ಶುಕ್ರವಾರ, ಮೇ 16, 2014

ಜಾನಪದ ಅಕಾಡೆಮಿಯಿಂದ ಅರ್ಜಿ ಆಹ್ವಾನ

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳಿಗೆ ವಾಲಗ, ತಮಟೆ, ಚೌಡಿಕೆ, ಲಂಬಾಣಿ ವಾಜ್ಜ, ನಗಾರಿ, ಚಿಟ್ಟೆ ಮೇಳ, ಗಣೇವಾದ್ಯ, ತತ್ವಪದ, ಜಗ್ಗಲಿಗೆ, ನೀಲಗಾರರ ಪದ, ಶಹನಾಯಿ ತರಬೇತಿ ನೀಡಲು ಆಸಕ್ತಿಯಿರುವ ಗುರುಗಳಿಂದ ಕರ್ನಾಟಕ ಜಾನಪದ ಅಕಾಡೆಮಿ ಅರ್ಜಿ ಆಹ್ವಾನಿಸಿದೆ.
ಅಕಾಡೆಮಿಯ ಬೆಂಗಳೂರು ಕಚೇರಿಯಿಂದ, ಆಯಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಂದ ಅರ್ಜಿ ಪ್ರತಿ ಪಡೆದುಕೊಳ್ಳಬಹುದು. ₨ 10 ಬೆಲೆಯ ಅಂಚೆ ಚೀಟಿ ಅಂಟಿಸಿದ, ಸ್ವವಿಳಾಸ ಇರುವ ಲಕೋಟೆಯನ್ನು ಜಾನಪದ ಅಕಾಡೆಮಿ ಕಚೇರಿಗೆ ಕಳುಹಿಸಿ, ಅಂಚೆ ಮೂಲಕ ಅರ್ಜಿ ಪಡೆಯಬಹುದು.
ಭರ್ತಿ ಮಾಡಿದ ಅರ್ಜಿಯನ್ನು ಇದೇ 31ರೊಳಗೆ ‘ರಿಜಿಸ್ಟ್ರಾರ್‌, ಕರ್ನಾಟಕ ಜಾನಪದ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು – 560 002’ ವಿಳಾಸಕ್ಕೆ ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ 080–2221 5509 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

ಕಾಮೆಂಟ್‌ಗಳಿಲ್ಲ: