ಮಂಗಳವಾರ, ನವೆಂಬರ್ 13, 2012

ದೀಪಾವಳಿಗೆ ಲಂಕೇಶ್ ಮಾತುಗಳು…

ದೀಪಾವಳಿಗೆ ಲಂಕೇಶ್ ಮಾತುಗಳು…


ನಮ್ಮ ಹಳ್ಳಿಗಳಲ್ಲಿ ಮತ್ತೊಮ್ಮೆ ದೀಪಗಳು ವಿಶ್ವಾಸದಿಂದ ಪ್ರೀತಿಯಿಂದ ಉರಿಯಬೇಕಾಗಿದೆ. ನಮ್ಮ ಊರುಗಳು ಮತ್ತೆ ಜನಕ್ಕೆ ಸೇರಬೇಕಾಗಿದೆ. ಗ್ರಾಮದ ಮನುಷ್ಯನ ಎದೆಯಲ್ಲಿ ಮೂಡಿರುವ ಛಿದ್ರ ಮಾಯವಾಗಿ ಆತನ ದುಡಿಮೆಗೆ ಸ್ಪೂರ್ತಿ ಬಂದು ಆತನು ಗ್ರಾಮವನ್ನು ಪ್ರೀತಿಸುವಂತೆ ಆಗಬೇಕಾಗಿದೆ. ಈತ ಪಡೆಯುತ್ತಿರುವ ವ್ಯಂಗ್ಯ, ವೈಚಾರಿಕತೆ,ಯಾಂತ್ರಿಕತೆಯ ಜೊತೆಗೇ ಆತನಿಗೆ ಮತ್ತೊಮ್ಮೆ ಜೀವನದ ಗೂಢ ಮಾಂತ್ರಿಕತೆ ದಕ್ಕಿ, ಹೊಲಗದ್ದೆ ಹಿತ್ತಲುಮನೆ ಮತ್ತೊಮ್ಮೆ ಒಂದಾಗಿ ಪ್ರಕೃತಿಯ ಸಹಕಾರ ದೊರೆತು ಅವನ ಪರಿಸರದ ಬಗ್ಗೆ ಆತನಲ್ಲಿ ಹೆಮ್ಮೆ ಮೂಡಬೇಕಾಗಿದೆ.

ಈ ಹಬ್ಬದಂದು ಇದು ಮೊದಲ ಹಂತದ ಚಿಂತನೆ

-ಪಿ.ಲಂಕೇಶ್, ದೀಪಾವಳಿ ವಿಶೇಷಾಂಕ ಅಕ್ಟೋಬರ್ 1984

ಕಾಮೆಂಟ್‌ಗಳಿಲ್ಲ: