ಸೋಮವಾರ, ಅಕ್ಟೋಬರ್ 8, 2012

ಎರಡು ವರ್ಷ ಪೂರೈಸಿದ ಕನ್ನಡ ಜಾನಪದ ಬ್ಲಾಗ್…




  ಇದೇ ಅಕ್ಟೋಬರ್ 7ನೇ ತಾರೀಕಿಗೆ ಕನ್ನಡ ಜಾನಪದ ಬ್ಲಾಗ್  ಎರಡು ವರ್ಷ ಪೂರೈಸಿ, ಮೂರನೆ ವರ್ಷಕ್ಕೆ ಕಾಲಿಟ್ಟಿದೆ. ಇದೊಂದು ಪುಟ್ಟ ಸಂಭ್ರಮ ನನಗೆ. ಕನ್ನಡ ಜಾನಪದ ಸಂಬಂದಿಸಿದಂತೆ ಕನ್ನಡದಲ್ಲಿ ಗೂಗಲ್ ಹುಡುಕಾಟ ಮಾಡಿದವರಿಗೆ ಈಗ ತಕ್ಕಮಟ್ಟಿಗೆ ಪಲಿತಾಂಶಗಳು ಬರುತ್ತಿರುವುದು ಸಂತಸದ ಸಂಗತಿ. 2010 ರ ಅಕ್ಟೋಬರ್ 7 ರಂದು ಕನ್ನಡ ಜಾನಪದ ಬ್ಲಾಗ್ ಆರಂಭಿಸಿದಾಗ ಆಗಿನ್ನು ಕನ್ನಡ ಜಾನಪದ ಕುರಿತಂತೆ ಒಂದೇ ಒಂದು ವೆಬ್ ತಾಣವೂ ಇರಲಿಲ್ಲ. ಈಗ ಕರ್ನಾಟಕ ಜಾನಪಪದ ವಿಶ್ವವಿದ್ಯಾಲಯದ ವೆಬ್ ಸೈಟ್, ಜಾನಪದ ಅಕಾಡೆಮಿ ವೆಬ್ ಸೈಟ್, ರಾಮನಗರದ ಜಾನಪದ ಲೋಕದ ವೆಬ್ ಸೈಟ್ ಚಾಲನೆಯಲ್ಲಿವೆ. ಇವುಗಳಿಗಿಂತ ಮುಂಚಿನ ಪುಟ್ಟ ಪ್ರಯತ್ನ ಕನ್ನಡ ಜಾನಪದ.

         ವಯಕ್ತಿಕವಾಗಿ ನನ್ನ ಮಿತಿಗಳ ಮಧ್ಯೆ ಕನ್ನಡ ಜಾನಪದ ಬ್ಲಾಗ್ ಗೆ ಎರವಲು ತಂದು, ಬೇರೆಯವರಿಂದ ಬರೆಸಿ, ನಾನು ಕೆಲವು ಟಿಪ್ಪಣಿರೂಪದ ಬರಹ ಮಾಡಿ ಬ್ಲಾಗ್ ನ್ನು ನಿರಂತರಗೊಳಿಸುವ ಪ್ರಯತ್ನವನ್ನು ಮಾಡಿದ್ದೇನೆ. ಈ ಮದ್ಯೆ ಇದೇ ಬ್ಲಾಗನ್ನು ವೆಬ್ ಮ್ಯಾಗಜಿನ್ ಮಾಡಲು ಪ್ರಯತ್ನಿಸಿ ಹಣಕಾಸಿನ ತೊಂದರೆಯಿಂದ ಈ ಕನಸನ್ನು ಒಂದಷ್ಟು ದೂರ ಮುಂದೂಡಿದ್ದೇನೆ.  ಈತನಕ 150 ಕ್ಕಿಂತ ಹೆಚ್ಚಿನ ಬರಹಗಳನ್ನು ಬ್ಲಾಗಿನಲ್ಲಿ ಪ್ರಕಟಿಸಲಾಗಿದೆ. ಬ್ಲಾಗ್ ನೋಡುವಿಕೆ ಸಂಖ್ಯೆ 21 ಸಾವಿರ ದಾಟಿದೆ. ಯು.ಆರ್. ಅನಂತಮೂರ್ತಿ,ಪುರುಷೋತ್ತಮ ಬಿಳಿಮಲೆ, ಬಿ.ಎ. ವಿವೇಕರೈ, ರಹಮತ್ ತರೀಕೆರೆ , ಅಂಬಳಿಕೆ ಹಿರಿಯಣ್ಣ ಮೊದಲಾದವರು ಈ ಬ್ಲಾಗ್ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ. ಪ್ರಜಾವಾಣಿ, ವಿಜಯಕರ್ನಾಕಟ, ಸಂಯುಕ್ತ ಕರ್ನಾಕಟ ಪತ್ರಿಕೆಗಳಲ್ಲಿ ಜಾನಪದ ಬ್ಲಾಗ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮುಖ್ಯವಾಗಿ ಜಾನಪದ ಬ್ಲಾಗ್ ಬರಹಗಳು ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ.
 ಬ್ಲಾಗ್ ನ ಹೊಟ್ಟೆತುಂಬಿಸಿದವರು ಅನೇಕರು ಅವರೆಲ್ಲರನ್ನೂ ನೆನೆಯುವೆ. ಇನ್ನಷ್ಟು ಹೊಸ ಶಕ್ತಿ, ಸಂವೇದನೆ, ಕ್ರಿಯಾಶೀಲವಾಗಿ ಜಾನಪದ ಬ್ಲಾಗ್ ನ್ನು ನಿರ್ವಹಿಸುವ ಪ್ರಯತ್ನವನ್ನು ಮುಂದುವರೆಸುವೆ. ಇದಕ್ಕೆ ಎಂದಿನಂತೆ ಸ್ನೇಹಿತರ ಸಹಕಾರ ಇದ್ದೇ ಇರುತ್ತೆ ಎಂದು ಭಾವಿಸುವೆ.

                                                                                               ಕನ್ನಡ ಜಾನಪದ ಬ್ಲಾಗಿಗ
                                                                                            ಡಾ. ಅರುಣ್ ಜೋಳದಕೂಡ್ಲಿಗಿ

ಕಾಮೆಂಟ್‌ಗಳಿಲ್ಲ: