ಶುಕ್ರವಾರ, ಅಕ್ಟೋಬರ್ 28, 2011

ಗುಡಿಸಲಿನಿಂದ ಗುಡಿಯವರೆಗೆ ದೀಪಗಳ ತೋರಣ

ಪ್ರಕಾಶ ಖಾಡೆ, ಬಾಗಲಕೋಟೆ

ನಮ್ಮ ಜನಪದರು ಹಬ್ಬದಾಚರಣೆಗಳನ್ನು ಅತ್ಯಂತ ಸಂಭ್ರಮ ಮತ್ತು ಉಲ್ಲಾಸದಿಂದ ಆಚರಸುತ್ತಾರೆ. ಜನ ಪದ ಕಲೆ ಮತ್ತು ಸಂಸ್ಕೃತಿ ಆರಾಧನಾ ಮನೋಭಾವದ ಪ್ರತೀಕವಾಗಿದೆ. ಪ್ರಕೃತಿಯ ಸೂರ್ಯ, ಚಂದ್ರ, ಭೂಮಿ, ಆಕಾಶ, ಮಣ್ಣು, ಗಿಡಮರ, ಪ್ರಾಣಿಪಕ್ಷಿಗಳು ಮೊದಲಾದವುಗಳಲ್ಲಿ ದೇವರು ದೈವವನ್ನು ಕಾಣುವ ಜನಪದರು ಕಾಲಕ್ಕನುಗುಣವಾಗಿ ಎಲ್ಲ ಆಚರಣೆಗಳನ್ನು ಪರಂಪರೆಯಿಂದಲೂ ವಿಧಿವತ್ತಾಗಿ ಆಚರಿಸಿಕೊಂಡು ಬಂದಿದ್ದಾರೆ.

ದೀಪಾವಳಿ ಹಬ್ಬವು ಜನಪದರ ದೊಡ್ಡ ಹಬ್ಬ, ದೀಪ ಜನಪದರ ತಿಳುವಳಿಕೆಯಲ್ಲಿ ಮಹತ್ವದ್ದಾಗಿದೆ. ಅದು ಸಾರ್ಥಕ ಬದುಕಿನ ಜೀವಂತಿಕೆಯ ಸಂಕೇತ. ಬೆಳಕಿನ ಹಬ್ಬ ದೀಪಾವಳಿಯಲ್ಲಿ ಎಲ್ಲರೂ ಕೂಡಿ ಸಂಭ್ರಮಿಸುವ ಸಂದರ್ಭವಾಗಿದೆ.



ಕಾರ್ತಿಕ ಮಾಸದ ಆಗಮನ, ವಾರ್ಷಿಕ ದುಡಿಮೆಯ ಫಲದಿಂದ ತುಂಬಿನಿಂತ ಹೊಲಗದ್ದೆಗಳು, ಹೊಸ ಉತ್ಸಾ ಹ, ಸಂತೋಷ ನೀಡುತ್ತವೆ. ಗುಡಿಸಿಲಿ ನಿಂದ ಗುಡಿಯ ವರೆಗೆ ದೀಪಾವಳಿಯ ತಳಿರು ತೋರಣ, ಬೆಳಕಿನ ಹಬ್ಬದಲ್ಲಿ ನೂರೊಂದು ಆಚರಣೆಗಳು ಆಶ್ವಯುಜ ಬಹುಳ ದ್ವಾದಶಿಯಿಂದ ಎಂಟು ದಿನಗಳವರೆಗೆ ಅಂದರೆ ದ್ವಾದಶಿ, ಧನತ್ರಯೋದಶಿ, ನರಕ ಚತುರ್ಥಿ, ಅಮ ವಾಸ್ಯೆ, ಬಲಿ ಪಾಡ್ಯಮಿ, ಭಾವನ ಬಿದಿಗೆ, ಅಕ್ಕಮ ತದಿಗೆ, ಅಮ್ಮನ ಚೌತಿ, ಈ ದಿನಗಳನ್ನು ದೀಪಾವಳಿಯ ಪರ್ವದಿನಗಳೆಂದು ಕರೆಯುತ್ತಾರೆ.

ನರಕ ಚತುರ್ದಶಿಯಂದು ಹಬ್ಬದ ಆರಂಭ, ಅಂದೇ ನೀರು ತುಂಬುವ ಹಬ್ಬ, ಜಳಕ ಮಾಡುವ ಹಂಡೆ- ಹರಿವೆಗಳಿಗೆ ಕೆಮ್ಮಣ್ಣು ಬಳಿದು ಪವಿತ್ರಗೊಳಿಸುತ್ತಾರೆ. ಹಬ್ಬದ ಎರಡನೇ ದಿನ ಬಲಿಪಾಡ್ಯಮಿ, ಊರವರಿಗೆ ಅದು ಪಾಡ್ಯದ ದಿನ, ಎಣ್ಣೆ ಉಜ್ಜಿ ಮನೆಮಂದಿಗೆಲ್ಲ ಅಭ್ಯಂಜನ, ಮೈತೊಳೆದ ದನಕರುಗಳಿಗೆ ಜೇಡಿ, ಕೆಮ್ಮಣ್ಣು, ಉಗನೆಸರ, ಗೋಮಾಲೆ, ಚೆಂಡುಹೂವಿನ ಸರಗಳ ಅಲಂಕಾರ. ಅಂದಿನ ವಿಶೇಷ ಆಚರಣೆ ಬಲೀಂದ್ರ ಪೂಜೆ.

ದೀಪಾವಳಿ ಅನ್ನಬ್ರಹ್ಮನ ಆರಾಧನೆ ಯ ಹಬ್ಬವಾಗುವುದರ ಜೊತೆಗೆ ಒಕ್ಕಲು ಮಕ್ಕಳ ಸಂಭ್ರಮದ ಹಬ್ಬವೂ ಆಗಿದೆ. ದೀಪಾವಳಿಯಂದು ಹೊಸ ಬಟ್ಟೆ ಧರಿಸಿ ದೇವಾಲ ಯಗಳಿಗೆ ಹೋಗುತ್ತಾರೆ.

ದೀಪಾವಳಿಯ ಸಂದರ್ಭದಲ್ಲಿ ದೀಪಗಳಿಂದ ಮನೆ ಯನ್ನು ಅಲಂಕರಿಸಿ ಸಂತಸವಾಗಿದ್ದರೆ ವರ್ಷವಡೀ ಆ ಮನೆಯಲ್ಲಿ ಹರ್ಷದ ಹೊನಲು ಹರಿ ಯುವುದು, ದೀಪ ಬೆಳಗಿಸಿದ ಮನೆಯಲ್ಲಿ ಲಕ್ಷ್ಮಿ ವಾಸಿಸು ವುದಿಲ್ಲ ಎಂಬ ನಂಬಿಕೆ ಇದೆ. ಒಟ್ಟಿನಲ್ಲಿ ಬಲಿಪಾಡ್ಯದಲ್ಲಿ ಲಕ್ಷ್ಮಿ ನೆಲೆಸಿ ರುವ ಎಲ್ಲೆಡೆ ದೀಪ ಬೆಳಗಿ ಸಂಭ್ರಮಿಸುವುದೇ ವಿಶೇಷ.

ಒಂದು ಸಲ ಲಕ್ಷ್ಮಿ ಗೋ ರೂಪ ಧರಸಿ ಬಂದಾಗ ಪಾರ್ವತಿ ಪೂಜಿಸಿದಳಂತೆ. ಆದ್ದರಿಂದ ಗೋಪೂಜೆಗೆ ವಿಶೇಷವಾಗಿ ಜನಪದರಲ್ಲಿ ಪ್ರಾಧಾನ್ಯತೆ ಇದೆ. ಯಾವ ತ್ತೂ ಗೋವುಗಳಲ್ಲಿ ಲಕ್ಷ್ಮಿ ನೆಲಸಿರುವಳೆಂದು ಪ್ರತೀತಿ ಇದೆ.

ದೀಪಾವಳಿ ಹಬ್ಬವು ಕತ್ತಲೆಯನ್ನು ದೂರ ಮಾಡಿ ಎಲ್ಲೆಲ್ಲೂ ದೀಪ ಬೆಳಗಿಸಿ ಬೆಳಕು ಕಾಣುವ ಹಬ್ಬ. ಇದನ್ನು ಲಕ್ಷ್ಮಿ ಪೂಜೆ ಎನ್ನುತ್ತಾರೆ. ದೀಪಾವಳಿಯ ದಿನ ದಂದು ಭೂಮಿ ತುಲಾರಾಶಿಗೆ ಪ್ರವೇಶಿಸುತ್ತದಂತೆ. ಅದಕ್ಕಾಗಿ ವ್ಯಾಪಾರಸ್ಥರು ಆ ದಿನ ತಮ್ಮ ಲೆಕ್ಕದ ಪುಸ್ತಕ ಮತ್ತು ತೂಕದ ಸಾಮಾನುಗಳನ್ನು ಪೂಜಿಸುತ್ತಾರೆ. ಜೊತೆಗೆ ಯಾವುದಾರೊಂದು ಹೊಸ ವಸ್ತುವನ್ನು ಆ ದಿನ ಕೊಂಡು ತರುವುದುಂಟು, ಈ ರೀತಿ ಕೊಂಡು ತರುವುದರಿಂದ ಒಳ್ಳೆಯದಾಗುತ್ತದೆಂಬ ನಂಬಿಕೆ ಇದೆ.



ನರಕ ಚತುರ್ದಶಿ: ದೀಪಾವಳಿ ಹಬ್ಬವು ಅನೇಕ ನಂಬಿಕೆ ಮತ್ತು ಆಚರಣೆಗಳಿಂದ ಕೂಡಿದೆ. ಭೂದೇವಿಯ ಮಗ ನಾದ ನರಕಾಸು ಎಲ್ಲ ದೇವತೆಗಳನ್ನು ಎದುರಿಸಿ ಯಕ್ಷ, ಕಿನ್ನರ, ವಿದ್ಯಾಧರ ಮೊದಲಾದ ಹರಿನಾರು ಸಾವಿರ ಮಂದಿ ಸ್ತ್ರೀಯರನ್ನು ಸೆರೆಯಲ್ಲಿಟ್ಟು ಕಿರುಕುಳ ಕೊಡ ತೊಡಗಿದಾಗ ಕೃಷ್ಣನು ನರಕಾಸುರನ್ನು ಕೊಂದು ಎಲ್ಲರನ್ನೂ ಪಾರು ಮಾಡಿದನು.

ತನ್ನ ಮಗನ ಸಾವನ್ನು ತಿಳಿದ ಭೂದೇವಿಯ ಅವ ತಾರವಾದ ಸತ್ಯಭಾಮೆ ತನ್ನ ಮಗ ಸತ್ತ ಆ ಚತು ರ್ದಶಿಯ ದಿನ ತನ್ನ ಮಗನ ಹೆಸರಲ್ಲಿ ಸ್ನಾನ ಪೂಜಾ ದಿಗಳಿಂದ ಬೆಳಕಿನ ಹಬ್ಬವನ್ನು ಆಚರಿಸುವಂತೆ ಕೃಷ್ಣ ನನ್ನು ಪ್ರಾರ್ಥಿಸಿದಾಗ ಆತ ನಿನ್ನಿಷ್ಟದಂತಾಗಲಿ ಎಂದು ವರವಿತ್ತನಂತೆ. ಅಂದಿನಿಂದ ಆ ದಿನವನ್ನು ನರಕ ಚತುರ್ದಶಿ ಎಂದು ನಾಮಕರಣ ಮಾಡಿ ಹಬ್ಬವನ್ನು ಆಚರಿಸಲಾಗುತ್ತದೆ.

ಕಾಮೆಂಟ್‌ಗಳಿಲ್ಲ: