ಶನಿವಾರ, ಜುಲೈ 9, 2016

ಕರ್ನಾಟಕದಲ್ಲಿ (2015-16) ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 1407

-ಟಿ.ಕೆ.ದಯಾನಂದ

2015-16ರ ಸಾಲಿನಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 1407, ಅದ್ರಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 817. ಕಳೆದ 2014-15ನೇ ಸಾಲಿನ ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 122, ಸಾಲದ ಬಾಧೆಯಿಂದ ಜೀವ ಕಳೆದುಕೊಂಡ ರೈತರು 95.

ಗಮನಿಸಿ ನೋಡಿ.. ಈ 1529 ಮಂದಿ ರೈತರ ಪರವಾಗಿ ಈ ಡೂಪ್ಲಿಕೇಟ್ ದೇಶಭಕ್ತರು, ಭಾಷಣ ಹೊಡೆಯೋ ಪುಂಗಿದಾಸರು, ಗಢವಗಿರಾಕಿಗಳು ಯಾವತ್ತಾದ್ರೂ ಉಸಿರೆತ್ತಿದ್ದಾರಾ ? ರಾಜ್ಯಸರ್ಕಾರದ ಕತ್ತಿನಪಟ್ಟಿ ಹಿಡಿದು ಈ ಸಾವುಗಳಿಗೆ ನ್ಯಾಯ ಕೇಳಿದ್ದಾರ? ಸತ್ತ ರೈತನ ಮನೆಗೆ ತೆರಳಿ ಅವನ ಜೊತೆ ಒಂದು ದಿನ ಕಳೆದು ಬಂದಿದ್ದಾರ? ಆತ್ಮಹತ್ಯೆ ಮಾಡಿಕೊಂಡ ರೈತರ ಅಧಿಕೃತ ಜಿಲ್ಲಾವಾರು ಪಟ್ಟಿ ಇಲ್ಲಿದೆ. ಅನ್ನದಾತರ ಸಾವುಗಳನ್ನ ತಡೆಯೋಕೆ ಹೋರಾಟ, ಸತ್ಯಾಗ್ರಹ, justice for farmers ಅಂತ ಕ್ಯಾಂಪೇನು ಮಾಡಿದ್ದಾರ ? ಯಾವನಾದ್ರು ದೇಶಭಕ್ತ ರೈತರ ಸಾವಿನ ವಿಷ್ಯಗಳನ್ನ ಕೈಗೆತ್ತಿಕೊಂಡು ರಾಜ್ಯಸರ್ಕಾರದ ಬೆವರು ಇಳಿಸೋ ಅಷ್ಟು ದೇಶಭಕ್ತಿ ಪ್ರದರ್ಶಿಸ್ತಾರ? ಬನ್ರಪ್ಪ ನಿಮ್ಮ ದೇಶಪ್ರೇಮ ಪ್ರೂವ್ ಮಾಡೋಕೆ ಒಂದೊಳ್ಳೆ ಅವಕಾಶ ಇದು.

ದೇಶಭಕ್ತಿ ಅಂದ್ರೆ ಕಂಡವರ ಮನೆ ಮಕ್ಳನ್ನ ದೊಂಬಿಗಳಿಸಿ ಜೈಲಿಗಟ್ಟಿ ಅವರ ಮನೆ ಹಾಳು ಮಾಡೋದಲ್ಲ, "ದೊಡ್ಡಕರುಳು, ಸಣ್ಣಕರುಳು ಕಿತ್ತು ಬರುತ್ತೆ ಕಣ್ರಿ " ಅಂತ ಪುಗ್ಸಟ್ಟೆ ಬಾಷಣ ಬೊಗಳೋದಲ್ಲ, ತಳಬುಡ ಇಲ್ಲದ ತವುಡು ಕುಟ್ಟಿ ಕಾಲಂ ಕಕ್ಕೋದಲ್ಲ, ತಮ್ಮದೇ ಪಕ್ಷದ ಬೂತ್ ವರ್ಕರ್ ಗಳನ್ನ ಕೊಂದು ಹಾಕೋದಲ್ಲ, ಕಿಡ್ನಾಪರ್, ರೌಡಿ ಎಲಿಮೆಂಟು ಭಜರಂಗಿಗಳಿಗೆ ಸಪೋರ್ಟ್ ಮಾಡೋದಲ್ಲ. ದೇಶಪ್ರೇಮ ಅಂದ್ರೆ ರೈತರ ಜೊತೆಗೆ ನಿಲ್ಲೋದು. ಬಂದು ನಿಂತು, ನಿಮ್ಮ ನಿಮ್ಮ ದೇಶಪ್ರೇಮ ಎಷ್ಟರಮಟ್ಟಿಗೆ ಒರಿಜಿನಲ್ಲು ಅಂತ ಪ್ರೂವ್ ಮಾಡ್ರಪ್ಪ.


ಕಾಮೆಂಟ್‌ಗಳಿಲ್ಲ: