ಸೋಮವಾರ, ನವೆಂಬರ್ 8, 2010

ಕನ್ನಡ ಜಾನಪದ ಬ್ಲಾಗ್ ಬಗೆಗೆ ಹಿರಿಯರು ಹೀಗನ್ನುತ್ತಾರೆ...

ವಯಕ್ತಿಕ ನೆಲೆಯ ಬ್ಲಾಗ್ ಎನ್ನುವ ತಾಣವನ್ನು ಸಾಮಾಜಿಕ ನೆಲೆಗೆ ವಿಸ್ತರಿಸಲು ಸಾಧ್ಯವೇ ? ಎನ್ನುವ ಸಣ್ಣ ಪ್ರಯತ್ನದ ಭಾಗವಾಗಿ ಕನ್ನಡ ಜಾನಪದ ಬ್ಲಾಗ್ ಆರಂಭಿಸಿದೆ. ಅದಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿರಿಯ ಜಾನಪದ ವಿದ್ವಾಂಸರು ಈ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕನ್ನಡದ ಜಾನಪದ ಆಲೋಚನೆಯನ್ನು ಭಿನ್ನವಾಗಿ ವಿಸ್ತರಿಸಿದ ಪುರುಷೋತ್ತಮ ಬಿಳಿಮಲೆಯವರು ಬ್ಲಾಗ್ ನೋಡಿ, ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು. ಕನ್ನಡದಲ್ಲಿ ಜಾನಪದ ವಿವಿಯ ಬಗ್ಗೆ ತೋರಬಹುದಾದ ಉತ್ಸಾಹ ವ್ಯಕ್ತವಾಗುತ್ತಿಲ್ಲ ಎಂದು ವಿಷಾದಿಸಿದರೂ ಕೂಡ. ಪ್ರೊ.ಬಿ.ಎ ವಿವೇಕ ರೈ ಅವರು ತಮ್ಮ ಬ್ಲಾಗ್ ನಲ್ಲಿ ಕನ್ನಡ ಜಾನಪದ ಬ್ಲಾಗ್ ಬಗ್ಗೆ ಬರೆದುಕೊಂಡಿದ್ದಾರೆ. ಅದಕ್ಕೆ ಸಿ.ಎನ್. ಆರ್ ಅವರು ಪ್ರತಿಕ್ರಿಯಿಸಿದ್ದಾರೆ. ಅಂತೆಯೇ ಎಚ್.ಎಸ್.ರಾಘವೇಂದ್ರರಾವ್ ಬ್ಲಾಗ್ ಪ್ರಯತ್ನವನ್ನು ಮೆಚ್ಚಿದ್ದಾರೆ. ಜಾನಪದ ವಿವಿಯ ವಿಶೇಷಾಧಿಕಾರಿ ಪ್ರೊ.ಅಂಬಳಿಕೆ ಹಿರಿಯಣ್ಣ ಅವರೂ ಸಹ ಬ್ಲಾಗ್ ಪ್ರಯತ್ನವನ್ನು ಮೆಚ್ಚಿ, ಬ್ಲಾಗ್ ಗಾಗಿ ಸಂದರ್ಶನವನ್ನೂ ನೀಡಿದ್ದಾರೆ. ಈ ಎಲ್ಲಾ ಹಿರಿಯರ ಪ್ರೀತಿ ಆಧರಗಳಿಗೆ ಕೃತಜ್ಞತೆಗಳು. ಇನ್ನಷ್ಟು ಹೊಸ ಪ್ರಯತ್ನಗಳಿಗೆ ಕನ್ನಡ ಜಾನಪದ ಬ್ಲಾಗ್ ಪ್ರಯತ್ನಿಸುತ್ತದೆ, ಜಾನಪದದ ಹೊಸ ನಡಿಗೆಯನ್ನು ಗುರುತಿಸಲು ಯತ್ನಿಸುತ್ತದೆ ಎಂದಷ್ಟೇ ಈಗ ಹೇಳಬಯಸುತ್ತೇನೆ. ಪ್ರತಿಕ್ರಿಯೆಯ ಕೆಲವು ತುಣುಕುಗಳು ಇಲ್ಲಿವೆ. -ಅರುಣ್ ಕನ್ನಡ ಜಾನಪದ ಬ್ಲಾಗ್ ಓದಲು ತೊಡಗಿದ್ದೇನೆ.. ಅರುಣ್,ನಿಮ್ಮ ಕನ್ನಡ ಜಾನಪದ ಬ್ಲಾಗ್ ಓದಲು ತೊಡಗಿದ್ದೇನೆ.ಒಳ್ಳೆಯ ಪ್ರಯತ್ನ.ಕನ್ನಡ ಜಾನಪದಕ್ಕೆ ಒಂದು ಬ್ಲಾಗ್ ಅಗತ್ಯ ಇತ್ತು.ಅಭಿನಂದನೆಗಳು.ತೊಗಲುಗೊಂಬೆ ಆಟದ ಕಲಾವಿದರ ಪರಿಚಯ ಚೆನ್ನಾಗಿದೆ.ಜೀ ಶಂ ಪ ಈ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದವರು.ಪಿ ಅರ.ತಿಪ್ಪೇಸ್ವಾಮಿ ಮೈಸೂರು ಮ್ಯೂಸಿಯಂ ನಲ್ಲಿ ತೊಗಲು ಗೊಂಬೆಗಳ ಸಂಗ್ರಹದ ಪರಿಶ್ರಮ ಪಟ್ಟವರು.ಜಾನಪದ ವಿವಿ ಆಗಿರುವ ಈ ಹೊತ್ತಿನಲ್ಲಿ ಇವರ ನೆನಪೇ ನಮಗೆ ದೀಪಾವಳಿ ಪ್ರೊ. ಬಿ.ಎ. ವಿವೇಕ ರೈ ಪ್ರಿಯ ವಿವೇಕ ರೈ ಅವರಿಗೆ:ಕನ್ನಡ ಜಾನಪದ ಬ್ಲಾಗ್ ಬಗ್ಗೆ ನಿಮ್ಮ ಉತ್ಸಾಹಪೂರ್ಣ ಪ್ರತಿಕ್ರಿಯೆ ಓದಿ ಸಂತೋಷವಾಯಿತು; ಕನ್ನಡ ಜಾನಪದ ಲೋಕ ಎಷ್ಟು ವಿಶಾಲವಾಗಿದೆಯೆಂದರೆ ಅದರ ಬಗ್ಗೆ ಎಷ್ಟು ಬ್ಲಾಗ್‍ಗಳಿದ್ದರೂ ಸಾಲದು; ಇದು ಕನ್ನಡಿಗರೆಲ್ಲರಿಗೂ ಸಂತೋಷದ ಸಂಗತಿ.ನಾನೂ ಕನ್ನಡ ಜಾನಪದ ಮಹಾಕಾವ್ಯಗಳ ಬಗ್ಗೆ (ಹಾಗೂ ಸಂಬಂಧಿಸಿದ ಕನ್ನಡ ಸಾಹಿತ್ಯದ ಬಗ್ಗೆ) ಇಂಗ್ಲೀಷಿನಲ್ಲಿ ಕಳೆದೆರಡು ವರ್ಷಗಳಿಂದ ಒಂದು ಬ್ಲಾಗ್ ಬರೆಯುತ್ತಿದ್ದೇನೆ:drcnr.blogspot.com. ಸಮಯವಾದಾಗ ಅದನ್ನೂ ಓದಿದರೆ (ಹಾಗೂ ನಿಮ್ಮ ಮಿತ್ರರ ಗಮನಕ್ಕೆ ತಂದರೆ) ಸಂತೋಷವಾಗುತ್ತದೆ. ಅದರಲ್ಲಿರುವ ಲೇಖನಗಳ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಯಲು ಕುತೂಹಲವಿದೆ. -ಸಿ.ಎನ್ .ರಾಮಚಂದ್ರನ್ ಪ್ರಿಯ ಅರುಣಕುಮಾರ್ ಅವರಿಗೆ, ನಮಸ್ಕಾರ. ಹೇಗಿದ್ದೀರಿ? ನಿಮ್ಮ ಬ್ಲಾಗ್ ಬರೆಹಗಳನ್ನು ನೋಡುತ್ತಿದ್ದೇನೆ. ಬಹಳ ಉಪಯುಕ್ತವಾಗಿವೆ. -ಎಚ್.ಎಸ್.ಆರ್. Bilimale ಹೇಳಿದರು... ಡಾ. ಅಂಬಳಿಕೆಯವರ ಸಂದರ್ಶನಕ್ಕಾಗಿ ಅಭಿನಂದನೆಗಳು. ಅವರ ನೇತ್ರತ್ವದಲ್ಲಿ ಜಾನಪದ ವಿ ವಿ ಯು ಅರ್ಥಪೂರ್ಣವಾಗಿ ಬೆಳೆದೀತು ಎಂದು ನಾನು ಭಾವಿಸಿದ್ದೇನೆ. ಕನ್ನಡ ಜಾನಪದ ತಜ್ಞರು ಮತ್ತು ಕಲಾವಿದರು ಜಾನಪದ ವಿವಿ ಯ ಜೊತೆ ಭಾವನಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಂಡರು ಎಂದು ನಾನು ಭಾವಿಸುತ್ತೇನೆ. ಗೆಳೆಯ ಅಂಬಳಿಕೆಯವರಿಗೆ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳು . Hi Arun, I've read your blog and it looks good. I appreciate your views on transformation of folk arts and political undercurrents found in them. I agree not much work has been done in this regard. Hopefully, you will make an effort in near future and formulate a model.Regards, -Ambalike Hiriyanna

4 ಕಾಮೆಂಟ್‌ಗಳು:

ಮಹೇಶ ಹೇಳಿದರು...

ಖಂಡಿತವಾಗಿಯೂ ನೂರಾರು ಜನ ತಮ್ಮ ಬ್ಲಾಗಿಗೆ ಓದುಗರಿದ್ದಾರೆ , ದಯವಿಟ್ಟು ಮುಂದುವರಿಸಿ

ಅನಾಮಧೇಯ ಹೇಳಿದರು...

o blognnu hiriyaru nodi coment madiruvudu nijakku khushi aytu. kannada jaanapada blog innastu hosatanadinda barali.
-basavaraja, bangalore

c manjunath ಹೇಳಿದರು...

arun!kannada jaanapada blog uttama aaramba padedukondide.beleyuva siri molakeyalli nodi yennuvante atyutthamavagide. bellary yalli echege jarugida INTER STATE LEATHER PUPPETRY FESTIVAL-2010 photo suddiyannu dayavittu balasikolli pls!
#c manjunath, journalist, bellary
cell:94483 23400

parasurama kalal ಹೇಳಿದರು...

ಮೊನ್ನೆಯೇ ಪುರಂದರ ದಾಸರ ಬಗ್ಗೆ ನಿನ್ನ ಲೇಖನ ಓದಿದೆ. ಒಂದೇ ಉಸಿರಿನಲ್ಲಿ ಪ್ರತಿಕ್ರಿಯೆ ಅಲ್ಲಿಯೇ ಬರೆದೆ. ಅದು ಏನೇನೂ ಆಗಿ ಎಲ್ಲವೂ ಮಾಯವಾಯಿತು. ಅಲ್ಲಮನ ಬಯಲಿನಂತೆ ಬಯಲಾಗಿ ಹೊಯಿತು. ಈಗ ಬೇರೊಂದು ಕಡೆ ಬರೆದು ಬ್ಲಾಗ್‌ನಲ್ಲಿ ದಾಖಲಿಸುವ ಪ್ರಯತ್ನ ಮಾಡುತ್ತಿರುವೆ.
ಪುರಂದರ ದಾಸರ ದೇಸಿ ಚಿಂತನೆಗಳ ಕುರಿತು ವಿಸ್ತ್ರತವಾದ ಬರವಣಿಗೆ. ಅಕಾಡೆಮಿಕ್ ಶಿಸ್ತು ನಿನ್ನ ಬರವಣಿಗೆಗೆ ನಿಧಾನವಾಗಿ ಒಗ್ಗುತ್ತದೆ. ದಾಸ ಸಾಹಿತ್ಯದಲ್ಲಿ ಇಬ್ಬರು ದಾಸರು ಪ್ರಮುಖರು. ಪುರಂದರ ದಾಸ ಹಾಗೂ ಕನಕ ದಾಸ ಇಬ್ಬರು ಬಿಟ್ಟರೆ ಉಳಿದವರೆಲ್ಲಾ ನಗಣ್ಯ. ಇಬ್ಬರೂ ಅಬ್ರಾಹ್ಮಣರು ಎನ್ನುವುದು ಇಲ್ಲಿ ಮುಖ್ಯ. ಇಬ್ಬರೂ ಬದುಕಿದ್ದು ೧೪ನೇ ಶತಮಾನದಲ್ಲಿ.
ಪುರಂದರ ದಾಸರು ಓಡಾಡಿದ್ದ ಪ್ರದೇಶವೆಲ್ಲಾ ವಿಜಯನಗರವೇ ಆಗಿತ್ತು. ವಿಜಯನಗರ ಸಾಮ್ರಾಜ್ಯವಾಗಿ ಶ್ರೀಕೃಷ್ಣದೇವರಾಯನ ಆಳ್ವಿಕೆಯ ಉನ್ನತ ಆಡಳಿತದ ಅವಧಿಯ ಕಾಲವೂ ಅದೇ ಆಗಿತ್ತು. ಅಷ್ಟದಿಗ್ಗಜ ಕವಿಗಳು ಆಸ್ಥಾನದಲ್ಲಿದ್ದರು. ಸಾಹಿತ್ಯ, ಸಂಗೀತಕ್ಕೆ ಆಪಾರ ಬೆಂಬಲ ನೀಡಿದ ಶ್ರೀಕೃಷ್ಣದೇವರಾಯ ಸ್ವತಃ ಕವಿಯೂ ಆಗಿದ್ದ.
ಶ್ರೀಕೃಷ್ಣದೇವರಾಯನ ಕಾಲದಲ್ಲಿ ಶೈವರನ್ನು ಮೂಲೆಗೆ ತಳ್ಳಿ ವೈಷ್ಣವರು ಮೇಲೆದ್ದು ನಿಂತಿದ್ದರು. ಶ್ರೀಕೃಷ್ಣದೇವರಾಯನೇ ವೈಷ್ಣವ ದೀಕ್ಷೆ ಪಡೆದಿದ್ದ. (ಪೇಜಾವರರ ದೀಕ್ಷೆ ನೆನಪಿಸಿಕೊಳ್ಳಬಹುದು.)
ಇಂತಹ ಕಾಲದಲ್ಲಿ ಅರಸರ ದಾಸನಾಗದೇ ಹರಿದಾಸರಾಗಿ, ಕನ್ನಡದಲ್ಲಿ ದಾಸರ ಪದಗಳನ್ನು ಹಾಡುತ್ತಾ ತಂಬೂರಿ ಮೀಟುತ್ತಾ ಸಂಚರಿಸುತ್ತಿದ್ದ ಪುರಂದರ ದಾಸರು ಆ ಕಾಲದ ಬಂಡಾಯ ಕವಿಗಳೇ ಆಗಿದ್ದಾರೆ. ಆ ಕಾಲದ ಗತಿಸ್ಥಿತಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅಲ್ಲಿರುವ ದ್ವಂದ್ವವನ್ನು ಸಹ.
ವಿಜಯನಗರದ ರಾಜಬೀದಿಯಲ್ಲಿ ನಿಂತು 'ಸತ್ಯವಂತರಿಗಿದು ಕಾಲವಲ್ಲೋ' ಎಂಬ ಹಾಡು ಹಾಡಲು ಪುರಂದರಗೆ ಹೇಗೆ ಸಾಧ್ಯವಾತು? ಹರಿಯನ್ನು ಒಂದು ಗುಡಿಯಲ್ಲಿ ಬಂಧಿಸಿ, ಅದನ್ನು ಕರ್ಮಠ ಬ್ರಾಹ್ಮಣರು ಕಾಯುವ ಕಾಲದಲ್ಲಿ 'ನೀ ನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕು' ಎಂದು ಹರಿಯನ್ನೇ ಕೈ ಬಿಟ್ಟು ಸ್ಮರಣೆ ಮಾತ್ರ ಸಾಲದೇ ಎಂದ ದಾಸರು ಎಲ್ಲವನ್ನೂ ಪಾಪ, ಪುಣ್ಯ, ಭಕ್ತಿ, ಶರಣಾಗತಿಗೆ ಒಪ್ಪಿಸಿದರೂ ಅದನ್ನೆಲ್ಲಾ ಬೀದಿಗೆ ತಂದು ಚೆಲ್ಲಿದರು ಎನ್ನುವುದು ನಮಗೆ ಇಲ್ಲಿ ಮುಖ್ಯವಾಗಬೇಕು.
ನಮ್ಮ ಕಾಲದಲ್ಲಿ ಪುರಂದರು ಎಲ್ಲಿದ್ದಾರೆ ಅಂತಹ ಹುಡುಕಿದರೆ ಅವರು ಸಿಗುವುದು ಅದೇ ಕರ್ಮಠ ಬ್ರಾಹ್ಮಣರ ಅಗ್ರಹಾರದಲ್ಲಿಯೇ. ವ್ಯಂಗ್ಯವೆಂದರೆ ಇದು.
ಇವತ್ತು ನಮ್ಮ ಗ್ರಾಮೀಣ ಪ್ರದೇಶದ ಜನಪದರು ಹಾಡುವ ಭಜನೆಗಳಲ್ಲಿ, ತತ್ವ ಪದಗಳಲ್ಲಿ ಪುರಂದರು ಸಿಗುತ್ತಾರೆ. ಹಂಪಿಗೆ ಬರುವ ಭಜನಾ ತಂಡಗಳು ದಾಸರ ಹಾಡುಗಳನ್ನು ಹಾಡುತ್ತಾರೆ. ದಾಸರನ್ನು ಜೀವಂತವಾಗಿಟ್ಟವರೇ ಈ ಜನಪದರೇ. ನಂತರ ಕೀರ್ತನಕಾರರು ದಾಸರನ್ನು ಮತ್ತೊಂದು ರೀತಿಯಲ್ಲಿ ಜೀವಂತವಾಗಿಸಿದರು. "ಹಿಂದೂಸ್ತಾನಿ, ಕರ್ನಾಟಕ ಸಂಗೀತಕಾರರು ದಾಸರ ಹಾಡುಗಳನ್ನು ನೆಚ್ಚಿಕೊಂಡರು.
ದಾಸರ ಹಾಡುಗಳನ್ನು ಹಾಡುವ ಈ ಸಂಗೀತ ಕಾರ್ಯಕ್ರಮಗಳನ್ನು ನಾನು ತುಂಬಾ ಸಲ ಕೇಳಿದ್ದೇನೆ. ಬಹುತೇಕರು 'ಭಾಗ್ಯದ ಲಕ್ಷ್ಮಿ ಬಾರಮ್ಮ' ಇಂತಹ ಜನಪ್ರಿಯ ಹಾಡುಗಳನ್ನೇ ಹಾಡುತ್ತಾರೆ. ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ, ನಿಂದಕರಿರರಬೇಕು ಹಂದಿಯಂತಹ ಇಂತಹ ಹಾಡುಗಳನ್ನು ಹಾಡಿದ್ದು ನಾನು ಕೇಳಿಲ್ಲ. ನೀಚ, ಹಂದಿ ಇಂತಹ ಶಬ್ದಗಳು ಸಾಹಿತ್ಯದಲ್ಲಿ ಬಂದರೆ ಹೇಗೆ? ಇನ್ನೂ ಸತ್ಯವಂತರಿಗಿದು ಕಾಲವಲ್ಲೋ ಸಹ ಹಾಡುವುದಿಲ್ಲ. ಸತ್ಯವಂತರೇ ತಾನೇ ಸಂಗೀತಗ್ಠೋ ಏರ್ಪಡಿಸಿ, ಸನ್ಮಾನ ಮಾಡುವವವರು. 'ತುರುಕರ ನೆನಯಬೇಕಣ್ಣ' ಡೊಂಕು ಬಾಲದ ನಾಯಕರೇ ಇಂತಹ ಗೀತೆಯನ್ನು ಅಪ್ಪಿತಪ್ಪಿ ಉಸುರುವುದಿಲ್ಲ. ನಾನು ಅಬ್ರಾಹ್ಮಣ ಸಂಗೀತ ಗಾಯಕರೊಬ್ಬರ ಬಳಿ ಇದನ್ನು ಪ್ರಸ್ತಾಪಿಸಿ, ನೀವು ಯಾಕೇ ಇಂತಹ ಗೀತೆಯನ್ನು ಆಯ್ಕೆ ಮಾಡಿಕೊಂಡು ಸಂಗೀತ ಸಂಯೋಜಿಸಿ ಹಾಡಬಾರದು ಎಂದು ಕೇಳಿದೆ. ಅವರು ತಮ್ಮ ಶಾಲನ್ನು ಸರಿ ಮಾಡಿಕೊಂಡು ಯಾವುದೋ ಹಾಡು ಗುನಗುನಿಸಿದರೆ ಹೊರತು ಉತ್ತರ ಕೊಡಲಿಲ್ಲ. ಉತ್ತರ ಸ್ಪಷ್ಠ.
ಪುರಂದರ ದಾಸರು, ಕನಕದಾಸರು ಇವತ್ತು ಇದ್ದರೆ ಏನಾಗಿರುತ್ತಿದ್ದರೂ ನಮ್ಮ ನಿಮ್ಮಂತೆ ಬ್ಲಾಗಿನಲ್ಲಿ ಬರೆಯುತ್ತಿದ್ದರು. ನಾವು ೧೪ನೇ ಶತಮಾನದಲ್ಲಿ ಇದ್ದರೆ ಏನಾಗುತ್ತಿದ್ದೇವೋ ತಂಬೂರಿ ಹಾಕಿಕೊಂಡು ಯಡಿಯೂರಪ್ಪನ ವಿರುದ್ಧ ಡೊಂಕು ಬಾಲದ ನಾಯಕರೇ ನೀವೇನೂ ಊಟ ಮಾಡುವಿರೀ ಎಂದು ಕೇಳುತ್ತಿದ್ದೇವು. ಇದನ್ನು ಸರಳವಾಗಿ ಸುಮ್ಮನೆ ತಮಾಷೆಯಾಗಿ ಹೇಳುತ್ತಿರುವೆ.
ಕಾಲಮಾನ ಮತ್ತು ವಿಚಾರ ಇವುಗಳ ನಡುವೆ ಇರುವ ಅಂತರ್‌ಸಂಬಂಧವನ್ನು ಅತ್ಯಂತ ಸೂಕ್ಷ್ಮವಾಗಿ ನೋಡಬೇಕಿದೆ. ಏನೇ ಆಗಲಿ ನಿನ್ನ ಬರಹ ನನಗೆ ಇಷ್ಟವಾಯಿತು ಎಂದೇ ಈ ದೀರ್ಘ ಪ್ರತಿಕ್ರಿಯೆ ನೀಡಿರುವೆ.
- ಪರಶುರಾಮ ಕಲಾಲ್