ಮಂಗಳವಾರ, ಜೂನ್ 19, 2012

ಬಾನಂದೂರು ಕೆಂಪಯ್ಯ ಜಾನಪದ ಅಕಾಡೆಮಿಯ ನೂತನ ಅಧ್ಯಕ್ಷರು




  ಈಚೆಗೆ ಜಾನಪದ ಅಕಾಡೆಮಿಯ ಅಧ್ಯಕ್ಷ ಸ್ಥಾನ ಗೊ.ರು.ಚ ಅವರ ನಂತರ ಕಾಲಿಯಾಗಿಯೇ ಉಳಿದಿತ್ತು. ಈ ಸ್ಥಾನಕ್ಕೆ ಬಾನಂದೂರು ಕೆಂಪಯ್ಯ ಅವರನ್ನು ಸರಕಾರ ಆಯ್ಕೆ ಮಾಡಿದೆ. ಬಾನಂದೂರು ಕೆಂಪಯ್ಯ ಅವರು ಜಾನಪದ ಹಾಡುಗಾರರು. ಅವರು ಕೆಲವು ಜಾನಪದ ಗೀತೆಗಳನ್ನು ಮತ್ತೆ ಮತ್ತೆ ಹಾಡಿ ಜನಪ್ರಿಯ ಗೊಳಿಸಿದ್ದಾರೆ. ಅದರಲ್ಲಿ ಬಿದಿರು ನಾನಾರಿಗಲ್ಲದವಳು ಎನ್ನುವ ಹಾಡು ಪ್ರಸಿದ್ಧಿಯನ್ನು ಹೊಂದಿದೆ.


   ಅಕಾಡೆಮಿಕ್ ಆಗಿ ಅಷ್ಟೇನು ಬರವಣಿಗೆ ಮಾಡದ, ಜಾನಪದ ಕ್ಷೇತ್ರಕಾರ್ಯವನ್ನೂ ಹೆಚ್ಚ  ಮಾಡದ ಕೆಂಪಯ್ಯ ಅವರು ಜಾನಪದ ಅಕಾಡೆಮಿಯನ್ನು ಹೇಗೆ ಮುನ್ನೆಡೆಸುತ್ತಾರೆ ಎನ್ನುವ ಕುತೂಹಲವಂತೂ ಇದ್ದೇಇದೆ. ಜಾನಪದ ವಿದ್ವಾಂಸರ ಜತೆ ಸಂವಾದ ಮಾಡಿ, ಜಾನಪದವನ್ನು ವಿಶೇಷವಾಗಿ ಹೊಸ ಕಾಲಕ್ಕೆ ಅನ್ವಯಿಸುವ ಹಾಗೆ ಮುನ್ನೆಡಸಬೇಕಾದ ಅನಿವಾರ್ಯತೆ ಇಂದು ಜಾನಪದ ಅಕಾಡೆಮಿಗೆ ಇದೆ. ಅದನ್ನು ಕೆಂಪಯ್ಯ ಅವರು ಹೇಗೆ ನಿರ್ವಹಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಷ್ಟೆ.

  ಏನೇ ಇರಲಿ, ಈ ಹೊತ್ತು ಜಾನಪದ ಅಕಾಡೆಮಿಯ ನೂತನ ಅಧ್ಯಕ್ಷರಾದ ಬಾನಂದೂರು ಕೆಂಪಯ್ಯ ಅವರಿಗೆ ಕನ್ನಡ ಜಾನಪದ ಬ್ಲಾಗ್ ಅಭಿನಂದನೆ ಸಲ್ಲಿಸುತ್ತದೆ.

ಕಾಮೆಂಟ್‌ಗಳಿಲ್ಲ: