ಮಂಗಳವಾರ, ಡಿಸೆಂಬರ್ 2, 2014

ಗೋಧಾವರಿಯ ತಟದಲ್ಲಿ ಆದಿವಾಸಿಗಳ 'ಕುಂಭಮೇಳ'!

-Koragerna Alipu Oripu
  ನವ ರಾಜ್ಯ - 'ತೆಲಂಗಾಣ'ದ, ವಾರಂಗಲ್ ಜಿಲ್ಲೆಯ ಮೆಡರಮ್ ಗ್ರಾಮದ ದಟ್ಟಾರಣ್ಯದ ಪಕ್ಕದಲ್ಲಿ ಹರಿಯುವ 'ಗೋಧಾವರಿ'ಯ ತಟದಲ್ಲಿ ಸಂಭ್ರಮದಿಂದ ಎರಡು ವರ್ಷಕ್ಕೊಮ್ಮೆ ಆಚರಿಸಲ್ಪಡುವ 'ಸಮ್ಮಕ್ಕ ಸಾರಕ್ಕ ಜಾತ್ರ' (ಜಾತ್ರೆ) 'ಆದಿವಾಸಿಗಳ ಕುಂಭಮೇಳ'ವೆಂದೇ ಪ್ರಸಿದ್ಧಿ ಪಡೆದಿದೆ!
ಫೆಬ್ರವರಿ ತಿಂಗಳ 12 ರಿಂದ 16ರ ಹುಣ್ಣಿಮೆಯ ರಾತ್ರಿವರೆಗೆ, ನಾಲ್ಕು ದಿನಗಳ ಕಾಲ ನಡೆಯುವ ಈ ಜಾತ್ರೆಗೆ ಒರಿಸ್ಸಾ, ಮಧ್ಯಪ್ರದೇಶ, ಸಿಮಾಂಧ್ರ, ಮಹರಾಷ್ಟ್ರ, ಜತ್ತೀಸು ಗಢ ಮತ್ತು ಕರ್ನಾಟಕದಿಂದಲೂ ಲಕ್ಷಾಂತರ ಆಧಿವಾಸಿಗಳು ಪಾಲ್ಗೊಳ್ಳುತ್ತಾರೆ. ಪ್ರಪಂಚದಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿ ಆದಿವಾಸಿಗಳು ಸೇರಿ ಸಂಭ್ರವಿಸುವ ಜಾತ್ರೆಯಿದು!
ಪ್ರತಾಪ ರುಧ್ರ ಎಂಬ ರಾಜನ ವಿರುದ್ಧ ಹೋರಾಡಿ ಮಡಿದ ಆದಿವಾಸಿ ಸಮುದಾಯದ 'ಸಮ್ಮಕ್ಕ ಸಾರಕ್ಕ' ಎಂಬ 'ತ್ಯಾಗಮಯಿ ತಾಯಿ ಮಗಳ' ಪ್ರತೀಕವಾಗಿ ದೇವಾಲಯ ನಿರ್ಮಾಣವಾಗಿದೆ. ಆದಿವಾಸಿಗಳು - ಉತ್ತಮ ಜೀವನ ಮತ್ತು ಸಂತಾನಭಿವೃದ್ಧಿಗಾಗಿ ಈ ದೇವತೆಗಳನ್ನು ಆರಾಧಿಸುತ್ತಾರೆ. ಇದೀಗ ರಾಜ್ಯ ಸರಕಾರದ ದತ್ತಿ ಇಲಾಖೆಯ ವತಿಯಿಂದ ಇಲ್ಲಿನ ಜಾತ್ರೆ ನಡೆಯಲ್ಪಡುತ್ತದೆ. ಆದಿವಾಸಿಗಳ ವೈವಿಧ್ಯಮಯ ಡೋಲು ವಾದನ ಮತ್ತು ಕುಣಿತಗಳನ್ನು ಇಲ್ಲಿ ಕಣ್ ತುಂಬಿಸಿಕೊಳ್ಳಬಹುದು.
- ಹೃದಯ

ಕಾಮೆಂಟ್‌ಗಳಿಲ್ಲ: