ಬುಧವಾರ, ಜುಲೈ 9, 2014

ಸಾಹಿತ್ಯ ಅಕಾಡೆಮಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಂದ ಅರ್ಜಿ ಅಹ್ವಾನಿಸುತ್ತಿದೆ

krupe: avadhi

2014-15ನೇ ಸಾಲಿಗೆ ವಿಶೇಷ ಘಟಕ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಂದ ಫೆಲೋಶಿಪ್ಗೆ ಅರ್ಜಿ ಆಹ್ವಾನ
ಕರ್ನಾಟಕ ಸಾಹಿತ್ಯ ಅಕಾಡೆಮಿಯು 2014-15ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿಯಲ್ಲಿ 8 ಜನರಿಗೆ ತಲಾ ರೂ. 1.00 ಲಕ್ಷದಂತೆ ಫೆಲೋಶಿಪ್ ನೀಡಲು ಉದ್ದೇಶಿಸಿದೆ. ಫೆಲೋಶಿಪ್ಗೆ ಈ ಕೆಳಕಂಡ ಅರ್ಹತೆಯುಳ್ಳವರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಮಾತ್ರ ಅರ್ಜಿ ಹಾಕತಕ್ಕದ್ದು (ಸಂಬಂಧಪಟ್ಟ ಜಾತಿಪ್ರಮಾಣದ ದೃಢೀಕೃತ ಪ್ರತಿಯನ್ನು ಲಗತ್ತಿಸಿರಬೇಕು).
ಯಾವುದೇ ಪದವಿ ಪಡೆದವರು ಅರ್ಜಿ ಹಾಕಬಹುದು (ಪ್ರಮಾಣಪತ್ರದ ದೃಢೀಕೃತ ಪ್ರತಿ ಲಗತ್ತಿಸಬೇಕು) ನಿಗದಿತ ಅರ್ಜಿಯನ್ನು ಸ್ವವಿಳಾಸವಿರುವ ಅಂಚೆ ಲಕೋಟೆ ಇಟ್ಟು ಅಕಾಡೆಮಿಯಿಂದ ಪಡೆಯಬಹುದು.
ನಿರ್ದಿಷ್ಟ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರು , ಪದವಿ ಪಡೆಯದಿದ್ದರೂ ಅರ್ಜಿ ಹಾಕಬಹುದು. 20-50 ವಯೋಮಾನದ ಒಳಗಿನವರು ಅರ್ಜಿ ಹಾಕಬಹುದು (ಸಂಬಂಧಿಸಿದ ಎಸ್.ಎಸ್.ಎಲ್.ಸಿ. ದೃಢೀಕೃತ ಅಂಕಪಟ್ಟಿಯನ್ನು ಲಗತ್ತಿಸಿರಬೇಕು)
ಈ ಕೆಳಕಂಡ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು ಸಾರಲೇಖವನ್ನು  4-5 ಪುಟಗಳವರೆಗೆ ಸಿದ್ಧಪಡಿಸಿ 2014 ಆಗಸ್ಟ್ 15ರೊಳಗೆ ಅಕಾಡೆಮಿಗೆ ಸಲ್ಲಿಸಬೇಕು. ಆಯ್ಕೆಯಾದಲ್ಲಿ ವಿಷಯದ ಬದಲಾವಣೆಯನ್ನು ಮಾಡುವ ಹಕ್ಕು ಅಕಾಡೆಮಿಗೆ ಇರುತ್ತದೆ. ಪಿಎಚ್.ಡಿ. ಅಥವಾ ಎಂ.ಫಿಲ್ ಗೆ ಸಲ್ಲಿಸಿದ ಸಂಶೋಧನಾ ವಿಷಯವಾಗಿರಬಾರದು.
ವಿಷಯಗಳು:
ಕುಲದರ್ಶನ ಸಂಕಥನಗಳ ಅಧ್ಯಯನ.
ದಲಿತ ಸಾಹಿತ್ಯದಲ್ಲಿ ಭಾಷಾಭಿವ್ಯಕ್ತಿ – ಸಾಂಸ್ಕೃತಿಕ ಅನನ್ಯತೆಯ ಸಾಧ್ಯತೆಗಳು.
ದಲಿತರ ಸಾಂಸ್ಕೃತಿಕ ಚರಿತ್ರೆಯ ಹಿನ್ನೋಟಗಳ ಅಧ್ಯಯನ.
ದಲಿತರ ಸಾಂಸ್ಕೃತಿಕ ಕಥನಗಳ ಅಧ್ಯಯನ.
ದಲಿತ ಮಹಿಳಾ ಚಳುವಳಿಯ ಅಧ್ಯಯನ.
ತಳಸ್ತರ ವಚನಕಾರ್ತಿಯರ ವಚನಗಳ ಅಧ್ಯಯನ.
ಗಣಿಗಾರಿಕೆ ಪ್ರದೇಶಗಳ ಜನಪದೀಯ ಅಧ್ಯಯನ.
ಕರ್ನಾಟಕದ ಕುಶಲಕರ್ಮಿಗಳು.
ಸ್ಥಳೀಯ ಕುಲಕಸಬುಗಳು ಮತ್ತು ಜನಬದುಕು.
ಅರ್ಜಿಯನ್ನು ಸಾರಲೇಖದೊಂದಿಗೆ ಸಲ್ಲಿಸಲು ಕೊನೆಯ ದಿನಾಂಕ: 2014 ಆಗಸ್ಟ್ 15
ಹೆಚ್ಚಿನ ವಿವರಗಳಿಗಾಗಿ ಅಕಾಡೆಮಿಯನ್ನು ಸಂಪರ್ಕಿಸಬಹುದಾಗಿದೆ. (080-22211730/ 22106460)
***
2014-15ನೇ ಸಾಲಿಗೆ ಗಿರಿಜನ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಫೆಲೋಶಿಪ್ಗೆ ಅರ್ಜಿ ಆಹ್ವಾನ
ಕರ್ನಾಟಕ ಸಾಹಿತ್ಯ ಅಕಾಡೆಮಿಯು 2014-15ನೇ ಸಾಲಿನಲ್ಲಿ ಗಿರಿಜನ ಉಪಯೋಜನೆಯಡಿಯಲ್ಲಿ 4 ಜನರಿಗೆ ತಲಾ ರೂ. 1.00 ಲಕ್ಷದಂತೆ ಫೆಲೋಶಿಪ್ ನೀಡಲು ಉದ್ದೇಶಿಸಿದೆ.
ಫೆಲೋಶಿಪ್ಗೆ ಈ ಕೆಳಕಂಡ ಅರ್ಹತೆಯುಳ್ಳವರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಮಾತ್ರ ಅರ್ಜಿ ಹಾಕತಕ್ಕದ್ದು (ಸಂಬಂಧಪಟ್ಟ ಜಾತಿಪ್ರಮಾಣದ ದೃಢೀಕೃತ ಪ್ರತಿಯನ್ನು ಲಗತ್ತಿಸಿರಬೇಕು)
ಯಾವುದೇ ಪದವಿ ಪಡೆದವರು ಅರ್ಜಿ ಹಾಕಬಹುದು (ಪ್ರಮಾಣಪತ್ರದ ದೃಢೀಕೃತ ಪ್ರತಿ ಲಗತ್ತಿಸಬೇಕು)
ನಿಗದಿತ ಅರ್ಜಿಯನ್ನು ಸ್ವವಿಳಾಸವಿರುವ ಅಂಚೆ ಲಕೋಟೆ ಇಟ್ಟು ಅಕಾಡೆಮಿಯಿಂದ ಪಡೆಯಬಹುದು. ನಿರ್ದಿಷ್ಟ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರು , ಪದವಿ ಪಡೆಯದಿದ್ದರೂ ಅರ್ಜಿಹಾಕಬಹುದು.
20-50 ವಯೋಮಾನದ ಒಳಗಿನವರು ಅರ್ಜಿ ಹಾಕಬಹುದು (ಸಂಬಂಧಿಸಿದ ಎಸ್.ಎಸ್.ಎಲ್.ಸಿ. ದೃಢೀಕೃತ ಅಂಕಪಟ್ಟಿಯನ್ನು ಲಗತ್ತಿಸಿರಬೇಕು)
ಈ ಕೆಳಕಂಡ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು ಸಾರಲೇಖವನ್ನು  4-5 ಪುಟಗಳವರೆಗೆ ಸಿದ್ಧಪಡಿಸಿ 2014 ಆಗಸ್ಟ್ 15ರೊಳಗೆ ಅಕಾಡೆಮಿಗೆ ಸಲ್ಲಿಸಬೇಕು.
ಆಯ್ಕೆಯಾದಲ್ಲಿ ವಿಷಯದ ಬದಲಾವಣೆಯನ್ನು ಮಾಡುವ ಹಕ್ಕು ಅಕಾಡೆಮಿಗೆ ಇರುತ್ತದೆ. ಪಿಎಚ್.ಡಿ. ಅಥವಾ ಎಂ.ಫಿಲ್ ಗೆ ಸಲ್ಲಿಸಿದ ಸಂಶೋಧನಾ ವಿಷಯವಾಗಿರಬಾರದು.
ವಿಷಯಗಳು:
ಗಿರಿಜನರ ವೈದ್ಯಪದ್ಧತಿಗಳು.
ಗಿರಿಜನರ ಆಚರಣೆಗಳ ಸಾಂಸ್ಕೃತಿಕ ನೆಲೆ.
ಗಿರಿಜನರ ಪರಿಸರದ ವೈವಿಧ್ಯತೆ – ಸಾಂಸ್ಕೃತಿಕ ಅಧ್ಯಯನ.
ಪ್ರಾಣಿಗಳ ವರ್ತನೆಯ ಅಧ್ಯಯನ – ಗಿರಿಜನರ ಸಾಂಸ್ಕೃತಿಕ ನೆಲೆಗಳಲ್ಲಿ.
ಕುವೆಂಪು ಅವರ ಸಾಹಿತ್ಯ ಮತ್ತು ಗಿರಿಜನ ಸಂಸ್ಕೃತಿ ವೈವಿಧ್ಯ.
ಗಿರಿಜನ ಮಹಿಳೆಯರ ಸಾಂಸ್ಕೃತಿಕ ಕಥನಗಳ ಅಧ್ಯಯನ.   ಅರ್ಜಿಯನ್ನು ಸಾರಲೇಖದೊಂದಿಗೆ ಸಲ್ಲಿಸಲು ಕೊನೆಯ ದಿನಾಂಕ: 2014 ಆಗಸ್ಟ್ 15
ಹೆಚ್ಚಿನ ವಿವರಗಳಿಗಾಗಿ ಅಕಾಡೆಮಿಯನ್ನು ಸಂಪರ್ಕಿಸಬಹುದಾಗಿದೆ. (080-22211730/ 22106460)
***
2014-15ನೇ ಸಾಲಿಗೆ ಫೆಲೋಶಿಪ್ ನೀಡಲು ಅರ್ಜಿ ಆಹ್ವಾನ
ಕರ್ನಾಟಕ ಸಾಹಿತ್ಯ ಅಕಾಡೆಮಿಯು 2014-15ನೇ ಸಾಲಿನಲ್ಲಿ 5 ಜನರಿಗೆ ತಲಾ ರೂ. 1.00 ಲಕ್ಷದಂತೆ ಫೆಲೋಶಿಪ್ ನೀಡಲು ಉದ್ದೇಶಿಸಿದೆ.
ಫೆಲೋಶಿಪ್ಗೆ ಈ ಕೆಳಕಂಡ ಅರ್ಹತೆಯುಳ್ಳವರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಯಾವುದೇ ಪದವಿ ಪಡೆದವರು ಅರ್ಜಿ ಹಾಕಬಹುದು (ಪ್ರಮಾಣಪತ್ರದ ದೃಢೀಕೃತ ಪ್ರತಿ ಲಗತ್ತಿಸಬೇಕು)
ನಿಗದಿತ ಅರ್ಜಿಯನ್ನು ಸ್ವವಿಳಾಸವಿರುವ ಅಂಚೆ ಲಕೋಟೆ ಇಟ್ಟು ಅಕಾಡೆಮಿಯಿಂದ ಪಡೆಯಬಹುದು.
ನಿರ್ಸಿಷ್ಟ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರು , ಪದವಿ ಪಡೆಯದಿದ್ದರೂ ಅರ್ಜಿ ಹಾಕಬಹುದು.
20-50 ವಯೋಮಾನದ ಒಳಗಿನವರು ಅರ್ಜಿ ಹಾಕಬಹುದು (ಸಂಬಂಧಿಸಿದ ಎಸ್.ಎಸ್.ಎಲ್.ಸಿ. ದೃಢೀಕೃತ ಅಂಕಪಟ್ಟಿಯನ್ನು ಲಗತ್ತಿಸಿರಬೇಕು)
ಈ ಕೆಳಕಂಡ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು ಸಾರಲೇಖವನ್ನು 4-5 ಪುಟಗಳವರೆಗೆ ಸಿದ್ಧಪಡಿಸಿ 2014 ಆಗಸ್ಟ್ 15ರೊಳಗೆ ಅಕಾಡೆಮಿಗೆ ಸಲ್ಲಿಸಬೇಕು.
ಆಯ್ಕೆಯಾದಲ್ಲಿ ವಿಷಯದ ಬದಲಾವಣೆಯನ್ನು ಮಾಡುವ ಹಕ್ಕು ಅಕಾಡೆಮಿಗೆ ಇರುತ್ತದೆ. ಪಿಎಚ್.ಡಿ. ಅಥವಾ ಎಂ.ಫಿಲ್ ಗೆ ಸಲ್ಲಿಸಿದ ಸಂಶೋಧನಾ ವಿಷಯವಾಗಿರಬಾರದು.
ವಿಷಯಗಳು:
ಕನ್ನಡದಲ್ಲಿ ವೈದ್ಯ ಸಾಹಿತ್ಯ, ವಿಜ್ಞಾನ ಸಾಹಿತ್ಯ- ಸಮಸ್ಯೆಗಳು ಹಾಗೂ ಸವಾಲುಗಳು.
ಶಿಕ್ಷಣ ಮಾಧ್ಯಮವಾಗಿ ಕನ್ನಡ – ಸಮಸ್ಯೆಗಳು, ಸವಾಲುಗಳು ಹಾಗೂ ಪರಿಹಾರೋಪಾಯಗಳು.
ಕನ್ನಡ ಸಾಹಿತ್ಯದಲ್ಲಿ ಜಾಗತೀಕರಣದ ಸ್ವರೂಪ ಜ್ಞಾನಯುಗದ ಒಳಮರ್ಮಗಳು ಮತ್ತು ಕನ್ನಡ ಸಮುದಾಯಗಳ ಮೇಲಿನ ಪ್ರಭಾವಗಳು.
ಸ್ಥಳೀಯ ಜ್ಞಾನೋತ್ಪಾದನೆಯ ಹೊಸ ಮಾರ್ಗಗಳು ಮತ್ತು ಕಾವ್ಯಮೀಮಾಂಸೆ-ಒಂದು ಅನ್ವೇಷಣೆ.
ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯ ಸಾಮಾಜಿಕ ಸಂಸ್ಕೃತಿಯ ಅಧ್ಯಯನ.
ಸ್ಲಮ್ಗಳಲ್ಲಿ ಬದುಕುವ ಮಹಿಳೆಯರ ಅಧ್ಯಯನ.
ಕರ್ನಾಟಕದಲ್ಲಿ ಸಮುದಾಯನಿಷ್ಠ ಆರೋಗ್ಯ ಪ್ರಯೋಗಗಳು.
ಸ್ಥಳೀಯ ಬೇಸಾಯ ಪರಂಪರೆಗಳ ಅಧ್ಯಯನ.
ಸ್ಥಳೀಯ ಪಶುಸಂಗೋಪನೆ ವಿಧಾನಗಳ ಅಧ್ಯಯನ.
ಮುಸ್ಲಿಂ ಸಮುದಾಯದೊಳಗಿನ ಜನಪದೀಯ ನಂಬಿಕೆಗಳು.
ನವ ಅಧ್ಯಾತ್ಮಿಕತೆಯ ಸಾಂಸ್ಕೃತಿಕ ಅಧ್ಯಯನ.
ಕನ್ನಡ ಇ-ಪತ್ರಿಕೆಗಳ ಅಧ್ಯಯನ.
ಕರ್ನಾಟಕದಲ್ಲಿ ಕ್ರೈಸ್ತ ಸಮುದಾಯದ ಮಹಿಳೆಯರ ಆಚರಣೆಗಳು.
ಅರ್ಜಿಯನ್ನು ಸಾರಲೇಖದೊಂದಿಗೆ ಸಲ್ಲಿಸಲು ಕೊನೆಯ ದಿನಾಂಕ: 2014 ಆಗಸ್ಟ್ 15 ಹೆಚ್ಚಿನ ವಿವರಗಳಿಗಾಗಿ ಅಕಾಡೆಮಿಯನ್ನು ಸಂಪರ್ಕಿಸಬಹುದಾಗಿದೆ. (080-22211730/ 22106460)

1

ಕಾಮೆಂಟ್‌ಗಳಿಲ್ಲ: