ಸೋಮವಾರ, ಜನವರಿ 4, 2016

ಭಾವೈಕ್ಯ ಶಾಂತಿ ಸಮ್ಮೇಳನ

ಕನ್ನಡದ ಕಬೀರ ಎಂದು ಗುರುತಿಸುವ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಹಿಬ್ರಾಹಿಂ ಸುತಾರ ಅವರಿಗೆ ೭೫ ವರ್ಷ ತುಂಬಿದ ನೆಪದಲ್ಲಿ ಅವರ ಅಭಿನಂದನೆ ಜೊತೆ ಭಾವೈಕ್ಯ ಶಾಂತಿ ಸಮ್ಮೇಳನ ನಡೆಯುತ್ತಿದೆ. ಸಾವಿರಾರು ಜನರು ಜಾತಿ ಧರ್ಮ ಮರೆತು ಈ ಭಾವೈಕ್ಯದಲ್ಲಿ ಒಂದಾಗಿದ್ದರು. ಇಂತಹ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನನಗೆ ನಿಜಕ್ಕೂ ಸಾರ್ಥಕವೆನ್ನಿಸಿತು. ಧಾರ್ಮಿಕ ಮೂಲಭೂತವಾದ ಎಲ್ಲೆಲ್ಲೂ ವ್ಯಾಪಿಸುತ್ತಿರುವ ಈ ಹೊತ್ತು ಜನರನ್ನು ಬೆಸೆಯುವ ಇಂತಹ ಭಾವೈಕ್ಯ ಸಮಾವೇಶಗಳು ಎಲ್ಲೆಡೆಯೂ ನಡೆಯಬೇಕಾಗಿದೆ.













ಕಾಮೆಂಟ್‌ಗಳಿಲ್ಲ: