾವು ಸಮುದಾಯಗಳನ್ನು ಎದುರಾಗುವಾಗ ಹುಟ್ಟುವ ಪ್ರಶ್ನೆಗಳೂ ಬದಲಾಗಿದೆ. ಆಧುನಿಕ ಶ್ರೇಣೀಕರಣದ ತರತಮದ ವ್ಯವಸ್ಥೆಗಳಿಗೆ ಪೂರಕವಾಗಿ ಸಮುದಾಯಗಳಲ್ಲೂ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸ್ಥಿತಿಗತಿಗಳಲ್ಲಿ ಹಲಬಗೆಯ ಏರಿಳಿತಗಳು ಸಂಭವಿಸಿದೆ. ಹಾಗಾಗಿ ಇಂದು ಸಮುದಾಯಗಳನ್ನು ಅಧ್ಯಯನ ಮಾಡುವವರು ಅವನ್ನು ಏಕರೂಪಿ ಆಕೃತಿಯನ್ನಾಗಿ ನೋಡುವಂತಿಲ್ಲ. ಯಾವೊಂದು ಸಂಗತಿಯನ್ನು ಇಡೀ ಸಮುದಾಯಕ್ಕೆ ಅನ್ವಯಿಸಿ ದುಂಡಾಗಿ ಗ್ರಹಿಸುವಂತಿಲ್ಲ.

ಕರ್ನಾಟಕದ ಸಂದರ್ಭದಲ್ಲಿನ ಸಮುದಾಯಗಳ ಅಧ್ಯಯನ ವಸಾಹತುಶಾಹಿ ರೂಪಿಸಿದ ಮಾದರಿಯ ಪ್ರಭಾವದಿಂದ ಸಂಪೂರ್ಣ ಬಿಡಿಸಿಕೊಂಡಿಲ್ಲ. ಹಾಗಾಗಿ ಸಮುದಾಯ ಅಧ್ಯಯನಗಳನ್ನು ಮಾಹಿತಿಗಳ ಆಕರವೆಂಬಂತೆ ಬಡಕಲಾಗಿಯೂ, ಕೃತಕವಾಗಿಯೂ ನಿರ್ಜೀವ ವಸ್ತುಸಂಗತಿಗಳಂತೆ ಮಂಡಿಸಲಾಗುತ್ತಿದೆ. ಈ ಬಗೆಯ ಅಧ್ಯಯನಗಳಲ್ಲಿ ಸಮುದಾಯದ ಜೀವಂತಿಕೆ ಗೈರುಹಾಜರಾಗಿರುತ್ತದೆ. ಇಂತಹ ಮಿತಿಯನ್ನು ಮೀರುವ ಸಣ್ಣ ಪ್ರಯತ್ನವನ್ನು ಈ ಸಂಶೋಧನೆಯಲ್ಲಿ ಮಾಡಲಾಗಿದೆ.
**
ಉತ್ತರ ಕರ್ನಾಟಕದ ಬೌಗೋಳಿಕ ವ್ಯಾಪ್ತಿಯಲ್ಲಿ ನೆಲೆಸಿರುವ ಗಂಟಿಚೋರ್ಸ್ ಸಮುದಾಯ ದೇಶವ್ಯಾಪಿ ಹರಡಿಕೊಂಡಿದೆ. ಉಚಲ್ಯಾ, ಭಾಮ್ಟಾ, ಠಕಾರಿ ಭಾಮ್ಟಾ, ಠಕಾರಿ, ಗುನ್ಹೆಗಾರ, ವಡ್ಡರ್, ಗಿರಣಿ ವಡ್ಡರ್, ಕಿಸೆ ಕತ್ರಾಸ್, ಕಳ್ಳವಡ್ಡರ್, ತುಡುಗುವಡ್ಡರ್, ಪಾತ್ರೂಟ್ ಹೀಗೆ ಬಹುರೂಪದಲ್ಲಿ ಸಮಾನಾಂತರ ಹೆರರುಗಳೊಂದಿಗೆ ಈ ಸಮುದಾಯ ನೆಲೆಸಿದೆ. ಈ ಎಲ್ಲಾ ಹೆಸರುಗಳ ಒಳಗಿರುವ ಎಳೆ `ತುಡುಗು’ ಅಥವಾ `ಕಳ್ಳತನ’ `ಲೂಟಿ’ಯಾಗಿದೆ. ಇದು ಸಂಪತ್ತಿನ ಅಸಮಾನ ಹಂಚಿಕೆಯ ಕೊರತೆಯ ಬಿಂದುವಿನಲ್ಲಿ ಸಮುದಾಯಗಳ ಒಳಗಿಂದ ಹುಟ್ಟಿದ `ಪ್ರತಿರೋಧ’ದ ಒಂದು ಮಾದರಿ.

ಬ್ರಿಟಿಷ್ ಆಡಳಿತದಿಂದಾಗಿ ಸ್ಥಳೀಯ ಸಂಸ್ಥಾನಿಕ ರಾಜರುಗಳ ಸೈನ್ಯದಿಂದ ವಿಸರ್ಜಿತಗೊಂಡ ಸೈನಿಕ ಸಮುದಾಯಗಳು ಬದುಕಲು ಹಲವು ಮಾರ್ಗಗಳನ್ನು ಅನುಸರಿಸಿದವು. ಹಾಗಾಗಿ ಸೈನ್ಯದಲ್ಲಿ ಸಂಪತ್ತನ್ನು ಲೂಟಿ ಮಾಡುತ್ತಿದ್ದ ಸೈನಿಕರು ಈ ಲೂಟಿಯನ್ನು ಹೊಟ್ಟೆಪಾಡಿಗಾಗಿ ತಮ್ಮೆದುರಿಗಿದ್ದ ಶ್ರೀಮಂತ ಜಮೀನ್ದಾರರ ಮೇಲೆ ಪ್ರಯೋಗಿಸಿದರು. ಇದು ಕಾಲಾನಂತರ `ತುಡುಗು’ `ಕಳ್ಳತನ’ `ಲೂಟಿ’ಯಾಗಿ ಬದಲಾಯಿತು. ಇವರು ಉತ್ತರಭಾರತದಲ್ಲಿ ಹಲವು ಹೆಸರುಗಳುಳ್ಳ ಠಕ್ಕರಾದರೆ, ದಕ್ಷಿಣ ಭಾರತದಲ್ಲಿ ಭಾಮ್ಟಾ, ಠಕಾರಿ ಭಾಮ್ಟಾ, ಉಚಲ್ಯಾ, ಗಂಟಿಚೋರ್ ಆಗಿ ಗುರುತಿಸಿಕೊಂಡರು. ಈ ಎಲ್ಲರನ್ನೂ ದೇಶವ್ಯಾಪಿ ಬೆಸೆಯುವ ಎಳೆಯೆಂದರೆ ಇವರೆಲ್ಲಾ `ಶಾಕ್ತಪಂಥ’ದ ಆರಾಧಕರಾಗಿದ್ದು `ಶಾಕ್ತೇಯ’ ಸಮುದಾಯವಾಗಿರುವುದು.
ಭಾರತದ ಚರಿತ್ರೆಯಲ್ಲಿ 18 ನೇ ಶತಮಾನ ಠಕ್ಕರ ಲೂಟಿ ಕೊಲೆ ಸುಲಿಗೆ ಮುಂತಾದವುಗಳ ಭಯಭೀತ ಅಧ್ಯಾಯವಾಗಿದೆ. ಈ ಹಿನ್ನೆಲೆಯ ಒಂದೆಳೆ ಕರ್ನಾಟಕದಲ್ಲಿ ನೆಲೆಸಿದ ಗಂಟಿಚೋರರ ಜತೆ ತಳಕು ಹಾಕಿಕೊಂಡಿದೆ. ಆದರೆ ಗಂಟಿಚೋರರ ಹೆಸರಲ್ಲೇ `ಗಂಟುಕಳ್ಳರು’ ಎಂದಿರುವುದು ಇವರ ಕಳ್ಳತನದ ಸ್ವರೂಪವನ್ನು ಕಾಣಿಸುತ್ತದೆ. ಹೀಗಾಗಿಯೇ ಇವರನ್ನು ಸಂತೆಕಳ್ಳರೂ ಎಂದೂ ಕರೆಯುತ್ತಿದ್ದರು. ಇವರದು ಉತ್ತರಭಾರತದ ಠಕ್ಕರಂತೆ ಬೃಹತ್ ಜಾಲವಾಗಿರದೆ ಸಣ್ಣಪುಟ್ಟ ಕಳ್ಳತನದಲ್ಲಿ ತೊಡಗಿಕೊಂಡ ಹೊಟ್ಟೆಪಾಡಿನ ಕಳ್ಳರಾಗಿದ್ದರು. ಸಂತಕವಿ ಕನಕರು `ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎನ್ನುವಂತೆ ಗಂಟಿಚೋರರು ಕಳ್ಳತನ ಮಾಡಿ ಹೊಟ್ಟೆತುಂಬಿಸಿಕೊಂಡವರು. ಚಾರಿತ್ರಿಕವಾಗಿ ಗಂಟಿಚೋರರು ಸೈನಿಕ ಸಮುದಾಯವಾಗಿದ್ದರು ಎನ್ನುವ ಬಗ್ಗೆ ಪುರಾವೆಗಳೊಂದಿಗೆ ಸಂಶೋಧನೆಯಲ್ಲಿ ಚರ್ಚಿಸಲಾಗಿದೆ.

ಗಂಟಿಚೋರ್ ಇದು ಕರ್ನಾಟಕದಲ್ಲಿ ಮಾತ್ರ ವಿಶೇಷವಾಗಿ ಕಂಡುಬರುವ ಹೆಸರು. ಈ ಹೆಸರಿನಿಂದ ಗುರುತಿಸಲ್ಪಟ್ಟ ಸಮುದಾಯವೊಂದು (ಮುಂಬೈಕರ್ನಾಟಕ ಪ್ರದೇಶದಲಿ)್ಲ ಉತ್ತರ ಕರ್ನಾಟಕದ ಬೌಗೋಳಿಕ ವ್ಯಾಪ್ತಿಯಲ್ಲಿ ನೆಲೆಸಿದೆ. ಅಂತೆಯೇ ಈ ಸಮುದಾಯದಲ್ಲಿನ `ಪಾಪನೋರು’ ಎನ್ನುವ ಕುಲದ ಹಿನ್ನೆಲೆಯ ಬೆನ್ನತ್ತಿದರೆ, ಈ ಭೌಗೋಳಿಕ ಪರಿಸರದಲ್ಲಿ ಕನಿಷ್ಠ 9-10 ನೇ ಶತಮಾನದಿಂದಲೂ ಈ ಸಮುದಾಯದ `ಪಾಪನೋರು’ ಕುಲದವರು ನೆಲೆಸಿರಬೇಕು ಅನ್ನಿಸುತ್ತದೆ. ಇದಕ್ಕೆ ವಡ್ಡಾರಾಧನೆ, ಧರ್ಮಾಮೃತ ಕೃತಿಗಳಲ್ಲಿ ಬರುವ ಕಳ್ಳರ ಕಥೆಗಳು ಸಾಕ್ಷಿಯಂತಿವೆ. ಈ ಸಂಶೋಧನೆಯಲ್ಲಿ ಸಮುದಾಯದ ಶೇ 90 ರಷ್ಟು ಮನೆಗಣತಿ ಮಾಡಿ ಖಚಿತ ಅಂಕೆಸಂಖ್ಯೆಗಳನ್ನು ದಾಖಲಿಸಲಾಗಿದೆ. ಸಧ್ಯಕ್ಕೆ ಕರ್ನಾಟಕದ 7 ಜಿಲ್ಲೆಯ 19 ತಾಲೂಕಿನ 36 ನೆಲೆಗಳಲ್ಲಿ ನೆಲೆಸಿದ ಗಂಟಿಚೋರ್ಸ್ ಸಮುದಾಯದ ಒಟ್ಟು ಜನಸಂಖ್ಯೆ 5826 (ಗಂ-2892, ಹೆ-2934) ರಷ್ಟಿದೆ. ಗಂಟಿಚೋರರ ಗಂಡಸರಿಗಿಂತ 42 ಮಹಿಳೆಯರು ಹೆಚ್ಚಿರುವುದು ವಿಶೇಷವಾಗಿದೆ.

**
ಮುಖ್ಯವಾಗಿ ಗಂಟಿಚೋರ್ಸ್ ಸಮುದಾಯ ಐಡೆಂಟಿಟಿ ಪ್ರಶ್ನೆಯನ್ನು ಎದುರಿಸುತ್ತಿದೆ. 1950ರ ಬಾಂಬೆ ಸರಕಾರದ ಸಮುದಾಯಗಳ ಪಟ್ಟಿಯಲ್ಲಿ ಗಂಟಿಚೋರ್ಸ್ ಮತ್ತು ಅದರ ಸಮನಾಂತರ ಪದಗಳಾದ ಭಾಮ್ಟಾ, ಟಕಾರಿ, ಉಚಲ್ಯಾ, ಗಿರಣಿವಡ್ಡರ್, ತುಡುಗು ವಡ್ಡರ್, ಪಾತ್ರೂಟ್‍ನ್ನು ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಸೇರಿಸಿತು. 1975 ರಲ್ಲಿ ಕರ್ನಾಟಕ ಸರಕಾರವು ಹಿಂದುಳಿದ ಬುಡಕಟ್ಟುಗಳ ಪಟ್ಟಿಯಲ್ಲಿ ಗಂಟಿಚೋರ್, ಉಚಲ್ಯಾ, ಭಾಮ್ಟಾ, ಟಕಾರಿ, ಗಿರಣಿವಡ್ಡರ್, ತುಡುಗುವಡ್ಡರ್ ಪದಗಳನ್ನು ಒಂದೇ ಗುಂಪಿಗೆ ಸೇರಿಸಿ, ಆಗ ಪಾತ್ರೂಟ್ ಒಂದನ್ನು ಕೈಬಿಡಲಾಯಿತು.

ಹೀಗಿರುವಾಗ ಕರ್ನಾಟಕ ಸರಕಾರವು 1976 ರಲ್ಲಿ ಮಾಡಿದ ಪರಿಶಿಷ್ಠ ಜಾತಿ, ಪಂಗಡದ ಪಟ್ಟಿಯಲ್ಲಿ `ಗಂಟಿಚೋರ್ಸ್’ನ್ನು ಪರಿಶಿಷ್ಟಜಾತಿಗೆ ಸೇರಿಸಿ ಅದರ ಸಮಾನಂತರ ಪದಗಳನ್ನು ಕೈಬಿಡಲಾಯಿತು. ಕಾರಣ ಒಂದೇ ಸಮುದಾಯಕ್ಕೆ ಸೇರಿದ ಭಾಮ್ಟಾ, ಉಚಲ್ಯ, ವಡ್ಡರ್, ತುಡುಗ ವಡ್ಡರ್, ಗಿರಣಿ ವಡ್ಡರ್, ಟಕಾರಿ, ಪಾತ್ರೂಟ್ ಹೊರಗುಳಿದು ತಬ್ಬಲಿಗಳಾದವು. ಮುಂದೆ ಕರ್ನಾಟಕ ಸರಕಾರವು 1986 ರಲ್ಲಿ ಇಂದುಳಿದ ವರ್ಗಗಳನ್ನು ಎ.ಬಿ.ಸಿ.ಡಿ.ಇ ಎಂದು ವಿಭಾಗಿಸಿ, `ಎ’ ಗುಂಪಿನಲ್ಲಿ ಭಾಮ್ಟಾ, ಟಕಾರಿ, ಉಚಲ್ಯಾ ಒಂದು ಗುಂಪಾಗಿಯೂ, ವಡ್ಡರ್, ಬೋವಿ ಜಾತಿಯ ಸಮಾನಾಂತರ ಪದಗಳಾಗಿ ಗಿರಣಿ ವಡ್ಡರ್, ತುಡುಗು ವಡ್ಡರ್ ಪದಗಳನ್ನು ಸೇರಿಸಿತು. ಇಲ್ಲಿ ಸ್ಪಷ್ಟವಾಗಿ `ಗಂಟಿಚೋರ್ಸ್’ನ್ನು ಪ್ರತ್ಯೇಕವಾಗಿಸಿತು. ಆಗ ಪಾತ್ರೂಟ್ ದಾಖಲೆಯೂ ಆಗದೆ ಇಲ್ಲವಾಯಿತು.

1994 ರಲ್ಲಿ ಕರ್ನಾಟಕ ಸರಕಾರದ ಹಿಂದುಳಿದ ವರ್ಗದ ಸುಧಾರಿತ ಪಟ್ಟಿಯಲ್ಲಿ ಭಾಮ್ಟಾ, ಟಕಾರಿ, ಉಚಲ್ಯಗಳನ್ನು ಒಂದು ಗುಂಪಾಗಿಯೂ, ಬೋವಿ ಅಥವಾ ಬೋಯಿಯ ಸಮನಾಂತರ ಗುಂಪಾಗಿ ಗಿರಣಿವಡ್ಡರ್, ತುಡುಗು ವಡ್ಡರ್ ಪದವನ್ನಾಗಿಯೂ ಸೂಚಿಸಲಾಗಿದೆ. ಈ ಎಲ್ಲಾ ಕಾರಣದಿಂದ ಆರಂಭದಲ್ಲಿ ಗಂಟಿಚೋರ್ ಸಮುದಾಯದ ಸಮನಾಂತರ ಪದಗಳಾಗಿದ್ದ ಭಾಮ್ಟಾ, ಟಕಾರಿ, ಉಚಲ್ಯಾ, ಗಿರಣಿವಡ್ಡರ್, ತುಡುಗು ವಡ್ಡರ್, ಪಾತ್ರೂಟ್ ಇವುಗಳನ್ನು ಹಿಂದುಳಿದ ವರ್ಗಗಳಿಂದ ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕಾದ ಬಿಕ್ಕಟ್ಟು ಗಂಭೀರವಾಗಿದೆ. ಈ ಬಿಕ್ಕಟ್ಟನ್ನು ಸಂಶೋಧನೆಯಲ್ಲಿ ವಿಸ್ತಾರವಾಗಿ ಚರ್ಚಿಸಲಾಗಿದೆ.

ಮುಖ್ಯವಾಗಿ `ಗಂಟಿಚೋರ್ಸ್’ ಎಂಬ `ಕಳ್ಳತನದ’ ಸಾಮಾಜಿಕ ಅಪಮಾನದಿಂದ ಬಿಡುಗಡೆ ಹೊಂದಲು ಈ ಸಮುದಾಯ ಹಿಂದೆ ನಾನಾ ಹೆಸರುಗಳಲ್ಲಿ ಗುರುತಿಸಿಕೊಂಡು ರೂಪಾಂತರ ಹೊಂದಿದೆ. ಇಂದು ಇವರೆಲ್ಲಾ ಪರಿಶಿಷ್ಠ ಜಾತಿಯ ಸೌಲಭ್ಯದ ಕಾರಣಕ್ಕೆ ಯಾವ ಹೆಸರನ್ನು ಕಳಚಿಕೊಂಡು ನಿರಾಳವಾಗಿದ್ದರೋ, ಅದೇ ಸಮುದಾಯ ಮತ್ತೆ ಮರಳಿ ಮನೆಗೆ ಎನ್ನುವಂತೆ `ಗಂಟಿಚೋರ್ಸ್’ ಎಂದು ಗುರುತಿಸಿಕೊಳ್ಳುತ್ತಿದ್ದಾರೆ.

ಗಂಟಿಚೋರ್ಸ್ ಸಮುದಾಯದಲ್ಲಿ ಯುವಜನತೆಯಲ್ಲಿ ನಿರುದ್ಯೋಗ ಸಮಸ್ಯೆಯಿದೆ. ಸಮೀಕ್ಷೆಯಲ್ಲಿ ಒಟ್ಟು 861 ಜನರು ನಿರುದ್ಯೋಗಿಗಳಿದ್ದಾರೆ. ಮಹಿಳಾ ನಿರುದ್ಯೋಗಿಗಳ ಸಂಖ್ಯೆ ಶೇ 17 ರಷ್ಟಿದೆ. ಉಳಿದಂತೆ ಶೇ 6.4 ರಷ್ಟು ಗಂಡಸರು ನಿರುದ್ಯೋಗಿಗಳಿದ್ದಾರೆ. ಪ್ರಾದೇಶಿಕವಾಗಿ ಗದಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಈ ಸಂಖ್ಯೆ ಹೆಚ್ಚಿದೆ. ಪರಿಶಿಷ್ಟಜಾತಿಯ ಅಭಿವೃದ್ಧಿ ಯೋಜನೆಗಳಲ್ಲಿ ನಿರುದ್ಯೋಗವನ್ನು ಕೊನೆಗಾಣಿಸುವ ಪ್ರಯತ್ನಗಳು ನಡೆಯಬೇಕಿದೆ.


ಬಾಗಲಕೋಟೆ  ಜಿಲ್ಲೆಯ ಮಹಾಲಿಂಗಪುರದ ಬಳಿ ಹೊಲದಲ್ಲಿ ವಾಸವಾಗಿರುವ ಗಂಟಿಚೋರ ಸಮುದಾಯದ ಕುಟುಂಬದ ಚಿತ್ರ.
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಬಳಿ ಹೊಲದಲ್ಲಿ ವಾಸವಾಗಿರುವ ಗಂಟಿಚೋರ ಸಮುದಾಯದ ಕುಟುಂಬದ ಚಿತ್ರ.

ಈ ಸಮುದಾಯದಲ್ಲಿ ವಸತಿ ಸಮಸ್ಯೆ ದೊಡ್ಡದಿದೆ, ಸಮೀಕ್ಷೆಯ ಒಟ್ಟು 1549 ಕುಟುಂಬಗಳಲ್ಲಿ ಶೇ 0.2 ನಷ್ಟು ಟೆಂಟುಗಳಲ್ಲಿಯೂ, ಶೇ 17.5 ರಷ್ಟು ಗುಡಿಸಲುಗಳಲ್ಲಿಯೂ, ಶೇ 23 ರಷ್ಟು ಬಾಡಿಗೆ ಮನೆಯಲ್ಲಿಯೂ ವಾಸಿಸುತ್ತಿದ್ದಾರೆ. ಶೇ 9.9 ರಷ್ಟು ಮಾತ್ರ ಸರಕಾರಿ ಆಶ್ರಯ ಮನೆಗಳಿವೆ. ಸರಕಾರವು ಗುಡಿಸಲು ಮುಕ್ತ ಕರ್ನಾಟಕವನ್ನು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಹೀಗಾಗಿ ಈ ಯೋಜನೆಗಳಲ್ಲಿ ಗಂಟಿಚೋರರ ವಸತಿ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಸಮೀಕ್ಷೆಯಲ್ಲಿ ಸಮುದಾಯದ 1201 ರಷ್ಟು ಭೂರಹಿತ ಕುಟುಂಬಗಳು ದಾಖಲಾಗಿದೆ. ಸದ್ಯಕ್ಕೆ 1982 ಜನರು ಕೃಷಿ ಕೂಲಿಗಳಿದ್ದಾರೆ. ಈ ಪ್ರಮಾಣ ಒಟ್ಟು ಜನಸಂಖ್ಯೆಯ ಶೇ 50 ರಷ್ಟಿದೆ. ಹಾಗಾಗಿ ಭೂರಹಿತರಿಗೆ ಭೂಮಿಯನ್ನು ಕೊಡುವ ಅಗತ್ಯವಿದೆ. ಶೇ 22 ರಷ್ಟು ಈ ಸಮುದಾಯದ ಕುಟುಂಬಗಳ ಬಡವರಿಗೆ ಪಡಿತರ ಚೀಟಿ ಸೌಲಭ್ಯವನ್ನು ಒದಗಿಸಬೇಕಾಗಿದೆ.

ಗಂಟಿಚೋರರು ಇದೀಗ ಸಂಘಟಿತರಾಗುತ್ತಿದ್ದಾರೆ. ಸರಕಾರ ಸಂಘಟನೆಗಳ ಸಹಭಾಗಿತ್ವದ ಮೂಲಕ ಸಮುದಾಯದ ಅಭಿವೃದ್ಧಿಗೆ ನೆರವಾಗಬೇಕಿದೆ. ಇವರಲ್ಲಿ ರಾಷ್ಟ್ರಮಟ್ಟದಲ್ಲಿ ಗಮನಸೆಳೆಯ ಕ್ರೀಡಾಪಟುಗಳಿದ್ದರು, ಈ ಹಿನ್ನೆಲೆಯಲ್ಲಿ ಸಮುದಾಯದ ಮಕ್ಕಳಿಗೆ ಕ್ರೀಡೆಯಲ್ಲಿ ಹೆಚ್ಚು ಪ್ರೋತ್ಸಾಹ ಸಿಗಬೇಕಿದೆ. ಸಮುದಾಯವು ಗೋಕಾಕಪಾಲ್ಸ್, ಹುಬ್ಬಳ್ಳಿ, ಗದಗ-ಬೆಟಗೇರಿ, ಬಿಜಾಪುರ, ನರಗುಂದದಲ್ಲಿ ಸೆಟ್ಲಮೆಂಟ್ ವಸತಿಗಳ ತೆರವಿನಿಂದ ಆತಂಕದಲ್ಲಿದೆ. ಈ ವಸತಿಯನ್ನು ಸಮುದಾಯದ ಮೂಲ ನೆಲೆಸಿಗರಿಗೆ ಖಾಯಂ ನೊಂದಾಯಿಸಬೇಕಿದೆ. ಬೆಳಗಾಂ ಜಿಲ್ಲೆಯ ರಾಯಭಾಗ ತಾಲೂಕಿನ ಶಾಹುಪಾರ್ಕ ಎಂಬ ಹಳ್ಳಿಯಲ್ಲಿ 1955 ರಲ್ಲಿ ಸಮುದಾಯದ ಮಕ್ಕಳಿಗೆ ಆಶ್ರಮ ಶಾಲೆ ಆರಂಭವಾಗಿತ್ತು. ಅದೀಗ ಏಳೆಂಟು ವರ್ಷದಿಂದ ನಿಲುಗಡೆಯಾಗಿ ಈ ಭಾಗದ ಗಂಟಿಚೋರ ಮಕ್ಕಳ ಶಿಕ್ಷಣಕ್ಕೆ ತಡೆಯಾಗಿದೆ. ಇದನ್ನು ಸರಕಾರ ಕೂಡಲೆ ಆರಂಭಿಸಬೇಕಿದೆ. ಹೀಗೆ ಇಂತಹ ಹತ್ತಾರು ಫಲಿತಗಳನ್ನು ಸಮುದಾಯವನ್ನು ಸಬಲಗೊಳಿಸುವ ನೆಲೆಯಲ್ಲಿ ಗುರುತಿಸಲಾಗಿದೆ.

ವಯಕ್ತಿಕವಾಗಿ ಸಮುದಾಯ ಅಧ್ಯಯನದ ಮೊದಲ ಪ್ರಯತ್ನವಿದು. ಈ ಅಧ್ಯಯನವೇ ಸಮುದಾಯವನ್ನು ನೋಡುವ ಕಣ್ಣುಗಳನ್ನು ಒದಗಿಸಿದೆ. ಇಲ್ಲಿ ಒಂದು ಸಮುದಾಯದ ನಾಡಿಮಿಡಿತವನ್ನು ಕೇಳಿಸುವಂತಹ ಸಂರಚನೆಯ ವಿಧಾನವನ್ನು ಬಳಸಾಗಿದೆ. ಸಮುದಾಯವೊಂದರ ಚಾರಿತ್ರಿಕ ಪಲ್ಲಟಗಳು ಹೇಗೆ ನಿರಂತರ ರೂಪಾಂತರಕ್ಕೆ ಒಳಗಾಗುತ್ತವೆ, ಈ ಪಯಣದಲ್ಲಿ ಸಮುದಾಯವೊಂದು ಹೇಗೆ ಸಂಘರ್ಷಕ್ಕೆ ಒಡ್ಡಿಕೊಳ್ಳುತ್ತದೆ ಎನ್ನುವುದನ್ನು ಅರಿಯಲು ಪ್ರಯತ್ನಿಸಲಾಗಿದೆ. ಗಂಟಿಚೋರ ಸಮುದಾಯ ಒಂದು ಕಾಲಕ್ಕೆ ಅಪರಾಧಿ ಬುಡಕಟ್ಟೆಂದು ಗುರುತಿಸಿಕೊಂಡು ನಂತರದಲ್ಲಿ ಈ ಗುರುತಿನ ಪೊರೆಯನ್ನು ಕಾಲಕಾಲಕ್ಕೆ ಕಳಚುತ್ತಾ ಬಂದಿರುವ ಪಯಣವೇ ಕುತೂಹಲಕಾರಿಯಾಗಿದೆ.

ಮಂಗಳವಾರ, ಅಕ್ಟೋಬರ್ 18, 2016

ದಲಿತ ಸಾಹಿತ್ಯದ ತಾತ್ವಿತ ನೆಲೆಗಳು

ದಲಿತ ಸಾಹಿತ್ಯದ ತಾತ್ವಿತ ನೆಲೆಗಳು


-ಪ್ರೊ. ರಹಮತ್ ತರೀಕೆರೆ.

ಪ್ರವೇಶ
ಸೂಕ್ಷ್ಮಸಂವೇದನೆಯ ಕವಿತೆಗಳನ್ನು ಬರೆಯುತ್ತಿರುವ ಯುವಕವಿಗಳಲ್ಲಿ ಒಬ್ಬರಾದ, ಎನ್. ಕೆ. ಹನುಮಂತಯ್ಯ ಅವರು ಈಚೆಗೆ ಕನ್ನಡ ವಿಶ್ವವಿದ್ಯಾಲಯದ ದಲಿತಪೀಠದ ಕಾರ್ಯಕ್ರಮವೊಂದಕ್ಕೆ ಬಂದಿದ್ದರು. ಅದರಲ್ಲಿ ಅವರು ದಲಿತ ಚಳುವಳಿಯ ಸದ್ಯಸ್ಥಿತಿಯನ್ನು ವಿವರಿಸಲು ಬಳಸಿದ ಒಂದು ರೂಪಕ ಬಹಳ ಡಿಸ್ಟರ್ಬಿಂಗ್ ಆಗಿತ್ತು. ಅದೊಂದು ನವಿಲಿನ ರೂಪಕ. ಅವರ ಪ್ರಕಾರ, ಒಂದು ಕಾಲಕ್ಕೆ ದಲಿತ ಲೇಖಕರು ಚಿಂತಕರು ನವಿಲುಗಳಂತೆ ಇದ್ದರು. ನಾಡಿನ ಯಾವ ಮೂಲೆಯಲ್ಲಾದರೂ ದಲಿತರ ಮೇಲೆ ಹಲ್ಲೆಯಾದರೆ, ಕೂಡಲೆ ಅಲ್ಲಿಗೆ ಓಡಿ ಹೋಗುತ್ತಿದ್ದರು. ಜನರ ಜತೆ ಬೆರೆಯುತ್ತಿದ್ದರು. ಅಲ್ಲಿ ಎಚ್ಚರದ ಸಂಘಟನೆಯ ಹೋರಾಟದ ಮೊಟ್ಟೆಗಳನ್ನು ಇಟ್ಟುಬರುತ್ತಿದ್ದರು. ಈಗ ಹಾಗಾಗುತ್ತಿಲ್ಲ. ಎಲ್ಲಿಯಾದರೂ ದಲಿತರ ಮೇಲೆ ದಮನದ ಸುದ್ದಿ ಬಂದರೆ, ಹಿಂದಿನಂತೆ ನವಿಲುಗಳು ಅಲ್ಲಿಗೆ ಹೋಗುವುದಿಲ್ಲ. ಮೊಟ್ಟೆಯಿಡುವುದಿಲ್ಲ. ಯಾಕೆಂದರೆ, ಅವನ್ನು ಕೊಯ್ದು ಮಾಂಸದಂಗಡಿಯಲ್ಲಿ ನೇತುಹಾಕಲಾಗಿದೆ. ಅವನ್ನು ಯಾರಾದರೂ ಈಗ ಖರೀದಿಸಬಹುದು. ಅವಕ್ಕೆ ಹಿಂದಿನಂತೆ ಜೀವವಿಲ್ಲ. ಸುಂದರವಾದ ಗರಿಗಳಿಲ್ಲ. ಮೊಟ್ಟೆಯಿಡುವ ಶಕ್ತಿಯಿಲ್ಲ. ಸಾವಿರಾರು ನದಿಗಲು ಸಂಕಲನದಲ್ಲಿ ಉಳ್ಳವರು ಬೀಸುವ ಬಲೆಗೆ ಸಿಕ್ಕಿಕೊಳ್ಳದೆ ಎತ್ತಿಕೊಂಡು ಹಾರುವ ದಲಿತಶಕ್ತಿಯ ರೂಪಕ ಚಿತ್ರಗಳಿವೆ. ಆದರೆ ಈಗ ಈ ಗರಿಕಳೆದ ನವಿಲುಗಳ ರೂಪಕ.
ಈ ಕತೆಯನ್ನು ಹೇಳುವಾಗ ಹನುಮಂತಯ್ಯನವರಲ್ಲಿ ತಿರಸ್ಕಾರವಿರಲಿಲ್ಲ. ವಿಷಾದ ವೇದನೆಗಳಿದ್ದವು. ಒಂದು ಸಲವಂತೂ ಅವರ ಗಂಟಲು ಕಟ್ಟಿಬಂದಿತು. ಇದಕ್ಕೆ ಒಂದು ಕಾರಣ, ಕವಿ ಸಹಜವಾದ ಭಾವುಕತೆ ಇರಬಹುದು. ಆದರೆ ಅನೇಕ ದಲಿತ ಲೇಖಕರಲ್ಲೂ ಚಿಂತಕರಲ್ಲೂ ಇಂತಹದೊಂದು ವಿಷಾದಯೋಗ ಆವರಿಸಿಬಿಟ್ಟಿದೆ. ಇದಕ್ಕೆ ಈಚೆಗೆ ಕಂಬಾಲಪಲ್ಲಿಯಲ್ಲಿ ಸೇರಿದ್ದ ದಲಿತ ಲೇಖಕರು ದಲೇಕ ಎಂಬ ಹೆಸರಿನಲ್ಲಿ ಪ್ರಕಟಿಸಿದ ಆತ್ಮ ವಿಮರ್ಶೆ ಹಾಗೂ ಹೊಸಹಾದಿಯ ಹುಡುಕಾಟದ ಪ್ರಣಾಳಿಕೆಯೂ ಉದಾಹರಣೆ ಆಗುತ್ತದೆ. ಪ್ರಶ್ನೆಯೆಂದರೆ ಸೂಕ್ಷ್ಮ ಸಂವೇದನೆಯ ಲೇಖಕರಲ್ಲಿ ಇಂಥ ಹತಾಶೆ ನೋವು ಹುಟ್ಟಿಸುವಷ್ಟು ಪರಿಸ್ಥಿತಿ ಬಿಗಡಾಯಿಸಿದೆಯೋ? ದಲಿತ ಸಂಘಟನೆಗಳು ಶಕ್ತಿ ರಾಜಕಾರಣದಲ್ಲಿ ಮಾಡುತ್ತಿರುವ ಪ್ರಯೋಗಗಳ ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳಲು ಇವರಿಗೆ ಸಾಧ್ಯವಾಗುತ್ತಿಲ್ಲವೋ? ಅಥವಾ ಅತಿ ಸೂಕ್ಷ್ಮತೆ ಅತಿ ಆದರ್ಶವಾದವುಳ್ಳ ಲೇಖಕರು ದೇಶದ ಮತ್ತು ಜಗತ್ತಿನ ಸಾಮಾಜಿಕ ರಾಜಕೀಯ ಆರ್ಥಿಕ ಬದಲಾವಣೆಗಳನ್ನು ಅರಿಯಲಾಗದೆ ಓವರ್ ರಿಯಕ್ಷನ್ ಮಾಡುತ್ತಿದ್ದಾರೆಯೋ?

ಈ ಅನುಮಾನ ಯಾಕೆಂದರೆ, ಹೆಚ್ಚಿನ ದಲಿತ ರಾಜಕಾರಣಿಗಳಿಗೆ ಈ ಬಗೆಯ ವಿಷಾದ ಆವರಿಸಿಲ್ಲ. ಲೇಖಕರಿಗೇ ಯಾಕೆ ಇದು ಕಾಡುತ್ತಿದೆ. ಪರ್ಯಾಯಗಳ ಹುಡುಕಾಟದ ಮಾತಾಡುತ್ತಿದ್ದಾರೆ. ದಲಿತ ಚಳುವಳಿಗೆ ಮಾತ್ರ ದುರವಸ್ಥೆ ಬಂದಿಲ್ಲ. ಇನ್ನೂ ಅನೇಕ ಚಳುವಳಿಗಳಿಗೆ ಕೂಡ ಬಂದಿದೆ. ದಲಿತ ಸಂಘರ್ಷ ಸಮಿತಿ, ಅಥವಾ ದಲಿತ ಚಳುವಳಿ, ದಲಿತ ಸಾಹಿತ್ಯದ ಕಳೆದ ಮೂರು ದಶಕಗಳ ಬಗ್ಗೆ ದುರಂತ ರೂಪಗಳಲ್ಲಿ ಮಾತ್ರ ಹೇಳುವಂತಹದ್ದಿಲ್ಲ. ಅಲ್ಲಿ ವಿಜಯದ ಚಿತ್ರಗಳೂ ಇವೆ. ಕಳೆದ ಮೂರು ದಶಕಗಳಲ್ಲಿ ದಲಿತ ಚಿಂತನೆ, ಸಂಘಟನೆ, ಸಾಹಿತ್ಯಗಳು ಕರ್ನಾಟಕದ ಸಾಂಸ್ಕೃತಿಕ ಇತಿಹಾಸದ ಅತ್ಯಂತ ಮಹತ್ವದ ಅಧ್ಯಾಯಗಳು. ಅವು ಕನ್ನಡಕ್ಕೆ ಹೊಸ ಬಗೆ ಕೃತಿಗಳನ್ನು ಕೊಟ್ಟಿವೆ ಎನ್ನುವುದು ಸಾಹಿತ್ಯಕವಾದ ಸೀಮಿತ ಪ್ರಶ್ನೆ. ಅವು ಕನ್ನಡದ ಚಿಂತನ ಕ್ರಮದಲ್ಲಿ, ಕರ್ನಾಟಕದ ರಾಜಕೀಯ ಚಿಂತನೆಯಲ್ಲಿ ಯಾವ ಬಗೆಯ ಪಲ್ಲಟಗಳನ್ನು ತಂದಿವೆ, ಯಾವ ಅನುಭವ ಲೋಕಗಳನ್ನು ತಂದಿವೆ ಎನ್ನುವುದನ್ನು ಮರೆತರೆ ಸಿನಿಕತೆಯಾಗುತ್ತದೆ. ದಲಿತ ಚಳುವಳಿ, ದಲಿತ ಸಾಹಿತ್ಯ, ದಲಿತ ಚಿಂತನೆಗಳು ಇರದಿದ್ದರೆ ಕರ್ನಾಟಕದ ರಾಜಕಾರಣ ಸಮಾಜದ ಸಾಹಿತ್ಯ ಚಿಂತನೆಗಳು ಈಗಿರುವ ಸ್ವರೂಪದಲ್ಲಿ ಖಂಡಿತ ಇರುತ್ತಿರಲಿಲ್ಲ. ಸಾಹಿತ್ಯಕವಾಗಿಯೇ ಮಾತಾಡುವುದಾದರೆ, ಬಹುಶಃ ಲಂಕೇಶರ ‘ಮುಸ್ಸಂಜೆಯ ಕಥಾ ಪ್ರಸಂಗ’ ಈಗಿರುವಂತೆ ಇರುತ್ತಿರಲಿಲ್ಲ. ದಲಿತ ಸಾಹಿತ್ಯ ಸಂಘಟನೆಗಳು ಕಳೆದ ಮೂರು ದಶಕಗಳ ಕನ್ನಡ ಸಾಹಿತ್ಯದ ಸಾಮಾಜಿಕ ನೈತಿಕತೆ, ಪ್ರತಿರೋಧದ ಗುಣ, ನಿರ್ಲಕ್ಷಿತ ನೆಲೆಗಳ ಮೂಲಕ ಚಿಂತಿಸುತ್ತ ಲೋಕ ದೃಷ್ಟಿಯನ್ನೂ ರೂಪಿಸುವ ಗುಣಗಳಿಗೆ ದೊಡ್ಡ ಚೈತನ್ಯವನ್ನು ತುಂಬಿವೆ. ಅನುಮಾನವೇ ಇಲ್ಲ.

ಆದರೂ ಈ ಹೊತ್ತಿನಲ್ಲಿ ಯಾಕೆ ಸೂಕ್ಷ್ಮ ಸಂವೇದನೆಯ ಲೇಖಕರಿಗೆ ಗತಕಲದ ಸಾಧನೆಗಳ ನೆನಪುಗಳಿಗಿಂತ, ವರ್ತಮಾನದ ಅವಸ್ಥೆ ತಲ್ಲಣಗಳು ಕಂಗಾಲು ಮಾಡಿವೆ. ಯಾಕೆ ಅವರು ಆತ್ಮಾವಲೋಕನದ ಪರಿಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಅದರಲ್ಲೂ ಚಳುವಳಿಗೆ ರಾಜಕೀಯ ಪ್ರಜ್ಞೆಯ ಬರೆಹಕ್ಕೆ ಚಿಂತನೆಗೆ ಹೊಸದಗಿ ಆಗಮಿಸುವ ದಲಿತ ತರುಣ ಲೇಖಕರಿಗೆ ವರ್ತಮಾನವನ್ನು ಇಂಥಹದೊಂದು ವಿಷಾದ ರೂಪಕಗಳಲ್ಲೆ ಗ್ರಹಿಸುವಂತಹ ಪರಿಸ್ಥಿತಿ ಯಾಕಾಗಿ ಬಂದಿದೆ. ಈ ಪ್ರಶ್ನೆ ಉಳಿಯುತ್ತದೆ. ಇದಕ್ಕೆ ಉತ್ತರ ಸರಳವಾಗಿಲ್ಲ. ಆದರೆ ಇದಕ್ಕೆ ಉತ್ತರದ ಒಂದು ಭಾಗವು ಸಮಕಾಲೀನ ರಾಜಕೀಯ ಆರ್ಥಿಕ ಸಾಮಾಜಿಕ ವಿದ್ಯಮಾನಗಳಲ್ಲಿದೆ. ಇನ್ನೊಂದು ಭಾಗವು ಕಳೆದ ಕಾಲು ಶತಮಾನದ ದಲಿತ ರಾಜಕಾರಣ, ಸಾಹಿತ್ಯ, ಚಿಂತನೆಗಳ ಚರಿತ್ರೆಯಲ್ಲಿ ಇದೆ. ಕನ್ನಡದ ದಲಿತ ಸಾಹಿತ್ಯದ ತಾತ್ವಿಕತೆಯ ಚಿತ್ರವನ್ನು ಈ ಚರಿತ್ರೆ ಹಾಗೂ ವರ್ತಮಾನದ ಭಿತ್ತಿಯಿಲ್ಲದೆ ವಿವರಿಸಲು ಸಾಧ್ಯವಿಲ್ಲ. ಒಂದರ್ಥದಲ್ಲಿ ದಲಿತ ಸಾಹಿತ್ಯ ಹಾಗೂ ಸಂಘಟನೆಗಳ ಕೂಡು ಚರಿತ್ರೆ ಶುರುವಾಗುವುದು ೧೯೭೬ರಲ್ಲಿ ಭದ್ರಾವತಿಯಲ್ಲಿ ನಡೆದ ಒಂದು ಸಭೆಯಿಂದ ಅದರ ಹೆಸರು. ‘ದಲಿತ ಬರಹಗರರ ಕಲಾವಿದರ ಸಭೆ’ ದಲಿತ ಸಂಘರ್ಷ ಸಮಿತಿಯ ಸ್ಥಾಪನೆಗೆ ಕಾರಣವಾದ ಈ ಸಭೆಯಲ್ಲಿ ದಲಿತ ಲೇಖಕರೂ, ಚಿಂತಕರೂ ಆದ ದೇವನೂರು ಮಹಾದೇವ, ಬಿ. ಕೃಷ್ಣಪ್ಪ, ಸಿದ್ಧಲಿಂಗಯ್ಯ, ಇಂದೂಧರ ಹೊನ್ನಾಪುರ, ಕೆ. ರಾಮಯ್ಯ ಮುಂತಾದವರು ಇದ್ದರು. ಇದಾದ ಸುಮಾರು ೨೮ ವರುಷಗಳ ಬಳಿಕ. ಈಚೆಗೆ ಕೋಲಾರ ಜಿಲ್ಲೆಯಲ್ಲಿ ಮತ್ತೊಂದು ದಲಿತ ಲೇಖಕರ ಕಲಾವಿದರ ಒಂದು ಪುಟ್ಟ ಸಭೆ ಸೇರಿತ್ತು. ಈ ಸಭೆಗೆ ನಾಗಲಾಪಲ್ಲಿ ಕಂಬಾಲಪಲ್ಲಿಗಳಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯಗಳು ಕಾರಣವಾಗಿದ್ದವು. ಇದರಲ್ಲಿ ಕೆ. ರಾಮಯ್ಯ, ಗೋವಿಂದಯ್ಯ, ಇಂಧೂದರ ಹೊನ್ನಾಪುರ, ಕೆ. ಬಿ. ಸಿದ್ಧಯ್ಯ, ದು. ಸರಸ್ವತಿ ಮುಂತದ ದಲಿತ ಲೇಖಕರಿದ್ದರು. ಈ ಸಭೆಯ ಸಂಘಟಕರು, ‘ದಲೇಕ’ ಎಂದು ಕರೆದುಕೊಂಡರು. ಮೊದಲನೆಯದು ಹುಟ್ಟಿನ ಸಭೆಯಾದರೆ, ಈ ಸಭೆಯನ್ನು ಲೇಖಕರು ‘ದಲಿತ ಚಳುವಳಿಯ ಮರುಹುಟ್ಟು’ ಎಂದು ಕರೆದುಕೊಂಡರು. ಕರ್ನಾಟಕದ ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ಸಾಹಿತ್ಯಗಳ ತಾತ್ವಿಕ ಸ್ವರೂಪವನ್ನು ಗುರುತಿಸಲು, ಎರಡು ಸಭೆಗಳನ್ನು ಸಾಂಕೇತಿಕವಾಗಿ ಗ್ರಹಿಸಬಹುದು. ಎರಡರಲ್ಲೂ ಲೇಖಕರೇ ಮುಖ್ಯ ಪಾತ್ರಧಾರಿಗಳು. ಅವರು ಚರ್ಚಿಸಿದ್ದು ಸಾಹಿತ್ಯಕ್ಕಿಂತ ಮಿಗಿಲಗಿ ದೇಶದ ಆರ್ಥಿಕ, ರಾಜಕೀಯ, ಸಾಮಾಜಿಕ ವಿದ್ಯಮಾನಗಳನ್ನು; ಇದು ಸರಿ ಕೂಡ. ೧೯೭೬ರ ‘ದಬಕಸ’ ದಿಂದ ಡಿ. ಎಸ್. ಎಸ್. ಹುಟ್ಟಿದರೆ, ೨೦೦೨ರ ‘ದಲೇಕ’ ವು ಡಿ. ಎಸ್. ಎಸ್. ಛಿದ್ರವಾಗಿರುವ ನೋವಿನ ಹಿನ್ನೆಲೆ ಇಟ್ಟುಕೊಂಡು ಸಭೆ ಸೇರಿತ್ತು. ಮೊದಲನೆಯದು ಹುಟ್ಟುವ ಆಶಯದ್ದು. ಎರಡನೆಯದು ಮರುಹುಟ್ಟುವ ಆಶಯದ್ದು. ಈ ಎರಡು ಸಭೆಗಳ ನಡುವಿನ ಕಾಲಾವಧಿಯಲ್ಲಿ ಕರ್ನಾಟಕ, ಭಾರತಗಳನ್ನು ಒಳಗೊಂಡಂತೆ, ಜಗತ್ತಿನಲ್ಲಿ ಅನೇಕ ಬದಲಾವಣೆಗಳು ಸಂಭವಿಸಿವೆ. ಈ ಲೇಖನದಲ್ಲಿ ಚಾರಿತ್ರಿಕವಗಿ ಈ ಕಾಲಾವಧಿಯನ್ನು ದಲಿತ ಸಾಹಿತ್ಯದ ತಾತ್ವಿಕ ಚಿಂತನೆ ಮಾಡಲು ಇಟ್ಟುಕೊಳ್ಳಲಾಗಿದೆ. ಈ ಕಾರಣಕ್ಕೆ ಈ ವಿಶ್ಲೇಷಣೆಯನ್ನು ‘ದಬಕಸದಿಂದ ದಲೇಕದವರೆಗೆ’ ಎಂದು ಕರೆಯಬಹುದು.

ದಲಿತ ಸಾಹಿತ್ಯ ಕಥನ
ದಲಿತ ಸಾಹಿತ್ಯದ ಸ್ವರೂಪಕ್ಕೂ ದಲಿತ ಸಮುದಾಯಗಳಲ್ಲಿ ಉಂಟಾಗಿರುವ ಪರಿವರ್ತನೆಗಳಿಗೂ ಇರುವ ಸಂಬಂಧ ಕಾರ್ಯಕಾರಣ ರೀತಿಯದ್ದಲ್ಲ. ಆದರೂ ಅವುಗಳ ನಡುವೆ ಒಂದು ಬಗೆಯ ಸಾವಯವ ಸಂಬಂಧವಿದೆ. ಸದ್ಯಕ್ಕಂತೂ ದಲಿತ ಲೇಖಕರ ವಿಷಾದಗಳಿಗೂ ದಲಿತ ಚಳುವಳಿಗೂ ಇರುವ ಸಂಬಂಧ ಅಂತಹದ್ದು. ಇದಕ್ಕೆ ದಲಿತ ಸಂಘಟನೆ ಛಿದ್ರವಾಗಿ, ಪರಸ್ಪರ ಬಣಗಳು ಕಿತ್ತಾಡುವುದು, ಅವು ವಿಶಾಲ ದಲಿತ ಸಮುದಾಯದ ಹಿತಾಸಕ್ತಿ ಪ್ರತಿನಿಧಿಸುವ ರಾಜಕೀಯ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿರುವುದು, ದಲಿತ ನಾಯಕರು ನೈತಿಕತೆಯನ್ನು ಕಳೆದುಕೊಂಡಿರುವುದು, ಅವರನ್ನು ಬೇರೆ ಬೇರೆ ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿರುವುದು, ದಲಿತ ಚಳುವಳಿ ಎಡಗೈ ಬಲಗೈ ಎಂದು ಒಡೆದು ಹೋಗಿರುವುದು, ಕೋಮುವಾದವು ತಲೆಯೆತ್ತಿರುವುದು, ಜಾಗತೀಕರಣದ ಯುಗವು ಬಂದು ದಲಿತರಿಗೆ ಇದ್ದ ಮೀಸಲಾತಿಯ ಪರಿಕಲ್ಪನೆಯನ್ನೇ ಅಸಂಬದ್ಧ ಮಾಡಿರುವುದು ಇತ್ಯಾದಿ ಕಾರಣಗಳೆಂದು ಪಟ್ಟಿಮಾಡಬಹುದು. ಈ ಎಲ್ಲ ಬಿಕ್ಕಟ್ಟುಗಳ ಒಳಗೆ ಹೊಸ ದಲಿತ ಲೇಖಕರ ಚಿಂತಕರ ಕಾರ್ಯಕರ್ತರ ತಲೆಮಾರು ವಿಚಿತ್ರವಾದ ಗೊಂದಲ ಹಾಗೂ ದಿಕ್ಕೆಟ್ಟ ಸ್ಥಿತಿಯಲ್ಲಿದೆ. ಹನುಮಂತಯ್ಯನಂತಹ ತರುಣ ಕವಿಯದು ಅಂತಹ ಒಂದು ಪ್ರಾತಿನಿಧಿಕ ಪ್ರತಿಕ್ರಿಯೆ ಅಷ್ಟೆ.
ಪ್ರಶ್ನೆಯೆಂದರೆ, ಯಾಕೆ ಹೊಸತಲೆಮಾರಿನಲ್ಲಿ ಈ ಸಾಹಿತ್ಯ ಚಳುವಳಿ ಸಂಘಟನೆಗಳು ಯಾವುದೇ ಭರವಸೆಯನ್ನು ಕೊಡದಷ್ಟು ನಿರಾಶೆ ಹುಟ್ಟಿಸಿವೆ ಎನ್ನುವುದು ಅಥವಾ ದಲಿತ ಸಂಘಟನೆ ಚಳುವಳಿ ಸಾಹಿತ್ಯಗಳಿಗೆ ಗರಬಡಿದಂತಾಗಿದೆ ಎಂದು ವಿಷಾದ ಮಾಡುತ್ತಿರುವವರು ಮುಖ್ಯವಗಿ ಲೇಖಕರು ಯಾಕಾಗಿದ್ದಾರೆ ಎನ್ನುವುದು. ಯಾಕೆಂದರೆ ಕೆಲವು ದಲಿತ ರಾಜಕಾರಣಿಗಳು ಈ ಹೊತ್ತು ದಲಿತರು ಅಧಿಕಾರ ಹಿಡಿಯುವ ರಾಜಕೀಯ ಪಕ್ಷಗಳನ್ನು ಕಟ್ಟುವಂಥ ಅಥವಾ ಅಧಿಕಾರಸ್ಥ ಪಕ್ಷಗಳ ಜತೆ ಚೌಕಾಸಿ ಕುದುರಿಸುವಂಥ ಶಕ್ತಿಯನ್ನು ಪಡೆದುಕೊಂಡಿದ್ದಾರೆ ಎಂದು ವಾದಿಸುತ್ತಾರೆ. ಇದೊಂದು ವೈರುಧ್ಯ ಹಾಗಾದರೆ, ಸಾಮಾಜಿಕ ರಾಜಕೀಯ ಬೆಳವಣಿಗೆಯನ್ನು ರಾಜಕೀಯ ವಿಶ್ಲೇಷಕರು ಗ್ರಹಿಸುವುದಕ್ಕೂ ಕವಿ ಕಲಾವಿದರು ಗ್ರಹಿಸುವುದಕ್ಕೂ ವ್ಯತ್ಯಾಸಗಳು ಇವೆಯೇ? ವಾಸ್ತವದಲ್ಲಿ ದಲಿತ ಸಾಹಿತ್ಯ ಹಾಗೂ ಚಳುವಳಿಗೆ ಸಂಬಂಧಿಸಿದಂತೆ ಮೊದಲ ಘಟ್ಟದ ಲೇಖಕರ, ಚಿಂತಕರ, ಚಳುವಳಿಗಾರರ ನಡುವೆ ಅಂತಹ ವ್ಯತ್ಯಾಸಗಳಿರಲಿಲ್ಲ. ಯಾಕೆಂದರೆ ಎಲ್ಲ ದಲಿತ ಲೇಖಕರೂ ರಾಜಕೀಯ ಚಿಂತಕರೇ ಆಗಿದ್ದರು. ಚಳುವಳಿ ಪ್ರಧಾನವದ ಸಾಹಿತ್ಯದಲ್ಲಿ ಅಥವಾ ಸಾಹಿತ್ಯ ಪ್ರಧಾನವಾಗಿರುವ ಚಳುವಳಿಗಳಲ್ಲಿ ಅದರ ಚಿಂತಕರು (ಐಡಲಾಜಿಗಳು) ಹಾಗೂ ಲೇಖಕರು (ಕಲ್ಪನೆ ಅನುಭವ ಪ್ರಧಾನವಾದ ಸಾಹಿತ್ಯ ರಚಿಸುವವರು) ಬೆರೆಯಾಗಿರುವುದಿಲ್ಲ. ರಾಜಕೀಯ ಕ್ರಿಯೆಯನ್ನುಳ್ಳ ಎಲ್ಲ ಚಳುವಳಿ ಸಂಬಂಧಿ ಸಾಹಿತ್ಯಗಳಲ್ಲೂ ಈ ಸಂಬಂಧ ಹತ್ತಿರವಾಗಿರುತ್ತದೆ ಅಥವಾ ವ್ಯತ್ಯಾಸವೇ ಇರುವುದಿಲ್ಲ. ವಚನ ಚಳುವಳಿ ಇದಕ್ಕೆ ಹಳೆಯ ಉದಾಹರಣೆ. ಈ ಕಾರಣಕ್ಕೆ ದಲಿತ ರಾಜಕಾರಣ, ದಲಿತ ಸಾಹಿತ್ಯ, ದಲಿತ ಚಿಂತನೆ ಇವೆಲ್ಲವನ್ನು ಒಂದೆ ಪಾತಳಿಯಲ್ಲಿ ಇಟ್ಟು ಚರ್ಚಿಸುವುದು ಸರಿ ಮಾತ್ರವಲ್ಲ, ಅನಿವಾರ್ಯ ಕೂಡ. ಕನ್ನಡ ದಲಿತ ಸಾಹಿತ್ಯದ ಮಟ್ಟಿಗಂತೂ ಈ ರಾಜಕೀಯ, ಆರ್ಥಿಕ, ಸಾಮಾಜಿಕ ವಿದ್ಯಮಾನಗಳು ಬೇರೆ ಅಲ್ಲ. ದಲಿತ ರಾಜಕಾರಣದ ಭಾಗವಾಗಿಯೆ ದಲಿತ ಸಾಹಿತ್ಯ ಹುಟ್ಟಿ ಬಂದಿತು ಅಥವಾ ದಲಿತ ಸಾಹಿತಿಗಳ ಕ್ರಿಯಾಶೀಲ ಭಾಗವಹಿಸುವಿಕೆಯಿಂದಲೇ ದಲಿತ ರಾಜಕಾರಣ, ದಲಿತ ಚಿಂತನೆಗಳು ಹುಟ್ಟಿಬಂದವು. ಇದೊಂದು ಏಕೀಭವಿಸುವಿಕೆ. ೧೯೭೭ರ ದಬಕಸ ಹಾಗೂ ೨೦೦೨ರ ದಲೇಕ ಎರಡೂ ಸಮಾವೇಶಗಳಲ್ಲಿ, ದಲಿತ ಲೇಖಕರು ರಾಜಕೀಯ ಚರ್ಚೆಗಳನ್ನು ಮಾಡಿದರು. ಇದನ್ನು ಮೇಲೆ ಚರ್ಚಿಸಿದ ಏಕೀಭವಿಸುವಿಕೆಯ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು.

ಹಾಗೆಂದು ದಲಿತ ಚಳುವಳಿ ಹಾಗೂ ಸಾಹಿತ್ಯ ಒಂದರ ಪಡಿನೆಳಲು ಇನ್ನೊಂದಲ್ಲ. ಇವುಗಳ ನಡುವೆ ಸಾಮ್ಯಗಳಿರುವುದಕ್ಕಿಂತ ವ್ಯತ್ಯಾಸಗಳೂ ಕಾಂತಿಹೀನವಾಗಿದೆ. ಹೆಚ್ಚಿನ ಸಲ ಈ ಶಿಥಿಲತೆಯ ಉದ್ಘಾಟನೆಯನ್ನು ದಲಿತ ಲೇಖಕರೇ ಉದ್ಫಾಟಿಸಿರುವುದುಂಟು. ಆದರೂ ಚಳುವಳಿಯ ಭಾಗವಾಗಿ ಜೀವಂತ ಸಾಹಿತ್ಯ ಸೃಷ್ಟಿಸಲು ಹವಣಿಸುವ ಸಾಹಿತ್ಯ ತನ್ನ ಕಾಂತಿಹೀನತೆ ನೀಗಿಕೊಂಡು ಜೀವಂತಿಕೆ ತುಂಬಿಕೊಳ್ಳಲು ಚಳುವಳಿಗಳನ್ನು ಚೈತನ್ಯಗೊಳಿಸುತ್ತದೆ. ಅದಕ್ಕಾಗಿ ಪರಿತಾಪ ಪಟ್ಟು ಆತ್ಮ ವಿಮರ್ಶೆಯ ಕರಕಿನಿಂದ ಹೊರಬಂದು ಹೆಚ್ಚು ನೈತಿಕ ಉರಿಯಿಂದ ಧಗಧಗಿಸಲು ಯತ್ನಿಸುತ್ತದೆ. ಇದು ದಲಿತ ಸಾಹಿತ್ಯ ಹಾಗೂ ಅದರ ರಾಜಕೀಯ ಸಾಮಾಜಿಕ ಚಳುವಳಿ ಸಂಘಟನೆಗಳ ನಡುವಣ ಸಂಕೀರ್ಣ ಸಂಬಂಧ. ಅದರಲ್ಲೂ ದಲಿತರು ಶಕ್ತಿ ರಾಜಕಾರಣದಲ್ಲಿ ಧುಮುಕಿದ ಬಳಿಕ, ಪಾರ್ಲಿಮೆಂಟರಿ ಪ್ರಜಾಪ್ರಭುತ್ವದಲ್ಲಿ ತೊಡಗಿರುವ ರಾಜಕೀಯ ಪಕ್ಷಗಳು ಒಳಗೆ ಗುರುತಿಸಿಕೊಳ್ಳಲಾರಂಭಿಸಿದಾಗ, ಚಳವಳಿ, ರಾಜಕಾರಣ, ಸಾಹಿತ್ಯ, ಚಿಂತನೆಗಳ ನಡುವೆ ಬಿಕ್ಕಟ್ಟು ಹುಟ್ಟಿಕೊಂಡು, ಕಂದರವಾಗಿ ಬಾಯ್ದೆರೆದು ನಿಂತಿತು. ನವಿಲುಗಳು ಮಾಂಸದಂಗಡಿಯಲ್ಲಿ ತೂಗುತ್ತಿರುವ ರೂಪಕದಲ್ಲಿರುವ ವಿಷಾದವು ಈ ಬಿಕ್ಕಟ್ಟನ್ನು ಉತ್ಪ್ರೇಕ್ಷೆಯಿಂದ ಸೂಚಿಸಿರುವ ಒಂದು ಕವಿ ಗ್ರಹಿಕೆಯಾಗಿದೆ. ಪ್ರಶ್ನೆಯೆಂದರೆ ಈ ಬಿಕ್ಕಟ್ಟಿನ ಸ್ವರೂಪವೇನು? ಈ ಬಿಕ್ಕಟ್ಟಿಗೆ ಕಾರಣವೇನು? ಇದು ದಲಿತ ಸಾಹಿತ್ಯದ ತಾತ್ವಿಕತೆಯನ್ನು ಅರ್ಥ ಮಾಡಿಕೊಳ್ಳಲು ಅಗತ್ಯವಾದ ತಿಳಿವಳಿಕೆ.
ಯಾವುದೆ ಚಳವಳಿ ಸಾಹಿತ್ಯ ಅಥವಾ ಚಿಂತನೆಯ ಶಕ್ತಿ ಇರುವುದು ಅದರ ನೈತಿಕ ಬಲದಲ್ಲಿ ಮಾತ್ರವಲ್ಲ. ಅದು ತನ್ನ ಮುಂದೆ ಬರುವ ಹೊಸ ಹೊಸ ಸವಾಲಿನಂತಹ ವಿದ್ಯಮಾನಗಳನ್ನು ಹೇಗೆ ಅರ್ಥಮಾಡಿಕೊಳ್ಳುತ್ತದೆ, ಹೇಗೆ ಪ್ರತಿಕ್ರಿಯಿಸುತ್ತದೆ ಮತ್ತು ಅದರ ಜತೆಗೆ ತನ್ನ ಸಂಬಂಧವನ್ನು ಸ್ಥಾಪಿಸಿಕೊಳ್ಳುತ್ತದೆ ಎಂಬ ರಾಜಕೀಯ ಪ್ರಬುದ್ಧತೆ ಹಾಗೂ ವಿವೇಚನೆಯ ಮೇಲೆ ದಲಿತ ಸಂಘಟನೆ, ಚಳವಳಿ, ಸಾಹಿತ್ಯ ಹಾಗೂ ಚಿಂತನೆಗಳು ಈಗ ಕವಲುದಾರಿಯಲ್ಲಿ ಅಥವಾ ಗೊಂದಲದಲ್ಲಿ ನಿಂತಿರಲು ಬಹುಶಃ ಕೆಲವು ಕಾರಣಗಳಿದ್ದಂತಿವೆ. ಮೊದಲನೆಯದಾಗಿ, ಕಳೆದ ಕಾಲುಶತಮಾನದಿಂದ ನಡೆದಿರುವ ಕೋಮುವಾದ, ಜಾಗತೀಕರಣ, ಖಾಸಗೀಕರಣ, ದಲಿತರ ಆಧುನೀಕರಣ, ದಲಿತ ಸಂಘಟನೆಗಳು ಶಕ್ತಿರಾಜಕಾರಣದ ಭಾಗವಾಗಿದ್ದು ಇವೆಲ್ಲವೂ ಒಂದರೊಳಗೊಂದು ಕಲಿಸಿಕೊಂಡು ಸಂಕೀರ್ಣ ರೂಪದಲ್ಲಿ ನಿಂತಿರುವುದು. ಎರಡನೆಯದಾಗಿ ಇದನ್ನು ಅರ್ಥಮಾಡಿಕೊಳ್ಳಲು ಹಾಗೂ ಸೂಕ್ತ ನಿಲುವನ್ನು ತಾಳಲು ಬೇಕಾದ ಬೌದ್ಧಿಕ ತಾತ್ವಿಕ ಸಿದ್ಧತೆ ಹೆಚ್ಚಿನ ದಲಿತರಲ್ಲಿ ಇಲ್ಲದಿರುವುದು. ಮೂರನೆಯದಾಗಿ ಕಳೆದ ೫೦ ವರುಷಗಳಿಂದ ಬದಲಾಗುತ್ತಿದ್ದರೂ ಆಧುನೀಕರಣಗೊಳ್ಳುತ್ತಿದ್ದರೂ, ದಲಿತ ಸಮಾಜದಲ್ಲಿ ನಡೆದ ಬಿಡುಗಡೆ ಪ್ರಕ್ರಿಯೆಯೂ ಇನ್ನೂ ಪೂರ್ಣಗೊಂಡಿಲ್ಲದಿರುವುದು. ಅಲ್ಲಿ ಇನ್ನೂ ವಿವಿಧ ಬದಲಾವಣೆಯ ವಿವಿಧ ಹಂತಗಳಲ್ಲೇ ಉಳಿದುಬಿಟ್ಟಿರುವ ಗುಂಪುಗಳಿದ್ದು, ದಲಿತ ಚಳುವಳಿಯನ್ನು ಮಧ್ಯಮವರ್ಗದ ದಲಿತರ ಬಿಕ್ಕಟ್ಟುಗಳು ನಿರ್ದೇಶಿಸುತ್ತಿರುವುದು. ಹೀಗಾಗಿ ವರ್ತಮಾನದ ವಿದ್ಯಮಾನಗಳನ್ನು ಯಾವ ಹಂತದ ದಲಿತರ ನೆಲೆಯಿಂದ ಗ್ರಹಿಸಬೇಕು, ಮೌಲ್ಯಮಾಪನ ಮಾಡಬೇಕು ಎಂಬ ಸಮಸ್ಯೆಯಿದೆ. ಇದನ್ನು ದಲಿತರು ಕೋಮುವಾದ ಜಾತೀಕರಣ ಮುಂತಾದ ವಿದ್ಯಮಾನಗಳಿಗೆ ಮಾಡುತ್ತಿರುವ ಪ್ರತಿಕ್ರಿಯೆಗಳಲ್ಲಿ ಸ್ಪಷ್ಟವಾಗಿ ಕಾಣಬಹುದು.

ದಲಿತ ಲೇಖಕರು ಮತ್ತು ಕೋಮುವಾದದ ಕಲ್ಪನೆ

ಕೋಮುವಾದಕ್ಕೆ ಪ್ರತಿಕ್ರಿಯಿಸುವಲ್ಲಿ ದಲಿತ ಚಿಂತಕರು ಹಾಗೂ ಲೇಕಕರು ಒಂದು ಬಗೆಯ ಸ್ಪಷ್ಟತೆಯನ್ನು ಪ್ರಕಟಿಸಿದ್ದಾರೆ. ಆದರೂ ಹೆಚ್ಚಿನ ದಲಿತರಿಗೆ ಕೋಮುವಾದ ಒಂದು ಗಂಭೀರ ಸಮಸ್ಯೆಯಾಗಿ ಕಂಡಿಲ್ಲ. ಅವರಿಗೆ ಅದು ಹೆಚ್ಚೆಂದರೆ ದಲಿತ ವಿರೋಧಿಯಾದ ಬ್ರಾಹ್ಮಣ ಸನಾತನವಾದದ ಪುನರುತ್ಥಾನವಾದವಾಗಿ ಕಂಡಿದೆ. ಇದಕ್ಕೆ ಒಂದು ಕಾರಣ. ಕರ್ನಾಟಕದ ದಲಿತರಿಗೆ ದೈನಿಕ ಬದುಕಿನಲ್ಲು ಮೂರ್ತ ಮತ್ತು ನೇರ ಎದುರಾಳಿಯಾಗಿರುವುದು ಗ್ರಾಮೀಣ ಮಧ್ಯಮ ಜಾತಿಗಳ ಭೂಮಾಲಿಕ ವ್ಯವಸ್ಥೆ. ಅದ್ದರಿಂದ ತಮ್ಮ ಸಮಸ್ಯೆಯ ಪರಿಹಾರಕ್ಕಾಗಿ ದಲಿತರು ಒಗ್ಗೂಡಬೇಕು ಎಂಬ ಸಮುದಾಯವಾದಿ ರೂಪದಲ್ಲಿ ದಲಿತ ಚಳುವಳಿಯನ್ನು ಸಂಘಟಿಸಬಯಸುವವರಿಗೆ, ಕೋಮುವಾದವು ಮುಸ್ಲಿಮರ ಸಮಸ್ಯೆಯಾಗಿ ಕಂಡಿದ್ದರೆ ಆಶ್ಚರ್ಯವಲ್ಲ. ಅನೇಕ ದಲಿತರು ಕೋಮುವಾದಿ ಸಂಘಟನೆಗಳಲ್ಲಿ ಗುರುತಿಸಿಕೊಳ್ಳುತ್ತಿರುವುದು, ದಲಿತ ಚಳವಳಿಗಳ ಗೈರುಹಾಜರಾತಿಯನ್ನೇ ಸೂಚಿಸುತ್ತದೆಯೋ ಅಥವಾ ದಲಿತ ಚಳುವಳಿ ಸಮುದಾಯವಾದಿ ರಾಜಕಾರಣದಾಚೆ ಹೋಗಿ ವಿಶಾಲ ಎಡಪಂಥೀಯ ರಾಜಕಾರಣದ ಗುರುತಿಸಿಕೊಳ್ಲುವುದಕ್ಕೆ ಹಿಂಜರಿಕೆ ತೋರಿದ್ದರ ಪರಿಣಾಮವೋ. ಇದರ ಜತೆಗೆ ಶಕ್ತಿರಾಜಕಾರಣದ ಅವಕಾಶವಾದಿ ಒಪ್ಪಂದಗಳ ಪರವಾಗಿ ಚಿಂತಿಸುವ ದಲಿತರು ಕೋಮುವಾದದ ಬಗ್ಗೆ ತಟಸ್ಥರಂತೆ ಕಾಣುತ್ತಾರೆ. ಇದಕ್ಕೆ ಕಾರಣ ಉತ್ತರ ಭಾರತದಲ್ಲಿ ದಲಿತ ನೇತೃತ್ವದ ರಾಜಕೀಯ ಪಕ್ಷವಾದ ಬಹುಜನ ಸಮಾಜ ಪಕ್ಷವು ಕೋಮುವಾದಿ ರಾಜಕಾರಣದ ಜತೆ ಕೈಗೂಡಿಸಿರುವುದು. ಇದರಿಂದ ಕರ್ನಾಟಕದಲ್ಲಿ ಬಹುಜನ ಸಮಾಜ ಪಕ್ಷ ಬೆಳೆಸಲು ಉಂಟಾಗಿರುವ ತಾತ್ವಿಕ ಮುಜುಗರಗಳಿವೆ. ಇದರಿಂದ ಎಷ್ಟೋ ದಲಿತರು ಕೋಮುವಾದಿ ಸಂಘಟನೆಗಳಿಗೆ ಹೋಗುವುದನ್ನು ತಡೆಯಲು ಪರ್ಯಾವಾದ ದಲಿತ ಸಂಘಟನೆ ತಾತ್ವಿಕತೆಗಳು ಅಸಹಾಯಕವಾಗಿವೆ.

ಜಾಗತೀಕರಣ ಕುರಿತು ಒಟ್ಟು ಕನ್ನಡ ಚಿಂತನೆಯಲ್ಲಿ ಇರುವಂತೆ ದಲಿತ ಚಿಂತಕರಲ್ಲೂ ಸಾಮಾನ್ಯ ಗೊಂದಲಗಳಿವೆ. ಈಗ ಜಾಗತೀಕರಣ ಈ ದೇಶದ ಆರ್ಥಿಕತೆಯನ್ನು ಯಾವ ಬಗೆಯಲ್ಲಿ ಬದಲಿಸಬಲ್ಲದು ಎಂಬ ಮೊದಲ ಪ್ರಶ್ನೆಯನ್ನು ಬಿಟ್ಟುಕೊಟ್ಟು, ಜಾಗತೀಕರಣದ ಅಂಗಾಂಗಗಳಂತಿರುವ ಬಹುರಾಷ್ಟ್ರೀಯ ಕಂಪನಿಗಳಲ್ಲಿ ದಲಿತರಿಗೆ ಮೀಸಲಾತಿ ಇರುತ್ತದೆಯೇ ಇಲ್ಲವೇ ಎಂಬ ಪ್ರಶ್ನೆಯನ್ನು ಕೂಡ ಚರ್ಚಿಸಲಾಗುತ್ತಿದೆ. ಜಾಗತೀಕರಣವನ್ನು ತಾತ್ವಿಕವಾಗಿ ಒಪ್ಪಕೊಂಡ ಬಳಿಕ ಹುಟ್ಟುವ ಪ್ರಶ್ನೆಯಿದು. ಇದು ದಲಿತ ಸಮುದಾಯಗಳು ಬದಲಾಗುತ್ತಿರುವ ಸಾಮಾಜಿಕ, ರಾಜಕೀಯ, ಆರ್ಥಿಕ ಸನ್ನಿವೇಶಗಳಲ್ಲಿ ನಮಗಾಗುವ ಲಾಭವೇನು ಎಂಬ ನೆಲೆಯಲ್ಲಿ ರೋಚಿಸುತ್ತಿರುವುದರ ಪರಿ ಕೂಡ. ಇದು ಬೌದ್ಧಿಕ ಗೊಂದಲವಲ್ಲ. ಬದಲಾಗಿ ರಾಜಕೀಯವಾಗಿ ಸಾಮಾಜಿಕವಾಗಿ ದಲಿತರು ಚಿಂತಿಸಿರುವ ಅವಕಾಶವಾದಿ ವಿಧಾನ ಕೂಡ ರಾಜಕೀಯವಾಗಿ ಸಾಮಾಜಿಕವಾಗಿ ದಲಿತರು ಚಿಂತಿಸಿರುವ ಅವಕಾಶವಾದಿ ವಿಧಾನ ಕೂಡ ಆಗಿದೆ. ಜಾತಿಪದ್ದತಿಯ ದಬ್ಬಾಳಿಕೆಯನ್ನು ಅರ್ಥಮಾಡಿಕೊಳ್ಳುವುದಕ್ಕೂ ಜಾತೀಕರಣವನ್ನು ಅರ್ಥಮಾಡಿಕೊಳ್ಳುವುದಕ್ಕೂ ವ್ಯತ್ಯಾಸವಿದೆ; ಅಷ್ಟೇ. ಬಸವಣ್ಣ, ಬುದ್ಧ, ಅಂಬೇಡ್ಕರ್, ಫುಲೆಯವರ ಚಿಂತೆನಗಳು ಹಾಗೂ ದಲಿತರ ಸ್ವತಃ ಅನುಭವಗಳು ಜಾತಿ ಹಾಗೂ ಭೂಮಾಲಿಕ ಪದ್ಧತಿಯ ಕ್ರೌರ್ಯಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ. ಆದರೆ ಅಂತಾರಾಷ್ಟ್ರೀಯ ಆರ್ಥಿಕ ರಾಜಕಾರಣದ ಭಾಗವಾಗಿರುವ ಜಾಗತೀಕರಣವನ್ನು ಆರ್ಥ ಮಾಡಿಕೊಳ್ಳುವುದಕ್ಕೂ ಅವಕ್ಕೆ ಪ್ರತಿಕ್ರಿಯಿಸುವುದಕ್ಕೂ ಅವು ಸಾಲುವುದಿಲ್ಲ. ಕೆಲವೇ ದಲಿತ ಚಿಂತಕರು ಮಾತ್ರ ಭಾರತದ ಬಂಡವಾಳಶಾಹಿ ವ್ಯವಸ್ಥೆಗೂ ಕೋಮುವಾದಕ್ಕೂ (ಆಂದರೆ ಮೇಲುಜಾತಿಗಳಿಗೂ) ಅಂತರರಾಷ್ಟ್ರೀಯ ಸಾಮ್ರಾಜ್ಯಶಾಹಿಗೂ ಇರುವ ಆಂತರಿಕ ಸಂಬಂಧಗಳನ್ನು ಅರಿಯಬಲ್ಲವರಾಗಿದ್ದಾರೆ. ಆದರೆ ಕೆಲವು ದಲಿತ ಚಿಂತಕರಿಗೆ ಜಾಗತೀಕರಣವು ಬ್ರಿಟಿಷರ ಜತೆ ಬಂದ ವಸಾಹತುಶಾಹಿಯ ರೂಪದಲ್ಲಿ ಕಾಣುತ್ತಿದೆ. ಇದರ ಲಾಭವನ್ನು ನಾವ್ಯಾಕೆ ಪಡೆಯಬಾರದು ಎಂಬ ತರ್ಕವನ್ನು ಅದು ಹುಟ್ಟಿಸಿದೆ. ಮೀಸಲಾತಿಯನ್ನು ಜಾರಿ ಮಾಡಿ ಅಷ್ಟಿಷ್ಟು ನೆರವಾಗುತ್ತಿದ್ದ ಸರಕಾರಗಳೇ ಜಾಗತೀಕರಣ ಪರವಾಗಿ ಕೆಲಸ ಮಾಡುತ್ತಿರುವುದರಿಂದ ದಲಿತರ ಒಲವು ಅತ್ತ ಸರಿದಿದೆ. ಓದಿಯೂ ಕೆಲಸವಿಲ್ಲದ ಎಷ್ಟೋ ತರುಣ ದಲಿತರು ಜಾಗತೀಕರಣದ ಭಾಗವಾಗಿ ಬಂದಿರುವ ಎನ್‌ಜಿಓಗಳಲ್ಲಿ ಮುಜುಗರವಿಲ್ಲದೆ ಕೆಲಸ ಮಾಡುತ್ತಿರುವುದು ಇದಕ್ಕೆ ಸಾಕ್ಷಿ. ಸಾಮಾಜಿಕ ಸಾಂಸ್ಕೃತಿಕ ಸಂವೇದನೆ ಅಧ್ಯಯನ ಹೆಸರಲ್ಲಿ ದಲಿತಲೋಕದ ಅಧ್ಯಯನಗಳು ಕೂಡ ಇದಕ್ಕೆ ಪೂರಕವಾಗಿವೆ. ದೇಶೀವಾದಿ ಪರಿಭಾಷೆಯಲ್ಲಿ ನಡೆಯುತ್ತಿರುವ ಈ ಅಧ್ಯಯನಗಳ ಹಿಂದೆ ಒಂದಿಲ್ಲ ಒಂದು ಬಗೆಯಲ್ಲಿ ವಿದೇಶಿ ಹಣಕಾಸು ಪ್ರತಿಷ್ಠಾನಗಳಿವೆ. ಅವುಗಳ ಹಿಂದೆ ಮುಂದುವರೆದ ದೇಶಗಳ ಕಾಣದ ಕೈಗಳಿವೆ. ಇವನ್ನು ಅರಿಯುವುದು ಮತ್ತು ರಾಜಕೀಯವಾಗಿ ವಿಶ್ಲೇಷಿಸುವುದಕ್ಕಿಂತ ಹೆಚ್ಚಾಗಿ ನಮಗೆ ಇದರಿಂದ ಏನು ಲಾಭ ಎಂಬ ನೀತಿ ಈ ಕೆಲವು ದಲಿತರಲ್ಲಿ ಇದ್ದಂತಿಗೆ.

ಜಾಗತಿಕ ವಿದ್ಯಮಾನಗಳನ್ನು ಹೀಗೆ ದಲಿತ ಸಮುದಾಯದ ಸ್ವಹಿತಾಸಕ್ತಿಯಿಂದ ಮಾತ್ರ ಗ್ರಹಿಸಲು ಹಾಗೂ ಪ್ರತಿಕ್ರಿಯಿಸಲು ಇನ್ನೊಂದು ಕಾರಣವಿರಬಹುದು. ಅದೆಂದರೆ, ದಲಿತ ಸಾಹಿತ್ಯ ಚಿಂತನೆಗಳು ಒಳಗೆ ಮೊದಲಿನಿಂದಲೂ ಇರುವ ಮಾರ್ಕ್ಸ್‌ವಾದದ ಬಗೆಗಿನ ಅಪನಂಬಿಕೆ ಇದಕ್ಕೆ ಕಾರಣ. ಮಾರ್ಕ್ಸ್‌ವಾದದ ಮೇಲೆ ಅಂಬೇಡ್ಕರ್ ಮಾಡಿ ಸೈದ್ಧಾಂತಿಕ ವಿಮರ್ಶೆಯಿರಬಹುದು. ಸಮಕಾಲೀನ ಮಾರ್ಕ್ಸ್‌ವಾದಿ ಪಕ್ಷಗಳ ಸಿದ್ಧಾಂತಗಳೂ ಕಾರಣವಿರಬಹುದು ಅಥವಾ ಕೇವಲ ವರ್ಗ ಹೋರಾಟಗಳಿಂದ ಬಿಡುಗಡೆಯಾದ ದಲಿತರ ಸಾಮಾಜಿಕ ಪರಿಸ್ಥಿತಿ ಇರಬಹುದು. ಅರ್ಥಿಕ ನೆಲೆಯಲ್ಲಿ ದಮನಿತರನ್ನು ಗುರುತಿಸುವ ಮಾರ್ಕ್ಸ್‌ವಾದಕ್ಕೆ ಹಳ್ಳಿಗಳಲ್ಲಿ ಜಾತಿಯ ಕಾರಣಕ್ಕೆ ಅಪಮಾನಿತರಾಗಿರುವ ದಲಿತರ ನೋವುಗಳು ಅರ್ಥವಾಗುವುದಿಲ್ಲ ಎಂಬ ಸಾಮಾನ್ಯ ದೂರು ಈಗಲೂ ಇದೆ. ಆದರೆ ಈ ಅನುಮಾನ ಅಂಬೇಡ್ಕರ್ ಮಾಡಿದಂತೆ ಗಂಭೀರ ತಾತ್ವಿಕ ವಾಗ್ವಾದದ ರೂಪದಲ್ಲಿ ಪ್ರಕಟವಾಗುವುದಕ್ಕಿಂತ ಹೆಚ್ಚಾಗಿ, ಸಾಮಾನ್ಯ ಆರೋಪ ರೂಪದಲ್ಲಿರುವುದೇ ಹೆಚ್ಚು. ಅಂಬೇಡ್ಕರ್ ವಾದ ಮಾರ್ಕ್ಸ್‌ವಾದಗಳು ಹೇಗೆ ಸಮಕಾಲೀನ ಪರಿಸ್ಥಿತಿಯಲ್ಲಿ ಕೂಡಿಕೊಂಡು ಹೊಸ ಪರ್ಯಾಯ ನಿರ್ಮಿಸಬಲ್ಲವು ಎಂಬ ಬಗ್ಗೆ ಕನ್ನಡದಲ್ಲಿ ಒಂದು ಬಲವಾದ ಸೈದ್ಧಾಂತಿಕ ವಾಗ್ವಾದ ನಡೆದಿದ್ದರೆ ಈ ಬಿರುಕುಗಳು ಕಡಿಮೆಯಾಗುತ್ತಿದ್ದವೋ ಏನೋ?

ಈ ಅಪನಂಬಿಕೆಯು ದಲಿತ ಲೇಖಕರು ವಿಶಾಲ ಎಡಪಂಥೀಯ ಸಾಹಿತ್ಯ ಸಂಘಟನೆಗಳ ಒಳಗೆ ಕೆಲಸ ಮಾಡುವುದಕ್ಕೆ ತೊಡಕಾದವು. ದಲಿತ ಸಂಸ್ಕೃತಿ ಸಾಹಿತ್ಯದ ಪ್ರತ್ಯೇಕತೆಯ ದನಿಗಳು ಮೂಡಿದವು. ವಿಶಾಲ ಎಡಪಂಥೀಯ ನೆಲೆಯ ಬಂಡಾಯ ಸಾಹಿತ್ಯ ಸಂಘಟನೆ ನಡುವೆ ಬಿರುಕು ಮೂಡುವುದಕ್ಕೆ ಇದು ಕೂಡ ಒಂದು ಕಾರಣ. ಇದಕ್ಕೆ ತಕ್ಕಂತೆ ಕೆಲವು ದಲಿತ ಲೇಖಕರು ಮಾರ್ಕ್ಸ್‌ವಾದಿಗಳೂ ಲೋಹಿಯಾವಾದಿಗಳೂ ಆದ ಲೇಖಕರ ಜತೆ ಬಹಳ ಕಾಲ ಹೋಗುವುದು ಸಾಧ್ಯವಿಲ್ಲ ಎಂದು ಹೇಳುತ್ತಲೇ ಇದ್ದರು. ಅನೇಕ ದಲಿತರಲ್ಲಿ ಅನೇಕ ಜನ ಮಾರ್ಕ್ಸ್‌ವಾದಿಗಳಿದ್ದರೂ ಈ ಬಿರುಕು ಕಡಿಮೆಯಾಗಲಿಲ್ಲ. ದೇವನೂರರಂತಹ ಲೋಹಿಯಾವಾದಿಗಳು ಕೂಡ ತಾತ್ವಿಕವಾಗಿ ವರ್ಗಕಲ್ಪನೆಯ ಮಾರ್ಕ್ಸ್‌ವಾದದ ಬಗ್ಗೆ ಎನ್ನುವುದಕ್ಕಿಂತ ಭಾರತೀಯ ಕಮ್ಯುನಿಸ್ಟ್ ಮಾದರಿಗಳ ಬಗ್ಗೆ ಸಮ್ಮತಿಯುಳ್ಳವರಾಗಿದ್ದರು. (ಕುಸುಮಬಾಲೆಯಲ್ಲಿ ಕಮ್ಯುನಿಸ್ಟ್ ದಲಿತರ ವ್ಯಂಗ್ಯಚಿತ್ರ ಗಮನಿಸಬೇಕು) ಕರ್ನಾಟಕದಲ್ಲಿ ಮಾರ್ಕ್ಸ್‌ವಾದಿಗಳಾದ ಕೆಲವು ದಲಿತರು ದಲಿತ ಸಂಘರ್ಷ ಸಮಿತಿಯ ಸಮುದಾಯವಾದಿ ರಾಜಕಾರಣವನ್ನು ವಿಮರ್ಶೆ ಮಾಡುತ್ತ ೯೦ರ ದಶಕದ ನಂತರ ಬೇರೆ ಬೇರೆ ತೀವ್ರವಾದಿ ಎಡಪಂಥೀಯ ಸಂಘಟನೆಗಳಲ್ಲಿ ಗುರುತಿಸಿಕೊಂಡರು ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕು. ದಲಿತ ಚಿಂತನೆ ರಾಜಕಾರಣ ಕೇವಲ ದಲಿತರಿಗಾಗಿ ಅದರಲ್ಲೂ ಅದರ ಒಳಗುಂಪುಗಳಿಗಾಗಿ ಘಟಿತವಾಗುತ್ತ ಈ ಬಿರುಕು ಮತ್ತಷ್ಟು ಹೆಚ್ಚಾಯಿತೆ ವಿನಾ ಕಡಿಮೆಯಾಗಲಿಲ್ಲ. ಎಡಪಂಥೀಯ ಲೇಖಕರು ಚಿಂತಕರಾಗಿದ್ದ ದಲಿತ ಲೇಖಕರಿಗೂ ಈ ಬಿರುಕನ್ನು ಬೆಸೆಯಲು ಸಾಧ್ಯವಾಗಲಿಲ್ಲ.

ಅಂಬೇಡ್ಕರ್ ಅವರು ಬೌದ್ಧಧರ್ಮಕ್ಕೆ ಮತಾಂತರವಾಗುವ ಮೂಲಕ ಪ್ರತಿಭಟನೆಯ ಒಂದು ಹಾದಿಯನ್ನು ಹಾಕಿದರು. ಅದು ಚಾರಿತ್ರಿಕವಾಗಿ ಅನಿವಾಂiiವೂ ಮಹತ್ವದ್ದೂ ಆಗಿದ್ದ ಪ್ರತಿಭಟನೆಯ ಮಾದರಿ. ನಂತರ ದಲಿತರು ಸವರ್ಣೀಯರಿಂದ ಹಲ್ಲೆಗಳಾದ ಹೊತ್ತಿನಲ್ಲೆಲ್ಲ ತಾವು ಬೌದ್ಧಧರ್ಮಕ್ಕೆ ಅಥವಾ ಇಸ್ಲಾಮಿಗೆ ಹೋಗುವ ಧಮಕಿ ಹಾಕತೊಡಗಿದರು. ದಲಿತರಲ್ಲಿ ಕೆಲವು ಜನರು ಜಾತಿಪದ್ಧತಿಯ ಹಿಂದೂ ಧರ್ಮದಿಂದ ಪಾರಾಗಲು ಬೌದ್ಧಧರ್ಮಕ್ಕೆ ಹೋಗಲೂ ಶುರುಮಾಡಿದರು. ಆದರೆ ಅಲ್ಲಿಗೆ ಹೋದಮೇಲೆ ತಮ್ಮ ದಲಿತ ಸಂಸ್ಕೃತಿಯನ್ನು ಮಾರಿಹಬ್ಬ, ಮಾಂಸದೂಟ, ಜಾತ್ರೆ, ಆಚರಣೆಗಳು ಇತ್ಯಾದಿಗಳನ್ನು ಉಳಿಸಿಕೊಳ್ಳಲು ಸಾಧ್ಯವೆ? ಬೌದ್ಧರಾದ ಬಳಿಕ ಮತಾಂತರವಾಗದ ದಲಿತರ ಜತೆ ತಮ್ಮ ಸಂಬಂಧ ಹೇಗಿರುತ್ತದೆ? ಈ ಪ್ರಶ್ನೆಗಳಿಗೆ ಖಚಿತ ಉತ್ತರವಿನ್ನೂ ಸಿಕ್ಕಿಲ್ಲ. ಬೌದ್ಧ ಧರ್ಮವು ಸಾಂಸ್ಕೃತಿಕವಾಗಿ ದಲಿತೇರವಾಗಿತ್ತು ಮಾತ್ರವಲ್ಲ, ಅದು ರಾಜಕೀಯವಾಗಿ ದಲಿತರ ಸಮಸ್ಯೆಗಳ ಹೋರಾಟವನ್ನು ಮುಂದುವರೆಸಲು ಉತ್ತೇಜಿಸಲಿಲ್ಲ. ಈ ನಡುವೆ ದಲಿತ ಸಂಸ್ಕೃತಿಯ ದೈವಗಳು, ಆಚರಣೆಗಳು, ಊಟ, ಉಡುಗೆ ಇವುಗಳ ಬಗ್ಗೆ ಕೀಳರಿಮೆಯಿಲ್ಲದ ಒಂದು ಸ್ವಾಭಿಮಾನ ನಿಲುವನ್ನು ತಳೆಯುವ ಸಾಂಸ್ಕೃತಿಕ ಪ್ರಜ್ಞೆಯು ದಲಿತರಲ್ಲಿ ಬೆಳೆಯಿತು. ಇದು ಎಲ್ಲ ಬಗೆಯ ಮತಾಂತರಗಳ ಮೂಲಕ ಬಿಡುಗಡೆಯಾಗುವ ಹಾದಿಯನ್ನು ನಿರಾಕರಿಸುವ ಚಿಂತನೆಯಾಗಿತ್ತು. ಹೀಗಾಗಿ ಬೌದ್ಧಧರ್ಮದ ಜತೆ ಕಲಿತ ಮಧ್ಯಮವರ್ಗದ ಬುದ್ಧಿಜೀವಿ ದಲಿತರು ತೋರಿದ ಭಾವನಾತ್ಮಕ ತಾತ್ವಿಕ ಒಲವನ್ನು ಇಡಿಯಾಗಿ ದಲಿತ ಸಮುದಾಯ ತೋರಲಿಲ್ಲ. ಈ ಬೆಳವಣಿಗೆಗಳು ಕೂಡ ದಲಿತರ ಮುಂಚಲನೆಯ ಹಾದಿಗಳನ್ನು ರೂಪಿಸಲಿಲ್ಲ. ದಲಿತರು ಎಂದರೆ ಯಾರು ಎಂಬ ಪ್ರಶ್ನೆಗೆ ೭೦ರ ದಶಕದಲ್ಲಿ ಬಹುಚರ್ಚಿತವಾಗಿತ್ತು. ಏನೆಲ್ಲ ಚರ್ಚೆ ನಡೆದು, ಕೊನೆಗೆ ಅಸ್ಪೃಶ್ಯತೆಯನ್ನು ಅನುಭವಿಸಿದ ಜಾತಿಗಳಿಂದ ಬಂದವರು ದಲಿತರು ಎಂಬ ಸಾಮಾಜಿಕ ನೆಲೆಯ ವ್ಯಾಖ್ಯೆ ಮಾನ್ಯವಾಯಿತು. ಸಾಹಿತ್ಯಿಕ ಕ್ಷೇತ್ರದಲ್ಲಿ ‘ದಲಿತರು’ ಎಂಬ ಶಬ್ದದಲ್ಲಿ ವಾಸ್ತವದಲ್ಲಿ ಸಾಮಾಜಿಕವಾಗಿ ಯಾವ ಯಾವ ಜಾತಿಗಳವರು ಬರುತ್ತಾರೆ ಎಂಬ ಬಗ್ಗೆ ಯಾರೂ ಪ್ರಶ್ನೆ ಮಾಡದಷ್ಟು ಈ ಪದ ಒಂದು ಸಾಂಸ್ಕೃತಿಕ ರಾಜಕೀಯ ಪರಿಭಾಷೆಯಾಯಿತು. ಆದರೆ ೯೦ರ ದಶಕದಲ್ಲಿ ಎಡಗೈ ಬಲಗೈ ಒಡಕು ಕಾಣಿಸಿಕೊಂಡಿತು. ದಲಿತರು ಎಂಬ ಸಂಯುಕ್ತ ಪರಿಕಲ್ಪನೆಯ ಮೀಸಲಾತಿ ಲಾಭವನ್ನು ಬಲಗೈ ಹೊಲೆಯರು ಹೆಚ್ಚು ಪಡೆದಿದ್ದಾರೆ. ತಮಗೆ ಅನ್ಯಾಯವಾಗಿದೆ. ತಮಗೆ ಬೇರೆ ಒಳಮೀಸಲಾತಿಬೇಕೆಂದು ಎಡಗೈಯವರು (ಮಾದಿಗರು) ಕೇಳಿದಾಗಲೇ ದಲಿತರಲ್ಲಿ ಈ ಎರಡು ಸಾಮಾಜಿಕ ಭೇದಗಳಿವೆ ಎಂಬು ಬಹಳ ಜನರಿಗೆ ಗೊತ್ತಾಗಿದ್ದು. ಎಡಗೈನವರ ವಾದದಲ್ಲಿ ಸತ್ಯವಿತ್ತು; ಅರ್ಥವಿತ್ತು. ಆದರೆ ಪರಿಣಾಮದಲ್ಲಿ ಈ ವಾದವು ದಲಿತ ಎಂಬ ಸಂಯುಕ್ತ ಪರಿಭಾಷೆಯನ್ನು ಒಡೆದುಬಿಟ್ಟಿತು. ಇದಕ್ಕೆ ಕಳೆದ ೧೦ ವರುಷಗಳಿಂದ ಎಡಗೈ ಬಲಗೈ ಗುಂಪುಗಳ ನಡುವೆ ನಡೆದ ಜಗಳಗಳು ಅಂಬೇಡ್ಕರ್ ಬಲಗೈಯವರು ಎಂಬ ಭೇದಗಳು ಹೆಚ್ಚು ಹೆಚ್ಚು ಹೊರಬಂದವು. ಇದು ದಲಿತರು ಒಟ್ಟಾಗಿ ಸಮಾಜದ ವಿದ್ಯಮಾನಗಳನ್ನು ತಮ್ಮ ಎದುರಾಳಿಗಳನ್ನು ಎದುರಿಸಲು ಬೇಕಾದ ಏಕತೆಯನ್ನು ತಾತ್ವಿಕ ಶೋಧವನ್ನು ರಾಜಕೀಯ ಕಾರ್ಯಕ್ರಮ ಹಾಕಿಕೊಳ್ಳುವ ಸಾಧ್ಯತೆಗಳನ್ನು ಕಡಿಮೆಮಾಡಿತು.

ದಲಿತರು ಮದ್ಯಮವರ್ಗಕ್ಕೆ, ಸರಕಾರಿ ನೌಕರಿಗೆ ಸೇರಿದ ಬಳಿಕ ಇನ್ನೂ ಹಿಂದುಳಿತ ಅವಸ್ಥೆಯಲ್ಲಿರುವ ಸಮುದಾಯದ ಆಶಯಗಳನ್ನು ಪ್ರತಿನಿಧಿಸದೆ, ತಮ್ಮ ವರ್ಗಹಿತಾಸಕ್ತಿಗಳನ್ನು ಮಾತ್ರ ರಕ್ಷಿಸಿಕೊಳ್ಳುವತ್ತ ಚಲಿಸಿದರು. ಇದು ತಾರ್ಕಿಕವಾಗಿ ದಲಿತ ಸಂಘರ್ಷ ಸಮಿತಿಯು ಶಕ್ತಿ ರಾಜಕಾರಣಕ್ಕೆ ಧುಮುಕಿ ಸೋತು ಛಿದ್ರತೆಯಲ್ಲಿ ಕೊನೆಗೊಂಡಿತು. ಅನೇಕ ಚಿಂತಕರು ಲೇಖಕರು ಅನೈತಿಕರಾದರು. ದಲಿತರ ಮೇಲೆ ಹಲ್ಲೆಗಳಾದಾಗ (ಬೆಲ್ಚಿ, ಪಿಪ್ರಾ ಬೆಂಡಿಗೇರಿ) ಹಿಂದೆ ನಡೆಯುತ್ತಿದ್ ಪ್ರತಿರೋಧಗಳು ಕಡಿಮೆಯಾದವು. ಈಚೆಗೆ ಹರಿಯಾಣದಲ್ಲಿ ಜಜ್ಝರ್ ಪ್ರಕರಣಕ್ಕೆ ಬಂದ ಕ್ಷೀಣ ಪ್ರತಿಕ್ರಿಯೆಯನ್ನು ಗಮನಿಸಬೇಕು. ಇದೇ ಹೊತ್ತಿನಲ್ಲಿ ದಲಿತರ ಮೇಲೆ ಮೊದಲಿನಿಂದಲೂ ಬಿಡುಗಡೆಯಾದ ಜೀತದಾಳಿನ ಮೇಲೆ ಧಣಿ ಬುಸುಗುಡುವಂತೆ ಬುಸುಗುಡುತ್ತಿದ್ದ ಸವರ್ಣೀಯ ಸಮಾಜ ದಲಿತರ ಮೇಲೆ ಮತ್ತೆ ಎರಗತೊಡಗಿತು. ದಲಿತರು ಅಸ್ಪೃಶ್ಯತೆಯ ಕೇಸನ್ನು ದುರುಪಯೋಗ ಮಾಡಿಕೊಂಡರು ಎಂದು ಪ್ರತಿಭಟನೆ ಮಾಡುವ ರ‍್ಯಾಲಿಗಳೂ ನಡೆಯತೊಡಗಿದವು. ಮೀಸಲಾತಿ ವಿರೋಧವಾದ ರ‍್ಯಾಲಿಗಳು ನಡೆಯಲು ಶುರುವಾದವು. ಇವು ಕಾನೂನು ಪ್ರಕಾರ ಹಾಗೂ ಸಾಮಾಜಿಕ ಬದಲಾವಣೆಗಳ ಕಾರಣದಿಂದ ಜಾತಿ ಆಸ್ತಿಗಳ ಯಜಮಾನಿಕೆಯನ್ನು ಈ ಸವರ್ಣೀಯರು ಮರಳಿ ಪಡೆಯುವ ಪುನರುತ್ಥಾನದ ಘಟ್ಟವನ್ನೂ ಸೂಚಿಸುತ್ತವೆ. ದಲಿತರ ಸಾಮಾಜಿಕ ನ್ಯಾಯದ ಬೇಡಿಕೆಯ ಬಗ್ಗೆ ಒಂದು ಬಗೆಯ ಸಾರ್ವಜನಿಕ ಸಹಾನುಭೂತಿ ಇದ್ದವರೂ ನೈತಿಕ ಬೆಂಬಲವನ್ನು ಒದಗಿಸಿದ್ದವರು ಕೂಡ ಈ ಹೊತ್ತಲ್ಲಿ ದಲಿತರ ಬಗ್ಗೆ ಕ್ರಿಟಿಕಲ್ ಆದರು. ಈ ಎಲ್ಲಚಾರಿತ್ರಿಕ ವಿದ್ಯಮಾನಗಳು ದಲಿತ ಸಾಹಿತ್ಯದ ಸ್ವರೂಪವನ್ನು ನಿರ್ಧರಿಸುತ್ತ ಬಂದವು. ಈ ವಿದ್ಯಮಾನಗಳು ದಲಿತ ಸಾಹಿತ್ಯದಲ್ಲಿ ನೈತಿಕ ಬಲವನ್ನು ಕಳೆಯಿತು ಎಂದು ಮಾತ್ರವಲ್ಲ. ಅದು ನೈತಿಕ ಬಲವನ್ನು ಮತ್ತೆ ಪಡೆಯಲು ಹೊಸಯತ್ನವನ್ನು ಮಾಡಲು ಪ್ರೇರೇಪಿಸಿತು. ದಲಿತ ಸಾಹಿತ್ಯ ತಾತ್ವಿಕತೆಯನ್ನು ಈ ಮೂರು ದಶಕಗಳ ಏರುಪೇರುಗಳ ನಡುವೆ ಹುಡುಕಬೇಕಿದೆ.

ದಲಿತ ಸಾಹಿತ್ಯದ ತಾತ್ವಿಕತೆ
ಮೇಲಿನ ಭಿತ್ತಿಯ ಹಿನ್ನೆಲೆಯಲ್ಲಿ ಚಿತ್ರಣಗೊಳ್ಳುವ ದಲಿತ ಸಾಹಿತ್ಯದ ತಾತ್ವಿಕತೆ ಎಂಬುದು ಸರಳವಾಗಿಲ್ಲ. ಅದು ಏಕರೂಪಿ ಕೂಡ ಅಲ್ಲ. ದಲಿತ ಚಳುವಳಿ ಸಂಘಟನೆ ರಾಜಕಾರಣ ಹಾಗೂ ದಲಿತ ಸಾಹಿತ್ಯಗಳ ನಡುವಣ ಈ ಸಾಮ್ಯ ಹಾಗೂ ವೈರುಧ್ಯಗಳ ಸಂಬಂಧವು ಬಹಳ ಮುಖ್ಯ. ಇದರಿಂದಲೇ ದಲಿತ ಸಾಹಿತ್ಯದ ಬಗ್ಗೆ ಏಕರೂಪದ ಪರಿಕಲ್ಪನೆಯನ್ನು ಕೊಡಲು ಆಗುವುದಿಲ್ಲ. ಇದರಿಂದಲೇ ದಲಿತ ಸಾಹಿತ್ಯದ ಬಗ್ಗೆ ಏಕರೂಪದ ಪರಿಕಲ್ಪನೆಯನ್ನು ಕೊಡಲು ಆಗುವುದಿಲ್ಲ. ವಿಭಿನ್ನ ಲೇಖಕರು ವಿಭಿನ್ನ ದೃಷ್ಟಿಕೋನಗಳಲ್ಲಿ ಬರೆಯುತ್ತಾರೆ. ಒಬ್ಬರೇ ಲೇಖಕರು ತಮ್ಮ ಒಂದೊಂದು ಕೃತಿಯಲ್ಲಿಯೂ ಭಿನ್ನವಾಗಿ ಪರಿವರ್ತನೆಯನ್ನು ವಿಕಾಸವನ್ನು ತೋರಿದ್ದಾರೆ. ಗ್ರಾಮದೇವತೆಗಳನ್ನು ಒಂದು ಬಗೆಯ ತಮಾಷೆಯಿಂದ ವೈಚಾರಿಕವಾಗಿ ನೋಡುತ್ತ ನಿರಾಕರಿಸುವ ಪುರಾಮಭಂಜಕ ದಲಿತ ಲೇಖಕರೂ ಇದ್ದಾರೆ; ಜನಸಮುದಾಯಗಳ ಜಾನಪದ ಸಂಸ್ಕೃತಿಯನ್ನು ಹೊಸಚೈತನ್ಯ ನೀಡುವ ಲೋಕವೆಂದು ಕಳಕಳಿಯಿಂದ ನೋಡುವ ಲೇಖಕರೂ ಇದ್ದಾರೆ. ಪುರಾಣ ಐತಿಹ್ಯಗಲನ್ನು ಸಮುದಾಯದ ಸೃಜನಶೀಲತೆ ಕಟ್ಟಿದ ರೂಪಕಗಳೆಂದು ಭಾವಿಸಿ, ಅವುಗಳನ್ನು ಅತ್ಯಂತ ಜವಾಬ್ದಾರಿ ಸೂಕ್ಷ್ಮತೆಯಿಂದ ಅನುಸಂಧಾನ ಮಾಡುವ ದಲಿತ ಲೇಖಕರುದಾರೆ. ಮಾರ್ಕ್ಸ್‌ವಾದವನ್ನು ಕಟುವಾದ ತಿರಸ್ಕಾರದಿಂದ ನೋಡುವ ದಲಿತರೂ, ಅದು ಇನ್ನೂ ನಮಗೆ ಸಹಾಯಕ್ಕೆ ಬಂದಿಲ್ಲ ಎಂಬ ವಿಷಾದವುಳ್ಳ ದಲಿತರು ಅದೊಂದೇ ಮಾರ್ಗ, ಅಂಬೇಡ್ಕರ್ ಅಲ್ಲ ಎನ್ನುವ ದಲಿತರೂ ಇದ್ದಾರೆ.

ದಲಿತ ಲೇಖಕರನ್ನು ಸಿದ್ಧಲಿಂಗಯ್ಯ ಮಾರ್ಕ್ಸ್‌ವಾದಿ, ದೇವನೂರು ಲೋಹಿಯಾವಾದಿ, ಮನಜ ಮಾಲಗತ್ತಿಯವರು ಅಂಬೇಡ್ಕರ್ ವಾದ ಎಂದು ವಿಂಗಡಿಸಬಹುದು. ಆದರೆ ಈ ವಿಂಗಡಣೆ ಅವರ ಸಾಹಿತ್ಯದ ವಿಶ್ಲೇಷಣೆಯಲ್ಲಿ ಉಪಯುಕ್ತವಲ್ಲ. ಈ ಹಿನ್ನೆಲೆಯಲ್ಲಿ ದಲಿತ ಚಳುವಳಿ ಸಾಹಿತ್ಯ, ಸಂಘಟನೆಗಳ ಪ್ರಮುಖ ತಾತ್ವಿಕ ಆಯಾಮಗಳನ್ನ ಅದು ಹಾದುಬಂದ ಚಾರಿತ್ರಿಕ ಘಟ್ಟಗಳ ಅವಲೋಕನದಿಂದ ಅರಿಯಬಹುದು. ಆ ಘಟ್ಟಗಳನ್ನು ಅರಿವಿನ ಆಸ್ಪೋಟನೆಯ ಘಟ್ಟ ಅಥವಾ ಮೊಳಕೆ ಘಟ್ಟ; ಕಟ್ಟುವಿಕೆ ಘಟ್ಟ; ಶೈಥಿಲ್ಯದ ಘಟ್ಟ; ಆತ್ಮ ವಿಮರ್ಶೆ, ಹೊಸ ಹುಡುಕಾಟ ಹಾಗೂ ಮರುಹುಟ್ಟಿನ ಘಟ್ಟ ಎಂದು ವಿಂಗಡಿಸಿ ನೋಡಬಹುದು. ಇವನ್ನು ಕ್ರಮವಾಗಿ ಚರಿತ್ರೆಯ ವಿಮರ್ಶಿಸುವ, ವರ್ತಮಾನದ ವಾಸ್ತವ ಅರ್ಥಮಾಡಿಕೊಳ್ಳುವ ಈ ಸ್ವವಿಮರ್ಶೆ ಹಾಗೂ ಅರಿವಿನ ಮೂಲಕ ಭವಿಷ್ಯದ ಸಮಾಜದ ಕಟ್ಟಿಕೊಳ್ಳುವಿಕೆಯ ಕ್ರಿಯೆಗಳ ಸಂಕೇತವಾಗಿಯೂ ಭಾವಿಸಬಹುದು. ಈ ಘಟ್ಟಗಳು ಒಂದರ ನಂತರ ಒಂದು ಕ್ರಮಬದ್ಧವಾಗಿ ಬಂದವೇನಲ್ಲ. ಒಂದು ಘಟ್ಟ ಇರುವಾಗಲೆ ಇನ್ನೊಂದು ಘಟ್ಟದ ಲಕ್ಷಣಗಳು ಅದರ ಹೊಟ್ಟೆ ಒಳಗಿಂದ ಮೂಡುತ್ತಿರುವ ರಹೀತಿಯಲ್ಲಿ ಇವು ಬಂದವು; ಮಾತ್ರವಲ್ಲ. ಈಗ ಈ ಮೂರು ಘಟ್ಟಗಳು ಏಕಕಾಲದಲ್ಲಿ ಇರುವ ಚಿತ್ರವೂ ಇದೆ. ಶೈಥಿಲ್ಯದ ಘಟ್ಟದಲ್ಲಿ ಕಟ್ಟಿಕೊಳ್ಳುವ ಘಟ್ಟ ಇದೆ. ಯಾಕೆಂದರೆ ಹೊಸಹೊಸ ತಲೆಮಾರಿನ ಲೇಖಕರು ಬರವಣಿಗೆಗೆ ಆಗಮಿಸುತ್ತಿದ್ದಾರೆ. ಅವರು ಮೊದಲ ಘಟ್ಟದಿಂದಲೇ ಅಂದರೆ ಅರಿವಿನ ಆಸ್ಫೋಟದ ಘಟ್ಟದಿಂದಲೇ ಶುರುಮಾಡುವುದುಂಟು.

ಮೊಳಕೆಯ ಘಟ್ಟ
ಈ ಮೊಳಕೆಯ ಘಟ್ಟ ‘ಅರಿವಿನ ಆಸ್ಫೋಟ’ದ ಘಟ್ಟ ಕೂಡ. ಅರಿವು ತರುವ ಅಪಮಾನದ ಭಾವವು ತಮ್ಮನ್ನು ಅಮಾನವೀಯವಾಗಿ ಗಮನಿಸಿರುವ ವ್ಯವಸ್ಥೆಯನ್ನು ಕಡೆಹುವ ಉಗ್ರಕೋಪಕ್ಕೆ ಕಾರಣವಾಗುತ್ತದೆ. ಸಿದ್ಧಲಿಂಗಯ್ಯನವರ ಹೊಲೆಮಾದಿಗರ ಹಾಡು ಈ ಘಟ್ಟದ ಸಂಕೇತ. ಇಲ್ಲಿ ಮುಖ್ಯವಾದುದು ಆಸ್ಫೋಟ. ಎದುರಾಳಿಯನ್ನು ಧ್ವಂಸಮಾಡುವ ಸ್ವಭಾವವೇ ಮುಖ್ಯವಾಗಿ ಕೆಲಸ ಮಾಡುವ ಇಲ್ಲಿ ಕಟ್ಟುವ ಚಿಂತನೆ ಕಡಿಮೆ. ಭವಿಷ್ಯದಲ್ಲಿ ಪರ್ಯಾಯ ಸಮಾಜ ಕಟ್ಟಿಕೊಳ್ಳುವ ಹುಡುಕಾಟ ಕಡಿಮೆ. ಚರಿತ್ರೆಯ ಮೇಲೆ ವರ್ತಮಾನದ ಮೇಲೆ ರೇಗುವುದು ಪ್ರತಿಭಟಿಸುವುದು ಮುಖ್ಯ. ನೋವಿನ ಅಭಿವ್ಯಕ್ತಿಗಾಗಿ ಪ್ರಕಾರ ಭಾಷೆ ಮಾರ್ಗಗಳನ್ನು ದುಡುಕಿ ಹುಡುಕುವ ರೀತಿ ಇಲ್ಲಿನದು. ಮಾಲಗತ್ತಿಯವರ ‘ಗೌರ್ಮೆಂಟ್ ಬ್ರಾಹ್ಮಣ’ ಇಂತಹ ಅಭಿವ್ಯಕ್ತಿ. ಪುರಾಣಭಂಜಕ ವೈಚಾರಿಕತೆ ತೀವ್ರವಾಗಿ ಕೆಲಸ ಮಾಡುವ ಮನಸ್ಥಿತಿಯ ಪ್ರತಿಕ್ರಿಯೆಗಳನ್ನು ಇಲ್ಲಿ ಕಾಣಬಹುದು. ವೈಚಾರಿಕತೆಯು ಲೋಕವನ್ನು ಅರಿಯಲು ಅಂತಿಮವಾಗಿ ಅಸ್ತ್ರವಾಗಿ ಬಳಕೆಯಾಗ್‌ತದೆ ಇಲ್ಲಿ. ಸಿದ್ಧಲಿಂಗಯ್ಯನವರ ‘ಅವತಾರಗಳು’ ಕೃತಿಯ ವಿಡಂಬನೆ ತಮಾಷೆಗಲು ಇಂತಹವು. ರಾಜಮಾರ್ಗಧ ಚರಿತ್ರೆಯು ಶ್ರೇಷ್ಠ ಎಂದು ನಂಬಿರುವ ಸಂಕೇತಗಳನ್ನು ಒಳಪಡಿಸುವ ದಿಟ್ಟತನ ಇಲ್ಲಿ ಮುಖ್ಯ. ಬಿ. ಕೃಷ್ಣಪ್ಪ ಹಾಗೂ ದೇವಯ್ಯ ಹರವೆಯವರು ಕುವೆಂಪು ಬಗ್ಗೆ ಬರೆದ ಲೇಖನಗಳನ್ನು ಗಾಂಧಿಯವರ ಬಗ್ಗೆ ವಚನಕಾರರ ಬಗ್ಗೆ ಮನಜ ಬರೆದ ಲೇಖನಗಳನ್ನು ಇಲ್ಲಿ ನೆನೆಯಬೇಕು. ಅರಿವಿನ ಆಸ್ಫೋಟದ ಈ ಹಂತದಲ್ಲಿ ಕೆಲವೊಮ್ಮೆ ಅಕ್ಷರ ತೋರಿಸಿದ ಹೊಸ ಹೊಸ ದರ್ಶನಗಳ ವಿಸ್ಮಯವೂ ಇರುತ್ತದೆ. ಗೋವಿಂದಯ್ಯನವರ ಆ ಆ ಮತ್ತು ಪದ್ಯ ಇಂತಹದು. ಇಡೀ ಪದ್ಯವು ಕಪ್ಪು ಹಲಗೆಯ ಮೇಲೆ ಬಿಳಿಯ ಅಕ್ಷರಗಳು ಬೆಳಕಿನಂತೆ ಮೂಡಿದಾಗ ಉಂಟಾದ ವಿಸ್ಮಯ ನೋವು ಸಂತಸಗಳು ಮೊದಲ ಅನುಭವಗಳನ್ನು ಅಲ್ಲಿ ಕಾಣಬಹುದು.

ಬೆಳೆ ಕಟ್ಟುವ ಘಟ್ಟ
ಪ್ರತಿರೋಧದ ಘಟ್ಟವು ಮುಗಿಯಲಿಲ್ಲ. ಆದರೆ ಪ್ರತಿರೋಧದ ಜನತೆಯಲ್ಲಿಯೇ ಕಟ್ಟಿಕೊಳ್ಳುವಿಕೆಯ ಕೆಲಸ ಕೂಡ ಆಗಬೇಕಿತ್ತು. ಕಟ್ಟಿಕೊಳ್ಳುವಿಕೆ ಎಂದರೆ ಸಂಘಟನೆಗೆ ಸಂಗಾತಿಗಳನ್ನು ಸಮಾನ ಮನಸ್ಕರನ್ನು ಕಟ್ಟಿಕೊಳ್ಳುವುದು. ಸಮುದಾಯದ ರಂಗಚಟುವಟಿಕೆಗಳಲ್ಲಿ ಬಂಡಾಯ ಸಂಘಟನೆಗಳಲ್ಲಿ ದಲಿತರು ಸೇರಿದರು. ಅಥವಾ ದಲಿತರ ಜತೆ ಎಡಪಂಥೀಯರು ಸೇರಿದರು. ಕನಸಿನ ಸಮಾಜದ ಕಲ್ಪನೆಯನ್ನು ಕಟ್ಟಿಕೊಳ್ಳುವ, ದಲಿತ ಸಂಸ್ಕೃತಿಯಲ್ಲಿರುವ ಚೈತನ್ಯಶೀಲ ಸಂಗತಿಗಳನ್ನು ಕಟ್ಟಿಕೊಳ್ಳುವ ಈ ಘಟ್ಟವನ್ನು ಸಮರ್ಥವಾಗಿ ಸಂಕೇತಿಸುವ ಸಂಗತಿ ಎಂದರೆ ‘ಒಡಲಾಳ’ ದಲ್ಲಿ ಪುಟಗೌರಿಯು ನವಿಲಿನ ಚಿತ್ರ ಬರೆಯುವುದು. ಸಾಕವ್ವನು ತನ್ನ ಮೊಮ್ಮಗ ಶಿವು ರಾಜನಾಗುವ ಕನಸು ಕಾಣುವುದು. ಇಲ್ಲಿ ಇಕ್ರಲಾ ವದೀರ‍್ಲಾ ಎಂಬ ಕೋಪವುಳ್ಳ ‘ಒಂದು ಪದ’ದ ಕವನದ ಬಿರುಸು, ‘ನನ್ನ ಜನರು’ ಕವನದ ವೇದನೆಗಳು ಹಿಂಜರಿದು, ಅದರ ಜಾಗದಲ್ಲಿ ಅಥವಾ ಅದರ ಜನತೆಯಲ್ಲಿ ದಲಿತರ ರಾಜ್ಯದ ದಲಿತರು ಸುಖವಾಗಿರುವ ಅಪಮಾನಿತರಾಗುವ ಆದರ್ಶ ಸಮಾಜದ ಕನಸುಗಳನ್ನು ಕಾಣುವುದು ಶುರುವಾಗುತ್ತದೆ ‘ಸಾವಿರಾರು ನದಿಗಳು’ ಸಂಕಲನದ ಕವನಗಳು ಇಂತಹವು. ಮೊಗಳ್ಳಿ ಗಣೇಶ ಅವರ ‘ನನ್ನಜ್ಜನಿಗೊಂದು ಆಸೆಯಿತ್ತು’ ಕತೆಯನ್ನು ಇಲ್ಲಿ ನೆನೆಯಬಹುದು. ಕುಸುಮಾಬಾಲೆಯ ಚೆನ್ನನ ಅಪ್ಪ ಅಮ್ಮ ಕಾಣುವ ಕನಸುಗಳ ಚಿತ್ರಗಳನ್ನು ನೆನೆಯಬಹುದು.
ಶೈಥಿಲ್ಯ ಮತ್ತು ಅರಾಜಕತೆಯ ಘಟ್ಟ
ಆದರೆ ಬಹಳ ಬಿರುಸಿನಿಂದ, ಕಟ್ಟುವ ಉಮೇದಿನಿಂದ ಶುರುವಾದ ದಲಿತ ಚಳುವಳಿ ಮತ್ತು ಸಾಹಿತ್ಯ ಸೃಷ್ಟಿಯ ಒಂದು ಹಂತಕ್ಕೆ ಬಂದ ಮೇಲೆ ಅದರಲ್ಲಿ ಛಿದ್ರತೆಯ ಬಿರುಕುಗಳು ಕಾಣಿಸಿಕೊಂಡವು. ಇದಕ್ಕೆ ಕಾರಣ ದಲಿತರು ಮೊದಲ ಹಂತದಲ್ಲಿ ಆಗ ತಾನೆ ದುಡಿಯುವ ವರ್ಗದಿಂದ ಗ್ರಾಮಗಳಿಂದ ಬಂದವರಾಗಿದ್ದು. ಅವರ ಹಾಗೂ ಅವರು ಸಾಕಿಬೆಳೆಸಿದ ಗ್ರಾಮೀಣ ದಲಿತರ ನಡುವಣ ಸಂಬಂಧಗಳು ಕಡಿಯದ ರೀತಿಯಲ್ಲಿದ್ದವು. ಇವುಗಳ ನಡುವಣ ಸಂಬಂಧಗಳನ್ನು ಚಳುವಳಿಗಳು ಕೂಡ ಬೆಸೆದಿಟ್ಟಿದ್ದವು. ಆದರೆ ಯಾವಾಗ ದಲಿತರು ಮಧ್ಯಮವರ್ಗಕ್ಕೆ ಸೇರಿದ ಅನುಕೂಲಸ್ಥರಾದ ನಗರವಾಸಿಗಳಾದ ಆಧುನಿಕ ಶಿಕ್ಷಣ ಪಡೆದವರಾದರೋ, ಅವರಲ್ಲಿ ವೈಯಕ್ತಿಕವಾಗಿ ಸ್ವಾಭಿಮಾನ ಮುಂದುವರೆದ ಪ್ರಜ್ಞೆಗಳು ಜೀವಂತವಿದ್ದವು. ಆದರೆ ಹಳ್ಳಿಗಾಡಿನಲ್ಲಿ ಹಾಗೆಯೇ ಉಳಿದ ದಲಿತ ಸಮುದಾಯದ ಜತೆಗಿನ ಸಂಬಂಧ ಶಿಥಿಲವಾಯಿತು. ಇದಕ್ಕೆ ಚಳುವಳಿಗಳು ಕಡಿಮೆಯಾಗಿದ್ದು ಅಥವಾ ಅವು ಹೋರಾಟದ ಬದಲಾಗಿ ಈಗಿರುವ ಡೆಮಾಕ್ರಟಿಕ್ ವ್ಯವಸ್ಥೆಯಲ್ಲೂ ದಲಿತರಿಗೆ ಅನುಕೂಲಮಾಡುವ ಮಾದರಿಯನ್ನು ಒಪ್ಪಿದ್ದು ಕೂಡ ಕಾರಣವಿರಬಹುದು. ದಲಿತರಲ್ಲಿ ಹಳ್ಳಿಗಾಡಿನ ಸಮುದಾಯದ ಅನುಭವವಿಲ್ಲದ ತಲೆಮಾರು ಹುಟ್ಟಿತು. ಈಗಾಗಲೇ ಮುಂದುವರೆದ ಮಧ್ಯಮವರ್ಗದ ದಲಿತರಲ್ಲಿ ಸಮುದಾಯ ಪ್ರಜ್ಞೆಗೆ ಬದಲಾಗಿ ವೈಯಕ್ತಿಕ ಮಹತ್ವಾಕಾಂಕ್ಷೆಗಳು ಮೊಳೆತವು. ಸಮುದಾಯ ಪ್ರಾತಿನಿಧ್ಯದಲ್ಲಿ ತನಗೆ ಪಾಲುಬೇಕೆಂಬ ಸಿದ್ಧಾಂತಗಳು ಹುಟ್ಟಿದವು. ದಲಿತರ ಈ ಪರಿವರ್ತನೆಯು ತನ್ನ ಸ್ವರೂಪದಲ್ಲಿ ಅವಕಾಶವಾದಿಯೂ ವ್ಯಕ್ತಿವಾದಿಯೂ ಆಗಿತ್ತು. ಇದೇ ಹೊತ್ತಲ್ಲಿ ಆಳುವ ವ್ಯವಸ್ಥೆಗಳು ದಲಿತರನ್ನು ತಮ್ಮೊಳಗೆ ಅಳವಡಿಸಿಕೊಳ್ಳುವ ಕೆಲಸ ಶುರುಮಾಡಿದವು. ೮೦-೯೦ರ ದಶಕದ ಕರ್ನಾಟಕದ ಜನತಾಪಕ್ಷದ ಬುದ್ಧಿಜೀವಿಗಳಿಗೆ ಪ್ರಿಯವಾದ ರಾಜಕಾರಣವಾಯಿತು. ಲೇಖಕರು ಸರಕಾರಕ್ಕೆ ಹತ್ತಿರವಾದರು. ಆಗ ಜನತಾಪಕ್ಷಕ್ಕೆ ದಲಿತರ ಸೇರಾಟ ಶುರುವಾಯಿತು. ಕನ್ನಡ ಇಬ್ಬರು ದಲಿತ ಲೇಖಕರು ವಿಧಾನ ಪರಿಷತ್ತಿಗೆ ನಾಮಕರಣವಾದ ಬಳಿಕ, ತಮ್ಮನ್ನು ನೇಮಿಸಿದ ಮುಖ್ಯಮಂತ್ರಿಗಳಿಗೆ ತಮ್ಮ ಕೃತಿಗಳನ್ನು ಅರ್ಪಣೆ ಮಾಡಿದ್ದು ಸಾಂಕೇತಿಕವಾಗಿದೆ. ದಲಿತ ಸಂಘಟನೆಯು ಚುನಾವಣೆಯ ರಾಜಕಾರಣದಲ್ಲಿ ಭಾಗಿಯಾಗಲು ನಿರ್ಧರಿಸಿತು. ಬಿ. ಕೃಷ್ಣಪ್ಪನವರು ಕೋಲಾರದಲ್ಲಿ ಜನತಾಪಕ್ಷದ ಸಹಯೋಗದೊಂದಿಗೆ ಚುನಾವಣೆಗೆ ನಿಂತರು. ಇದನ್ನು ‘ತನ್ನ ಕಣ್ಣು ತಾನೇ ಚುಚ್ಚಿಕೊಂಡ ಘಟನೆ’ ದಲೇಕ ಬಣ್ಣಿಸುತ್ತದೆ. ಈ ಹಂತದಲ್ಲಿ ಹುಟ್ಟಿದ ಸಾಹಿತ್ಯದಲ್ಲಿ ಒಂದು ಬಗೆಯ ಕಲಾತ್ಮಕತೆಯ ಕಾಳಜಿಯ ತಣ್ಣನೆ ಅಭಿವ್ಯಕ್ತಿಗಳು ಕಂಡವು. ಲೇಖಕರು ಸೌಂದರ್ಯ ಪ್ರಜ್ಞೆಗಳ ಹುಡುಕಾಟದಲ್ಲಿ ಪ್ರತಿರೋಧದ ಸೊಲ್ಲು ಅಡಗಿತು. ಈ ತಣ್ಣನೆಯ ದನಿಯನ್ನು ಊರುಕೇರಿ ಎಂಬ ಸಿದ್ಧಲಿಂಗಯ್ಯನವರು ತಳಮಳ ರಹಿತವಾದ ಬರವಣಿಗೆಯಲ್ಲಿ ನೋಡಬಹುದು.

ಆತ್ಮವಿಮರ್ಶೆಹೊಸ ಹುಡುಕಾಟ ಹಾಗೂ ಮರುಹುಟ್ಟಿನ ಘಟ್ಟ
ಆದರೆ ಚುನಾವಣಾ ರಾಜಕೀಯದಲ್ಲಿ ಭಾಗವಹಿಸಿದ್ದ ಒಂದು ನೆಪವಾಗಿ ಬಿರುಕು ಬಿಡುತ್ತಿದ್ದ ದಲಿತ ಸಂಘರ್ಷ ಸಮಿತಿಯೂ ದಲಿತರೂ ಛಿದ್ರವಾದರು. ತಮಗೆ ವೈಯಕ್ತಿಕವಾಗಿ ಪಾಲು ಹುಡುಕುತ್ತ ಅವರು ಗುಂಪುಗಳಾಗಿ ಒಡೆದರು. ಅವರಲ್ಲಿ ಒಂದು ಬಗೆಯ ಅನೈಕ್ಯತೆ ಏರ್ಪಟ್ಟಿತು. ಇದಕ್ಕೆ ಕೆಲವು ಲೇಖಕರೂ ಒಲಿಯಾದರು. ಇದು ದಲಿತ ಚಿಂತಕರ ಮೇಲೂ ಲೇಖಕರ ಮೇಲೂ ಗಾಢವಾದ ಪರಿಣಾಮ ಬೀರಿತು. ಅದು ವಿಷಾದಕರ ಪರಿಣಾಮವೇ ಆಗಿತ್ತು’. ಇದು ವಿಷಾದಗಳನ್ನು ಹುಟ್ಟಿಸಿತು. ನವಿಲುಗಳು ಮಾಂಸದಂಗಡಿಯಲ್ಲಿ ತೂಗುಬಿದ್ದಿರುವ ರೂಪಕವು ಇಂಥ ವಿಷಾದದ ಸಂಕೇತ. ಇದು ಒಂದು ಬಗೆಯ ಆತ್ಮ ವಿಮರ್ಶೆಯನ್ನು ಹುಟ್ಟಿಸಿತು. ದಲೇಕದವರು ಉಲ್ಲೇಖಿಸಿದ ತನ್ನ ಕಣ್ಣನ್ನು ತಾನೆ ಚುಚ್ಚಿಕೊಂಡ ರೂಪಕವು ಆತ್ಮ ವಿಮರ್ಶೆಯ ಸಂಕೇತವಾಗಿದೆ. ಲಕ್ಷಣ್ ಅವರು ಈಚೆಗೆ ಬರೆದಿರುವ ತಮ್ಮ ಆತ್ಮಚರಿತ್ರೆಯಲ್ಲಿ (ಸಂಬೋಳಿ) ದಲಿತ. ಸಂಘಟನೆಗಳ ಡಿಮಾರಲೈಜೇಶನ ಕುರಿತು ಕಟುವಾಗಿ ವಿಮರ್ಶಿಸುತ್ತಾರೆ. ಈ ವಿಷಾದ ಆತ್ಮ ವಿಮರ್ಶೆಗಳು ಹೊಸ ಹುಟ್ಟಿನ ಹುಡುಕಾಟವನ್ನು ಕೂಡ ಪ್ರೇರಿಸಿವೆ. ಈ ಹುಡುಕಾಟವೂ ಇನ್ನೂ ನಿಂತಿಲ್ಲ. ಪರ್ಯಾಯವು ಸ್ಪಷ್ಟವಾಗಿ ಒಡಮೂಡಿಲ್ಲ.
ಪರ್ಯಾಯ ಹುಡುಕಾಟಗಳ ಪರಿಯಿದು. ಹೊಸ ಹುಡುಕಾಟದ ಪರಿಯನ್ನು ಹಾಗೂ ಮರು ಹುಟ್ಟಿನ ತವಕಗಳನ್ನು ಹೀಗೆ ಗುರುತಿಸಬಹುದು. ದಲಿತ ತತ್ವದಲ್ಲಿ ಹೊಸ ಪರ್ಯಾಯ ಹುಡುಕಾಡುತ್ತ, ಅಲ್ಲಿನ ಅನುಭಾವಿಕ ಪರಂಪರೆಗಳಲ್ಲಿ ನೆಲೆಯನ್ನು ಹುಡುಕುವ ಸಾಂಸ್ಕೃತಿಕ ಪರ್ಯಾಯದ ತುಡಿತ; ಎರಡು ದಲಿತತನದಿಂದ ಬಿಡುಗಡೆ ಹಾಗೂ ಕೂಡ ಹೋರಾಟಗಳಲ್ಲಿ ನಂಬಿಕೆಯಿಡುವ ವಿಶಾಲ ಹಾದಿ.

(ಅ) ದಲೇಕದವರು ಪ್ರಕಟಿಸಿರುವ ಪ್ರಣಾಳಿಕೆ ರೂಪದ ಕರಡು ಲೇಖನದ ಪ್ರಕಾರ ದಲಿತ ಸಂಘಟನೆ ಚಳುವಳಿ ಸಾಹಿತ್ಯಗಳಲ್ಲಿ ರಾಜಕೀಯ ಇದೆ. ಅದಕ್ಕೆ ಆ ನೆಲದ ಆನುಭಾವಿಕ ಆಧ್ಯಾತ್ಮಿಕ ನೈತಿಕ ತುಡಿತಗಳು ಇರಲಿಲ್ಲ. ಹೀಗಾಗಿ ಅದು ಬಹಳ ಬೇಗ ಕುಸಿಯಿತು. ಆದ್ದರಿಂದ ನೈತಿಕತೆಯುಳ್ಳ ಹಾಗೂ ಈ ಪ್ರತಿಭಟನಾ ಪರಂಪರೆಗಳ ಸತ್ವವನ್ನುಳ್ಳ ರಾಜಕಾರಣವನ್ನು ಮಾಡಬೇಕು. ಇದಕ್ಕಾಗಿ ಈ ನೆಲದ ಅನುಭಾವಿ ಪರಂಪರೆಗಳನ್ನು ಅನುಸಂಧಾನ ಮಾಡಬೇಕು. ಇದಕ್ಕೆ ತಕ್ಕಂತೆ ಅನೇಕ ದಲಿತ ಲೇಖಕರು ಕೋಟಗಾನಹಳ್ಳಿ ರಾಮಯ್ಯ, ಕೆ. ಬಿ. ಸಿದ್ದಯ್ಯ, ದೇವನೂರು ಮಹಾದೇವ, ಗೋವಿಂದಯ್ಯ, ಮಹಾದೇವ ಸಂಕನಪುರ, ಕುಕ್ಕರಹಳ್ಳಿ ಬಸವರಾಜ ಮುಂತಾದವರು ಮಂಟೇಸ್ವಾಮಿ ಪರಂಪರೆಯ ತಿರುಗಾಟ ಅಧ್ಯಯನಗಳಲ್ಲಿ ತೊಡಗಿರುವುದನ್ನೂ ಕಾಣಬಹುದು. ಇದರ ಭಾಗವಾಗಿಯೇ ಸ್ಥಳೀಯ ಜನಪದ ಪರಂಪರೆಗಳನ್ನು ಲೇಖಕರು ತಮ್ಮ ಹೊಸ ಹುಟ್ಟಿನ ಹೊಸಚೈತನ್ಯ ಅವಾಹಿಸುವುದಕ್ಕಾಗಿ ಅನುಸಂಧಾನ ಮಾಡುತ್ತಿದ್ದಾರೆ. ಹೀಗಾಗಿ ಅವರ ಬರವಣಿಗೆಯಲ್ಲಿ ಜನಪದ ಸಾಂಸ್ಕೃತಿಕ ನಾಯಕರು ಜನಪದ ಪರಂಪರೆಗಳು ಆಚರಣೆಗಳನ್ನು ಬಳಸಿಕೊಂಡು ಸಾಹಿತ್ಯ ನಿರ್ಮಾಣವಾಗುತ್ತಿದೆ. ‘ಕುಸುಮ ಬಾಲೆ’ ಕಾದಂಬರಿಯು ಪೂರ್ವಿಕ ಮಲೆಮಾದೇಶ್ವರನಿಗೆ ಅರ್ಪಿತವಾಗಿರುವುದನ್ನು ಉಲ್ಲೇಖಿಸಬೇಕು. ಒಡಲಾಳದಲ್ಲಿ ಇರದ, ಇರಲು ಸಾಧ್ಯವಿಲ್ಲದ ಕುರಿಯಯ್ಯನ ಪಾತ್ರ, ಅವನು ಮೈಮೇಲೆ ಬಂದು ನನ್ನಿ ಹೇಳುವ ಪ್ರಕರಣ, ಜೋತಮ್ಮಂದಿರ ಪಾತ್ರಗಳು, ಸೆಟಿಗವ್ವನಿಂದ ತನ್ನ ಕೂಸನ್ನು ಉಳಿಸಿಕೊಳ್ಳು ಕೆಂಪಿಯ ತಾಯಿ ರಾತ್ರಿಯಿಡಿ ನಾಗರಬೆತ್ತ ಮರುಜವಳಿ ಕಡ್ಡಿಯನ್ನು ಹಿಡಿದು ಮನೆಕಾವಲು ಮಾಡುವ ಚಿತ್ರ ಇವೆಲ್ಲ ವಾಸ್ತವವಾದಿ ಕಥನಕ್ರಮ ಹೇಳಲಾಗದ ಸತ್ಯಗಳನ್ನು ಹೇಳುವ ಹೊಸ ಕಥನಕ್ರಮದ ಪ್ರಯೋಗಗಳು. ಆದರೆ ಈ ಪ್ರಯೋಗದ ಹಿಂದೆ ಜನಸಮುದಾಯದ ಚಿಂತನೆಯನ್ನು ತನ್ನ ಆಧುನಿಕ ರಾಜಕೀಯ, ಸಾಮಾಜಿಕ ಕಾರ್ಯಕ್ರಮಗಳಿಗೆ ಬೆರೆಸಿಕೊಳ್ಳುವ ಚಿಂತನಾಕ್ರಮ ಕೆಲಸ ಮಾಡಿದೆ. ಕೆ. ಬಿ. ಸಿದ್ದಯ್ಯ ಅವರು ಬಕಾಲ ಎಂಬ ಆದಿಜಾಂಬವರ ಪುರಾಣದ ಮುನಿಯನ್ನು ಕುರಿತ ಪುರಾಣವನ್ನು ಬಳಸಿಕೊಂಡು, ದಕ್ಕಲ ಮಾದಿಗರ ಪುರಾಣದಲ್ಲಿ ಬರುವ ‘ದಕ್ಲದೇವಿ’ ಯ ಕಥೆಯನ್ನು ಬಳಸಿಕೊಂಡು ಕಾವ್ಯಗಳನ್ನು ಬರೆದರು. ಕೋಟಗಾನಹಳ್ಳಿ ರಾಮiಯ ಅವರು ರಚಿಸಿದ ‘ಸಿಂಧ್ ಮಾದಿಗರ ಸಂಸ್ಕೃತಿ’ ಕೃತಿಯ ದಲಿತರ ಸಂಸ್ಕೃತಿ ಪುರಾಣ ಐತಿಹ್ಯ ಸಾಹಿತ್ಯಗಳ ಲೋಕವನ್ನು ಹೊಸರಾಜಕೀಯ ಸಾಮಾಜಿಕ ಆಶಯಗಳಿಗಾಗಿ ಅನುಸಂಧಾನ ಮಾಡುವ ಕೆಲಸವನ್ನು ಮಾಡುತ್ತದೆ. ಸಿದ್ಧಲಿಂಗಯ್ಯನವರು ಗ್ರಾಮ ದೇವತೆಗಳನ್ನು ಕುರಿತು ಮಾಡಿರುವ ಅಧ್ಯಯನಗಳಲ್ಲಿ ಈ ಬಗೆಯ ಆಧುನಿಕ ರಾಜಕಾರಣಕ್ಕೆ ಆಧುನಿಕ ಚಿಂತನೆಗೆ ಸೃಷ್ಟಿಗೆ ಜನಸಮುದಾಯದ ಸಂಸ್ಕೃತಿಗೆ ಲೋಕದ ಜತೆ ಸಂಪರ್ಕ ಬೆಳೆಸಬೇಕು ಎಂಬ ಸಣ್ಣ ಉದ್ದೇಶವೂ ಇದ್ದಂತಿದೆ.

(ಆ) ಕೆಲವು ದಲಿತ ಲೇಖಕರು ಇನ್ನೂ ಸಮುದಾಯವಾದಿ ನೆಲೆಯಲ್ಲೇ ಇದ್ದಾರೆ. ದಲಿತರಿಂದ ಬರೆದುದೇ ದಲಿತ ಸಾಹಿತ್ಯ ಎಂಬ ವ್ಯಾಖ್ಯೆಯ ವಿಚಿತ್ರ ಚಟುವಟಿಕೆಗಳು ದಲಿತ ಸಾಹಿತ್ಯವನ್ನು ಮತ್ತಷ್ಟು ಜಾತಿನಿಷ್ಠ ಮಾಡುವ ಸಾಧ್ಯತೆಯಿದೆ. ಇದರಲ್ಲಿ ಹಿರಿಯ ದಲಿತ ಲೇಖಕರು ಚಿಂತಕರು ಭಾಗವಹಿಸುವಿಕೆ ಕಡಿಮೆ. ಇದರಲ್ಲಿರುವ ಲೇಖಕರು ಬಹಳ ದೊಡ್ಡ ಬರೆಹವನ್ನು ಸೃಷ್ಟಿ ಮಾಡಿದವರಲ್ಲ. ತಮ್ಮ ಬರೆಹಕ್ಕೆ ದಲಿತರು ಎಂಬ ಕಾರಣಕ್ಕೆ ಮಾನ್ಯತೆ ಒದಗಬೇಕು ಎಂಬ ಮನೋಭಾವ ಕೆಲಸ ಮಾಡುತ್ತಿರುವುದು ಕಾಣುತ್ತದೆ. ದಲಿತ ನೆಲೆಯಿಂದ ಕನ್ನಡ ಸಾಹಿತ್ಯವನ್ನು ಪುನರವಲೋಕ ಪುನರ್ ಮೌಲ್ಯೀಕರಣ ಮಾಡುವುದನ್ನು ಇಲ್ಲಿ ನೋಡಬಹುದು.

(ಇ) ಇನ್ನೊಂದು ದಲಿತ ಲೇಖಕರ ನೆಲೆಯಿದೆ. ಇದು ಮೇಲಿನಂತೆ ಸೆಕ್ಟೇರಿಯನ್ ಅಗದೆ ವಿಶಾಲನೆಲೆಯಲ್ಲಿ ಕನ್ನಡ ಲೇಖಕರ ಪರಂಪರೆಯಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಬಯಸುತ್ತದೆ. ದಲಿತರಾಗಿ ಹುಟ್ಟಿದ್ದರಿಂದ ದಲಿತಾನುಭವವನ್ನು ತಮ್ಮ ಬರಹದಲ್ಲಿ ಸಹಜವಾಗಿ ಅನಿವಾರ್ಯವಾಗಿ ಬಳಸಿಕೊಂಡರೂ, ತಮ್ಮ ಸಾಹಿತ್ಯ ಸೃಷ್ಟಿ ಹಾಗೂ ಸಂವೇದನೆಯ ಪ್ರಕ್ರಿಯೆಯಲ್ಲಿ ಇದನ್ನು ಮೀರಿದಂತೆ ತಾವು ಒಟ್ಟು ಕನ್ನಡದ ಲೇಖಕರಾಗುವ ಹಂಬಲದವರು ಇವರು. ತಮ್ಮ ಸಾಹಿತ್ಯ ವಿಶಾಲ ಮಾನವತೆಯ ಭಾಗ ಎಂದು ಭಾವಿಸುವವರು. ದಲಿತ ಲೇಖಕ ಅನಿಸಿಕೊಳ್ಳಲು ಹಿಂಜರಿಕೆಯಿಲ್ಲ. ಆದರೆ ಕೇವಲ ದಲಿತ ಲೇಖಕ ಅನಿಸಿಕೊಳ್ಳುವುದು ತಮ್ಮನ್ನು ಸೀಮಿತ ನೆಲೆಗೆ ಇರಿಸುತ್ತದೆ ಎಂಬ ಪ್ರಜ್ಞೆಯುಳ್ಳವರು. ಅದರಲ್ಲೂ ಸಿದ್ಧಲಿಂಗಯ್ಯ ಅವರು ಈ ಬಗೆಯ ಹೇಳಿಕೆಗಳನ್ನು ನೀಡಿರುವುದು ಕಾಣುತ್ತದೆ. ಈ ಚಿಂತನೆಯಲ್ಲಿ ದಲಿತ ಸಂವೇದನೆ ಎಂಬುದು ಇದೆ. ಇದರಲ್ಲಿ ಕೇವಲ ದಲಿತ ಲೇಖಕರು ಮಾತ್ರವಲ್ಲ, ದಲಿತೇತರ ಲೇಖಕರೂ ಕೂಡ ಬರುತ್ತಾರೆ ಎಂದು ಭಾವಿಸಲಾಗುತ್ತದೆ. ಚೋಮನದುಡಿ ಬರೆದ ಶಿವರಾಮ ಕಾರಂತ, ಮಲೆಗಳಲ್ಲಿ ಮದುಮಗಳು ಬರೆದ ಕುವೆಂಪು, ಕತೆಗಾರರಾದ ಕುಂ. ವಿ. ಬೆಸಗರಹಳ್ಳಿ ರಾಮಣ್ಣ ಮುಂತಾದವರು ದಲಿತ ಸಂವೇದನೆಯುಳ್ಳವರು ಎಂದು ನಂಬುತ್ತದೆ. ಸಾಹಿತ್ಯ ವ್ಯಾಖ್ಯೆಯಲ್ಲಿನ ಈ ವಿಸ್ತಾರವು ಕ್ರಿಯಾಲೋಕಕ್ಕೂ ವಿಸ್ತರಿಸುತ್ತದೆ. ದಲಿತರ ಸಮಸ್ಯೆಗಳಿಗೆ ದಲಿತರು ಮಾತ್ರ ಹೋರಾಡಲಾಗದು. ಕೋಮುವಾದದಿಂದ ಪೀಡಿತರಾದ ಮುಸ್ಲಿಮರ ಬಿಡುಗಡೆಗಾಗಿ ಕೇವಲ ಮುಸ್ಲಿಮರು ಹೋರಾಟ ಮಾಡಲಾಗದು. ಮಹಿಳೆಯ ಬಿಡುಗಡೆಗೆ ಮಹಿಳೆಯರು ಮಾತ್ರ ಹೋರಾಡಲಾಗದು. ಇದು ಬಲಾಬಲದ ಪ್ರಶ್ನೆಗಿಂತ ಕೂಡು ಹೋರಾಟದ ತಾತ್ವಿಕತೆಯ ಪ್ರಶ್ನೆ. ದಲಿತ ಚಳುವಳಿಯಲ್ಲಿ ದಲಿತ ಸಂವೇದನೆ ಇರುವ ಇತರ ಸಮಾನಮನಸ್ಕರೂ ಸೇರಿಕೊಳ್ಳಬೇಕು ಎಂದು ಇದು ಭಾವಿಸಿದೆ. ಸಮಾನ ಶತ್ರುಗಳನ್ನು ಗುರುತಿಸಿಕೊಳ್ಳುವಿಕೆಯ ನೆಲೆಯಲ್ಲಿ ಸಮಾನ ಸಂಗಾತಿಗಳು ಇರಬೇಕು ಎಂದು ಇದು ಭಾವಿಸಿದೆ. ಎಂತಲೆ ಈಚೆಗೆ ಸೇರಿರುವ ದಲೆಕದಲ್ಲಿ ಕೂಡು ಹೋರಾಟದ ಕಲ್ಪನೆಯಿದೆ. ಸಮಾನ ಮನಸ್ಕರಾದ ಚಂಪಾ, ಕೆ. ಮರುಳಸಿದ್ದಪ್ಪ ಇದ್ದಾರೆ.

ಅಂತಿಮವಾಗಿ
ಹೀಗೆ ಅರಿವಿನ ಆಸ್ಫೋಟಗಳೂ ವರ್ತಮಾನದ ವಿದ್ಯಮಾನಗಳನ್ನು ಸರಿಯಾದ ತಕ್ಕ ರಾಜಕೀಯ ಪ್ರಜ್ಞೆಯಿಂದ ಅರಿಯಲಾಗದ ಗೊಂದಲಗಳು, ಅರಿಯುವ ತನ್ನದೇ ಕ್ರಮದಲ್ಲಿ ಪ್ರತಿಕ್ರಿಯಿಸುತ್ತಿರುವ ಸೃಜನಶೀಲ ಸಾಹಿತಿಗಳೂ ಇರುವ ಈ ಪರಿಸ್ಥಿತಿಯಲ್ಲಿ ಕೆಲವು ಪ್ರಶ್ನೆಗಳು ಎದುರಾಗುತ್ತವೆ. ದಲಿತ ಸಮುದಾಯಕ್ಕೆ ಬೌದ್ಧಧರ್ಮದ ಸೆಳೆತ ಪರ್ಯಾಯವೇ, ಈ ಬಗ್ಗೆ ಸ್ಪಷ್ಟತೆಯಿಲ್ಲ. ಮೀಸಲಾತಿಯ ಪ್ರಶ್ನೆಯ ಕಾರಣದಿಂದ ಒಂದು ಗೂಡಿದ್ದ ಪ್ರಜ್ಞಾವಂತ ದಲಿತರನ್ನು ಇದೇ ಮೀಸಲಾತಿಯ ಅಸಮಾನ ಹಂಚಿಕೆಯ ಪ್ರಶ್ನೆ ಈಗ ವಿಭಜನೆ ಮಾಡಿದೆ. ಈ ನಡುವೆ ಮೀಸಲಾತಿಯ ಪರಿಕಲ್ಪನೆ ಈ ಜಾಗತೀಕರಣದ ವ್ಯವಸ್ಥೆಯಲ್ಲಿ ಅಸಂಬದ್ಧವೂ ಆಗುತ್ತಿದೆ. ಇಂತಹ ಸ್ಥಿತಿಯಲ್ಲಿ ದಲಿತರನ್ನು ಅವರ ಸಾಂಸ್ಕೃತಿಕ ನೆಲೆಗಳು ಹಿಡಿದಿಡುತ್ತವೆ ಎನ್ನುವುದು ಸುಳ್ಳಾಗಿದೆ. ಜನರನ್ನು ಉಪಪಂಗಡಗಳಾಚೆಯೂ ಹಿಡಿದಿಡಬಹುದಾದ ಒಂದು ಸಂಗತಿಯಾದ ಮಾರ್ಕ್ಸ್‌ವಾದದ ಬಗೆಗಿನ ಅಪನಂಬಿಕೆ ದಲಿತರಲ್ಲಿ ಇನ್ನೂ ಇದೆ. ಅಂಬೇಡ್ಕರ್ ಚಿಂತನೆಯೊಂದೇ ಈ ಹೊತ್ತು ಅವರನ್ನು ಬಹಳ ದೂರ ನಡೆಸಲಾರದು. ಹಳ್ಳಿಗಾಡಿನ ರೈತಕೂಲಿಗಳ ನೆಲೆಯ ದಲಿತರ ಜತೆ ಬೆಸೆಯುವ ಭೂಹೋರಾಟಗಳು ಈಗ ಇಲ್ಲವಾಗಿರುವ ಕಾರಣ, ಆ ಸಮುದಾಯವನ್ನು ಈ ಪ್ರಜ್ಞಾವಂತ ದಲಿತರ ಸಂಘಟನೆಗಳು ಪ್ರತಿನಿಧಿಸಲು ಆಗುತ್ತಿಲ್ಲ. ಸರಕಾರಿ ನೌಕರರ ಪಟ್ಟಣದ ಮಧ್ಯಮವರ್ಗದ ದಲಿತರ ನೆಲೆಯಲ್ಲಿ ವೈಯಕ್ತಿಕ ಮಹತ್ವಾಕಾಂಕ್ಷೆಗಳು ಇವೆ. ಹೀಗಾಗಿ ದಲಿತ ಚಿಂತನೆಯಲ್ಲಿ ತೀವ್ರವಾದ ರಾಜಕೀಯ ತಾತ್ವಿಕತೆ ರೂಪುಗೊಳ್ಳುತ್ತಿಲ್ಲ. ಕರ್ನಾಟಕದಲ್ಲಿ ದಲಿತರನ್ನು ನಕ್ಸಲ್‌ವಾದವು ಕೆಲಮಟ್ಟಿಗೆ ಸೆಳೆದಿದೆಯಾದರೂ, ಅದು ವ್ಯಾಪಕವಾಗಿಲ್ಲ. ಕುದಿತವಿಲ್ಲದ ಸಿದ್ಧಲಿಂಗಯ್ಯ, ಕುದಿಯುತ್ತಿರುವ ಹನುಮಂತಯ್ಯ ಈ ಕಂದರವಂತೂ ಇದೆ. ಇದಕ್ಕೆ ತಲೆಮಾರುಗಳ ಅಂತರ ಕಾರಣವೆ? ನಿಷ್ಕಳಂಕವಾದ, ನೈತಿಕವಾಗಿ ಕೆಟ್ಟರಿರದ, ಆದರೆ ಗೊತ್ತುಗುರಿಯಿಲ್ಲದ ಹೊಸ ತಲೆಮಾರು ಹಾಗೂ ಭ್ರಷ್ಟವಾಗಿರುವ ಹಳೆತಲೆಮಾರುಗಳ ಅಂತರ ಹೀಗೆ ಮಾಡಿದೆಯೆ? ಎನ್. ಜಿ. ಓ. ಗಳು ದಲಿತರ ಜೀವನದಲ್ಲಿ ಪ್ರವೇಶಿಸಿ ಅವರ ರಾಜಕೀಯ ದೃಷ್ಟಿಕೋನದಲ್ಲಿ ಉಂಟುಮಾಡಿರುವ ಅರಾಜಕತೆಗಳೂ ಇವೆ; ಅವು ದಲಿತತ್ವವನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿಕೊಂಡಿವೆ ತುಮಕೂರಿನ ಒಂದು ಎನ್. ಜಿ. ಓ. ದಲಿತತ್ವವನ್ನು ಕುರಿತು ಒಂದು ದೊಡ್ಡ ಪುಸ್ತಕ ಪ್ರಕಟಿಸಿತು. ಕ್ರೈಸ್ತ ಮಿಷನರಿಗಳು ಸ್ಥಾಪಿಸಿರುವ ಎನ್. ಜಿ. ಓ. ಗಳಲ್ಲಿ ದಲಿತರು ಬ್ರಾಹ್ಮಣವಿರೋಧಿ ಅಜೆಂಡಾಗಳನ್ನು ಒಪ್ಪಿಕೊಂಡು ಕೆಲಸ ಮಾಡುತ್ತಿರುವುದು ಕಾಣುತ್ತದೆ. ದಲಿತ ಸಾಹಿತ್ಯ ಮತ್ತು ಚಿಂತನೆಯಲ್ಲಿ ಮಹಿಳೆಯರು ಕಾಲು ಶತಮಾನವಾದರೂ ಅತ್ಯಂತ ಕಡಿಮೆಯಿದ್ದಾರೆ. ಇಂತಹ ರಾಜಕೀಯ ಹತಾಶೆಯ ಪರಿಸ್ಥಿತಿಗಳು ಕರ್ನಾಟಕದಲ್ಲಿ ಇವೆ. ಇವು ಸಾಹಿತ್ಯ ರಚನೆಯ ಮೇಲೆ ಒಂದು ಮಂಕುತನವನ್ನು ಕವಿಸಿವೆ. ಆದರೆ ಇಂತಹ ಹತಾಶೆಯ ಪರಿಸ್ಥಿತಿಗಳೆ ಚೈತನ್ಯದ ಹೊಸ ಹಾದಿಗಳ ಹೊಳೆಯುವಿಕೆ ಕಾರಣವಾಗಬಲ್ಲವು. ಸಾಹಿತ್ಯದ ಒಂದು ಶಕ್ತಿಯಿರುವುದೇ ಹತಾಶೆಯ ಕತ್ತಲಲ್ಲಿ ಕಿಡಿಯಾಗಿ ಹೊಮ್ಮುವುದರಲ್ಲಿ ತಾನೆ.
ಪರಾಮರ್ಶನ ಗ್ರಂಥಗಳು
೧. ಸಾಹಿತ್ಯ ಮೀಮಾಂಸೆ (ಸಂ), ಡಾ. ರಹಮತ್ ತರೀಕೆರೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೪.
೨. ಮರದೊಳಗಿನಕಿಚ್ಚು, ಡಾ. ರಹಮತ್ ತರೀಕೆರೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೪.
—-ಕನ್ನಡ ದಲಿತ ಸಾಹಿತ್ಯಸಮಾಲೋಕನ. (ಸಂ) ಡಾ. ಅರ್ಜುನ ಗೊಳಸಂಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂ, ೨೦೦೩ ಕೃತಿಯಿಂದ ಆಯ್ದುಕೊಂಡ ಲೇಖನ ಭಾಗ. ಇದಕ್ಕೆ ಪ್ಪಿಗೆ ನೀಡಿದ ಲೇಖಕರಿಗೆ ಹಾಗೂ ಸಂಪಾದಕರಿಗೆ ವಂದನೆಗಳು (ಸಂ. )
ಪುಸ್ತಕ: 
ಲೇಖಕರು: 
ಪ್ರಕಾಶಕರು: 
ಸಂಪುಟ ಸಂಪಾದಕರು: 

ಶನಿವಾರ, ಅಕ್ಟೋಬರ್ 15, 2016

ವಾಲ್ಮೀಕಿ ಜಯಂತಿಯ ಏಕರೂಪಿ ಆಚರಣೆಯ ಮೀರಬೇಕಿದೆ



-ಡಾ. ಅರುಣ್ ಜೋಳದಕೂಡ್ಲಿಗಿ
ಕರ್ನಾಟಕ ಸರಕಾರವು ಮಾನ್ಯ ಮಾಡಿದ ಆಚರಣೆಯಾಗಿ ವಾಲ್ಮೀಕಿ ಜಯಂತಿ ನಾಡಿನಾದ್ಯಾಂತ ನಡೆಯುತ್ತದೆ. ಕನಿಷ್ಠ ಒಂದು ತಿಂಗಳ ಕಾಲ ಈ ಜಯಂತಿಯನ್ನು ವಾಲ್ಮೀಕಿ ಸಮುದಾಯ ತಮ್ಮ ಹಳ್ಳಿ, ಗ್ರಾಮ, ಕಾಲನಿ, ನಗರಗಳಲ್ಲಿ ಆಚರಿಸುತ್ತಾರೆ. ಹಾಗಾಗಿ ಇದು ಸರಕಾರಿ ಆಚರಣೆಯಂತೆಯೇ, ಸಮುದಾಯದ ಹಬ್ಬವಾಗಿಯೂ ನಡೆಯುತ್ತದೆ.. ವಾಲ್ಮೀಕಿ ಜಯಂತಿಯನ್ನು ಬಿಜೆಪಿ ಸರಕಾರವು ಆರಂಭಿಸಿದ್ದಕ್ಕೆ ಕೆಲವು ಮುಖ್ಯ ಕಾರಣಗಳಿದ್ದವು. ವಾಲ್ಮೀಕಿ, ರಾಮಾಯಣ, ರಾಮನನ್ನು ಜೋಡಿಸುವ ಮೂಲಕ ಕರ್ನಾಟಕದ ಬೇಡನಾಯಕ ಸಮುದಾಯವನ್ನು ಹಿಂದುತ್ವದ ಮೂಲಭೂತವಾದಿ ವಕ್ತರರನ್ನಾಗಿ ಮಾಡುವ ಉದ್ದೇಶವೊಂದು ಗುಪ್ತವಾಗಿತ್ತು. ಆರಂಬಿಕ ಆಚರಣೆಗಳಲ್ಲಿ ಇದಕ್ಕೆ ಪೂರಕವಾದ ಪ್ರಕ್ರಿಯೆಗಳೂ ನಡೆದವು. ಆದರೆ ಇದೀಗ ಈ ಅಪಾಯಕಾರಿ ಆಯಾಮ ಬದಲಾಗಿದೆ.

  ಕರ್ನಾಟಕದಲ್ಲಿ ನಡೆಯುವ ವಾಲ್ಮೀಕಿ ಜಯಂತಿಗಳಲ್ಲಿ ಒಂದು ಬಗೆಯ ಏಕರೂಪಿ ಆಚರಣೆಯ ಮಾದರಿ ಇದೆ. ಜಯಂತಿಯ ಪ್ಲೆಕ್ಸ್ ಹೋರ್ಡಿಂಗ್ಸ್‍ಗಳನ್ನು ಗಮನಿಸಿದರೆ ಇದು ಅರಿವಿಗೆ ಬರುತ್ತದೆ. ವಾಲ್ಮೀಕಿ ಋಷಿ, ಮದಕರಿ ನಾಯಕ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಸ್ವಾಮಿಜಿ, ಕೆಲವೆಡೆ ಯುವ ಸಮುದಾಯದ ಆಕರ್ಷಣೆಯಾದ ಚಿತ್ರನಟ ಸುದೀಪ್, ಆಯಾ ಭಾಗದ ವಾಲ್ಮೀಕಿ ಸಮುದಾಯದ ರಾಜಕಾರಿಣಿಗಳ ಚಿತ್ರಗಳನ್ನು ಹಾಕಲಾಗುತ್ತದೆ. ಆಚರಣೆಯ ಮೊದಲಿಗೆ ವಾಲ್ಮೀಕಿ ಋಷಿಯ ಭಾವಚಿತ್ರದ ಮೆರವಣಿಗೆ ಊರಿನ ಬೀದಿ ಬೀದಿಗಳಲ್ಲಿ ಸಾಗುತ್ತದೆ. ವಾಲ್ಮೀಕಿ ಸಮುದಾಯದ ಪುರಾಣ ಚರಿತ್ರೆಯ ನಾಯಕರ ಸ್ಥಬ್ದ ಚಿತ್ರಗಳ ವೇಷದಾರಿಗಳು ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ನಂತರ ವೇದಿಕೆಯೊಂದರಲ್ಲಿ ಆಚರಣೆ ಶುರುವಾಗಿ ವಾಲ್ಮೀಕಿ ಋಷಿಯ ಮತ್ತು ಸಮುದಾಯದ ಬಗೆಗೆ ಭಾಷಣಗಳು ನಡೆಯುತ್ತವೆ. ಈ ಮಾತುಗಳು ಬಹುಪಾಲು ಬೇಡ ಸಮುದಾಯದ ಅತಿರಂಜಿತ ವರ್ಣನೆಗೆ ಸೀಮಿತವಾಗುತ್ತವೆ. ಈ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಉದ್ಯೋಗದಾತರಿಗೆ, ಹಿರಿಯ ನಾಯಕರುಗಳಿಗೆ ಸನ್ಮಾನಗಳು ನಡೆಯುತ್ತವೆ. ಕೆಲವೆಡೆ ಒಂದಷ್ಟು ಬದಲಾವಣೆಯನ್ನು ಹೊರತು ಪಡಿಸಿದರೆ ಕರ್ನಾಟಕದಾದ್ಯಂತ ಈ ಬಗೆಯ ಏಕರೂಪಿ ಆಚರಣೆ ನಡೆಯುತ್ತದೆ.

ರಾಷ್ಟ್ರೀಯ ಆಚರಣೆಗಳಲ್ಲಿ ಒಂದು ಬಗೆಯ ಏಕರೂಪಿತನವಿರುತ್ತದೆ. `ದೇಶ’ `ರಾಷ್ಟ್ರ’ `ರಾಜ್ಯ’ ಎನ್ನುವ ಒಟ್ಟಾದ ದುಂಡು ಗ್ರಹಿಕೆಯನ್ನು ಬಲಪಡಿಸುವ ಅಭಿಮಾನ ಹುಟ್ಟಿಸುವ ಪ್ರಕ್ರಿಯೆಗಳು ನಡೆಯುತ್ತವೆ. ಈ ಮಾದರಿಯನ್ನೆ ಜಾತಿ, ಸಮುದಾಯಗಳ ಸಾಂಕೇತಿಕ ಆಚರಣೆಗಳೂ ಪಾಲಿಸುತ್ತಿರುವಂತೆ ಕಾಣುತ್ತಿದೆ. ಇದು ಒಂದು ಹಂತದಲ್ಲಿ ಸರಿಯಾದರೂ, ಇದೇ ಮುಂದುವರಿದಲ್ಲಿ ಅಪಾಯಕರ. ಕಾರಣ ಒಂದು ಸಮುದಾಯದ ಪ್ರಾತಿನಿಧಿಕ ಆಚರಣೆಯಲ್ಲಿನ ಏಕರೂಪತೆ ಬಹು ಬೇಗ ಜಡತೆಯನ್ನು ತರುತ್ತದೆ. ಒಂದು ಸಮುದಾಯವೂ `ಮೂರ್ತಿರೂಪ’ ತಾಳುವ ಅಪಾಯದೆಡೆಗೆ ಸಾಗುತ್ತದೆ. ಜೀವಂತ ಸಮುದಾಯದ ವರ್ತಮಾನದ ಸಂಕಟ, ನೋವು, ನಲಿವು, ಸಂಘರ್ಷಗಳನ್ನು ಅರ್ಥ ಮಾಡಿಕೊಳ್ಳುವ ಸೂಕ್ಷ್ಮತೆಯನ್ನೆ ಕಳೆದುಕೊಳ್ಳುತ್ತದೆ. ತನ್ನ ಸಮುದಾಯದ ನೋವುಗಳಿಗೆ ಈ ಬಗೆಯ ಆಚರಣೆಗಳು ಕಿವುಡಾಗುತ್ತದೆ. ಎಲ್ಲವೂ ಮೆರವಣಿಗೆಯ ಗದ್ದಲದಲ್ಲಿ ಕಳೆದು ಹೋಗುತ್ತವೆ.

ಇಂದು ಎಲ್ಲಾ ಸಮುದಾಯಗಳಲ್ಲಿ ವರ್ಗದ ಬೆಳವಣಿಗೆಯಾದಂತೆ, ಬೇಡನಾಯಕ ಸಮುದಾಯದಲ್ಲಿಯೂ ವರ್ಗದ ನೆಲೆ ರೂಪುಗೊಂಡಿದೆ. ಶ್ರೀಮಂತ ವರ್ಗ, ರಾಜಕಾರಿಣಿ ವರ್ಗ, ನೌಕರಶಾಹಿ ಅಥವಾ ಮಧ್ಯಮ ವರ್ಗ, ಅಂಚಿನ ಬಡವರ ವರ್ಗವೆಂದು ವಿಭಾಗಿಸಬಹುದು. ಈ ನಾಲ್ಕು ವರ್ಗಗಳ ಜನಸಂಖ್ಯೆಯು ಮಾತ್ರ ಕೆಳಗಿನಿಂದ ಏರುಮುಖವಾಗಿ ಇಳಿಯುತ್ತದೆ. ಈ ಪ್ರಕಾರ ಸಮುದಾಯದ ಅಂಚಿನ ಬಡವರು ಹೆಚ್ಚಾಗಿದ್ದಾರೆ. ಇವರು ವಾಲ್ಮೀಕಿ ಜಯಂತಿಯ ಬೀದಿ ಮೆರವಣಿಗೆಯಲ್ಲಿ ಸಕ್ರಿಯವಾಗಿರುತ್ತಾರೆ. ಮೇಲಿನ ಮೂರು ವರ್ಗಗಳ ಜನರು ವೇದಿಕೆಯ ಮೇಲೇರುತ್ತವೆ. ಸನ್ಮಾನ ಸ್ವೀಕರಿಸುತ್ತಾರೆ, ಭಾಷಣ ಬಿಗಿಯುತ್ತಾರೆ, ಈ ವರ್ಗಗಳಿಗೆ ಬರಬಹುದಾದ ಲಾಭಗಳ ಬಗ್ಗೆ ಮಾತನಾಡುತ್ತಾರೆ. ಈ ಇಡೀ ಆಚರಣೆಯಲ್ಲಿ ಸೇರಿದ ಸಮುದಾಯದ ಸದಸ್ಯರನ್ನು ಮತದಾರರನ್ನಾಗಿಸಿಕೊಳ್ಳುವ ಯತ್ನಗಳೂ ನಡೆಯುತ್ತವೆ. ಇದೇ ಸಮುದಾಯದ ಅಂಚಿನ ಬಡವರ ಸಮಸ್ಯೆಗಳು ಈ ವೇದಿಕೆಯಲ್ಲಿ ಚರ್ಚೆಯಾಗುವುದಿಲ್ಲ. ಅಂತೆಯೇ ಈ ಮೂರು ವರ್ಗದಲ್ಲಿಯೂ ಮಹಿಳೆಯ ಪ್ರಾತಿನಿಧ್ಯ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಅಷ್ಟರಮಟ್ಟಿಗೆ ಪುರುಷವಾದಿ ಆಚರಣೆ ನಡೆಯುತ್ತದೆ.

ಕರ್ನಾಟಕ ಸಂದರ್ಭದಲ್ಲಿ ಯಾವುದೇ ಜಾತಿ ಸಂಕೇತಗಳ ಆಚರಣೆಯಲ್ಲಿ ಎತ್ತಬೇಕಾದ ಕೆಲವು ಮುಖ್ಯ ಪ್ರಶ್ನೆಗಳಿವೆ. ಕೆಳಜಾತಿಗಳು ಒಗ್ಗಟ್ಟಾಗುತ್ತಿರುವುದು, ರಾಜಕೀಯ ಪ್ರಾತಿನಿಧ್ಯ ಕೇಳುತ್ತಿರುವುದು, ತಮ್ಮ ಚರಿತ್ರೆ, ಪುರಾಣ, ವರ್ತಮಾನದ ಸಂಕೇತಗಳನ್ನು ಗುರುತಿಸಿಕೊಳ್ಳುತ್ತಿರುವುದು ಒಳ್ಳೆಯ ಪರಿಣಾಮಕಾರಿ ನಡೆ. ಹೀಗೆ ಗುರುತಿಸಿಕೊಳ್ಳುವ ನಡೆಗಳಲ್ಲಿ ಗಂಭೀರ ತೊಡಕುಗಳಿವೆ. ಇವುಗಳು ಜಾತಿಯೊಂದರ ಎಚ್ಚತ್ತ ಪ್ರಜ್ಞೆಯಾದಲ್ಲಿ, ಸಮುದಾಯಗಳ ಆಂತರಿಕ ಬಲಪಡಿಸುವಿಕೆಯ ಶಕ್ತಿಯಾದಲ್ಲಿ, ಜಾತಿಯೊಳಗಿನ ಬಡತನ, ಶಿಕ್ಷಣದ ಕೊರತೆಯನ್ನು ನೀಗುವ ದಾರಿಯಾದಲ್ಲಿ, ಆಯಾ ಜಾತಿಯೊಳಗಿನ ಹೆಣ್ಣನ್ನು ಬಲಗೊಳಿಸುವಂತಾದಲ್ಲಿ ಇದು ಶ್ಲಾಘನೀಯ. ಆದರೆ ಈ ನಡೆ ಜಾತಿಯ ಕುರುಡು ಅಭಿಮಾನ ಬೆಳೆಸುವಲ್ಲಿ, ಇತರೆ ಜಾತಿಗಳನ್ನು ಅಸಹನೆಯಿಂದ ಕಾಣುವಲ್ಲಿ, ಕಡೆಗೆ ಜಾತಿ ಮೂಲಭೂತವಾದ ಸೃಷ್ಟಿಯಾಗುವಲ್ಲಿ, ಪುರುಷಾಧಿಕಾರವನ್ನು ವಿಜೃಂಬಿಸುವಲ್ಲಿ ಜಾತಿ ಸಂಕೇತಗಳ ಆಚರಣೆ ಉತ್ಸವಗಳು ಚಲಿಸುತ್ತಿವೆ. ಈ ಚಹರೆ ವಾಲ್ಮೀಕಿ ಜಯಂತಿ ಆಚರಣೆಯ ಸ್ವರೂಪದಲ್ಲೂ ಢಾಳಾಗಿ ಕಾಣುತ್ತಿದೆ. ಈ ಮಿತಿಗಳನ್ನು ಮೀರುವ ನಿಟ್ಟಿನಲ್ಲಿ ಆಚರಣೆಯ ಏಕರೂಪಿ ಮಾದರಿ ಬದಲಾಗಬೇಕಿದೆ.
ಯಾವುದೇ ಜಾತಿಗಳು ತಮ್ಮ ಸಮುದಾಯದ ಪುರಾಣ ಮತ್ತು ಚರಿತ್ರೆಯ ಜತೆ ಹೊಂದಬಹುದಾದ ಸಂಬಧವನ್ನು ಖಚಿತಪಡಿಸಿಕೊಳ್ಳಬೇಕು. ಸದ್ಯ ಇದರ ಸ್ವರೂಪ ಬಹುಪಾಲು ವೈಭವೀಕರಣದ ತುದಿಯಲ್ಲಿದೆ.

ಜಾತಿ ಸಂಕೇತಗಳಿಗೆ ಮೂರ್ತಿಪೂಜೆಯ ಆಯಾಮವಿದೆಯೆ ಹೊರತು ವೈಚಾರಿಕ ಮುಖವಿಲ್ಲ. ಲಿಂಗಾಯತ ಸಮುದಾಯ ಬಸವಣ್ಣನ ಜತೆ, ದಲಿತರು ಅಂಬೇಡ್ಕರ್ ಜತೆ, ಕುರುಬ ಸಮುದಾಯ ಕನಕನ ಜತೆ ಮಾಡಿದ ವೈಚಾರಿಕ ಮುಖಾಮುಖಿ ಕೂಡ ಬಡವಾಗಿದೆ. ಪೆರಿಯಾರ ರಾಮಸ್ವಾಮಿಯನ್ನು ನಾಯಕ/ಬೇಡ ಸಮುದಾಯದ ಸಂಕೇತವೆಂಬಂತ್ತೆ ಗುರುತಿಸಿಕೊಳ್ಳಲಾಗುತ್ತದೆ. ಪೆರಿಯಾರರ ಚಿಂತನೆಗಳ ಜತೆ ಈ ಸಮುದಾಯದ ಅನುಸಂಧಾನ ಶೂನ್ಯವಾಗಿದೆ. ಹೀಗೆ ಜಾತಿ ಸಂಕೇತಗಳ ಮೂರ್ತಿ ಆರಾಧನೆ ಇರುವ ತನಕ ಸಮುದಾಯ ಎಚ್ಚರಗೊಳ್ಳುವುದಿಲ್ಲ. ಬದಲಾಗಿ ಆಯಾ ಜಾತಿ ಸಂಕೇತಿಕ ಸುಧಾರಕರ ವೈಚಾರಿಕ ಎಚ್ಚರದ ತಿಳಿವಿನಿಂದ ಮಾತ್ರ ಸಮುದಾಯದೊಳಗೆ ಅರಿವಿನ ದೀಪವನ್ನು ಬೆಳಗಿಸಲು ಸಾಧ್ಯ.

ವಾಲ್ಮೀಕಿ ಸಮುದಾಯದ ಮದುವೆ ಬ್ಯೂರೋಗಳು ಕ್ರಿಯಾಶೀಲವಾಗಿದ್ದಷ್ಟು, ಈ ಜಾತಿಯೊಳಗಿನ ಬಡತನ ಕಳೆಯಲು ಸಮುದಾಯದ ಉದ್ಯೋಗಸ್ಥರು, ಶಿಕ್ಷಿತರು, ರಾಜಕಾರಣಿಗಳು ಕ್ರಿಯಾಶೀಲರಾಗಿಲ್ಲ ಎನ್ನುವುದು ಸತ್ಯ. ಯಾವ ಕಾರಣಗಳಿಗೆ ಈ ಸಮುದಾಯ ಕ್ರಿಯಾಶೀಲವಾಗಿರಬೇಕೋ ಅದು ಜಡವಾಗಿದೆ, ಬದಲಿಗೆ ಜಾತೀಯ ಕುರುಡು ಅಭಿಮಾನವನ್ನು ಬೆಳೆಸುವ ಸಂಗತಿಗಳು ಹೆಚ್ಚು ಕ್ರಿಯಾಶೀಲವಾಗಿವೆ. ಈ ಸಮುದಾಯವನ್ನು ಆಧರಿಸಿ ಪ್ರಕಟವಾಗುತ್ತಿರುವ ಪತ್ರಿಕೆಗಳು ಬಹುಪಾಲು ಜಾತಿಯ ವೈಭವೀಕರಣವನ್ನೇ ಧ್ಯೇಯವನ್ನಾಗಿಸಿಕೊಂಡಿವೆ. ಸಮುದಾಯದ ರಾಜಕಾರಿಣಿಗಳು, ಶ್ರೀಮಂತರು, ಮಧ್ಯಮ ವರ್ಗವನ್ನು ಈ ಪತ್ರಿಕೆಗಳು ಕೇಂದ್ರೀಕರಿಸಿವೆ. ಅಂತೆಯೇ ಜಾತಿಯ ಅಭಿಮಾನವನ್ನು ಚಂದಾದಾರಿಕೆಯನ್ನಾಗಿ ಪರಿವರ್ತಿಸಿವೆ. ಇವುಗಳು ಸಮುದಾಯದ ಸಮಸ್ಯೆಗಳ ಚರ್ಚೆಯ ತಾಣಗಳಾಗಬೇಕಿದೆ. ಸಮುದಾಯದಲ್ಲಿ ವೈಚಾರಿಕ ಎಚ್ಚರ ಮೂಡಿಸುವತ್ತ ಚಲಿಸಬೇಕಿದೆ.

   ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಅಂಬೇಡ್ಕರ್ ಸಂಘಗಳನ್ನು ಹೊರತು ಪಡಿಸಿದರೆ ವಾಲ್ಮೀಕಿ ಯುವಕ ಸಂಘಗಳ ಸಂಖ್ಯೆ ಹೆಚ್ಚಿದ್ದಂತಿದೆ. ಈ ಸಂಘಟನೆಗಳು ವರ್ಷಕ್ಕೊಮ್ಮೆ ವಾಲ್ಮೀಕಿ ಜಯಂತಿಗೆ ಎಚ್ಚರವಾಗಿ ವರ್ಷಪೂರ್ತಿ ನಿದ್ದೆಯಲ್ಲಿದ್ದಂತಿರುತ್ತವೆ. ಈ ಯುವಕ ಸಂಘಗಳನ್ನು ವೈಚಾರಿಕವಾಗಿ ಜಾಗೃತಗೊಳಿಸಿವ ಕಾರ್ಯವಾದರೆ ಅದು ಹೆಚ್ಚು ಮಹತ್ವದ ನಡೆಯಾಗಿದೆ. ಈ ಬಗೆಯ ವೈಚಾರಿಕ ಜಾಗೃತಿ ಮೂಡಿಸಲು ವಾಲ್ಮೀಕಿ ಜಯಂತಿಯನ್ನೂ ಕೂಡ ಒಂದು ವೇದಿಕೆಯನ್ನಾಗಿ ರೂಪಿಸಲು ಪ್ರಯತ್ನಿಸಬಹುದಾಗಿದೆ. ಯುವಕರ ಸಂಘಟನೆಗಳಂತೆ ಯುವತಿಯರ ಸಂಘಗಳ ಸ್ಥಾಪನೆಗೂ ಪ್ರೇರಣೆ ನೀಡಬೇಕಿದೆ. ಸರಕಾರವು ಈ ಸಂಘಗಳ ನೊಂದಾವಣೆಗೆ ವ್ಯವಸ್ಥೆ ಮಾಡಿ, ಈ ಯುವಕ/ತಿ ಸಂಘಗಳನ್ನು ಆಧರಿಸಿದ ಯೋಜನೆಗಳಿಗೆ ಚಾಲನೆ ನೀಡಬೇಕಿದೆ. ಈ ಸಂಘಟನೆಗಳನ್ನು ಹೆಚ್ಚು ಕ್ರಿಯಾಶೀಲಗೊಳಿಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳುವ ಸಾಧ್ಯತೆಗಳಿವೆ. ಈ ಮಾದರಿಯನ್ನು ಎಲ್ಲಾ ಜಾತಿ ಸಮುದಾಯಗಳ ಸಂಘಗಳಿಗೂ ಅನ್ವಯಿಸಬಹುದಾಗಿದೆ.

ವಾಲ್ಮೀಕಿ ಸಮುದಾಯದ ಸಾಹಿತಿಗಳು ತನ್ನ ಸಮುದಾಯದ ಜತೆ ಯಾವ ಬಗೆಯ ಸಂಬಂಧವನ್ನು ಹೊಂದಬೇಕು, ಈ ಸಮುದಾಯದ ವಿದ್ಯಾವಂತರು ಮಾಡಬಹುದಾದ ಕೆಲಸಗಳೇನು? ಯುವ ಸಮುದಾಯ ಎತ್ತ ಸಾಗಿದೆ ? ಶೈಕ್ಷಣಿಕವಾಗಿ ಯುವ ಸಮುದಾಯ ಯಾವ ದಾರಿಯಲ್ಲಿದೆ? ಉದ್ಯೋಗವಕಾಶಗಳಿಗೆ ತೆರೆದುಕೊಳ್ಳುತ್ತಿರುವ ನೆಲೆ ಯಾವುದು ? ಪರಿಶಿಷ್ಟ ಪಂಗಡಗಳಿಗಿರುವ ಸೌಲಭ್ಯಗಳೇನು? ಅವುಗಳ ಬಳಕೆ ಮಾಡಿಕೊಳ್ಳುವಲ್ಲಿ ಸಕ್ರಿಯವಾಗುವ ಬಗೆ ಯಾವುದು? ಸಹಜೀವನ ನಡೆಸುವ ಇತರೆ ಜಾತಿ ಸಮುದಾಯಗಳ ಜತೆ ಬ್ರಾತುತ್ವವನ್ನು ಬೆಳೆಸಿಕೊಳ್ಳುವ ಬಗೆ ಯಾವುದು? ಇತರೆ ಸಮುದಾಯಗಳ ಜತೆ ಸಾಮರಸ್ಯದಿಂದ ಬದುಕುವ ದಾರಿಗಳಾವುವು? ಅಸ್ಪøಷ್ಯ ದಲಿತ ಸಮುದಾಯಗಳನ್ನು ಮಾನವೀಯ ನೆಲೆಯಿಂದ ಕಾಣುವ ಬಗೆ ಯಾವುದು? ಮಹಿಳೆಯರನ್ನು ದಮನವಿಲ್ಲದೆ ನಡೆಸಿಕೊಳ್ಳುವ ನಡೆ ಯಾವುದು? ಮುಂತಾದ ಪ್ರಶ್ನೆಗಳನ್ನು ಎಚ್ಚರದಿಂದ ಪರಿಶೀಲಿಸಬೇಕಾಗಿದೆ. ಇಂತಹ ಚರ್ಚೆಗಳು ವಾಲ್ಮೀಕಿ ಜಯಂತಿಯ ಆಚರಣೆಯ ವೇದಿಕೆಗಳಲ್ಲಿ ಜೀವತಳೆಯಬೇಕಾಗಿದೆ. ಹೀಗೆ ವಾಲ್ಮೀಕಿ ಜಯಂತಿಯ ಏಕರೂಪಿ ಆಚರಣೆಯ ಮಿತಿಗಳನ್ನು ಮೀರುವ ಮತ್ತು ಅರ್ಥಪೂರ್ಣಗೊಳಿಸುವ ಚರ್ಚೆಗಳು ಇಂದು ಅಗತ್ಯವಾಗಿ ನಡೆಯಬೇಕಾಗಿದೆ.

ಶುಕ್ರವಾರ, ಸೆಪ್ಟೆಂಬರ್ 2, 2016

ಶಶಿ ಸಂಪಳ್ಳಿ ಅನುವಾದಿಸಿದ, ಗೂಗಿ ವಾ ಥಿಯಾಂಗೊ ಕಥೆ: ತಲೆ ಎತ್ತಿ ನಡೆದಾಗ

ಮೂಲ: ಗೂಗಿ ವಾ ಥಿಯಾಂಗೊ
Ngũgĩ wa Thiong'o ಗೆ ಚಿತ್ರದ ಫಲಿತಾಂಶ


ಅನುವಾದ: ಶಶಿ ಸಂಪಳ್ಳಿ


ಸೌಜನ್ಯ:https://jalada.org

ಒಂದಾನೊಂದು ಕಾಲದಲ್ಲಿ ಮನುಷ್ಯ ಕೂಡ ಇತರೆಲ್ಲಾ ನಾಲ್ಕು ಕಾಲಿನ ಪ್ರಾಣಿಗಳಂತೆಯೇ ಕೈ ಮತ್ತು ಕಾಲುಗಳನ್ನು ಬಳಸಿ ನಡೆದಾಡುತ್ತಿದ್ದ. ಮೊಲ, ಚಿರತೆ ಮತ್ತು ರೈನೋಗಿಂತಲೂ ಆತನೇ ವೇಗವಾಗಿ ಓಡುತ್ತಿದ್ದ. ಕೈ ಮತ್ತು ಕಾಲುಗಳು ಆತನ ಇತರೆಲ್ಲಾ ಅಂಗಗಳಿಗಿಂತ ಅನೋನ್ಯವಾಗಿದ್ದವು. ಅವು ಒಂದೇ ಬಗೆಯ ಸಂದು, ಮಂಡಿ ಹೊಂದಿದ್ದವು; ಭುಜ ಮತ್ತು ಕಟಿ; ಮೊಳಕೈ ಮತ್ತು ಮೊಣಕಾಲು; ಹಿಮ್ಮಡಿ ಮತ್ತು ಮಣಿಕಟ್ಟು; ಪಾದ ಮತ್ತು ಹಸ್ತ, ಹಾಗೂ ಎರಡರ ತುದಿಗೂ ತಲಾ ಐದು ಬೆರಳುಗಳು, ಪ್ರತಿ ಕೈ ಮತ್ತು ಕಾಲು ಬೆರಳಿಗೆ ಉಗುರು. ಪ್ರತಿ ಹಸ್ತ ಮತ್ತು ಪಾದಗಳು ಆಯಾ ಹೆಬ್ಬೆರಳಿನಿಂದ ಕಿರುಬೆರಳಿನವರೆಗೆ ಸಮಾನ ರಚನೆ ಹೊಂದಿದ್ದವು. ಆ ದಿನಗಳಲ್ಲಿ ಕೈ ಮತ್ತು ಕಾಲಿನ ಹೆಬ್ಬೆಟ್ಟುಗಳು ಇತರ ಬೆರಳುಗಳಿಗೆ ತಾಗಿಕೊಂಡಿದ್ದವು. ಕಾಲು ಮತ್ತು ಕೈಗಳು ಸೋದರ ಸಂಬಂಧಿಗಳಂತೆಯೇ ಅನುರೂಪವಾಗಿದ್ದವು.

ಮಾರ್ಕೆಟ್, ಶಾಪಿಂಗ್, ಗಿಡ-ಮರ ಹತ್ತಿಳಿಯುವುದು, ಬೆಟ್ಟ-ಗುಡ್ಡ ಸುತ್ತುವುದು ಸೇರಿದಂತೆ ದೇಹ ಯಾವೆಡೆಯೆಲ್ಲಾ ಹೋಗಲು ಬಯಸುವುದೋ ಅಲ್ಲಿಗೆಲ್ಲಾ ಅದನ್ನು ಹೊತ್ತುಕೊಂಡುಹೋಗಲು ಅವುಗಳೆರಡೂ ಪರಸ್ಪರ ನೆರವಾಗುತ್ತಿದ್ದವು. ನೀರಿನಲ್ಲೂ ಕೂಡ ತೇಲಲು, ಈಜಾಡಲು ಮತ್ತು ನೆಗೆಯಲು ಅವೆರಡೂ ಜೊತೆಯಾಗಿ ಶ್ರಮಿಸುತ್ತಿದ್ದವು. ಹಾಗಾಗಿ ಅವು ತಮ್ಮ ಸಂಬಂಧದಲ್ಲಿ ಸಮಾನತೆಯಿಂದಲೂ, ಅತ್ಯಂತ ಪ್ರಜಾಸತ್ತಾತ್ಮಕವಾಗಿಯೂ ನಡೆದುಕೊಳ್ಳುತ್ತಿದ್ದವು. ಅದೇ ಹೊತ್ತಿಗೆ ಅವು ಅಗತ್ಯಬಿದ್ದಾಗ ಬಾಯಿಯ ಸದ್ದು, ಕಿವಿಯ ಕೇಳುವಿಕೆ, ಮೂಗಿನಿಂದ ವಾಸನೆ ಗ್ರಹಿಕೆ, ಕಣ್ಣುಗಳಿಂದ ನೋಡುವುದು ಮುಂತಾದ ವಿವಿಧ ಅಂಗಗಳ ಉಪಯೋಗವನ್ನು ಸಹ ಪಡೆದುಕೊಳ್ಳುತ್ತಿದ್ದವು.

ಕೈ- ಕಾಲುಗಳ ಪರಸ್ಪರ ಲಯ ಮತ್ತು ಸಾಟಿಯಿಲ್ಲದ ಹೊಂದಾಣಿಕೆ ಇತರ ಅಂಗಗಳಲ್ಲಿ ಹೊಟ್ಟೆಕಿಚ್ಚಿ ಹೊತ್ತಿಸಿತ್ತು. ಹಾಗಾಗಿ ಈ ಇಬ್ಬರು ಅಪೂರ್ವ ಸಹೋದರರಿಗೆ ತಮ್ಮ ಮೇಧಾವಿತನವನ್ನೆಲ್ಲಾ ಕೊಟ್ಟದ್ದಕ್ಕೆ ಒಳಗೊಳಗೇ ಕುದಿಯುತ್ತಿದ್ದವು. ಕೈ-ಕಾಲುಗಳು ತಮ್ಮನ್ನು ಎಲ್ಲಾ ಕಡೆ ಓಡಾಡಿಸಿವೆ, ಏನೆಲ್ಲಾವನ್ನೂ ತೋರಿಸಿವೆ ಎಂಬುದನ್ನು ಈ ಅಂಗಾಂಗಗಳಿಗೆ ಅವುಗಳ ಹೊಟ್ಟೆಕಿಚ್ಚು ಮರೆಸಿಬಿಟ್ಟಿತ್ತು. ಹಾಗಾಗಿ ಎಲ್ಲಾ ಅಂಗಗಳು ಕೈ-ಕಾಲು ಜೋಡಿಯ ವಿರುದ್ಧ ಸಂಚು ಮಾಡಲಾರಂಭಿಸಿದವು.

ನಾಲಿಗೆ ಮೆದುಳಿನಿಂದ ಒಂದು ಉಪಾಯ ಪಡೆಯಿತು ಮತ್ತು ಅದನ್ನು ಕೂಡಲೇ ಕಾರ್ಯಗತ ಮಾಡಿತು. ಕೈ ಮತ್ತು ಕಾಲುಗಳಲ್ಲಿ ಯಾರು ಹೆಚ್ಚು ಗಟ್ಟಿ, ಬಲಶಾಲಿ ಎಂದು ಅದು ದೊಡ್ಡದಾಗಿಯೇ ಆಶ್ಚರ್ಯ ವ್ಯಕ್ತಪಡಿಸಿತು. ಅಬ್ಬಾ ಯಾರು ಗಟ್ಟಿ ನಿಮ್ಮಬ್ಬರಲ್ಲಿ! ಎಂದಿತು ನಾಲಿಗೆ, ಜೋರಾಗಿಯೇ! ಆವರೆಗೆ ತಮ್ಮಿಬ್ಬರ ನಡುವೆ ಈ ರೀತಿಯ ಹೋಲಿಕೆಯನ್ನೇ ಮಾಡಿಕೊಳ್ಳದೇ ಇದ್ದ ಕೈ-ಕಾಲುಗಳಿಗೆ ದಿಢೀರನೇ ಏನೋ ಹೊಸ ಭಾವ ಹೊಳೆಯಿತು. ಕೂಡಲೇ ಬಾಯಿಯಿಂದ ಸದ್ದು ಪಡೆದು ದೇಹಕ್ಕೆ ನಾನೇ ಮುಖ್ಯ, ನಾನೇ ಮುಖ್ಯ ಎಂದು ಪೈಪೋಟಿಯಲ್ಲಿ ಕೂಗಲಾರಂಭಿಸಿದವು. ಈ ವಾದ-ವಾಗ್ವಾದ ಬಹಳ ಬೇಗ ಯಾರು ಸುಂದರ, ನೀಳ ಎಂಬ ಚರ್ಚೆಗೂ ತಿರುಗಿತು. ತನ್ನ ಹಸ್ತದ ಉದ್ದನೆಯ ಸಪೂರ ಬೆರಳನ್ನು ತೋರಿಸಿದ ಕೈ ಅವುಗಳನ್ನು ನಾಜೂಕಾಗಿ ಬಳುಕಿಸಿ ತನ್ನ ಅಂದ ತೋರಿತು. ಅದೇ ಹೊತ್ತಿಗೆ ಅದು ಕಾಲಿನ ಪಾದದ ಬೆರಳುಗಳ ಬಗ್ಗೆ ಟೊಣಪ, ಮೋಟು ಎಂದು ಹಿಯ್ಯಾಳಿಸಿ ಮಾತನಾಡಿತು. ಅದಕ್ಕೆ ಪ್ರತ್ಯುತ್ತರವಾಗಿ ಕಾಲಿನ ಬೆರಳುಗಳು, ತಿನ್ನಲು ಇಲ್ಲದೆ ಬಡಕಲಾದ ಬಡ ಸಹೋದರರು ಎಂದು ಸಪೂರವಾಗಿದ್ದ ಕೈ ಬೆರಳುಗಳನ್ನು ಕಿಚಾಯಿಸಿದವು. ಕೈ-ಕಾಲುಗಳ ನಡುವಿನ ಈ ಜಗಳ ಹಲವು ದಿನಗಳ ಕಾಲ ಮುಂದುವರಿಯಿತು. ಆಗೆಲ್ಲಾ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲ ಅವುಗಳ ಹೊಂದಾಣಿಕೆಯ ಕಲೆ ಸೊರಗಿತು. ಕೊನೆಗೆ ಅದು ಯಾರು ಶಕ್ತಿಶಾಲಿ, ಯಾರು ಹೆಚ್ಚು ಗಟ್ಟಿ ಎಂಬ ಮೂಲಭೂತ ಪ್ರಶ್ನೆಗೆ ಬಂದು ನಿಂತಿತು. ಈ ವಿಷಯದಲ್ಲಿ ಇತರ ಅಂಗಗಳೇ ತೀರ್ಮಾನ ಕೈಗೊಳ್ಳಬೇಕು ಎಂದು ಅವು ಕೇಳಿಕೊಂಡವು.

ಕೊನೆಗೂ ಇದೇ ದಿನಕ್ಕೆ ಕಾದಿದ್ದ ನಾಲಿಗೆ ಒಂದು ಸ್ಪರ್ಧೆ ಮಾಡೋಣ. ಯಾರು ಗಟ್ಟಿ ನೋಡೇ ಬಿಡೋಣ ಎಂದಿತು. ಅದೊಂದು ಅದ್ಭುತ ಉಪಾಯ, ಹಾಗಾಗಿ ಎಲ್ಲ ಅಂಗಗಳೂ ಸರಿ, ಸರಿ ಸ್ಪರ್ಧೆಯನ್ನೇ ಮಾಡೋಣ ಎಂದು ಒಪ್ಪಿಕೊಂಡವು. ಆದರೆ, ಯಾವ ಸ್ಪರ್ಧೆ? ಕೆಲವು ಅಂಗಗಳು ಕುಸ್ತಿ ಎಂದವು! ಕೈ-ಕಾಲು ಕುಸ್ತಿ? ಮತ್ತೆ ಕೆಲವು ಕತ್ತಿವರಸೆ ಎಂದವು. ಓಟ, ಕಣ್ಣಾಮುಚ್ಚಾಲೆ, ಚೆಸ್,.. ಹೀಗೆ ಒಂದೊಂದು ಅಂಗವೂ ಒಂದೊಂದು ಆಟ, ಸ್ಪರ್ಧೆಯನ್ನು ಸೂಚಿಸಿದವು. ಆದರೆ, ಅವುಗಳೆಲ್ಲವನ್ನೂ ನ್ಯಾಯಯುತವಾಗಿ ಆಡಲು ಆಗದು ಎಂದೋ, ಇಬ್ಬರಿಗೂ ಸಮಾನ ಅವಕಾಶ ಸಿಗದು ಎಂದೋ ತಳ್ಳಿಹಾಕಲಾಯಿತು. ಕೊನೆಗೆ ಮತ್ತೆ ನಾಲಿಗೆಯೇ ಮುಂದೆ ಬಂದು, ಮೆದುಳಿನಿಂದ ಉಪಾಯ ಪಡೆದು ಒಂದು ಸರಳ ಪರಿಹಾರ ನೀಡಿತು. ಎರಡೂ ಅಂಗಗಳು ಒಂದರ ನಂತರ ಮತ್ತೊಂದರಂತೆ ಒಂದೊಂದು ಸಾಹಸ ಪ್ರದರ್ಶಿಸಬೇಕು ಎಂದು ಹೇಳಿತು. ನಾಲಿಗೆಯ ಮಾತಿಗೆ ಕೈ, ಕಾಲುಗಳೆರಡೂ ಒಪ್ಪಿಕೊಂಡವು.
The Upright Revolution 4

ಕಾಡಿನ ನಡುವೆ ನದಿ ಪಕ್ಕದ ಒಂದು ಚಿಕ್ಕ ಬಯಲಿನಲ್ಲಿ ಸ್ಪರ್ಧೆ ಆರಂಭವಾಯಿತು. ದೇಹದ ಎಲ್ಲಾ ಅಂಗಗಳೂ ಆಗಬಹುದಾದ ಅನಿರೀಕ್ಷಿತ ಅಪಾಯ ಅಥವಾ ಆಘಾತವನ್ನು ಗ್ರಹಿಸಿ ಭಾರೀ ಎಚ್ಚರಿಕೆಯಿಂದ ಜಾಗರೂಕತೆ ವಹಿಸಿದವು. ತಮ್ಮದೇ ದೇಹದ ಅಂಗಗಳೆರಡು ಪರಸ್ಪರ ಸಮರಕ್ಕೆ ಸಜ್ಜಾಗಿದ್ದವು. ಇದು ಸಹಜವಾಗೇ ಭಯ ಮತ್ತು ಕುತೂಹಲಕ್ಕೆ ಕಾರಣವಾಗಿತ್ತು. ಕಣ್ಣುಗಳು ದೂರ-ದೂರದವರೆಗೆ ದೃಷ್ಟಿ ಹರಿಸಿ ಉದ್ದಗಲವನ್ನೂ ನಿರುಕಿಸಿ ಯಾವ ದಿಕ್ಕಿನಿಂದಾದರೂ ಏನಾದರೂ ಅಪಾಯವಿದೆಯೇ ಎಂದು ಪರೀಕ್ಷಿಸಿದವು. ಕಿವಿಗಳು ನೆಟ್ಟಗೆ ಸೆಟೆದು ಯಾವ ಮೂಲೆಯಿಂದಾದರೂ ಅಪಾಯದ ಸದ್ದೇನಾದರೂ ಕೇಳೀತೆ ಎಂದು ಮತ್ತೆ ಮತ್ತೆ ದಿಕ್ಕುದಿಕ್ಕಿಗೂ ತಿರುತಿರುಗಿ ಆಲಿಸಿದವು. ಮೂಗು ತನ್ನ ಹೊಳ್ಳೆಗಳನ್ನು ಅಗಲಿಸಿ ಕಣ್ಣು, ಕಿವಿಗಳನ್ನೂ ತಪ್ಪಿಸಿ ಏನಾದರೂ ಅಪಾಯ ಸುಳಿಯುತ್ತಿದೆಯೇ ಎಂದು ವಾಸನೆ ಹಿಡಿದು ನೋಡಿತು. ಅದೇ ಹೊತ್ತಿಗೆ ನಾಲಿಗೆ ಯಾವುದೇ ಕ್ಷಣದಲ್ಲೂ ಅಪಾಯ ಎಂದು ಕೂಗಿ ಕೂಡಲೇ ಎಚ್ಚರಿಸಲು ತುದಿನಾಲಿಗೆಯಾಗಿ ಸಜ್ಜಾಗಿತ್ತು.

ಕೈ ಕಾಲುಗಳ ನಡುವಿನ ಈ ವಿಶೇಷ ಸ್ಪರ್ಧೆಯ ಸುದ್ದಿಯನ್ನು ಹೊತ್ತು ಗಾಳಿ ಕಾಡು, ನೀರು, ಆಕಾಶದ ಮೂಲೆ-ಮೂಲೆಗೆ ಹರಡಿತು. ಅದನ್ನು ಕೇಳಿ ನಾಲ್ಕು ಕಾಲಿನ ಪ್ರಾಣಿಗಳು ಮೊದಲು ಸ್ಪರ್ಧೆಯ ಕಣಕ್ಕೆ ಬಂದವು. ಅವುಗಳಲ್ಲಿ ಕೆಲವಂತೂ ತಾವು ಬಂದಿರುವುದನ್ನು ತೋರಿಸಲು ಮರದ ಕೊಂಬೆಗಳನ್ನು ಹಿಡಿದು ಅಲುಗಾಡಿಸಿ ತೋರಿಸಿದವು. ಚಿರತೆ, ಚೀತಾ, ಸಿಂಹ, ರೈನೋ, ಕತ್ತೆಕಿರುಬ, ಆನೆ, ಜಿರಾಫೆ, ಒಂಟೆ, ಉದ್ದ ಕೊಂಬಿನ ದನ, ಗಿಡ್ಡನೆಯ ಕೊಂಬಿನ ಎಮ್ಮೆ, ಜಿಂಕೆ, ಕಡವೆ, ಮೊಲ, ಕತ್ತೆ, ಇಲಿಗಳೆಲ್ಲಾ ನೆರೆದವು. ಜಲಚರಗಳಾದ ನೀರಾನೆ, ಮೀನು, ಮೊಸಳೆ ಮುಂತಾದವು ನದಿಯ ದಡದಂಚಿಗೆ ಬಂದು ಅರ್ಧ ನೀರಲ್ಲಿ, ಅರ್ದ ದಡದಲ್ಲಿ ದೇಹ ಹರಡಿ ತದೇಕಚಿತ್ತದಿಂದ ನೋಡತೊಡಗಿದವು. ಎರಡು ಕಾಲಿನ ಆಸ್ಟ್ರಿಚ್, ಗಿನಿಯಾ ಗೂಬೆ ಮತ್ತು ನವಿಲುಗಳು ಖುಷಿಯಲ್ಲಿ ತಮ್ಮ ರೆಕ್ಕೆ ಬಿಚ್ಚಿ ಕೇಕೆ ಹಾಕಿದವು. ಮರಗಳ ನಡುವಿನಿಂದ ಹಕ್ಕಿಗಳು ಗಿಜಿಗುಟ್ಟಿದವು. ಮಿಡತೆ, ಜೀರುಂಡೆಗಳು ಹಾಡುತ್ತಲೇ ಇದ್ದವು. ಜೇಡ, ಹುಳು-ಹುಪ್ಪಟೆ, ಚೇಳು, ಸಹಸ್ರಪದಿಗಳು ನೆಲ, ಗಿಡ-ಮರಗಳ ಮೇಲೆಲ್ಲಾ ಹರಿದಾಡಿದವು. ಒಂದೆಡೆ ಓತಿ ಓಡುತ್ತಾ ಅವಸರವಸರವಾಗಿ ಬಂದರೆ, ಗೋಸುಂಬೆ ನಿಧಾನವಾಗಿ ತನ್ನದೇ ಗತ್ತಿನಲ್ಲಿ ಕಳ್ಳ ಹೆಜ್ಜೆ ಇಡುತ್ತಾ ಬರುತ್ತಿತ್ತು. ಕೋತಿ, ಚಿಂಪಾಂಜಿ, ಗೊರಿಲ್ಲಾಗಳು ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಾ ಬಂದು ಇತರ ಪ್ರಾಣಿಗಳನ್ನು ಸೇರಿಕೊಂಡವು. ಗಿಡ-ಮರ-ಪೊದೆಗಳು ಕೂಡ ಅತ್ತಿತ್ತ ಅಲುಗಾಡಿ, ತೊನೆದಾಡಿ ಕೊನೆಗೂ ನಿಶ್ಚಲವಾಗಿ ನಿಂತು ನಡೆಯಲಿರುವ ಭರ್ಜರಿ ಪೈಪೋಟಿಗೆ ಕಣ್ಣಾದವು.

    ನಾವಾಡುತ್ತೇವೆ ಖುಷಿಗಾಗಿ,
    ನಾವಿದನ್ನು ಮಾಡುತ್ತೇವೆ ಖುಷಿಗಾಗಿ
    ನಾವೆಲ್ಲಾ ಒಂದೇ, ಒಂದೇ ನಿಸರ್ಗಮಾತೆಯ ಮಕ್ಕಳು ನಾವು
    ಎಂದು ಬಾಯಿ ಹಾಡುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿತು.

ಕೈ ಕಾಲುಗಳು ತಮ್ಮ ಪೈಪೋಟಿಯ ಫಲಿತಾಂಶ ಏನೇ ಆಗಿದ್ದರೂ ಅದನ್ನು ಸೋಲು- ಗೆಲುವು ಎಂದೆಣಿಸದೆ ಸಮಾನವಾಗಿ ಸ್ವೀಕರಿಸುವುದಾಗಿ ಪ್ರಮಾಣ ಮಾಡಿದವು. ಯಾವುದೇ ಧರಣಿ, ಹೋರಾಟ, ಆರೋಪ, ಬಹಿಷ್ಕಾರ ಮಾಡುವುದಿಲ್ಲ ಎಂದು ಹೇಳಿದವು.

ಕೈಗಳು ಮೊದಲ ಸವಾಲು ಒಡ್ಡಿದವು. ಮರದ ತುಂಡೊಂದನ್ನು ನೆಲದ ಮೇಲೆ ಎಸೆದವು. ಕಾಲು; ಬಲಗಾಲು ಅಥವಾ ಎಡಗಾಲು ಅಥವಾ ಎರಡೂ ಸೇರಿ; ಆ ಮರದ ತುಂಡನ್ನು ನೆಲದಿಂದ ಮೇಲೆತ್ತಿ, ದೂರ ಎಸೆಯಬೇಕು ಎಂಬುದು ಸವಾಲು. ಎರಡೂ ಕಾಲುಗಳು ಸ್ಪರ್ಧೆಯ ಯಾವುದೇ ಹಂತದಲ್ಲಿ ಪರಸ್ಪರ ಸಮಾಲೋಚಿಸಬಹುದು, ತಮ್ಮ ಬೆರಳುಗಳನ್ನು ಒಟ್ಟಾಗಿ ಅಥವಾ ಬೇರೆ-ಬೇರೆಯಾಗಿ ಈ ಕೆಲಸಕ್ಕೆ ನೇಮಿಸಬಹುದು ಎಂಬ ಷರತ್ತನ್ನೂ ವಿಧಿಸಲಾಯಿತು. ಕಾಲುಗಳು ಮರದ ತುಂಡನ್ನು ಹೊರಳಿಸಲು ಪ್ರಯತ್ನಪಟ್ಟವು. ತಳ್ಳಲು ಯತ್ನಿಸಿದವು. ಪಾದದಿಂದ, ಬೆರಳುಗಳಿಂದ, ಮೊಣಕಾಲಿನಿಂದ,.. ಯಾವ ಬಗೆಯಲ್ಲಿ ಪ್ರಯತ್ನಿಸಿದರೂ ಅದನ್ನು ಎತ್ತಿಕೊಳ್ಳಲಾಗಲೇ ಇಲ್ಲ. ಇನ್ನು ಅದನ್ನು ಹೊರಳಿಸುವ ವಿಷಯದಲ್ಲಿ ಕೆಲವೇ ಇಂಚುಗಳಷ್ಟು ಅದನ್ನು ಕದಲಿಸಲು ಮಾತ್ರ ಅವು ಯಶಸ್ವಿಯಾದವು. ಇದನ್ನು ಕಂಡ ಕೈಬೆರಳುಗಳು ಬಾಯಿಯಿಂದ ಸದ್ದು ಪಡೆದು ಜೋರಾಗಿ ನಕ್ಕುಬಿಟ್ಟವು. ತಾನು ಒಡ್ಡಿದ ಸವಾಲಿನಲ್ಲಿ ಕಾಲುಗಳು ಹೀನಾಯವಾಗಿ ಸೋತವು ಎಂದು ಕೈಗಳು ಸೌಂದರ್ಯ ಸ್ಪರ್ಧೆಯಲ್ಲಿ ಲಲನೆಯರು ನಾಜೂಕು ನಡಿಗೆಯ ಪರೇಡ್ ನಡೆಸುವಂತೆ ಪರೇಡ್ ನಡೆಸಿದವು. ವಯ್ಯಾರದಿಂದ ಗಾಳಿಯಲ್ಲಿ ಬಳುಕಿ, ತಮ್ಮ ಸಪೂರ ಮೈಮಾಟ ಪ್ರದರ್ಶಿಸಿ ಬೇರೆ ಬೇರೆ ಬೆರಳುಗಳನ್ನು ಬಳಸಿ ಬಾರಿ ಬಾರಿ ಮರದ ತುಂಡನ್ನು ಎತ್ತಿ ಗಾಳಿಯಲ್ಲಿ ತೇಲಿಸಿ, ಸಭಿಕರಿಗೆ ತೋರಿಸಿ, ಕೊನೆಗೆ ದೂರದ ಕಾಡಿನೊಳಕ್ಕೆ ಬೀಳುವಂತೆ ಎಸೆದವು.

ಆಗ ದೇಹದ ಇತರ ಅಂಗಗಳು ಮತ್ತು ಸ್ಪರ್ಧೆಯ ವೀಕ್ಷಕರಾಗಿ ಬಂದಿದ್ದ ಪ್ರಾಣಿ, ಪಕ್ಷಿ, ಕೀಟಗಳು ಹೋ ಎಂದು ಮೆಚ್ಚುಗೆ ಸೂಚಿಸಿದವು. ಈ ಮೆಚ್ಚುಗೆ ಪ್ರತಿಕ್ರಿಯೆಯಿಂದ ಮತ್ತಷ್ಟು ಹುರಿದುಂಬಿದ ಕೈಗಳು ಇನ್ನಷ್ಟು ಸಾಹಸ ಪ್ರದರ್ಶಿಸಿದವು; ತಪ್ಪಲೆಯೊಂದರಲ್ಲಿ ತುಂಬಿದ್ದ ಅಕ್ಕಿಯಿಂದ ಸಣ್ಣ- ಸಣ್ಣ ಮರಳಿನ ಹರಳುಗಳನ್ನು ಹೆಕ್ಕಿ ತೆಗೆದವು; ಸೂಜಿಗೆ ದಾರ ಪೋಣಿಸಿದವು; ಭಾರದ ಮರಗಳನ್ನು ಸಾಗಿಸಲು ರಾಟೆಗಳನ್ನು ಮಾಡಿದವು. ಕೆಲವು ಗೋಳಾಕಾರದ ವಸ್ತುಗಳನ್ನು ಮಾಡಿ, ಮುಗಿಲಿನೆತ್ತರಕ್ಕೆ ಹಾರಿಸಿದವು. ಇದೆಲ್ಲವನ್ನೂ ಕನಸಲ್ಲೂ ಕಾಣದಿದ್ದ ಕಾಲು ಮತ್ತು ಕಾಲಿನ ಬೆರಳುಗಳು ಕುಳಿತು ಎಲ್ಲವನ್ನೂ ಬೆರಗಿನಿಂದ ನೋಡುತ್ತಿದ್ದವು ಅಷ್ಟೆ. ತಮ್ಮ ಸಪೂರ ಸಹೋದರರ ಈ ಚಾಕಚಕ್ಯತೆಗಳನ್ನು ಅವು ನೋಡಿ ಮಾತ್ರ ಖುಷಿಪಡಲು ಸಾಧ್ಯವಿತ್ತು. ಕೈಗಳ ವಿಧ ವಿಧ ವರಸೆಗಳನ್ನು ಕಂಡ ವೀಕ್ಷಕರ ಕೈಗಳು ತಮ್ಮ ಸಹ ಕೈಗಳನ್ನು ಅಭಿನಂದಿಸಿ ಜೋರಾಗಿ ಚಪ್ಪಾಳೆ ತಟ್ಟಿದವು. ಆ ಮೂಲಕ ಕೈಗಳ ಒಗ್ಗಟ್ಟು ಪ್ರದರ್ಶನವಾಯಿತು. ಇದು ಅಲ್ಲಿ ಸ್ಪರ್ಧೆಗೆ ಇಳಿದಿದ್ದ ಕಾಲುಗಳೂ ಸೇರಿದಂತೆ ಇದ್ದ ಎಲ್ಲಾ ಕಾಲುಗಳಿಗೆ ಭಾರೀ ಬೇಸರ ತರಿಸಿತು. ಆದರೂ ಅವು ಏನೂ ಮಾಡದ ಸ್ಥಿತಿಯಲ್ಲಿದ್ದವು. ಕೂತಲ್ಲೇ ಕಾಲುಗಳ ಬೆರಳುಗಳು ನೆಲದ ಮರಳಿನ ಮೇಲೆ ಸಣ್ಣ ಸಣ್ಣ ವೃತ್ತಗಳನ್ನು ಬರೆಯುತ್ತಾ ಕೈಗಳಿಗೆ ಒಡ್ಡಬೇಕಾದ ದೊಡ್ಡ ಸವಾಲಿನ ಬಗ್ಗೆ ಯೋಚಿಸುತ್ತಿದ್ದವು.

ಕೊನೆಗೂ ಕೈಗಳ ಶೋ ಮುಗಿದು, ಕಾಲು ಮತ್ತು ಕಾಲ್ಬೆರಳುಗಳು ಅವಕ್ಕೆ ಸವಾಲೊಡ್ಡುವ ಸಮಯ ಬಂತು. ಅವು ಒಡ್ಡಿದ ಸವಾಲು ಸರಳವಾಗಿತ್ತು. ನೆಲದ ಮೇಲೆ ತುಸು ಅಂತರದಲ್ಲಿ ಎರಡು ವೃತ್ತ ಬರೆದವು. ಆ ಎರಡು ವೃತ್ತಗಳಲ್ಲಿ ಒಂದರಿಂದ ಇನ್ನೊಂದಕ್ಕೆ ಇಡೀ ದೇಹವನ್ನು ಹೊತ್ತುಕೊಂಡು ಕೈಗಳು ಚಲಿಸಬೇಕು ಎಂಬುದು ಆ ಸವಾಲು. ಈಗಷ್ಟೇ ಮುಗಿದ ತಮ್ಮ ಪ್ರದರ್ಶನದಿಂದ ಬೀಗುತ್ತಿದ್ದ ಕೈ ಬೆರಳುಗಳಿಗೆ ಇದೊಂದು ತೀರಾ ಕ್ಷುಲ್ಲಕ ಸವಾಲು ಎನಿಸಿತು. ಇಡೀ ದೇಹ ತಲೆಕೆಳಗಾಯಿತು. ಕೈಗಳು ನೆಲಕ್ಕೆ ಊರಿದವು. ಕಣ್ಣುಗಳು ನೆಲದ ಸಮೀಪಕ್ಕೆ ಹೋದವು, ನೆಲಕ್ಕೆ ಅಂಟಿಕೊಂಡಂತೆ ಇದ್ದುದರಿಂದ ಅವುಗಳ ನೋಟದ ವ್ಯಾಪ್ತಿ ತೀರಾ ಕ್ಷೀಣಿಸಿತು. ನೆಲದ ದೂಳು ಮೂಗಿನ ಒಳ ನುಸುಳಿ, ಸೀನು ಬಂತು. ಕಾಲು ಮತ್ತು ಕಾಲ್ಬೆರಳುಗಳು ಗಾಳಿಯಲ್ಲಿ ತೇಲುತ್ತಿದ್ದವು. ಇದೊಂದು ಅಪರೂಪದ ದೃಶ್ಯವಾಗಿತ್ತು. ವೀಕ್ಷಕರು ನ್ಯಾಯೊ ಜುಜು ಎಂಬ ಹರ್ಷೋದ್ಗಾರದೊಂದಿಗೆ ಹಾಡುತ್ತಾ ಕೈಗಳನ್ನು ಸ್ವಾಗತಿಸಿದವು.

    ನ್ಯಾಯೊ ನ್ಯಾಯೊ ಜುಜು
    ಹಕೂನ ಮಟಾಟ
    ಫುಅಟ ನ್ಯಾಯೊ
    ಹಕೂನ ಮಟಾಟ
    ಟುರುಕೆನಿ ಅಂಗನಿ..

ಹಾಡು ಗುನುಗುತ್ತಿದ್ದರೂ ಅವರ ಗಮನವೆಲ್ಲಾ ಕೈಗಳ ಮೇಲೇ ಇತ್ತು. ಕೆಲವೇ ಕ್ಷಣಗಳ ಹಿಂದೆ ಬಗೆಬಗೆಯ ಕೌಶಲ್ಯ ಪ್ರದರ್ಶನ ಮಾಡಿದ ಕೈಗಳು ಈಗ ನಾಲ್ಕು ಮಾರು ದೂರುವನ್ನೂ ಕ್ರಮಿಸಲಾಗಲಿಲ್ಲ. ಒಂದೆರಡು ಮಾರು ಸಾಗುವುದರಲ್ಲೇ ಕೈಗಳು ನೋವಿನಿಂದ ಚೀತ್ಕರಿಸಿದವು. ಗಢಗಢ ನಡುಗಿದವು, ಬಳುಕಾಡಿದವು, ಕೊನೆಗೂ ದೇಹ ನೆಲಕ್ಕುರುಳಿಯೇ ಬಿಟ್ಟಿತು! ತುಸು ಹೊತ್ತು ವಿಶ್ರಾಂತಿ ಪಡೆದು, ಸುಧಾರಿಸಿಕೊಂಡು ಮತ್ತೆ ಇನ್ನೊಂದು ಯತ್ನ ಮಾಡಿದವು. ಈ ಬಾರಿ ನೆಲವನ್ನು ಬಿಗಿದುಹಿಡಿಯಲು ಪ್ರಯತ್ನಿಸಿ ಕೈ ಬೆರಳುಗಳನ್ನು ಸಾಧ್ಯವಾದಷ್ಟು ಹಿಗ್ಗಿಸಿದವು. ಆದರೆ, ಹೆಬ್ಬೆರಳು ಮಾತ್ರ ತುಸು ಹಿಗ್ಗಿತು ಅಷ್ಟೇ. ಲಾಗಾ ಹಾಕಲು ಪ್ರಯತ್ನಿಸಿದವು. ಆದರೆ, ಅದಕ್ಕೆ ಕಾಲು ಬಳಕೆ ಅನಿವಾರ್ಯವಾದ್ದರಿಂದ ಆಟದಿಂದ ಅನರ್ಹಗೊಳಿಸಲಾಯಿತು. ಈಗ ಗಹಗಹಿಸಿ ನಗುವ ಸರದಿ ಕಾಲಿನ ಬೆರಳುಗಳದ್ದಾಯಿತು. ಅವು ಅಟ್ಟಹಾಸದ ನಗೆಯನ್ನು ಬಾಯಿಯಿಂದ ಪಡೆದು ಕೈಗಳ ಕೀರಲು ನಗೆಯನ್ನು ಅಣಕಿಸಿ ಜೋರಾಗಿ ನಕ್ಕವು. ಈ ಅಪಹಾಸ್ಯದ ನಗು ಕೇಳಿ ಕೈಗಳ ಸಿಟ್ಟು ಕೆಂಪೇರಿತು. ಆ ಅವಮಾನ, ಸಿಟ್ಟಿನಲ್ಲೇ ದೇಹವನ್ನು ಹೊತ್ತು ಸಾಗುವ ಮತ್ತೊಂದು ಅಂತಿಮ ಸಾಹಸ ಮಾಡಿದವು. ಒಂದಡಿ ಕೂಡ ಮುಂದೆ ಸಾಗದಾದವು. ಕೊನೆಗೂ ಸುಸ್ತಾದ ಕೈ ಮತ್ತು ಕೈಬೆರಳು ಸವಾಲು ಬಿಟ್ಟುಕೊಟ್ಟವು. ಈಗ ಕಾಲುಗಳು ಕಣಕ್ಕಿಳಿದವು. ತಮ್ಮ ಅದ್ಭುತ ಕ್ರೀಡಾ ಸಾಹಸಗಳನ್ನು ಪ್ರದರ್ಶನಕ್ಕಿಟ್ಟವು. ಅವು ಓಡಿದವು, ಹಾರಿದವು, ಜಿಗಿದವು, ಹೈಜಂಪ್, ಲಾಂಗ್ಜಂಪ್ಗಳನ್ನೆಲ್ಲಾ ಪ್ರದರ್ಶಿಸಿದವು; ಒಮ್ಮೆಯೂ ದೇಹವನ್ನು ಬೀಳಿಸದೇ! ಕಾಲುಗಳ ಈ ಸಾಹಸ, ಕೌಶಲ್ಯ ಬೆಂಬಲಿಸಿ ನೆರೆದ ವೀಕ್ಷಕರೆಲ್ಲಾ ತಮ್ಮ ಕಾಲುಗಳನ್ನು ಲಯವಾಗಿ ನೆಲಕ್ಕೆ ಅಪ್ಪಳಿಸಿದವು. ಆ ಮೂಲಕ ಕಾಲುಗಳ ಒಗ್ಗಟ್ಟು ಪ್ರದರ್ಶಿಸಿದವು. ಆಗ ಕೈಗಳು ಇದು ಸ್ಪರ್ಧಾ ಮನೋಭಾವಕ್ಕೆ ವಿರುದ್ಧ ಎಂದು ಗಾಳಿಯಲ್ಲಿ ಸೆಟೆದುನಿಂತು ವಿರೋಧ ವ್ಯಕ್ತಪಡಿಸಿದವು. ಆದರೆ, ಈ ಆಟವನ್ನು ತಾವೇ ಆರಂಭಿಸಿದ್ದು ಎಂಬುದನ್ನು ಮರೆತಿದ್ದವು.

ಆದರೆ, ವೀಕ್ಷಕರನ್ನೂ ಸೇರಿದಂತೆ ಅಲ್ಲಿದ್ದವರೆಲ್ಲಾ ಒಂದು ವಿಚಿತ್ರವನ್ನು ಗಮನಿಸಿದರು; ಕೈಗಳು ದೇಹವನ್ನು ಹೊತ್ತೊಯ್ಯಲು ಪ್ರಯತ್ನಿಸುತ್ತಿದ್ದಾಗ ಇತರ ಬೆರಳುಗಳಿಂದ ದೂರಕ್ಕೆ ಹಿಗ್ಗಿದ್ದ ಕೈ ಹೆಬ್ಬೆರಳುಗಳು ಹಾಗೇ ಚಾಚಿದಂತೆಯೇ ಉಳಿದುಬಿಟ್ಟಿದ್ದವು. ಹೀಗೆ ಚಾಚಿಕೊಂಡಿದ್ದ ಹೆಬ್ಬೆರಳುಗಳನ್ನು ಕಂಡು ಮತ್ತೆ ನಗಬೇಕು ಎಂದುಕೊಂಡಿದ್ದ ಕೈಗಳ ದಾಯಾದಿ ಅಂಗಗಳಿಗೆ ಒಂದು ಅಚ್ಚರಿ ಕಾದಿತ್ತು; ಹೆಬ್ಬೆರಳು ಚಾಚಿಕೊಂಡಿರುವುದು ಕೈಗಳ ಶಕ್ತಿಗುಂದಿಸುವ ಬದಲು ಅವನ್ನು ಇನ್ನಷ್ಟು ಸದೃಢಗೊಳಿಸಿತ್ತು. ಹಸ್ತದ ಹಿಡಿಪನ್ನು ಮತ್ತಷ್ಟು ಬಲಗೊಳಿಸುವ ಮೂಲಕ ಕೈಗೆ ಬಲ ತಂದುಕೊಟ್ಟಿತ್ತು ಆ ಬದಲಾವಣೆ. ವಿರೂಪವೇ ರೂಪದ ಬಲವೃದ್ಧಿಸಿದ ಬೆಳವಣಿಗೆ ಅದು!

ಇದೆಲ್ಲಾ ಮುಗಿದ ಬಳಿಕ ದೇಹದ ಇತರ ಅಂಗಗಳಿಗೆ ಸ್ಪರ್ಧೆಯ ವಿಜೇತರು ಯಾರು ಎಂಬುದನ್ನು ನಿರ್ಧರಿಸಲು ಕೈ ಮತ್ತು ಕಾಲುಗಳ ಬೆರಳುಗಳ ಸಂಖ್ಯೆಯಷ್ಟೇ; ಐದು ದಿನಗಳು; ಬೇಕಾದವು. ಎಷ್ಟು ಚರ್ಚಿಸಿದರೂ, ವಾದ- ವಿವಾದ ನಡೆದರೂ ಅಂತಿಮವಾಗಿ ಯಾರಿಗೆ ಜಯದ ಕಿರೀಟ ತೊಡಿಸುವುದು ಎಂಬುದನ್ನು ನಿರ್ಧರಿಸುವುದು ಸಾಧ್ಯವಾಗಲೇ ಇಲ್ಲ. ಏಕೆಂದರೆ; ಕೈ ಮತ್ತು ಕಾಲುಗಳ ಜೋಡಿಗಳೆರಡೂ ತಮ್ಮದೇ ರೀತಿಯಲ್ಲಿ ತಾವು ಮಾಡಬಹುದಾದ್ದನ್ನು ಮಾಡಿದ್ದವು. ಹಾಗೇ ಒಂದರ ಹೊರತಾಗಿ ಮತ್ತೊಂದು ಅದಕ್ಕಿಂತ ಉತ್ತಮವಾಗಿ ಏನನ್ನೂ ಮಾಡಲಾಗುತ್ತಿರಲಿಲ್ಲ. ಆಗ ಅಲ್ಲಿ ತಾತ್ವಿಕ ಲೆಕ್ಕಾಚಾರಗಳು ಆರಂಭವಾದವು; ದೇಹ ಎಂದರೆ ಏನು ಎಂದು ಎಲ್ಲಾ ಅಂಗಗಳು ಪ್ರಶ್ನೆ ಮುಂದಿಟ್ಟವು. ತಾವೆಲ್ಲರೂ ಸೇರಿ ಒಂದು ದೇಹ ಎಂಬುದನ್ನು ಚರ್ಚೆಯ ಬಳಿಕ ಅರ್ಥಮಾಡಿಕೊಂಡವು. ಪ್ರತಿ ಅಂಗವೂ ಮತ್ತೊಂದರ ಮೇಲೆ ಅವಲಂಬಿತ. ಎಲ್ಲರೂ ಹೊಂದಾಣಿಕೆಯಿಂದ ಉತ್ತಮ ಕೆಲಸ ಮಾಡಿದರೆ ಮಾತ್ರ ಅಂತಿಮವಾಗಿ ಎಲ್ಲವೂ ಉತ್ತಮವಾಗಿರಲು ಸಾಧ್ಯ ಎಂಬುದು ಕೂಡ ಗೊತ್ತಾಯಿತು.

ಆದರೆ, ಮುಂದಿನ ದಿನಗಳಲ್ಲಿ ಇಂತಹ ಸ್ಪರ್ಧೆ ಅಥವಾ ಒಬ್ಬರಿಗೆ ಅಡ್ಡಗಾಲಾಗಿ ಮತ್ತೊಬ್ಬರು ಬರುವುದನ್ನು ತಪ್ಪಿಸಲು ಎಲ್ಲಾ ಅಂಗಗಳು ಒಂದು ಒಮ್ಮತದ ತೀರ್ಮಾನ ಕೈಗೊಂಡವು. ಅದೆಂದರೆ; ಇನ್ನು ಮುಂದೆ ದೇಹ ನೇರವಾಗಿ ತಲೆ ಎತ್ತಿ ನಿಲ್ಲಬೇಕು. ಕಾಲುಗಳು ಗಟ್ಟಿಯಾಗಿ ನೆಲಕ್ಕೆ ಅಂಟಿಕೊಂಡಿರಬೇಕು. ಕೈಗಳು ಮೇಲೆ ಗಾಳಿಯಲ್ಲಿ ಬೀಸುತ್ತಾ ನಡೆಯಲು ನೆರವಾಗಬೇಕು. ಈ ನಿರ್ಧಾರ ಕೇಳಿ ದೇಹ ಖುಷಿಯಾಯಿತು. ಆದರೆ, ಮಕ್ಕಳು ಮಾತ್ರ ಕೆಲ ದಿನಗಳ ಮಟ್ಟಿಗಾದರೂ ಕೈ ಕಾಲುಗಳನ್ನು ಬಳಸಿ ನಾಲ್ಕು ಕಾಲಿನ ಮೇಲೆ ನಡೆಯಬೇಕು. ಹಾಗಾದರೂ ಅವರು ತನ್ನ ಮೂಲ ಸ್ವರೂಪವನ್ನು ನೆನಪಿಸಿಕೊಳ್ಳುವಂತಾಗಲಿ ಎಂದು ದೇಹ ಹೇಳಿತು. ಬಳಿಕ ಅಂಗಗಳು ತಮ್ಮ ತಮ್ಮ ಕೆಲಸಗಳನ್ನು ಹಂಚಿಕೊಂಡವು; ಕಾಲುಗಳು ದೇಹವನ್ನು ಹೊತ್ತುಕೊಂಡು ಓಡಾಡಬೇಕು. ಆದರೆ, ಒಮ್ಮೆ ನಿಗದಿ ಸ್ಥಳ ತಲುಪಿದ ಬಳಿಕ ಉಳಿದ ಸಲಕರಣೆಗಳನ್ನು ಮಾಡುವ ಅಥವಾ ಬಳಸುವ ಕೆಲಸವನ್ನು ಕೈಗಳೇ ಮಾಡಬೇಕು ಎಂದಾಯಿತು. ಕಾಲು ಮತ್ತು ಪಾದಗಳು ದೇಹವನ್ನು ಹೊತ್ತುಕೊಂಡು ಸಾಗುವ ಕಠಿಣ ಶ್ರಮದ ಕೆಲಸ ಮಾಡುತ್ತಿದ್ದರೆ, ಕೈಗಳು ದೇಹದ ನೆರವಿಗೆ ಬಂದು ಯಾವುದೇ ಕೆಲಸ, ಕಾರ್ಯಗಳನ್ನು ಮಾಡಲು ತಮ್ಮ ಕೌಶಲ ಉಪಯೋಗಿಸತೊಡಗಿದವು. ಊಟ ಬಾಯಿಗೆ ತಲುಪುವಂತೆ ಮಾಡುವುದು, ಬಳಿಕ ಬಾಯಿ, ಅದರಲ್ಲೂ ಅದರ ಹಲ್ಲುಗಳು ಆಹಾರವನ್ನು ಜಗಿಯುವುದು, ನಂತರ ಗಂಟಲ ಮೂಲಕ ಅದನ್ನು ಹೊಟ್ಟೆಗೆ ಸಾಗಿಸುವುದು. ಹೊಟ್ಟೆ ಆಹಾರದಲ್ಲಿನ ಎಲ್ಲ ಒಳ್ಳೆಯದನ್ನು ಹೀರಿಕೊಂಡು, ದೇಹದ ಪ್ರತಿ ಮೂಲೆಗೂ ಹಂಚಿಕೆ ಮಾಡುವ ವ್ಯವಸ್ಥಿತ ಚಾನೆಲ್ಗಳಿಗೆ(ರಕ್ತನಾಳ) ಸರಬರಾಜು ಮಾಡಬೇಕು. ನಂತರ ಉಳಿಕೆ ಆಹಾರ ಪದಾರ್ಥವನ್ನು ತನ್ನ ವಿಸರ್ಜನಾ ವ್ಯವಸ್ಥೆಗೆ ಕಳಿಸಬೇಕು. ಆ ಬಳಿಕ ದೇಹ ಆ ತ್ಯಾಜ್ಯವನ್ನು ಹೊರಗಿನ ಜಮೀನಿನಲ್ಲಿ ಹಾಕುತ್ತದೆ. ಅಲ್ಲಿ ಅದು ಮಣ್ಣಿನಡಿ ಹೂತು ಮಣ್ಣನ್ನು ಫಲವತ್ತಾಗಿಸುತ್ತದೆ. ಆ ಫಲವತ್ತಾದ ಮಣ್ಣ್ಣನ್ನು ಉಂಡು ಬೆಳೆಯುವ ಮರಗಳು ಹಣ್ಣು ಕೊಡುತ್ತವೆ. ಕೈಗಳು ಆ ಕೆಲವು ಹಣ್ಣನ್ನು ಕಿತ್ತು ಬಾಯಲ್ಲಿ ಇಡುತ್ತವೆ. ಓ.. ಇದು ಜೀವನ ಚಕ್ರ.

ಆಟೋಟ, ಮನರಂಜನೆಗಳನ್ನು ಕೂಡ ಒಂದೊಂದು ಅಂಗದ ಜವಾಬ್ದಾರಿಗೆ ವಹಿಸಲಾಯಿತು. ಹಾಡುವುದು, ನಗುವುದು ಮತ್ತು ಮಾತನಾಡುವುದನ್ನು ಬಾಯಿಗೆ ವಹಿಸಲಾಯಿತು. ಓಡುವುದು ಮತ್ತು ಫುಟ್ಬಾಲ್ ಆಟವನ್ನು ಬಹುತೇಕ ಕಾಲುಗಳಿಗೆ ವಹಿಸಲಾಯಿತು. ಬೇಸ್ ಬಾಲ್, ಬ್ಯಾಸ್ಕೆಟ್ ಬಾಲ್ ಆಟವನ್ನು ಕೈಗಳಿಗೆ ಮೀಸಲಿಡಲಾಯಿತು, ಕಾಲುಗಳಿಗೆ ಅವಕ್ಕೆ ಪೂರಕವಾಗಿ ಓಡುವುದು ಮಾತ್ರ ಎಂದಾಯಿತು. ಇನ್ನು ಆಟೋಟಗಳಲ್ಲಿ ಕಾಲುಗಳೇ ಬಹುತೇಕ ಎಲ್ಲಾ ಕಾರ್ಯ ಮಾಡಬೇಕು. ಹೀಗೆ ಎಲ್ಲಾ ಚಟುವಟಿಕೆಗಳ ಕುಶಲ ಹಂಚಿಕೆ ಮಾನವ ದೇಹವನ್ನು ಒಂದು ಬಯೋ ಮಷೀನ್ ರೀತಿ ಮಾಡಿ, ಪ್ರಮಾಣ ಮತ್ತು ಗುಣಮಟ್ಟದಲ್ಲಿ ಭೂಮಿ ಮೇಲಿನ ಅತ್ಯಂತ ದೊಡ್ಡ ಪ್ರಾಣಿಗಳನ್ನೂ ಮೀರಿಸಿತು.

ತಾವೇ ಕೂತು ನಿರ್ಣಯಿಸಿದ ಈ ಶಾಶ್ವತ ವ್ಯವಸ್ಥೆ ಕೂಡ ತಮ್ಮ ನಡುವೆ ಸಂಘರ್ಷ ತರಬಹುದು ಎಂಬ ಆತಂಕ ದೇಹದ ಅಂಗಗಳನ್ನು ಕಾಡಿತು. ದೇಹದ ಮೇಲೆ ತುತ್ತತುದಿಯಲ್ಲಿರುವ ತಲೆ ತಾನು ಕೆಳಗೆ ನೆಕ್ಕಂಟಿರುವ ಕಾಲುಗಳಿಗಿಂತ ಶ್ರೇಷ್ಠ ಎಂದುಕೊಳ್ಳಬಹುದು. ತಾನು ಯಜಮಾನ, ಉಳಿದ ಅಂಗಗಳೆಲ್ಲಾ ತನ್ನ ಸೇವಕರು ಎಂದು ಅದು ಭಾವಿಸಬಹುದು. ಹಾಗಾಗಿ, ಅಧಿಕಾರ ವಿಷಯದಲ್ಲಿ ತಲೆಯಂತೆಯೇ ಅದರ ಕೆಳಗಿರುವ ಎಲ್ಲಾ ಅಂಗಗಳೂ ಸಮಾನರು ಎಂದೂ ಒತ್ತಿ ಹೇಳಿದವು. ಈ ಮಾತನ್ನು ರುಜುವಾತು ಮಾಡಲು ಅವು ಯಾವುದೇ ಅಂಗದ ಯಾವುದೇ ಭಾಗಕ್ಕೆ ಆಗುವ ನೋವು ಮತ್ತು ಖುಷಿ ಎಲ್ಲಾ ಅಂಗಗಳ ಅನುಭವಕ್ಕೆ ಬರುವಂತೆ ನೋಡಿಕೊಂಡವು. ಹಾಗೇ, ಬಾಯಿ ನನ್ನ ಅದು, ನನ್ನ ಇದು, ಎನ್ನುವಾಗೆಲ್ಲಾ ತಾನು ಇಡೀ ದೇಹದ ಪರವಾಗಿ ಹೇಳುತ್ತಿದ್ದೇನೆಯೇ ಹೊರತು ತನ್ನೊಬ್ಬನ ಪರವಾಗಿ ಅಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದೂ ಸರ್ವಾಂಗಗಳೂ ನೆನಪಿಸಿದವು.

    ಅವು ಜೊತೆಯಾಗಿ;
    ನಮ್ಮ ದೇಹದಲ್ಲಿ
    ಸೇವಕರಾರೂ ಇಲ್ಲ,
    ನಾನೇ ನೆರವಾಗುತ್ತೇವೆೆ,
    ಒಬ್ಬರಿಗೊಬ್ಬರು.
    ನಮಗಾಗಿ ನಾವು.
    ನಾನೇ ನೆರವಾಗುತ್ತೇವೆೆ,
    ಒಬ್ಬರಿಗೊಬ್ಬರು
    ನಮಗಾಗಿ ನಾವು.
    ನಾನೇ ನೆರವಾಗುತ್ತೇವೆೆ
    ಒಬ್ಬರಿಗೊಬ್ಬರು,
    ನಮ್ಮ ಸಮೂಹ ಗಾನವಿದು
    ನಾನವನಿಗೆ, ಅವ ನನಗೆ ಆಸರೆ,
    ನಾವೆಲ್ಲಾ ಸೇರಿ ಸದೃಢ ದೇಹ ಕಟ್ಟುತ್ತೇವೆ
    ನಾನವನಿಗೆ, ಅವ ನಗೆ ಆಸರೆ,
    ನಾವೆಲ್ಲಾ ಸೇರಿ ಸದೃಢ ದೇಹ ಕಟ್ಟುತ್ತೇವೆ.
    ಒಗ್ಗಟ್ಟಲ್ಲೇ ನಮ್ಮ ಸೌಂದರ್ಯ.
    ಒಟ್ಟಾಗಿ ನಾವು ದುಡಿಯುತ್ತೇವೆ
    ಸದೃಢ ದೇಹಕ್ಕಾಗಿ.
    ಒಟ್ಟಾಗಿ ನಾವು ದುಡಿಯುತ್ತೇವೆ
    ಆರೋಗ್ಯಕರ ದೇಹಕ್ಕಾಗಿ

ಒಗ್ಗಟ್ಟೇ ನಮ್ಮ ಶಕ್ತಿ.. ಎಂದು ಹಾಡಿದವು ರಾಗವಾಗಿ.

ಇದು ದೇಹದ ರಾಷ್ಟ್ರಗೀತೆಯೇ ಆಗಿಹೋಯಿತು. ಈ ಗೀತೆಯನ್ನು ಇಂದಿಗೂ ದೇಹ ಹಾಡುತ್ತಲೇ ಇದೆ. ಇದುವೇ ಮನುಷ್ಯ ಮತ್ತು ಪ್ರಾಣಿಗಳ- ತಲೆ ಮೇಲ್ಮುಖ ಕ್ರಾಂತಿಯನ್ನು ತಿರಸ್ಕರಿಸಿದವರ- ನಡುವೆ ಇರುವ ಭಿನ್ನತೆ.

ನಾಲ್ಕು ಕಾಲಿನ ಪ್ರಾಣಿಗಳು ಮನುಷ್ಯನಲ್ಲಿ ಆದ ಈ ಬದಲಾವಣೆಯನ್ನು ಕಂಡದ್ದು ಬಿಟ್ಟರೆ, ಅವುಗಳಿಗೆ ಇದರ ಅನುಭವವಾಗಲಿಲ್ಲ. ಈ ಕ್ರಾಂತಿಯನ್ನು ಅವು ಕಾಣಲಿಲ್ಲ. ಅವುಗಳಲ್ಲಿ ಹಾಡುವುದೆಂದರೆ ಅದೊಂದು ಅಪಹಾಸ್ಯಕರ ಚಟುವಟಿಕೆ. ಅವುಗಳ ಬಾಯಿ ತಿನ್ನಲು ಮಾತ್ರ ಮಾಡಲಾಗಿದೆಯೇ ವಿನಃ ಹಾಡಲು ಅಲ್ಲ. ಅವುಗಳೆಲ್ಲಾ ಪ್ರಕೃತಿಯ ಸಂಪ್ರದಾಯಬದ್ಧ ಪಕ್ಷವನ್ನು ಕಟ್ಟಿಕೊಂಡವು ಹಾಗೂ ತಮ್ಮ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳದೆ, ಯಾವ ಬದಲಾವಣೆಯನ್ನೂ ಕಾಣದೆ ಹಾಗೇ ಉಳಿದುಬಿಟ್ಟವು.

ಯಾವಾಗ ಮನುಷ್ಯನ ಅಂಗಾಂಗಗಳ ಜಾಲ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುತ್ತದೆಯೋ ಆಗ ಆತ ಉತ್ತಮವಾದದ್ದನ್ನು ಸಾಧಿಸುತ್ತಾನೆ. ಯಾವಾಗ ದೇಹ ಮತ್ತು ತಲೆ ಪರಸ್ಪರ ನಾಮೇಲು, ತಾಮೇಲು ಎಂದು ಕದನಕ್ಕೆ ಇಳಿಯುತ್ತವೆಯೋ ಆಗ ಆತ ಮೇಲ್ಮಖ ಕ್ರಾಂತಿಯನ್ನು ತಿರಸ್ಕರಿಸಿದ ತನ್ನ ದಾಯಾದಿ ಸಂಬಂಧಿಗಳಾದ ಪ್ರಾಣಿಗಳ ಮಟ್ಟಕ್ಕೆ ಇಳಿಯುತ್ತಾನೆ.

Shashi Sampalli is a journalist. He is presently working at Kannada Prabha, a regional daily. He is also a well-known poet in Kannada language. His first poetry collection ‘Charithreya Jaadinachege’ was published in 2004. It has got good response from writers as well as critics. He hails from a sleepy village Sampalli in Shimoga district of Karnataka, an Indian state. He did his post-graduation in English Literature at Kuvempu University. He has translated some British and South African poets to his native language as well. As a journalist he has worked extensively on the life and development challenges of Western Ghats. He is presently residing at Shimoga, a town on the verge of Western Ghats.

ಗೂಗಿ ಪರಿಚಯ

ಗೂಗಿ ವಾ ಥಿಯಾಂಗೊ ಕೀನ್ಯಾದ ಲೇಖಕ. ವಸಾಹತೀಕರಣದ ಪ್ರಭಾವದಿಂದಾಗಿ ತನ್ನ ಆಫ್ರಿಕಾ ಖಂಡದ ಜನಜೀವನದಲ್ಲಿ ಆದ ಬದಲಾವಣೆ ಭಾಷೆಯೂ ಮೇಲೂ ಆಯಿತು. ಅದರಿಂದಾಗಿ 2000ಕ್ಕೂ ಹೆಚ್ಚು ಭಾಷೆಗಳು ಸಾವಿನ ಅಂಚಿಗೆ ತಳ್ಳಲ್ಪಟ್ಟವು. ಆ ಒಂದು ಸಂಸ್ಕೃತಿಯ ಸಜೀವ ವಾಹಕವಾದ ಭಾಷೆಯ ಅಳಿವು ಎಂದರೆ, ಆಯಾ ಸಂಸ್ಕೃತಿಯ ಅಳಿವು ಎಂದು ಪ್ರತಿಪಾದಿಸಿದ ಗೂಗಿ, ಆರಂಭದ ತನ್ನ ಬರಹಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆದರೂ ಬಳಿಕ, ತನ್ನ ಸೃಜನಶೀಲ ಅಭಿವ್ಯಕ್ತಿ ಮಾಧ್ಯಮವಾಗಿ ಕೀನ್ಯಾದ ತನ್ನ ಬುಡಕಟ್ಟು ಭಾಷೆ ಗಿಕುಯುನಲ್ಲೇ ಬರೆಯಲಾರಂಭಿಸಿದರು. ತಮ್ಮ ಡಿ ಕಲೊನೈಜಿಂಗ್ ದ ಮೈಂಡ್ ಕೃತಿಯ ಮೂಲಕ ಇಡೀ ವಸಾಹತು ರಾಷ್ಟ್ರಗಳಿಗೆ ಹೊಸ ಭಾಷೆ ಮತ್ತು ಸಂಸ್ಕೃತಿ ನಿರ್ವಚನೆಯ ಹೊಸ ಮಾದರಿ ಕಟ್ಟಿಕೊಟ್ಟ ಗೂಗಿ, ವಿಶ್ವದ ಪ್ರಮುಖ ವಸಾಹತೋತ್ತರ ಸಾಂಸ್ಕೃತಿಕ ಚಿಂತಕರಲ್ಲಿ ಪ್ರಮುಖರು. ಸದ್ಯ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಇಂಗ್ಲಿಷ್ ಮತ್ತು ತೌಲನಿಕ ಸಾಹಿತ್ಯದ ಪ್ರಾಧ್ಯಾಪಕರಾಗಿದ್ದಾರೆ.

ಕನ್ನಡದ ಮಟ್ಟಿಗೆ 80ರ ದಶಕದ ನಂತರದ ಸಂಸ್ಕೃತಿ ಅಧ್ಯಯನ ಮತ್ತು ವಿಮರ್ಶೆ ರಂಗದ ಮೇಲೆ ಬಹುದೊಡ್ಡ ಪ್ರಭಾವ ಬೀರಿರುವ ಲೇಖಕ ಗೂಗಿ. ಅವರ ಡಿ ಕಲೊನೈಜಿಂಗ್ ದ ಮೈಂಡ್ ಕೃತಿಯನ್ನು ವಿಮರ್ಶಕ ರಹಮತ್ ತರೀಕೆರೆ ಅವರು ವಸಾಹತು ಪ್ರಜ್ಞೆ ಮತ್ತು ವಿಮೋಚನೆ ಹೆಸರಿನಲ್ಲಿ 90ರ ದಶಕದಲ್ಲೇ ಕನ್ನಡಕ್ಕೆ ತಂದಿದ್ದಾರೆ. ಇನ್ನು ಡಾ ಸಿ ಎಸ್ ನಂಜುಂಡಯ್ಯ, ಡಾ ನಟರಾಜ್ ಹುಳಿಯಾರ್ ಮುಂತಾದವರು ಗೂಗಿಯ ಬಗ್ಗೆ ಬರೆದು, ಮಾತನಾಡಿ ಆತನನ್ನು ಜನಪ್ರಿಯಗೊಳಿಸಿದ್ದಾರೆ. ನಮ್ಮ ಕಥೆ, ಕಾವ್ಯ, ನಾಟಕ, ವಿಮರ್ಶೆಗಳನ್ನು ಕೂಡ ಪ್ರಭಾವಿಸಿರುವ ಗೂಗಿ ಒಂದು ರೀತಿಯಲ್ಲಿ ಇತ್ತೀಚಿನ ಕನ್ನಡ ಸಾಹಿತ್ಯದ ಪ್ರಜ್ಞೆಯ ಭಾಗವೇ ಆಗಿಬಿಟ್ಟಿದ್ದಾರೆ.

ಗುರುವಾರ, ಸೆಪ್ಟೆಂಬರ್ 1, 2016

ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ನ ನಿಜವಾದ ಪಾತ್ರವೇನು?

-ಶಿವಸುಂದರ್
shivasundar ಗೆ ಚಿತ್ರದ ಫಲಿತಾಂಶ

ಆತ್ಮೀಯರೇ,
 ಇದೊಂದು ಸುದೀರ್ಘ ಪತ್ರ. ಕ್ಷಮೆಯಿರಲಿ. ಆದರೆ ದಯವಿಟ್ಟು ಸ್ವಲ್ಪ ಸಮಯ ಕೊಟ್ಟು ಓದಬೇಕೆಂದು ವಿನಂತಿ. 

ನಟಿ ಮತ್ತು ರಾಜಕಾರಣಿ ರಮ್ಯ "ಪಾಕಿಸ್ತಾನದ ಜನರು ನಮ್ಮಂತೆಯೇ ಸಾಮಾನ್ಯ ಮನುಷ್ಯರು" ಎಂದು ಹೇಳಿದ್ದನ್ನೇ ಮಹಾಪರಾಧ ಮಾಡಿದ ಕನ್ನಡದ ಮಾಧ್ಯಮಗಳು ಅಂತಿಮವಾಗಿ ಪಾಕಿಸ್ತಾನದ ಬಗ್ಗೆ ಸಂಘಪರಿವಾರದ ದ್ವೇಷಮಯ ಧೋರಣೆ ಹೊಂದುವುದು ಮಾತ್ರ ದೇಶಪ್ರೇಮಿ ನಡವಳಿಕೆ ಉಳಿದದ್ದೆಲ್ಲವೂ ದೇಶದ್ರೋಹಿ ಎಂಬಂತೆ ಬಿಂಬಿಸುವಲ್ಲಿ ಯಶಸ್ವಿಯಾಗಿಬಿಟ್ಟವು. 

ನಂತರ "ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ನ ಪಾತ್ರವೇನೂ ಇರಲಿಲ್ಲ. ಅವರು ಹಲವು ಸರ್ತಿ  ಬ್ರಿಟಿಷರ  ಜೊತೆ ಕೈಗೂಡಿಸಿದ್ದರು" ಎಂಬ ಹೇಳಿಕೆಯನ್ನು ಹಿಡಿದುಕೊಂಡು ಮಾಧ್ಯಮಗಳು ಅತ್ಯಂತ ನಿರ್ಲಜ್ಜವಾಗಿ ಆರೆಸ್ಸೆಸ್ ಪರ ಬ್ಯಾಟಿಂಗ್ ಮಾಡುತ್ತಿವೆ. .ಒಂದೆಡೆ ಇದು ಟಿಆರ್ಪಿಗಾಗಿ ನಡೆಸುವ ಕಸರತ್ತು ಮಾತ್ರ ಎಂದು ನಮ್ಮಂಥ ಹಲವರು ಅದನ್ನು ಕಡೆಗಣನೆ ಮಾಡುತ್ತಿದ್ದರೆ,  ಕೋಮುವಾದಿಗಳಲ್ಲದ ಆದರೆ ಅವಕಾಶವಾದಿಗಳಾದ ಕಾಂಗ್ರೆಸ್ಸಿಗರನ್ನು ಒಳಗೊಂಡಂತೆ ಹಲವು ರಾಜಕಾರಣಿಗಳು ರಮ್ಯ ಅರೆಹುಚ್ಚಿ ಎಂಬಂತಲೋ ಅಥವಾ ತಿಳಿಯದೇ ಮಾತನಾಡುತ್ತಿದ್ದಾಳೆ ಎಂತಲೋ ಹೇಳಿಕೆ ನೀಡುತ್ತಿದ್ದಾರೆ. ಮಾಧ್ಯಮಗಳು ನಡೆಸುತ್ತಿರುವ ಕೆಲವು ಪೂರ್ವನಿರ್ಧಾರಿತ ಚರ್ಚೆಯೆಂಬ ಖೆಡ್ಡಾಗಳಲ್ಲಿ ಭಾಗವಹಿಸುತ್ತಿರುವ ಕೋಮುವಾದಿಗಳಲ್ಲದ ಹಲವು ಪತ್ರಕರ್ತರು ಮತ್ತು ಬುದ್ಧಿಜೀವಿಗಳು ಆರೆಸ್ಸೆಸ್ ನ ಕೋಮುವಾದಿ ರಾಜಕಾರಣದ ಬಗ್ಗೆ ಮಾತ್ರ ಮಾತಾಡುತ್ತಾ ಕೆಲವೊಮ್ಮೆ ಪ್ರತ್ಯಕ್ಷವಾಗಿ ಹಲವೊಮ್ಮೆ ಪರೋಕ್ಷವಾಗಿ ಆರೆಸ್ಸೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಿರಬಹುದೆಂಬ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. 

ಸ್ನೇಹಿತರೇ, ಇದು ಅತ್ಯಂತ ದುರ್ದೈವದ ಸಂಗತಿ. ಈ ಪ್ರಕ್ರಿಯೆಯಲ್ಲಿ ಆರೆಸ್ಸೆಸ್ ಮತ್ತವರ ಪರಿವಾರ ಇತಿಹಾಸದಲ್ಲಿ ಅವರು ಮಾಡಿದ ಅತ್ಯಂತ ಹೇಯ ದೇಶದ್ರೋಹಕ್ಕೂ ಮತ್ತು  ವರ್ತಮಾನದಲ್ಲಿ ಅವರು  ಜನದ್ರೋಹದಕ್ಕೂ  ಸುಳ್ಳು ರಾಷ್ಟ್ರೀಯತೆಯ ಪರದೆಯನ್ನು ಮುಚ್ಚಿ ಮರೆಮಾಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಮಾತ್ರವಲ್ಲ. ಭಾರತ ರಾಷ್ಟೀಯತೆಯೆಂದರೆ ಹಿಂದೂ ರಾಷ್ಟ್ರೀಯತೆಯೆಂಬ ಫ್ಯಾಸಿಸ್ಟ್ ರಾಜಕಾರಣಕ್ಕೆ ಜನಮತವನ್ನು ರೂಢಿಸಿಕೊಳ್ಳುತ್ತಿದ್ದಾರೆ. ಯುದ್ಧವನ್ನೇ ಮಾಡದೇ ಕೇವಲ ನಮ್ಮ ಮೌನ ಮತ್ತು ಇನ್ನುಳಿದವರ ಅವಕಾಶವಾದದ ಬೆಂಬಲದಿಂದ ಭಾರತವೆಂಬ ಆಶಯದ ಮೇಲೆ ನಡೆಸುತ್ತಿರುವ  ಕಾಳಗದಲ್ಲಿ  ಒಂದೊಂದೇ ಗೆಲುವು ಸಾಧಿಸುತ್ತಿದ್ದಾರೆ. 

ಹೀಗಾಗಿ ಇದು ಇನ್ನು  ರಮ್ಯ  ಅಥವಾ ಕಾಂಗ್ರೆಸ್ಸಿಗೆ ಮಾತ್ರ  ಸಂಬಂಧಿಸಿದ ಸಂಗತಿಯಾಗಿ ಉಳಿದಿಲ್ಲ. ಅದಕ್ಕಿಂತ ಹೆಚ್ಚಾಗಿ ಇಂಥಾ ಸಂಗತಿಗಳನ್ನು ಅವರಿಗೆ ಬಿಟ್ಟುಕೊಡುವ ಬೇಜವಾಬ್ದಾರಿಯನ್ನೂ ಮಾಡುವಂತೆಯೂ ಈಗಿಲ್ಲ. ಏಕೆಂದರೆ,  ಆರೆಸ್ಸೆಸ್ ಪ್ರತಿನಿಧಿಸುವ ಕಾರ್ಪೊರೇಟ್ ಮತ್ತು ಹಿಂದೂತ್ವವಾದಿ ಫ್ಯಾಸಿಸ್ಟ್ ರಾಜಕಾರಣದ ವಿರುದ್ಧ ಪ್ರಜಾತಂತ್ರವಾದಿಗಳು ಬಳಸುತ್ತಿದ್ದ ಭಾರತ ರಾಷ್ಟೀಯತೆಯೆಂಬ ಅಸ್ತ್ರವನ್ನೇ ಕಸಿದುಕೊಂಡುಬಿಡುವ ಹುನ್ನಾರ ಇದರಲ್ಲಿದೆ. ಹೀಗಾಗಿ ಜವಾಬ್ದಾಯುಳ್ಳವರು ಮಾಧ್ಯಮ ಮತ್ತು ಆರೆಸ್ಸೆಸ್ನ ಈ ಜಂಟಿ ಹುನ್ನಾರವನ್ನು ಬಯಲಿಗೆಳೆಯುವ ಅಗತ್ಯವಿದೆ ಎಂದು ನನ್ನ ಖಚಿತ ಅಭಿಪ್ರಾಯ. 

ಕನ್ನಡ ಮಾಧ್ಯಮ ರಂಗದಲ್ಲಿ ಅಳಿದುಳಿದ ಲಿಬರಲ್ ಸ್ಪೇಸನ್ನು ಮತ್ತು ವ್ಯಕ್ತಿಗಳನ್ನು ಕಿತ್ತುಹಾಕಿ ಸಂಪೂರ್ಣ ಬಲಪಂಥೀಯಗೊಳಿಸುತ್ತಿರುವ ಸುದ್ದಿಗಳು ಹಲವು ಕಡೆಯಿಂದ ಬರುತ್ತಿದೆ. ಸತ್ಯವನ್ನು ಸುಳ್ಳೆಂದು ಮತ್ತು ಸುಳ್ಳನ್ನೇ ಸತ್ಯವೆಂದು ಮಾಡಿ ಜನರನ್ನು ತಮ್ಮ ಕೈಯಿಂದಲೇ ತಮ್ಮ ಕಣ್ಣನ್ನು ಚುಚ್ಚಿಕೊಳ್ಳುವಂತೆ ಮಾಡುದ ಮನುವಾದಿಗಳ ಈ  ಹೊಸದಿರಿಸಿನ ಹಳೆ ಹುನ್ನಾರವನ್ನು ಸೋಲಿಸುವುದು ಹೇಗೆ?  ಕನ್ನಡಿಯಲ್ಲಿ ಕಾಣುವ ಬಿಂಬವೇ ನಮ್ಮದಲ್ಲವಾದಾಗ ತಿದ್ದುವುದೇನು? ಕಟ್ಟುವುದೇನು? 

ಈ ಹಿನ್ನೆಲೆಯಲ್ಲೇ  ವಿನಂತಿ ಪೂರ್ವಕವಾಗಿ  ಈ ಪತ್ರವನ್ನು ಬರೆಯುತ್ತಿದ್ದೇನೆ. ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ನ ನಿಜವಾದ ಪಾತ್ರವೇನು ಎಂಬುದನ್ನು ಇನ್ನಷ್ಟು ಖಚಿತಪಡಿಸುವ ಕೆಲವು ದಾಖಲೆಗಳನ್ನೂ, ಮಾಹಿತಿಗಳನ್ನೂ ಕಲೆಹಾಕಿ ಕಳಿಸುತ್ತಿದ್ದೇನೆ. ಇವೆಲ್ಲಾ ನಿಮಗೆ ತಿಳಿದಿರುವಂಥದ್ದೇ.. ಇದನ್ನು ಅಥವಾ ನಿಮ್ಮ ಬಳಿಯಿರುವ , ಗೊತ್ತಿರುವ ಇತರ ಆಕರಗಳನ್ನು ಬಳಸಿಕೊಂಡು ನಿಮಗೆ ಸಾಧ್ಯವಿರುವ ರೀತಿಯಲ್ಲಿ , ಅಂಖ್ತಿಣ್ಹಗ್ದಳನ್ನು ಬರೆಯುವ ಮೂಲಕ, ಸೋಷಿಯಲ್ ಮೀಡಿಯಾದಲ್ಲಿ ಬರೆಯುವ ಮೂಲಕ ಇತ್ಯಾದಿ,  ಸತ್ಯಗಳನ್ನೂ ಯುವಪೀಳಿಗೆಗೆ ತಲುಪಿಸಬೇಕೆಂದು ಆಗ್ರಹಿಸುತ್ತಿದ್ದೇನೆ. ೯೦ರ ನಂತರದ ಪೀಳಿಗೆಗೆ ಸಂಘಪರಿವಾರ ಹೇಳಿದ್ದು ಅಥವಾ ಮಾಧ್ಯಮಗಳು ಹೇಳಿದ್ದೇ ಸತ್ಯವಾಗಿಬಿಡುವ ಅಪಾಯವನ್ನು ತಪ್ಪಿಸಬೇಕಿದೆ. 

ನಿಮ್ಮೊಂದಿಗೆ
ಶಿವಸುಂದರ್

(ಸ್ವಾತಂತ್ರ್ಯ  ಹೋರಾಟದಲ್ಲಿ ಆರೆಸ್ಸೆಸ್ ಪಾತ್ರವೇನೂ ಇರಲಿಲ್ಲ ಎಂಬುದು ನಮ್ಮೆಲ್ಲರಿಗೂ ಗೊತ್ತು. ಅಷ್ಟು ಮಾತ್ರವಲ್ಲ. ಸಂವಿಧಾನದಲ್ಲಿ ನಾವು ಆಶಯಿಸಿರುವ ಭಾರತವೆಂಬ ಪರಿಕಲ್ಪನೆಗೇ ಆರೆಸ್ಸೆಸ್ ವಿರುದ್ಧವಿದ್ದದ್ದು ಮಾತ್ರವಲ್ಲದೆ ಹಲವು ಬಾರಿ ಅಮ್ಥ ಭಾರತದ ಐಡಿಯಾ ಸಾಕಾರವಾಗಬಾರದೆಂಬ ಸಂಚಿನಲ್ಲಿ ಬ್ರೀಟಿಷರ ಜೊತೆ ಕೈಗೂಡಿಸಿದ್ದೂ ಭಾರತದ ಇತಿಹಾಸದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಇಂದಿನ ಭಾರತೀಯ ಜನತಾ ಪಕ್ಷದ ಪೂರ್ವಜನಾಗಿರುವ ಭಾರತೀಯ  ಜನಸಂಘದ ಜನಕ ಶಾಮ್ ಪ್ರಸಾದ್ ಮುಖರ್ಜೀ ಕ್ವಿಟ್ ಇಂಡಿಯಾ ಚಳವಳಿಯ ವಿರುದ್ಧವಾಗಿ  ಬ್ರಿಟಿಷ ವೈಸ್ ರಾಯಿಯ ಮಂತ್ರಿಮಂಡಲ ಸೇರಿಕೊಂಡಿದ್ದು ಮಾತ್ರವಲ್ಲದೆ ಮುಸ್ಲಿಂ ಲೀಗಿನ ಫಜ್ಲುಲ್ ಹಕ್ಕಿನ ಜೊತೆಗೂಡಿ ಬಂಗಾಳ ಪ್ರಾಂತ್ಯದಲ್ಲಿ ಬ್ರಿಟಿಷರ ಪರವಾಗಿ ಜನತೆಯ ಮೇಲೆ ಅಮಾನುಷ ದಮನ ಮಾಡಿದ್ದೂ ಇತಿಹಾಸದಲ್ಲಿ ದಾಖಲಾಗಿದೆ. ಆರೆಸ್ಸೆಸ್ ಮತ್ತು ಹಿಂದೂ ಮಹಾ ಸಭಾ ಎರಡೂ ಸಹ ಸ್ವಾತಂತ್ರ್ಯ ಹೊರಾಟವೆಂದರೆ ಬ್ರಿಟಿಷ್ ವಿರೋಧೀ  ಹೋರಾಟವಲ್ಲವೆಂದೂ ಹಲವು ಸರ್ತಿ ಭಾರತೀಯ ಜನರನ್ನು ಒಪ್ಪಿಸಲು ಪ್ರಯತ್ನಿಸಿದ್ದಾರೆ. ತಮ್ಮ ರಾಷ್ಟ್ರೀಯತೆಯ ಪರಿಕಲ್ಪನೆಗೆ ಪ್ರೇರಣೆ ಇಟಲಿಯ ಫ್ಯಾಸಿಸಮ್ ಮತ್ತು ಜರ್ಮನಿಯ ನರಹಂತಕ ನಾಜಿಸಂ ಎಂಬುದನ್ನು ಆರೆಸ್ಸೆಸ್ ನ ಸಂಸ್ಥಾಪಕ ಹೆಗಡೆವಾರ್ , ಗೋಳ್ವಾಲ್ಕರ್ ಮತ್ತು ಹಿಂದೂ ಮಹಾ ಸಭದ ಸಾವರ್ಕರ್ ತಮ್ಮ ಸಂಘಗಳ ಅಧಿಕೃತ ದಸ್ತಾವೇಜುಗಳಲ್ಲೇ ಸ್ಪಷ್ಟಪಡಿಸಿದ್ದಾರೆ. 

ಅದರ ಕೆಲವು ಮಾಹ್ತಿಗಳು ಮತ್ತು ಪೂರಕ ದಾಖಲೆಗಳು ಅಡಕದಲ್ಲಿವೆ. ದಯವಿಟ್ಟು ಬಳಸಿಕೊಳ್ಳಿ) 


1.Golwalkar on "waht is freedom ovement"-  In all fairness to Golwalkar, he did not claim that the RSS had been opposed to the British rule. During the course of a speech delivered before the top-level cadres of the RSS drawn from whole of India at Indore on March 5, 1960 he said,

 “Many people worked with the inspiration to free the country by throwing the British out. After formal departure of the British this inspiration slackened. In fact there was no need to have this much inspiration. We should remember that in our pledge we have talked of the freedom of the country through defending religion and culture. There is no mention of departure of the British in that"

 Source: Shri Guruji Samagar Darshan, (collected works of Golwalkar in Hindi), Vol IV, Bharatiya Vichar Sadhana, Nagpur, nd, pp. 39-40. Hereafter referred as SGSD.

2. Golwalkar on how colonialism is not Unjust: The RSS was not even willing to regard colonial domination as an injustice. In a speech of June 8, 1942, at a time when India was reeling under unprecedented British repression, delivered at the conclusion of the all India training programme of the cadres at the Nagpur RSS headquarters, Golwalkar declared: 

"Sangh does not want to blame anybody else for the present degraded state of the society. When the people start blaming others, then there is basically weakness in them. It is futile to blame the strong for the injustice done to the weak…Sangh does not want to waste its invaluable time in abusing or criticizing others. If we know that large fish eat the smaller ones, it is outright madness to blame the big fish. Law of nature whether good or bad is true all the time. This rule does not change by terming it unjust.”

Source: Shri Guruji Samagar Darshan, (collected works of Golwalkar in Hindi), Vol 1, pp 11-12, , Bharatiya Vichar Sadhana, Nagpur, nd, pp. 39-40. Hereafter referred as SGSD.

3.Golwalkar on How anti Britishism is not patriotism!:  During the 1940s also the RSS aggressively campaigned for Hindu Rashtra, but stayed tenaciously aloof from the anti-British struggle. Golwalkar in fact made it clear that the variety of nationalism which the RSS espoused had no anti-British or anti-imperialist content whatsoever:

 “The theories of territorial nationalism and of common danger, which formed the basis for our concept of nation, had deprived us of the positive and inspiring content of our real Hindu Nationhood and made many of the ‘freedom movements’ virtually anti-British movements. AntiBritishism was equated with patriotism and nationalism. This reactionary view has had disastrous effects upon the entire course of the freedom movement, its leaders and the common people.”

Source: MS Golwalkar, Bunch of Thoughts, Sahitya Sindhu, Bangalore, 1996, p. 138. 

4.Savarkar in support of Nazism:  The other great mentor of the RSS, Savarkar also had great liking for Hitler’s Nazism and the Fascism of Mussolini. While delivering the Presidential address to the 22nd Session of the Hindu Mahasabha at Madura in 1940 he declared,

 “There is no reason to suppose that Hitler must be a human monster because he passes off as a Nazi or Churchill is a demi-God because he calls himself a democrat. Nazism proved undeniably the saviour of Germany under the set of circumstances Germany was placed in…”

Source: VD Savarkar, Hindu Rashtra Darshan, Puna, 1963, p. 418.

5. Savarkar in support of holocaust :  Savarkar went on to support Hitler’s anti-Jewish pogroms and on October 14, 1938, he suggested the same solution for the Muslim problem in India: 

“A Nation is formed by the majority living therein. What did the Jews do in Germany? They being in a minority were driven out from Germany”

 Source:  (MSA, Home Special Department, 60 D(g) Pt III, 1938, ‘Translation of the verbatim speech made by V D Savarkar at Malegaon on October 14, 1938).


Moonje on Fascism: (after meeting mussaloni in Italy)."  ...The idea of fascism vividly brings out the conception of unity amongst people...India and particularly Hindu India need some such institution for the military regeneration of the Hindus:  Our institution of Rashtriya Swayamsewak Sangh of Nagpur under Dr Hedgewar is of this kind, ".

Source:NMML, Moonje papers, subject files

7.  Hindu Maha sabha in support of Holocaust: On March 25, 1939 the Hindu party made the following statement:

" Germany’s solemn idea of the revival of the Aryan culture, the glorification of the Swastika, her patronage of Vedic learning and the ardent championship of the tradition of Indo-Germanic civilisation are welcomed by the religious and sensible Hindus of India with a jubilant hope... I think that Germany’s crusade against the enemies of Aryan culture will bring all the Aryan nations of the world to their senses and awaken the Indian Hindus for the restoration of their lost glory"

Source: The declaration contained in Auswartiges Amt-Politischen Archiv (AA-PA, Bonn)/Pol VII, statement by the spokesman of the Hindu Mahasabha, March 25, 1939, is quoted by M Hauner, op cit, p 66).

8. Ambedkar on Savarkar : Ambedkar  ruthlessly critiques the Hindu Mahasabha by stating:
 "The Hindu nationalist who hopes that Britain will coerce the Muslims into abandoning Pakistan, forgets that the right of nationalism to freedom from an aggressive foreign imperialism and the right of a minority to freedom from an aggressive majority's nationalism are not two different things, nor does the former stand on a more sacred footing than the latter."
"strange as it may seem, Mr. Savarkar and Mr. Jinnah instead of being opposed to each other on the two nations issue, are in complete agreement about it".

Source: PAKISTAN OR THE PARTITION OF INDIA

೯.  RSS ನ ವಿಷಯ ಬಂದಾಗ ಅದರ ಸ್ಥಾಪಕ ಹಡಗೆವಾರ್ ೧೯೨೦ರಲ್ಲಿ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದನ್ನು ಮತ್ತು ೧೯೩೦ರ ನಾಗರೀಕ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದನ್ನು ಉಲ್ಲೇಖೀಸಲಾಗುತ್ತದೆ. ಆದರೆ ಆರೆಸ್ಸೆಸ್ ಸ್ಥಾಪನೆಯಾಗಿದ್ದು ೧೯೨೫ರಲ್ಲಿ. ೧೯೩೦ರ ಉಪ್ಪಿನ ಸತ್ಯಾಗ್ರಹದಲ್ಲಿ ಆರೆಸ್ಸೆಸ್ ತನ್ನ ಎಲ್ಲ ಶಾಖೆಗಳಿಗೂ ಯಾವ ಕಾರಣಕ್ಕೂ ಆರೆಸ್ಸೆಸ್ ಒಂದು ಸಂಘಟನೆಯಾಗಿ ಈ ಚಳವಳಿಯಲ್ಲಿ ಭಾಗವಹಿಸಬಾರದೆಂದು ನಿರೂಪ ಹೊರಡಿಸಿ ಯಾರಾದರೂ ಆಸಕ್ತರು ಬೇಕಿದ್ದಲ್ಲಿ ವ್ಯಕ್ತಿಗಳಾಗಿ ಭಾಗವಹಿಸಬಹುದೆಂದು ಸೂಚನೆ ನೀಡಿರುತ್ತಾರೆ. ಅದರಂತೆ ತಾನು ಸಹ ಒಬ್ಬ ವ್ಯಕ್ತಿಯಾಗಿ ಮಾತ್ರ ಅದರಲ್ಲಿ ಭಾಗವಹಿಸುತ್ತಾರೆ. 

ಎಲ್ಲಕ್ಕಿಂತ ಹೆಚ್ಚಾಗಿ ೧೯೨೯ರ ಲಾಹೋರ್ ಅಧಿವೇಶನದಲ್ಲಿ ಕಾಂಗ್ರೆಸ್ ಸಂಪೂರ್ಣ ಸ್ವಾತಂತ್ರ್ಯವೇ ತನ್ನ ಗುರಿ ಎಂದು ಘೋಷಿಸಿ ೧೯೩೦ರ ಜನವರಿ ೨೬ರನ್ನು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಬೇಕೆಂದು ಕರೆಕೊಡುತ್ತದೆ. ಅಗ ಹೆಗಡೆವರ್ ಅವರು ಎಲ್ಲ ಶಾಖೆಗಳಲ್ಲೂ ತ್ರಿವರ್ಣ ಧ್ವಜದ ಬದಲಾಗಿ ಭಾಗವಾಧ್ವಜವನ್ನು ಹಾರಿಸಬೇಕೆಂದು ಮತ್ತು ತಮ್ಮ ಅರ್ಥದ ಸ್ವಾತಂತ್ರ್ಯವೇನೆಂಬುದನ್ನು ಜನರಿಗೆ ಈ ಅವಕಾಶವನ್ನು ಬಳಸಿಕೊಂಡು ಹೇಳಬೇಕೆಂದೂ  ಕರೆಕೊಡುತ್ತಾರೆ. ಹಾಗೆಯೆ  ಸ್ವಾತಂತ್ರ್ಯದ  ಹೆಸರಲ್ಲಿ  ಭಾಗವಾಧ್ವಜವನ್ನು ಹಾರಿಸುತ್ತಾರೆ. ಮಾತ್ರವಲ್ಲ ೧೯೩೦ರ ನಂತರ  ಆರೆಸ್ಸೆಸ್ ಶಾಖೆಗಳಲ್ಲಿ   ಮುಂದೆಂದೂ  ಸ್ವಾತಂತ್ರ್ಯ ದಿನ ಆಚರಿಸುವುದಿಲ್ಲ. 

ಮಹಾರಾಷ್ಟ್ರದ  ದೇಶಸ್ಥ ಬ್ರಾಹ್ಮಣ ಹಿನ್ನೆಲೆಯ ಹೆಗಡೇವರ್ ಮೂಲಭೂತವಾಗಿ 'ತಿಲಕ್ ' ವಾದೀ  ಹಿಂದೂ ರಾಷ್ಟ್ರೀಯತೆಯ ಹಿನ್ನೆಲೆಯಲ್ಲೇ ರಾಜಕೀಯಕ್ಕೆ ಬಂದವರು. ೧೯೨೦ರ ಅಸಹಕಾರ ಚಳವಳಿಯಲ್ಲಿ ವ್ಯಕ್ತವಾದ  ಹಿಂದೂ ಮುಸ್ಲಿಂ ಐಕ್ಯತೆಯಿಂದ ಕಂಗಾಲಾಗಿ ಪ್ರತ್ಯೇಕ ಹಿಂದೂ ರಾಷ್ಟ್ರೀಯವಾದವನ್ನು ಪ್ರಸರಿಸಲೆಂದೇ ಆರೆಸ್ಸೆಸ್ ಕಟ್ಟುತ್ತಾರೆ. ಅದನ್ನು ೧೯೪೦ರ ನಂತರ ಗೋಳ್ವಲ್ಕರ್ ಇನ್ನು ಸ್ಪಷ್ಟವಾಗಿ ಮುಸ್ಲಿಮರ ವಿರುದ್ಧವಾಗಿ, ದಲಿತ ಮತ್ತು ಮಹಿಳೆಯರ ವಿರುದ್ಧವಾಗಿ  ಮಾತ್ರವಲ್ಲ ಬ್ರಿಟಿಷರ ಪರವಾಗಿ ಬೆಳಸುತ್ತಾರೆ.