ಶುಕ್ರವಾರ, ಸೆಪ್ಟೆಂಬರ್ 2, 2016

ಶಶಿ ಸಂಪಳ್ಳಿ ಅನುವಾದಿಸಿದ, ಗೂಗಿ ವಾ ಥಿಯಾಂಗೊ ಕಥೆ: ತಲೆ ಎತ್ತಿ ನಡೆದಾಗ

ಮೂಲ: ಗೂಗಿ ವಾ ಥಿಯಾಂಗೊ
Ngũgĩ wa Thiong'o ಗೆ ಚಿತ್ರದ ಫಲಿತಾಂಶ


ಅನುವಾದ: ಶಶಿ ಸಂಪಳ್ಳಿ


ಸೌಜನ್ಯ:https://jalada.org

ಒಂದಾನೊಂದು ಕಾಲದಲ್ಲಿ ಮನುಷ್ಯ ಕೂಡ ಇತರೆಲ್ಲಾ ನಾಲ್ಕು ಕಾಲಿನ ಪ್ರಾಣಿಗಳಂತೆಯೇ ಕೈ ಮತ್ತು ಕಾಲುಗಳನ್ನು ಬಳಸಿ ನಡೆದಾಡುತ್ತಿದ್ದ. ಮೊಲ, ಚಿರತೆ ಮತ್ತು ರೈನೋಗಿಂತಲೂ ಆತನೇ ವೇಗವಾಗಿ ಓಡುತ್ತಿದ್ದ. ಕೈ ಮತ್ತು ಕಾಲುಗಳು ಆತನ ಇತರೆಲ್ಲಾ ಅಂಗಗಳಿಗಿಂತ ಅನೋನ್ಯವಾಗಿದ್ದವು. ಅವು ಒಂದೇ ಬಗೆಯ ಸಂದು, ಮಂಡಿ ಹೊಂದಿದ್ದವು; ಭುಜ ಮತ್ತು ಕಟಿ; ಮೊಳಕೈ ಮತ್ತು ಮೊಣಕಾಲು; ಹಿಮ್ಮಡಿ ಮತ್ತು ಮಣಿಕಟ್ಟು; ಪಾದ ಮತ್ತು ಹಸ್ತ, ಹಾಗೂ ಎರಡರ ತುದಿಗೂ ತಲಾ ಐದು ಬೆರಳುಗಳು, ಪ್ರತಿ ಕೈ ಮತ್ತು ಕಾಲು ಬೆರಳಿಗೆ ಉಗುರು. ಪ್ರತಿ ಹಸ್ತ ಮತ್ತು ಪಾದಗಳು ಆಯಾ ಹೆಬ್ಬೆರಳಿನಿಂದ ಕಿರುಬೆರಳಿನವರೆಗೆ ಸಮಾನ ರಚನೆ ಹೊಂದಿದ್ದವು. ಆ ದಿನಗಳಲ್ಲಿ ಕೈ ಮತ್ತು ಕಾಲಿನ ಹೆಬ್ಬೆಟ್ಟುಗಳು ಇತರ ಬೆರಳುಗಳಿಗೆ ತಾಗಿಕೊಂಡಿದ್ದವು. ಕಾಲು ಮತ್ತು ಕೈಗಳು ಸೋದರ ಸಂಬಂಧಿಗಳಂತೆಯೇ ಅನುರೂಪವಾಗಿದ್ದವು.

ಮಾರ್ಕೆಟ್, ಶಾಪಿಂಗ್, ಗಿಡ-ಮರ ಹತ್ತಿಳಿಯುವುದು, ಬೆಟ್ಟ-ಗುಡ್ಡ ಸುತ್ತುವುದು ಸೇರಿದಂತೆ ದೇಹ ಯಾವೆಡೆಯೆಲ್ಲಾ ಹೋಗಲು ಬಯಸುವುದೋ ಅಲ್ಲಿಗೆಲ್ಲಾ ಅದನ್ನು ಹೊತ್ತುಕೊಂಡುಹೋಗಲು ಅವುಗಳೆರಡೂ ಪರಸ್ಪರ ನೆರವಾಗುತ್ತಿದ್ದವು. ನೀರಿನಲ್ಲೂ ಕೂಡ ತೇಲಲು, ಈಜಾಡಲು ಮತ್ತು ನೆಗೆಯಲು ಅವೆರಡೂ ಜೊತೆಯಾಗಿ ಶ್ರಮಿಸುತ್ತಿದ್ದವು. ಹಾಗಾಗಿ ಅವು ತಮ್ಮ ಸಂಬಂಧದಲ್ಲಿ ಸಮಾನತೆಯಿಂದಲೂ, ಅತ್ಯಂತ ಪ್ರಜಾಸತ್ತಾತ್ಮಕವಾಗಿಯೂ ನಡೆದುಕೊಳ್ಳುತ್ತಿದ್ದವು. ಅದೇ ಹೊತ್ತಿಗೆ ಅವು ಅಗತ್ಯಬಿದ್ದಾಗ ಬಾಯಿಯ ಸದ್ದು, ಕಿವಿಯ ಕೇಳುವಿಕೆ, ಮೂಗಿನಿಂದ ವಾಸನೆ ಗ್ರಹಿಕೆ, ಕಣ್ಣುಗಳಿಂದ ನೋಡುವುದು ಮುಂತಾದ ವಿವಿಧ ಅಂಗಗಳ ಉಪಯೋಗವನ್ನು ಸಹ ಪಡೆದುಕೊಳ್ಳುತ್ತಿದ್ದವು.

ಕೈ- ಕಾಲುಗಳ ಪರಸ್ಪರ ಲಯ ಮತ್ತು ಸಾಟಿಯಿಲ್ಲದ ಹೊಂದಾಣಿಕೆ ಇತರ ಅಂಗಗಳಲ್ಲಿ ಹೊಟ್ಟೆಕಿಚ್ಚಿ ಹೊತ್ತಿಸಿತ್ತು. ಹಾಗಾಗಿ ಈ ಇಬ್ಬರು ಅಪೂರ್ವ ಸಹೋದರರಿಗೆ ತಮ್ಮ ಮೇಧಾವಿತನವನ್ನೆಲ್ಲಾ ಕೊಟ್ಟದ್ದಕ್ಕೆ ಒಳಗೊಳಗೇ ಕುದಿಯುತ್ತಿದ್ದವು. ಕೈ-ಕಾಲುಗಳು ತಮ್ಮನ್ನು ಎಲ್ಲಾ ಕಡೆ ಓಡಾಡಿಸಿವೆ, ಏನೆಲ್ಲಾವನ್ನೂ ತೋರಿಸಿವೆ ಎಂಬುದನ್ನು ಈ ಅಂಗಾಂಗಗಳಿಗೆ ಅವುಗಳ ಹೊಟ್ಟೆಕಿಚ್ಚು ಮರೆಸಿಬಿಟ್ಟಿತ್ತು. ಹಾಗಾಗಿ ಎಲ್ಲಾ ಅಂಗಗಳು ಕೈ-ಕಾಲು ಜೋಡಿಯ ವಿರುದ್ಧ ಸಂಚು ಮಾಡಲಾರಂಭಿಸಿದವು.

ನಾಲಿಗೆ ಮೆದುಳಿನಿಂದ ಒಂದು ಉಪಾಯ ಪಡೆಯಿತು ಮತ್ತು ಅದನ್ನು ಕೂಡಲೇ ಕಾರ್ಯಗತ ಮಾಡಿತು. ಕೈ ಮತ್ತು ಕಾಲುಗಳಲ್ಲಿ ಯಾರು ಹೆಚ್ಚು ಗಟ್ಟಿ, ಬಲಶಾಲಿ ಎಂದು ಅದು ದೊಡ್ಡದಾಗಿಯೇ ಆಶ್ಚರ್ಯ ವ್ಯಕ್ತಪಡಿಸಿತು. ಅಬ್ಬಾ ಯಾರು ಗಟ್ಟಿ ನಿಮ್ಮಬ್ಬರಲ್ಲಿ! ಎಂದಿತು ನಾಲಿಗೆ, ಜೋರಾಗಿಯೇ! ಆವರೆಗೆ ತಮ್ಮಿಬ್ಬರ ನಡುವೆ ಈ ರೀತಿಯ ಹೋಲಿಕೆಯನ್ನೇ ಮಾಡಿಕೊಳ್ಳದೇ ಇದ್ದ ಕೈ-ಕಾಲುಗಳಿಗೆ ದಿಢೀರನೇ ಏನೋ ಹೊಸ ಭಾವ ಹೊಳೆಯಿತು. ಕೂಡಲೇ ಬಾಯಿಯಿಂದ ಸದ್ದು ಪಡೆದು ದೇಹಕ್ಕೆ ನಾನೇ ಮುಖ್ಯ, ನಾನೇ ಮುಖ್ಯ ಎಂದು ಪೈಪೋಟಿಯಲ್ಲಿ ಕೂಗಲಾರಂಭಿಸಿದವು. ಈ ವಾದ-ವಾಗ್ವಾದ ಬಹಳ ಬೇಗ ಯಾರು ಸುಂದರ, ನೀಳ ಎಂಬ ಚರ್ಚೆಗೂ ತಿರುಗಿತು. ತನ್ನ ಹಸ್ತದ ಉದ್ದನೆಯ ಸಪೂರ ಬೆರಳನ್ನು ತೋರಿಸಿದ ಕೈ ಅವುಗಳನ್ನು ನಾಜೂಕಾಗಿ ಬಳುಕಿಸಿ ತನ್ನ ಅಂದ ತೋರಿತು. ಅದೇ ಹೊತ್ತಿಗೆ ಅದು ಕಾಲಿನ ಪಾದದ ಬೆರಳುಗಳ ಬಗ್ಗೆ ಟೊಣಪ, ಮೋಟು ಎಂದು ಹಿಯ್ಯಾಳಿಸಿ ಮಾತನಾಡಿತು. ಅದಕ್ಕೆ ಪ್ರತ್ಯುತ್ತರವಾಗಿ ಕಾಲಿನ ಬೆರಳುಗಳು, ತಿನ್ನಲು ಇಲ್ಲದೆ ಬಡಕಲಾದ ಬಡ ಸಹೋದರರು ಎಂದು ಸಪೂರವಾಗಿದ್ದ ಕೈ ಬೆರಳುಗಳನ್ನು ಕಿಚಾಯಿಸಿದವು. ಕೈ-ಕಾಲುಗಳ ನಡುವಿನ ಈ ಜಗಳ ಹಲವು ದಿನಗಳ ಕಾಲ ಮುಂದುವರಿಯಿತು. ಆಗೆಲ್ಲಾ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲ ಅವುಗಳ ಹೊಂದಾಣಿಕೆಯ ಕಲೆ ಸೊರಗಿತು. ಕೊನೆಗೆ ಅದು ಯಾರು ಶಕ್ತಿಶಾಲಿ, ಯಾರು ಹೆಚ್ಚು ಗಟ್ಟಿ ಎಂಬ ಮೂಲಭೂತ ಪ್ರಶ್ನೆಗೆ ಬಂದು ನಿಂತಿತು. ಈ ವಿಷಯದಲ್ಲಿ ಇತರ ಅಂಗಗಳೇ ತೀರ್ಮಾನ ಕೈಗೊಳ್ಳಬೇಕು ಎಂದು ಅವು ಕೇಳಿಕೊಂಡವು.

ಕೊನೆಗೂ ಇದೇ ದಿನಕ್ಕೆ ಕಾದಿದ್ದ ನಾಲಿಗೆ ಒಂದು ಸ್ಪರ್ಧೆ ಮಾಡೋಣ. ಯಾರು ಗಟ್ಟಿ ನೋಡೇ ಬಿಡೋಣ ಎಂದಿತು. ಅದೊಂದು ಅದ್ಭುತ ಉಪಾಯ, ಹಾಗಾಗಿ ಎಲ್ಲ ಅಂಗಗಳೂ ಸರಿ, ಸರಿ ಸ್ಪರ್ಧೆಯನ್ನೇ ಮಾಡೋಣ ಎಂದು ಒಪ್ಪಿಕೊಂಡವು. ಆದರೆ, ಯಾವ ಸ್ಪರ್ಧೆ? ಕೆಲವು ಅಂಗಗಳು ಕುಸ್ತಿ ಎಂದವು! ಕೈ-ಕಾಲು ಕುಸ್ತಿ? ಮತ್ತೆ ಕೆಲವು ಕತ್ತಿವರಸೆ ಎಂದವು. ಓಟ, ಕಣ್ಣಾಮುಚ್ಚಾಲೆ, ಚೆಸ್,.. ಹೀಗೆ ಒಂದೊಂದು ಅಂಗವೂ ಒಂದೊಂದು ಆಟ, ಸ್ಪರ್ಧೆಯನ್ನು ಸೂಚಿಸಿದವು. ಆದರೆ, ಅವುಗಳೆಲ್ಲವನ್ನೂ ನ್ಯಾಯಯುತವಾಗಿ ಆಡಲು ಆಗದು ಎಂದೋ, ಇಬ್ಬರಿಗೂ ಸಮಾನ ಅವಕಾಶ ಸಿಗದು ಎಂದೋ ತಳ್ಳಿಹಾಕಲಾಯಿತು. ಕೊನೆಗೆ ಮತ್ತೆ ನಾಲಿಗೆಯೇ ಮುಂದೆ ಬಂದು, ಮೆದುಳಿನಿಂದ ಉಪಾಯ ಪಡೆದು ಒಂದು ಸರಳ ಪರಿಹಾರ ನೀಡಿತು. ಎರಡೂ ಅಂಗಗಳು ಒಂದರ ನಂತರ ಮತ್ತೊಂದರಂತೆ ಒಂದೊಂದು ಸಾಹಸ ಪ್ರದರ್ಶಿಸಬೇಕು ಎಂದು ಹೇಳಿತು. ನಾಲಿಗೆಯ ಮಾತಿಗೆ ಕೈ, ಕಾಲುಗಳೆರಡೂ ಒಪ್ಪಿಕೊಂಡವು.
The Upright Revolution 4

ಕಾಡಿನ ನಡುವೆ ನದಿ ಪಕ್ಕದ ಒಂದು ಚಿಕ್ಕ ಬಯಲಿನಲ್ಲಿ ಸ್ಪರ್ಧೆ ಆರಂಭವಾಯಿತು. ದೇಹದ ಎಲ್ಲಾ ಅಂಗಗಳೂ ಆಗಬಹುದಾದ ಅನಿರೀಕ್ಷಿತ ಅಪಾಯ ಅಥವಾ ಆಘಾತವನ್ನು ಗ್ರಹಿಸಿ ಭಾರೀ ಎಚ್ಚರಿಕೆಯಿಂದ ಜಾಗರೂಕತೆ ವಹಿಸಿದವು. ತಮ್ಮದೇ ದೇಹದ ಅಂಗಗಳೆರಡು ಪರಸ್ಪರ ಸಮರಕ್ಕೆ ಸಜ್ಜಾಗಿದ್ದವು. ಇದು ಸಹಜವಾಗೇ ಭಯ ಮತ್ತು ಕುತೂಹಲಕ್ಕೆ ಕಾರಣವಾಗಿತ್ತು. ಕಣ್ಣುಗಳು ದೂರ-ದೂರದವರೆಗೆ ದೃಷ್ಟಿ ಹರಿಸಿ ಉದ್ದಗಲವನ್ನೂ ನಿರುಕಿಸಿ ಯಾವ ದಿಕ್ಕಿನಿಂದಾದರೂ ಏನಾದರೂ ಅಪಾಯವಿದೆಯೇ ಎಂದು ಪರೀಕ್ಷಿಸಿದವು. ಕಿವಿಗಳು ನೆಟ್ಟಗೆ ಸೆಟೆದು ಯಾವ ಮೂಲೆಯಿಂದಾದರೂ ಅಪಾಯದ ಸದ್ದೇನಾದರೂ ಕೇಳೀತೆ ಎಂದು ಮತ್ತೆ ಮತ್ತೆ ದಿಕ್ಕುದಿಕ್ಕಿಗೂ ತಿರುತಿರುಗಿ ಆಲಿಸಿದವು. ಮೂಗು ತನ್ನ ಹೊಳ್ಳೆಗಳನ್ನು ಅಗಲಿಸಿ ಕಣ್ಣು, ಕಿವಿಗಳನ್ನೂ ತಪ್ಪಿಸಿ ಏನಾದರೂ ಅಪಾಯ ಸುಳಿಯುತ್ತಿದೆಯೇ ಎಂದು ವಾಸನೆ ಹಿಡಿದು ನೋಡಿತು. ಅದೇ ಹೊತ್ತಿಗೆ ನಾಲಿಗೆ ಯಾವುದೇ ಕ್ಷಣದಲ್ಲೂ ಅಪಾಯ ಎಂದು ಕೂಗಿ ಕೂಡಲೇ ಎಚ್ಚರಿಸಲು ತುದಿನಾಲಿಗೆಯಾಗಿ ಸಜ್ಜಾಗಿತ್ತು.

ಕೈ ಕಾಲುಗಳ ನಡುವಿನ ಈ ವಿಶೇಷ ಸ್ಪರ್ಧೆಯ ಸುದ್ದಿಯನ್ನು ಹೊತ್ತು ಗಾಳಿ ಕಾಡು, ನೀರು, ಆಕಾಶದ ಮೂಲೆ-ಮೂಲೆಗೆ ಹರಡಿತು. ಅದನ್ನು ಕೇಳಿ ನಾಲ್ಕು ಕಾಲಿನ ಪ್ರಾಣಿಗಳು ಮೊದಲು ಸ್ಪರ್ಧೆಯ ಕಣಕ್ಕೆ ಬಂದವು. ಅವುಗಳಲ್ಲಿ ಕೆಲವಂತೂ ತಾವು ಬಂದಿರುವುದನ್ನು ತೋರಿಸಲು ಮರದ ಕೊಂಬೆಗಳನ್ನು ಹಿಡಿದು ಅಲುಗಾಡಿಸಿ ತೋರಿಸಿದವು. ಚಿರತೆ, ಚೀತಾ, ಸಿಂಹ, ರೈನೋ, ಕತ್ತೆಕಿರುಬ, ಆನೆ, ಜಿರಾಫೆ, ಒಂಟೆ, ಉದ್ದ ಕೊಂಬಿನ ದನ, ಗಿಡ್ಡನೆಯ ಕೊಂಬಿನ ಎಮ್ಮೆ, ಜಿಂಕೆ, ಕಡವೆ, ಮೊಲ, ಕತ್ತೆ, ಇಲಿಗಳೆಲ್ಲಾ ನೆರೆದವು. ಜಲಚರಗಳಾದ ನೀರಾನೆ, ಮೀನು, ಮೊಸಳೆ ಮುಂತಾದವು ನದಿಯ ದಡದಂಚಿಗೆ ಬಂದು ಅರ್ಧ ನೀರಲ್ಲಿ, ಅರ್ದ ದಡದಲ್ಲಿ ದೇಹ ಹರಡಿ ತದೇಕಚಿತ್ತದಿಂದ ನೋಡತೊಡಗಿದವು. ಎರಡು ಕಾಲಿನ ಆಸ್ಟ್ರಿಚ್, ಗಿನಿಯಾ ಗೂಬೆ ಮತ್ತು ನವಿಲುಗಳು ಖುಷಿಯಲ್ಲಿ ತಮ್ಮ ರೆಕ್ಕೆ ಬಿಚ್ಚಿ ಕೇಕೆ ಹಾಕಿದವು. ಮರಗಳ ನಡುವಿನಿಂದ ಹಕ್ಕಿಗಳು ಗಿಜಿಗುಟ್ಟಿದವು. ಮಿಡತೆ, ಜೀರುಂಡೆಗಳು ಹಾಡುತ್ತಲೇ ಇದ್ದವು. ಜೇಡ, ಹುಳು-ಹುಪ್ಪಟೆ, ಚೇಳು, ಸಹಸ್ರಪದಿಗಳು ನೆಲ, ಗಿಡ-ಮರಗಳ ಮೇಲೆಲ್ಲಾ ಹರಿದಾಡಿದವು. ಒಂದೆಡೆ ಓತಿ ಓಡುತ್ತಾ ಅವಸರವಸರವಾಗಿ ಬಂದರೆ, ಗೋಸುಂಬೆ ನಿಧಾನವಾಗಿ ತನ್ನದೇ ಗತ್ತಿನಲ್ಲಿ ಕಳ್ಳ ಹೆಜ್ಜೆ ಇಡುತ್ತಾ ಬರುತ್ತಿತ್ತು. ಕೋತಿ, ಚಿಂಪಾಂಜಿ, ಗೊರಿಲ್ಲಾಗಳು ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಾ ಬಂದು ಇತರ ಪ್ರಾಣಿಗಳನ್ನು ಸೇರಿಕೊಂಡವು. ಗಿಡ-ಮರ-ಪೊದೆಗಳು ಕೂಡ ಅತ್ತಿತ್ತ ಅಲುಗಾಡಿ, ತೊನೆದಾಡಿ ಕೊನೆಗೂ ನಿಶ್ಚಲವಾಗಿ ನಿಂತು ನಡೆಯಲಿರುವ ಭರ್ಜರಿ ಪೈಪೋಟಿಗೆ ಕಣ್ಣಾದವು.

    ನಾವಾಡುತ್ತೇವೆ ಖುಷಿಗಾಗಿ,
    ನಾವಿದನ್ನು ಮಾಡುತ್ತೇವೆ ಖುಷಿಗಾಗಿ
    ನಾವೆಲ್ಲಾ ಒಂದೇ, ಒಂದೇ ನಿಸರ್ಗಮಾತೆಯ ಮಕ್ಕಳು ನಾವು
    ಎಂದು ಬಾಯಿ ಹಾಡುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿತು.

ಕೈ ಕಾಲುಗಳು ತಮ್ಮ ಪೈಪೋಟಿಯ ಫಲಿತಾಂಶ ಏನೇ ಆಗಿದ್ದರೂ ಅದನ್ನು ಸೋಲು- ಗೆಲುವು ಎಂದೆಣಿಸದೆ ಸಮಾನವಾಗಿ ಸ್ವೀಕರಿಸುವುದಾಗಿ ಪ್ರಮಾಣ ಮಾಡಿದವು. ಯಾವುದೇ ಧರಣಿ, ಹೋರಾಟ, ಆರೋಪ, ಬಹಿಷ್ಕಾರ ಮಾಡುವುದಿಲ್ಲ ಎಂದು ಹೇಳಿದವು.

ಕೈಗಳು ಮೊದಲ ಸವಾಲು ಒಡ್ಡಿದವು. ಮರದ ತುಂಡೊಂದನ್ನು ನೆಲದ ಮೇಲೆ ಎಸೆದವು. ಕಾಲು; ಬಲಗಾಲು ಅಥವಾ ಎಡಗಾಲು ಅಥವಾ ಎರಡೂ ಸೇರಿ; ಆ ಮರದ ತುಂಡನ್ನು ನೆಲದಿಂದ ಮೇಲೆತ್ತಿ, ದೂರ ಎಸೆಯಬೇಕು ಎಂಬುದು ಸವಾಲು. ಎರಡೂ ಕಾಲುಗಳು ಸ್ಪರ್ಧೆಯ ಯಾವುದೇ ಹಂತದಲ್ಲಿ ಪರಸ್ಪರ ಸಮಾಲೋಚಿಸಬಹುದು, ತಮ್ಮ ಬೆರಳುಗಳನ್ನು ಒಟ್ಟಾಗಿ ಅಥವಾ ಬೇರೆ-ಬೇರೆಯಾಗಿ ಈ ಕೆಲಸಕ್ಕೆ ನೇಮಿಸಬಹುದು ಎಂಬ ಷರತ್ತನ್ನೂ ವಿಧಿಸಲಾಯಿತು. ಕಾಲುಗಳು ಮರದ ತುಂಡನ್ನು ಹೊರಳಿಸಲು ಪ್ರಯತ್ನಪಟ್ಟವು. ತಳ್ಳಲು ಯತ್ನಿಸಿದವು. ಪಾದದಿಂದ, ಬೆರಳುಗಳಿಂದ, ಮೊಣಕಾಲಿನಿಂದ,.. ಯಾವ ಬಗೆಯಲ್ಲಿ ಪ್ರಯತ್ನಿಸಿದರೂ ಅದನ್ನು ಎತ್ತಿಕೊಳ್ಳಲಾಗಲೇ ಇಲ್ಲ. ಇನ್ನು ಅದನ್ನು ಹೊರಳಿಸುವ ವಿಷಯದಲ್ಲಿ ಕೆಲವೇ ಇಂಚುಗಳಷ್ಟು ಅದನ್ನು ಕದಲಿಸಲು ಮಾತ್ರ ಅವು ಯಶಸ್ವಿಯಾದವು. ಇದನ್ನು ಕಂಡ ಕೈಬೆರಳುಗಳು ಬಾಯಿಯಿಂದ ಸದ್ದು ಪಡೆದು ಜೋರಾಗಿ ನಕ್ಕುಬಿಟ್ಟವು. ತಾನು ಒಡ್ಡಿದ ಸವಾಲಿನಲ್ಲಿ ಕಾಲುಗಳು ಹೀನಾಯವಾಗಿ ಸೋತವು ಎಂದು ಕೈಗಳು ಸೌಂದರ್ಯ ಸ್ಪರ್ಧೆಯಲ್ಲಿ ಲಲನೆಯರು ನಾಜೂಕು ನಡಿಗೆಯ ಪರೇಡ್ ನಡೆಸುವಂತೆ ಪರೇಡ್ ನಡೆಸಿದವು. ವಯ್ಯಾರದಿಂದ ಗಾಳಿಯಲ್ಲಿ ಬಳುಕಿ, ತಮ್ಮ ಸಪೂರ ಮೈಮಾಟ ಪ್ರದರ್ಶಿಸಿ ಬೇರೆ ಬೇರೆ ಬೆರಳುಗಳನ್ನು ಬಳಸಿ ಬಾರಿ ಬಾರಿ ಮರದ ತುಂಡನ್ನು ಎತ್ತಿ ಗಾಳಿಯಲ್ಲಿ ತೇಲಿಸಿ, ಸಭಿಕರಿಗೆ ತೋರಿಸಿ, ಕೊನೆಗೆ ದೂರದ ಕಾಡಿನೊಳಕ್ಕೆ ಬೀಳುವಂತೆ ಎಸೆದವು.

ಆಗ ದೇಹದ ಇತರ ಅಂಗಗಳು ಮತ್ತು ಸ್ಪರ್ಧೆಯ ವೀಕ್ಷಕರಾಗಿ ಬಂದಿದ್ದ ಪ್ರಾಣಿ, ಪಕ್ಷಿ, ಕೀಟಗಳು ಹೋ ಎಂದು ಮೆಚ್ಚುಗೆ ಸೂಚಿಸಿದವು. ಈ ಮೆಚ್ಚುಗೆ ಪ್ರತಿಕ್ರಿಯೆಯಿಂದ ಮತ್ತಷ್ಟು ಹುರಿದುಂಬಿದ ಕೈಗಳು ಇನ್ನಷ್ಟು ಸಾಹಸ ಪ್ರದರ್ಶಿಸಿದವು; ತಪ್ಪಲೆಯೊಂದರಲ್ಲಿ ತುಂಬಿದ್ದ ಅಕ್ಕಿಯಿಂದ ಸಣ್ಣ- ಸಣ್ಣ ಮರಳಿನ ಹರಳುಗಳನ್ನು ಹೆಕ್ಕಿ ತೆಗೆದವು; ಸೂಜಿಗೆ ದಾರ ಪೋಣಿಸಿದವು; ಭಾರದ ಮರಗಳನ್ನು ಸಾಗಿಸಲು ರಾಟೆಗಳನ್ನು ಮಾಡಿದವು. ಕೆಲವು ಗೋಳಾಕಾರದ ವಸ್ತುಗಳನ್ನು ಮಾಡಿ, ಮುಗಿಲಿನೆತ್ತರಕ್ಕೆ ಹಾರಿಸಿದವು. ಇದೆಲ್ಲವನ್ನೂ ಕನಸಲ್ಲೂ ಕಾಣದಿದ್ದ ಕಾಲು ಮತ್ತು ಕಾಲಿನ ಬೆರಳುಗಳು ಕುಳಿತು ಎಲ್ಲವನ್ನೂ ಬೆರಗಿನಿಂದ ನೋಡುತ್ತಿದ್ದವು ಅಷ್ಟೆ. ತಮ್ಮ ಸಪೂರ ಸಹೋದರರ ಈ ಚಾಕಚಕ್ಯತೆಗಳನ್ನು ಅವು ನೋಡಿ ಮಾತ್ರ ಖುಷಿಪಡಲು ಸಾಧ್ಯವಿತ್ತು. ಕೈಗಳ ವಿಧ ವಿಧ ವರಸೆಗಳನ್ನು ಕಂಡ ವೀಕ್ಷಕರ ಕೈಗಳು ತಮ್ಮ ಸಹ ಕೈಗಳನ್ನು ಅಭಿನಂದಿಸಿ ಜೋರಾಗಿ ಚಪ್ಪಾಳೆ ತಟ್ಟಿದವು. ಆ ಮೂಲಕ ಕೈಗಳ ಒಗ್ಗಟ್ಟು ಪ್ರದರ್ಶನವಾಯಿತು. ಇದು ಅಲ್ಲಿ ಸ್ಪರ್ಧೆಗೆ ಇಳಿದಿದ್ದ ಕಾಲುಗಳೂ ಸೇರಿದಂತೆ ಇದ್ದ ಎಲ್ಲಾ ಕಾಲುಗಳಿಗೆ ಭಾರೀ ಬೇಸರ ತರಿಸಿತು. ಆದರೂ ಅವು ಏನೂ ಮಾಡದ ಸ್ಥಿತಿಯಲ್ಲಿದ್ದವು. ಕೂತಲ್ಲೇ ಕಾಲುಗಳ ಬೆರಳುಗಳು ನೆಲದ ಮರಳಿನ ಮೇಲೆ ಸಣ್ಣ ಸಣ್ಣ ವೃತ್ತಗಳನ್ನು ಬರೆಯುತ್ತಾ ಕೈಗಳಿಗೆ ಒಡ್ಡಬೇಕಾದ ದೊಡ್ಡ ಸವಾಲಿನ ಬಗ್ಗೆ ಯೋಚಿಸುತ್ತಿದ್ದವು.

ಕೊನೆಗೂ ಕೈಗಳ ಶೋ ಮುಗಿದು, ಕಾಲು ಮತ್ತು ಕಾಲ್ಬೆರಳುಗಳು ಅವಕ್ಕೆ ಸವಾಲೊಡ್ಡುವ ಸಮಯ ಬಂತು. ಅವು ಒಡ್ಡಿದ ಸವಾಲು ಸರಳವಾಗಿತ್ತು. ನೆಲದ ಮೇಲೆ ತುಸು ಅಂತರದಲ್ಲಿ ಎರಡು ವೃತ್ತ ಬರೆದವು. ಆ ಎರಡು ವೃತ್ತಗಳಲ್ಲಿ ಒಂದರಿಂದ ಇನ್ನೊಂದಕ್ಕೆ ಇಡೀ ದೇಹವನ್ನು ಹೊತ್ತುಕೊಂಡು ಕೈಗಳು ಚಲಿಸಬೇಕು ಎಂಬುದು ಆ ಸವಾಲು. ಈಗಷ್ಟೇ ಮುಗಿದ ತಮ್ಮ ಪ್ರದರ್ಶನದಿಂದ ಬೀಗುತ್ತಿದ್ದ ಕೈ ಬೆರಳುಗಳಿಗೆ ಇದೊಂದು ತೀರಾ ಕ್ಷುಲ್ಲಕ ಸವಾಲು ಎನಿಸಿತು. ಇಡೀ ದೇಹ ತಲೆಕೆಳಗಾಯಿತು. ಕೈಗಳು ನೆಲಕ್ಕೆ ಊರಿದವು. ಕಣ್ಣುಗಳು ನೆಲದ ಸಮೀಪಕ್ಕೆ ಹೋದವು, ನೆಲಕ್ಕೆ ಅಂಟಿಕೊಂಡಂತೆ ಇದ್ದುದರಿಂದ ಅವುಗಳ ನೋಟದ ವ್ಯಾಪ್ತಿ ತೀರಾ ಕ್ಷೀಣಿಸಿತು. ನೆಲದ ದೂಳು ಮೂಗಿನ ಒಳ ನುಸುಳಿ, ಸೀನು ಬಂತು. ಕಾಲು ಮತ್ತು ಕಾಲ್ಬೆರಳುಗಳು ಗಾಳಿಯಲ್ಲಿ ತೇಲುತ್ತಿದ್ದವು. ಇದೊಂದು ಅಪರೂಪದ ದೃಶ್ಯವಾಗಿತ್ತು. ವೀಕ್ಷಕರು ನ್ಯಾಯೊ ಜುಜು ಎಂಬ ಹರ್ಷೋದ್ಗಾರದೊಂದಿಗೆ ಹಾಡುತ್ತಾ ಕೈಗಳನ್ನು ಸ್ವಾಗತಿಸಿದವು.

    ನ್ಯಾಯೊ ನ್ಯಾಯೊ ಜುಜು
    ಹಕೂನ ಮಟಾಟ
    ಫುಅಟ ನ್ಯಾಯೊ
    ಹಕೂನ ಮಟಾಟ
    ಟುರುಕೆನಿ ಅಂಗನಿ..

ಹಾಡು ಗುನುಗುತ್ತಿದ್ದರೂ ಅವರ ಗಮನವೆಲ್ಲಾ ಕೈಗಳ ಮೇಲೇ ಇತ್ತು. ಕೆಲವೇ ಕ್ಷಣಗಳ ಹಿಂದೆ ಬಗೆಬಗೆಯ ಕೌಶಲ್ಯ ಪ್ರದರ್ಶನ ಮಾಡಿದ ಕೈಗಳು ಈಗ ನಾಲ್ಕು ಮಾರು ದೂರುವನ್ನೂ ಕ್ರಮಿಸಲಾಗಲಿಲ್ಲ. ಒಂದೆರಡು ಮಾರು ಸಾಗುವುದರಲ್ಲೇ ಕೈಗಳು ನೋವಿನಿಂದ ಚೀತ್ಕರಿಸಿದವು. ಗಢಗಢ ನಡುಗಿದವು, ಬಳುಕಾಡಿದವು, ಕೊನೆಗೂ ದೇಹ ನೆಲಕ್ಕುರುಳಿಯೇ ಬಿಟ್ಟಿತು! ತುಸು ಹೊತ್ತು ವಿಶ್ರಾಂತಿ ಪಡೆದು, ಸುಧಾರಿಸಿಕೊಂಡು ಮತ್ತೆ ಇನ್ನೊಂದು ಯತ್ನ ಮಾಡಿದವು. ಈ ಬಾರಿ ನೆಲವನ್ನು ಬಿಗಿದುಹಿಡಿಯಲು ಪ್ರಯತ್ನಿಸಿ ಕೈ ಬೆರಳುಗಳನ್ನು ಸಾಧ್ಯವಾದಷ್ಟು ಹಿಗ್ಗಿಸಿದವು. ಆದರೆ, ಹೆಬ್ಬೆರಳು ಮಾತ್ರ ತುಸು ಹಿಗ್ಗಿತು ಅಷ್ಟೇ. ಲಾಗಾ ಹಾಕಲು ಪ್ರಯತ್ನಿಸಿದವು. ಆದರೆ, ಅದಕ್ಕೆ ಕಾಲು ಬಳಕೆ ಅನಿವಾರ್ಯವಾದ್ದರಿಂದ ಆಟದಿಂದ ಅನರ್ಹಗೊಳಿಸಲಾಯಿತು. ಈಗ ಗಹಗಹಿಸಿ ನಗುವ ಸರದಿ ಕಾಲಿನ ಬೆರಳುಗಳದ್ದಾಯಿತು. ಅವು ಅಟ್ಟಹಾಸದ ನಗೆಯನ್ನು ಬಾಯಿಯಿಂದ ಪಡೆದು ಕೈಗಳ ಕೀರಲು ನಗೆಯನ್ನು ಅಣಕಿಸಿ ಜೋರಾಗಿ ನಕ್ಕವು. ಈ ಅಪಹಾಸ್ಯದ ನಗು ಕೇಳಿ ಕೈಗಳ ಸಿಟ್ಟು ಕೆಂಪೇರಿತು. ಆ ಅವಮಾನ, ಸಿಟ್ಟಿನಲ್ಲೇ ದೇಹವನ್ನು ಹೊತ್ತು ಸಾಗುವ ಮತ್ತೊಂದು ಅಂತಿಮ ಸಾಹಸ ಮಾಡಿದವು. ಒಂದಡಿ ಕೂಡ ಮುಂದೆ ಸಾಗದಾದವು. ಕೊನೆಗೂ ಸುಸ್ತಾದ ಕೈ ಮತ್ತು ಕೈಬೆರಳು ಸವಾಲು ಬಿಟ್ಟುಕೊಟ್ಟವು. ಈಗ ಕಾಲುಗಳು ಕಣಕ್ಕಿಳಿದವು. ತಮ್ಮ ಅದ್ಭುತ ಕ್ರೀಡಾ ಸಾಹಸಗಳನ್ನು ಪ್ರದರ್ಶನಕ್ಕಿಟ್ಟವು. ಅವು ಓಡಿದವು, ಹಾರಿದವು, ಜಿಗಿದವು, ಹೈಜಂಪ್, ಲಾಂಗ್ಜಂಪ್ಗಳನ್ನೆಲ್ಲಾ ಪ್ರದರ್ಶಿಸಿದವು; ಒಮ್ಮೆಯೂ ದೇಹವನ್ನು ಬೀಳಿಸದೇ! ಕಾಲುಗಳ ಈ ಸಾಹಸ, ಕೌಶಲ್ಯ ಬೆಂಬಲಿಸಿ ನೆರೆದ ವೀಕ್ಷಕರೆಲ್ಲಾ ತಮ್ಮ ಕಾಲುಗಳನ್ನು ಲಯವಾಗಿ ನೆಲಕ್ಕೆ ಅಪ್ಪಳಿಸಿದವು. ಆ ಮೂಲಕ ಕಾಲುಗಳ ಒಗ್ಗಟ್ಟು ಪ್ರದರ್ಶಿಸಿದವು. ಆಗ ಕೈಗಳು ಇದು ಸ್ಪರ್ಧಾ ಮನೋಭಾವಕ್ಕೆ ವಿರುದ್ಧ ಎಂದು ಗಾಳಿಯಲ್ಲಿ ಸೆಟೆದುನಿಂತು ವಿರೋಧ ವ್ಯಕ್ತಪಡಿಸಿದವು. ಆದರೆ, ಈ ಆಟವನ್ನು ತಾವೇ ಆರಂಭಿಸಿದ್ದು ಎಂಬುದನ್ನು ಮರೆತಿದ್ದವು.

ಆದರೆ, ವೀಕ್ಷಕರನ್ನೂ ಸೇರಿದಂತೆ ಅಲ್ಲಿದ್ದವರೆಲ್ಲಾ ಒಂದು ವಿಚಿತ್ರವನ್ನು ಗಮನಿಸಿದರು; ಕೈಗಳು ದೇಹವನ್ನು ಹೊತ್ತೊಯ್ಯಲು ಪ್ರಯತ್ನಿಸುತ್ತಿದ್ದಾಗ ಇತರ ಬೆರಳುಗಳಿಂದ ದೂರಕ್ಕೆ ಹಿಗ್ಗಿದ್ದ ಕೈ ಹೆಬ್ಬೆರಳುಗಳು ಹಾಗೇ ಚಾಚಿದಂತೆಯೇ ಉಳಿದುಬಿಟ್ಟಿದ್ದವು. ಹೀಗೆ ಚಾಚಿಕೊಂಡಿದ್ದ ಹೆಬ್ಬೆರಳುಗಳನ್ನು ಕಂಡು ಮತ್ತೆ ನಗಬೇಕು ಎಂದುಕೊಂಡಿದ್ದ ಕೈಗಳ ದಾಯಾದಿ ಅಂಗಗಳಿಗೆ ಒಂದು ಅಚ್ಚರಿ ಕಾದಿತ್ತು; ಹೆಬ್ಬೆರಳು ಚಾಚಿಕೊಂಡಿರುವುದು ಕೈಗಳ ಶಕ್ತಿಗುಂದಿಸುವ ಬದಲು ಅವನ್ನು ಇನ್ನಷ್ಟು ಸದೃಢಗೊಳಿಸಿತ್ತು. ಹಸ್ತದ ಹಿಡಿಪನ್ನು ಮತ್ತಷ್ಟು ಬಲಗೊಳಿಸುವ ಮೂಲಕ ಕೈಗೆ ಬಲ ತಂದುಕೊಟ್ಟಿತ್ತು ಆ ಬದಲಾವಣೆ. ವಿರೂಪವೇ ರೂಪದ ಬಲವೃದ್ಧಿಸಿದ ಬೆಳವಣಿಗೆ ಅದು!

ಇದೆಲ್ಲಾ ಮುಗಿದ ಬಳಿಕ ದೇಹದ ಇತರ ಅಂಗಗಳಿಗೆ ಸ್ಪರ್ಧೆಯ ವಿಜೇತರು ಯಾರು ಎಂಬುದನ್ನು ನಿರ್ಧರಿಸಲು ಕೈ ಮತ್ತು ಕಾಲುಗಳ ಬೆರಳುಗಳ ಸಂಖ್ಯೆಯಷ್ಟೇ; ಐದು ದಿನಗಳು; ಬೇಕಾದವು. ಎಷ್ಟು ಚರ್ಚಿಸಿದರೂ, ವಾದ- ವಿವಾದ ನಡೆದರೂ ಅಂತಿಮವಾಗಿ ಯಾರಿಗೆ ಜಯದ ಕಿರೀಟ ತೊಡಿಸುವುದು ಎಂಬುದನ್ನು ನಿರ್ಧರಿಸುವುದು ಸಾಧ್ಯವಾಗಲೇ ಇಲ್ಲ. ಏಕೆಂದರೆ; ಕೈ ಮತ್ತು ಕಾಲುಗಳ ಜೋಡಿಗಳೆರಡೂ ತಮ್ಮದೇ ರೀತಿಯಲ್ಲಿ ತಾವು ಮಾಡಬಹುದಾದ್ದನ್ನು ಮಾಡಿದ್ದವು. ಹಾಗೇ ಒಂದರ ಹೊರತಾಗಿ ಮತ್ತೊಂದು ಅದಕ್ಕಿಂತ ಉತ್ತಮವಾಗಿ ಏನನ್ನೂ ಮಾಡಲಾಗುತ್ತಿರಲಿಲ್ಲ. ಆಗ ಅಲ್ಲಿ ತಾತ್ವಿಕ ಲೆಕ್ಕಾಚಾರಗಳು ಆರಂಭವಾದವು; ದೇಹ ಎಂದರೆ ಏನು ಎಂದು ಎಲ್ಲಾ ಅಂಗಗಳು ಪ್ರಶ್ನೆ ಮುಂದಿಟ್ಟವು. ತಾವೆಲ್ಲರೂ ಸೇರಿ ಒಂದು ದೇಹ ಎಂಬುದನ್ನು ಚರ್ಚೆಯ ಬಳಿಕ ಅರ್ಥಮಾಡಿಕೊಂಡವು. ಪ್ರತಿ ಅಂಗವೂ ಮತ್ತೊಂದರ ಮೇಲೆ ಅವಲಂಬಿತ. ಎಲ್ಲರೂ ಹೊಂದಾಣಿಕೆಯಿಂದ ಉತ್ತಮ ಕೆಲಸ ಮಾಡಿದರೆ ಮಾತ್ರ ಅಂತಿಮವಾಗಿ ಎಲ್ಲವೂ ಉತ್ತಮವಾಗಿರಲು ಸಾಧ್ಯ ಎಂಬುದು ಕೂಡ ಗೊತ್ತಾಯಿತು.

ಆದರೆ, ಮುಂದಿನ ದಿನಗಳಲ್ಲಿ ಇಂತಹ ಸ್ಪರ್ಧೆ ಅಥವಾ ಒಬ್ಬರಿಗೆ ಅಡ್ಡಗಾಲಾಗಿ ಮತ್ತೊಬ್ಬರು ಬರುವುದನ್ನು ತಪ್ಪಿಸಲು ಎಲ್ಲಾ ಅಂಗಗಳು ಒಂದು ಒಮ್ಮತದ ತೀರ್ಮಾನ ಕೈಗೊಂಡವು. ಅದೆಂದರೆ; ಇನ್ನು ಮುಂದೆ ದೇಹ ನೇರವಾಗಿ ತಲೆ ಎತ್ತಿ ನಿಲ್ಲಬೇಕು. ಕಾಲುಗಳು ಗಟ್ಟಿಯಾಗಿ ನೆಲಕ್ಕೆ ಅಂಟಿಕೊಂಡಿರಬೇಕು. ಕೈಗಳು ಮೇಲೆ ಗಾಳಿಯಲ್ಲಿ ಬೀಸುತ್ತಾ ನಡೆಯಲು ನೆರವಾಗಬೇಕು. ಈ ನಿರ್ಧಾರ ಕೇಳಿ ದೇಹ ಖುಷಿಯಾಯಿತು. ಆದರೆ, ಮಕ್ಕಳು ಮಾತ್ರ ಕೆಲ ದಿನಗಳ ಮಟ್ಟಿಗಾದರೂ ಕೈ ಕಾಲುಗಳನ್ನು ಬಳಸಿ ನಾಲ್ಕು ಕಾಲಿನ ಮೇಲೆ ನಡೆಯಬೇಕು. ಹಾಗಾದರೂ ಅವರು ತನ್ನ ಮೂಲ ಸ್ವರೂಪವನ್ನು ನೆನಪಿಸಿಕೊಳ್ಳುವಂತಾಗಲಿ ಎಂದು ದೇಹ ಹೇಳಿತು. ಬಳಿಕ ಅಂಗಗಳು ತಮ್ಮ ತಮ್ಮ ಕೆಲಸಗಳನ್ನು ಹಂಚಿಕೊಂಡವು; ಕಾಲುಗಳು ದೇಹವನ್ನು ಹೊತ್ತುಕೊಂಡು ಓಡಾಡಬೇಕು. ಆದರೆ, ಒಮ್ಮೆ ನಿಗದಿ ಸ್ಥಳ ತಲುಪಿದ ಬಳಿಕ ಉಳಿದ ಸಲಕರಣೆಗಳನ್ನು ಮಾಡುವ ಅಥವಾ ಬಳಸುವ ಕೆಲಸವನ್ನು ಕೈಗಳೇ ಮಾಡಬೇಕು ಎಂದಾಯಿತು. ಕಾಲು ಮತ್ತು ಪಾದಗಳು ದೇಹವನ್ನು ಹೊತ್ತುಕೊಂಡು ಸಾಗುವ ಕಠಿಣ ಶ್ರಮದ ಕೆಲಸ ಮಾಡುತ್ತಿದ್ದರೆ, ಕೈಗಳು ದೇಹದ ನೆರವಿಗೆ ಬಂದು ಯಾವುದೇ ಕೆಲಸ, ಕಾರ್ಯಗಳನ್ನು ಮಾಡಲು ತಮ್ಮ ಕೌಶಲ ಉಪಯೋಗಿಸತೊಡಗಿದವು. ಊಟ ಬಾಯಿಗೆ ತಲುಪುವಂತೆ ಮಾಡುವುದು, ಬಳಿಕ ಬಾಯಿ, ಅದರಲ್ಲೂ ಅದರ ಹಲ್ಲುಗಳು ಆಹಾರವನ್ನು ಜಗಿಯುವುದು, ನಂತರ ಗಂಟಲ ಮೂಲಕ ಅದನ್ನು ಹೊಟ್ಟೆಗೆ ಸಾಗಿಸುವುದು. ಹೊಟ್ಟೆ ಆಹಾರದಲ್ಲಿನ ಎಲ್ಲ ಒಳ್ಳೆಯದನ್ನು ಹೀರಿಕೊಂಡು, ದೇಹದ ಪ್ರತಿ ಮೂಲೆಗೂ ಹಂಚಿಕೆ ಮಾಡುವ ವ್ಯವಸ್ಥಿತ ಚಾನೆಲ್ಗಳಿಗೆ(ರಕ್ತನಾಳ) ಸರಬರಾಜು ಮಾಡಬೇಕು. ನಂತರ ಉಳಿಕೆ ಆಹಾರ ಪದಾರ್ಥವನ್ನು ತನ್ನ ವಿಸರ್ಜನಾ ವ್ಯವಸ್ಥೆಗೆ ಕಳಿಸಬೇಕು. ಆ ಬಳಿಕ ದೇಹ ಆ ತ್ಯಾಜ್ಯವನ್ನು ಹೊರಗಿನ ಜಮೀನಿನಲ್ಲಿ ಹಾಕುತ್ತದೆ. ಅಲ್ಲಿ ಅದು ಮಣ್ಣಿನಡಿ ಹೂತು ಮಣ್ಣನ್ನು ಫಲವತ್ತಾಗಿಸುತ್ತದೆ. ಆ ಫಲವತ್ತಾದ ಮಣ್ಣ್ಣನ್ನು ಉಂಡು ಬೆಳೆಯುವ ಮರಗಳು ಹಣ್ಣು ಕೊಡುತ್ತವೆ. ಕೈಗಳು ಆ ಕೆಲವು ಹಣ್ಣನ್ನು ಕಿತ್ತು ಬಾಯಲ್ಲಿ ಇಡುತ್ತವೆ. ಓ.. ಇದು ಜೀವನ ಚಕ್ರ.

ಆಟೋಟ, ಮನರಂಜನೆಗಳನ್ನು ಕೂಡ ಒಂದೊಂದು ಅಂಗದ ಜವಾಬ್ದಾರಿಗೆ ವಹಿಸಲಾಯಿತು. ಹಾಡುವುದು, ನಗುವುದು ಮತ್ತು ಮಾತನಾಡುವುದನ್ನು ಬಾಯಿಗೆ ವಹಿಸಲಾಯಿತು. ಓಡುವುದು ಮತ್ತು ಫುಟ್ಬಾಲ್ ಆಟವನ್ನು ಬಹುತೇಕ ಕಾಲುಗಳಿಗೆ ವಹಿಸಲಾಯಿತು. ಬೇಸ್ ಬಾಲ್, ಬ್ಯಾಸ್ಕೆಟ್ ಬಾಲ್ ಆಟವನ್ನು ಕೈಗಳಿಗೆ ಮೀಸಲಿಡಲಾಯಿತು, ಕಾಲುಗಳಿಗೆ ಅವಕ್ಕೆ ಪೂರಕವಾಗಿ ಓಡುವುದು ಮಾತ್ರ ಎಂದಾಯಿತು. ಇನ್ನು ಆಟೋಟಗಳಲ್ಲಿ ಕಾಲುಗಳೇ ಬಹುತೇಕ ಎಲ್ಲಾ ಕಾರ್ಯ ಮಾಡಬೇಕು. ಹೀಗೆ ಎಲ್ಲಾ ಚಟುವಟಿಕೆಗಳ ಕುಶಲ ಹಂಚಿಕೆ ಮಾನವ ದೇಹವನ್ನು ಒಂದು ಬಯೋ ಮಷೀನ್ ರೀತಿ ಮಾಡಿ, ಪ್ರಮಾಣ ಮತ್ತು ಗುಣಮಟ್ಟದಲ್ಲಿ ಭೂಮಿ ಮೇಲಿನ ಅತ್ಯಂತ ದೊಡ್ಡ ಪ್ರಾಣಿಗಳನ್ನೂ ಮೀರಿಸಿತು.

ತಾವೇ ಕೂತು ನಿರ್ಣಯಿಸಿದ ಈ ಶಾಶ್ವತ ವ್ಯವಸ್ಥೆ ಕೂಡ ತಮ್ಮ ನಡುವೆ ಸಂಘರ್ಷ ತರಬಹುದು ಎಂಬ ಆತಂಕ ದೇಹದ ಅಂಗಗಳನ್ನು ಕಾಡಿತು. ದೇಹದ ಮೇಲೆ ತುತ್ತತುದಿಯಲ್ಲಿರುವ ತಲೆ ತಾನು ಕೆಳಗೆ ನೆಕ್ಕಂಟಿರುವ ಕಾಲುಗಳಿಗಿಂತ ಶ್ರೇಷ್ಠ ಎಂದುಕೊಳ್ಳಬಹುದು. ತಾನು ಯಜಮಾನ, ಉಳಿದ ಅಂಗಗಳೆಲ್ಲಾ ತನ್ನ ಸೇವಕರು ಎಂದು ಅದು ಭಾವಿಸಬಹುದು. ಹಾಗಾಗಿ, ಅಧಿಕಾರ ವಿಷಯದಲ್ಲಿ ತಲೆಯಂತೆಯೇ ಅದರ ಕೆಳಗಿರುವ ಎಲ್ಲಾ ಅಂಗಗಳೂ ಸಮಾನರು ಎಂದೂ ಒತ್ತಿ ಹೇಳಿದವು. ಈ ಮಾತನ್ನು ರುಜುವಾತು ಮಾಡಲು ಅವು ಯಾವುದೇ ಅಂಗದ ಯಾವುದೇ ಭಾಗಕ್ಕೆ ಆಗುವ ನೋವು ಮತ್ತು ಖುಷಿ ಎಲ್ಲಾ ಅಂಗಗಳ ಅನುಭವಕ್ಕೆ ಬರುವಂತೆ ನೋಡಿಕೊಂಡವು. ಹಾಗೇ, ಬಾಯಿ ನನ್ನ ಅದು, ನನ್ನ ಇದು, ಎನ್ನುವಾಗೆಲ್ಲಾ ತಾನು ಇಡೀ ದೇಹದ ಪರವಾಗಿ ಹೇಳುತ್ತಿದ್ದೇನೆಯೇ ಹೊರತು ತನ್ನೊಬ್ಬನ ಪರವಾಗಿ ಅಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದೂ ಸರ್ವಾಂಗಗಳೂ ನೆನಪಿಸಿದವು.

    ಅವು ಜೊತೆಯಾಗಿ;
    ನಮ್ಮ ದೇಹದಲ್ಲಿ
    ಸೇವಕರಾರೂ ಇಲ್ಲ,
    ನಾನೇ ನೆರವಾಗುತ್ತೇವೆೆ,
    ಒಬ್ಬರಿಗೊಬ್ಬರು.
    ನಮಗಾಗಿ ನಾವು.
    ನಾನೇ ನೆರವಾಗುತ್ತೇವೆೆ,
    ಒಬ್ಬರಿಗೊಬ್ಬರು
    ನಮಗಾಗಿ ನಾವು.
    ನಾನೇ ನೆರವಾಗುತ್ತೇವೆೆ
    ಒಬ್ಬರಿಗೊಬ್ಬರು,
    ನಮ್ಮ ಸಮೂಹ ಗಾನವಿದು
    ನಾನವನಿಗೆ, ಅವ ನನಗೆ ಆಸರೆ,
    ನಾವೆಲ್ಲಾ ಸೇರಿ ಸದೃಢ ದೇಹ ಕಟ್ಟುತ್ತೇವೆ
    ನಾನವನಿಗೆ, ಅವ ನಗೆ ಆಸರೆ,
    ನಾವೆಲ್ಲಾ ಸೇರಿ ಸದೃಢ ದೇಹ ಕಟ್ಟುತ್ತೇವೆ.
    ಒಗ್ಗಟ್ಟಲ್ಲೇ ನಮ್ಮ ಸೌಂದರ್ಯ.
    ಒಟ್ಟಾಗಿ ನಾವು ದುಡಿಯುತ್ತೇವೆ
    ಸದೃಢ ದೇಹಕ್ಕಾಗಿ.
    ಒಟ್ಟಾಗಿ ನಾವು ದುಡಿಯುತ್ತೇವೆ
    ಆರೋಗ್ಯಕರ ದೇಹಕ್ಕಾಗಿ

ಒಗ್ಗಟ್ಟೇ ನಮ್ಮ ಶಕ್ತಿ.. ಎಂದು ಹಾಡಿದವು ರಾಗವಾಗಿ.

ಇದು ದೇಹದ ರಾಷ್ಟ್ರಗೀತೆಯೇ ಆಗಿಹೋಯಿತು. ಈ ಗೀತೆಯನ್ನು ಇಂದಿಗೂ ದೇಹ ಹಾಡುತ್ತಲೇ ಇದೆ. ಇದುವೇ ಮನುಷ್ಯ ಮತ್ತು ಪ್ರಾಣಿಗಳ- ತಲೆ ಮೇಲ್ಮುಖ ಕ್ರಾಂತಿಯನ್ನು ತಿರಸ್ಕರಿಸಿದವರ- ನಡುವೆ ಇರುವ ಭಿನ್ನತೆ.

ನಾಲ್ಕು ಕಾಲಿನ ಪ್ರಾಣಿಗಳು ಮನುಷ್ಯನಲ್ಲಿ ಆದ ಈ ಬದಲಾವಣೆಯನ್ನು ಕಂಡದ್ದು ಬಿಟ್ಟರೆ, ಅವುಗಳಿಗೆ ಇದರ ಅನುಭವವಾಗಲಿಲ್ಲ. ಈ ಕ್ರಾಂತಿಯನ್ನು ಅವು ಕಾಣಲಿಲ್ಲ. ಅವುಗಳಲ್ಲಿ ಹಾಡುವುದೆಂದರೆ ಅದೊಂದು ಅಪಹಾಸ್ಯಕರ ಚಟುವಟಿಕೆ. ಅವುಗಳ ಬಾಯಿ ತಿನ್ನಲು ಮಾತ್ರ ಮಾಡಲಾಗಿದೆಯೇ ವಿನಃ ಹಾಡಲು ಅಲ್ಲ. ಅವುಗಳೆಲ್ಲಾ ಪ್ರಕೃತಿಯ ಸಂಪ್ರದಾಯಬದ್ಧ ಪಕ್ಷವನ್ನು ಕಟ್ಟಿಕೊಂಡವು ಹಾಗೂ ತಮ್ಮ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳದೆ, ಯಾವ ಬದಲಾವಣೆಯನ್ನೂ ಕಾಣದೆ ಹಾಗೇ ಉಳಿದುಬಿಟ್ಟವು.

ಯಾವಾಗ ಮನುಷ್ಯನ ಅಂಗಾಂಗಗಳ ಜಾಲ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುತ್ತದೆಯೋ ಆಗ ಆತ ಉತ್ತಮವಾದದ್ದನ್ನು ಸಾಧಿಸುತ್ತಾನೆ. ಯಾವಾಗ ದೇಹ ಮತ್ತು ತಲೆ ಪರಸ್ಪರ ನಾಮೇಲು, ತಾಮೇಲು ಎಂದು ಕದನಕ್ಕೆ ಇಳಿಯುತ್ತವೆಯೋ ಆಗ ಆತ ಮೇಲ್ಮಖ ಕ್ರಾಂತಿಯನ್ನು ತಿರಸ್ಕರಿಸಿದ ತನ್ನ ದಾಯಾದಿ ಸಂಬಂಧಿಗಳಾದ ಪ್ರಾಣಿಗಳ ಮಟ್ಟಕ್ಕೆ ಇಳಿಯುತ್ತಾನೆ.

Shashi Sampalli is a journalist. He is presently working at Kannada Prabha, a regional daily. He is also a well-known poet in Kannada language. His first poetry collection ‘Charithreya Jaadinachege’ was published in 2004. It has got good response from writers as well as critics. He hails from a sleepy village Sampalli in Shimoga district of Karnataka, an Indian state. He did his post-graduation in English Literature at Kuvempu University. He has translated some British and South African poets to his native language as well. As a journalist he has worked extensively on the life and development challenges of Western Ghats. He is presently residing at Shimoga, a town on the verge of Western Ghats.

ಗೂಗಿ ಪರಿಚಯ

ಗೂಗಿ ವಾ ಥಿಯಾಂಗೊ ಕೀನ್ಯಾದ ಲೇಖಕ. ವಸಾಹತೀಕರಣದ ಪ್ರಭಾವದಿಂದಾಗಿ ತನ್ನ ಆಫ್ರಿಕಾ ಖಂಡದ ಜನಜೀವನದಲ್ಲಿ ಆದ ಬದಲಾವಣೆ ಭಾಷೆಯೂ ಮೇಲೂ ಆಯಿತು. ಅದರಿಂದಾಗಿ 2000ಕ್ಕೂ ಹೆಚ್ಚು ಭಾಷೆಗಳು ಸಾವಿನ ಅಂಚಿಗೆ ತಳ್ಳಲ್ಪಟ್ಟವು. ಆ ಒಂದು ಸಂಸ್ಕೃತಿಯ ಸಜೀವ ವಾಹಕವಾದ ಭಾಷೆಯ ಅಳಿವು ಎಂದರೆ, ಆಯಾ ಸಂಸ್ಕೃತಿಯ ಅಳಿವು ಎಂದು ಪ್ರತಿಪಾದಿಸಿದ ಗೂಗಿ, ಆರಂಭದ ತನ್ನ ಬರಹಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆದರೂ ಬಳಿಕ, ತನ್ನ ಸೃಜನಶೀಲ ಅಭಿವ್ಯಕ್ತಿ ಮಾಧ್ಯಮವಾಗಿ ಕೀನ್ಯಾದ ತನ್ನ ಬುಡಕಟ್ಟು ಭಾಷೆ ಗಿಕುಯುನಲ್ಲೇ ಬರೆಯಲಾರಂಭಿಸಿದರು. ತಮ್ಮ ಡಿ ಕಲೊನೈಜಿಂಗ್ ದ ಮೈಂಡ್ ಕೃತಿಯ ಮೂಲಕ ಇಡೀ ವಸಾಹತು ರಾಷ್ಟ್ರಗಳಿಗೆ ಹೊಸ ಭಾಷೆ ಮತ್ತು ಸಂಸ್ಕೃತಿ ನಿರ್ವಚನೆಯ ಹೊಸ ಮಾದರಿ ಕಟ್ಟಿಕೊಟ್ಟ ಗೂಗಿ, ವಿಶ್ವದ ಪ್ರಮುಖ ವಸಾಹತೋತ್ತರ ಸಾಂಸ್ಕೃತಿಕ ಚಿಂತಕರಲ್ಲಿ ಪ್ರಮುಖರು. ಸದ್ಯ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಇಂಗ್ಲಿಷ್ ಮತ್ತು ತೌಲನಿಕ ಸಾಹಿತ್ಯದ ಪ್ರಾಧ್ಯಾಪಕರಾಗಿದ್ದಾರೆ.

ಕನ್ನಡದ ಮಟ್ಟಿಗೆ 80ರ ದಶಕದ ನಂತರದ ಸಂಸ್ಕೃತಿ ಅಧ್ಯಯನ ಮತ್ತು ವಿಮರ್ಶೆ ರಂಗದ ಮೇಲೆ ಬಹುದೊಡ್ಡ ಪ್ರಭಾವ ಬೀರಿರುವ ಲೇಖಕ ಗೂಗಿ. ಅವರ ಡಿ ಕಲೊನೈಜಿಂಗ್ ದ ಮೈಂಡ್ ಕೃತಿಯನ್ನು ವಿಮರ್ಶಕ ರಹಮತ್ ತರೀಕೆರೆ ಅವರು ವಸಾಹತು ಪ್ರಜ್ಞೆ ಮತ್ತು ವಿಮೋಚನೆ ಹೆಸರಿನಲ್ಲಿ 90ರ ದಶಕದಲ್ಲೇ ಕನ್ನಡಕ್ಕೆ ತಂದಿದ್ದಾರೆ. ಇನ್ನು ಡಾ ಸಿ ಎಸ್ ನಂಜುಂಡಯ್ಯ, ಡಾ ನಟರಾಜ್ ಹುಳಿಯಾರ್ ಮುಂತಾದವರು ಗೂಗಿಯ ಬಗ್ಗೆ ಬರೆದು, ಮಾತನಾಡಿ ಆತನನ್ನು ಜನಪ್ರಿಯಗೊಳಿಸಿದ್ದಾರೆ. ನಮ್ಮ ಕಥೆ, ಕಾವ್ಯ, ನಾಟಕ, ವಿಮರ್ಶೆಗಳನ್ನು ಕೂಡ ಪ್ರಭಾವಿಸಿರುವ ಗೂಗಿ ಒಂದು ರೀತಿಯಲ್ಲಿ ಇತ್ತೀಚಿನ ಕನ್ನಡ ಸಾಹಿತ್ಯದ ಪ್ರಜ್ಞೆಯ ಭಾಗವೇ ಆಗಿಬಿಟ್ಟಿದ್ದಾರೆ.

ಗುರುವಾರ, ಸೆಪ್ಟೆಂಬರ್ 1, 2016

ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ನ ನಿಜವಾದ ಪಾತ್ರವೇನು?

-ಶಿವಸುಂದರ್
shivasundar ಗೆ ಚಿತ್ರದ ಫಲಿತಾಂಶ

ಆತ್ಮೀಯರೇ,
 ಇದೊಂದು ಸುದೀರ್ಘ ಪತ್ರ. ಕ್ಷಮೆಯಿರಲಿ. ಆದರೆ ದಯವಿಟ್ಟು ಸ್ವಲ್ಪ ಸಮಯ ಕೊಟ್ಟು ಓದಬೇಕೆಂದು ವಿನಂತಿ. 

ನಟಿ ಮತ್ತು ರಾಜಕಾರಣಿ ರಮ್ಯ "ಪಾಕಿಸ್ತಾನದ ಜನರು ನಮ್ಮಂತೆಯೇ ಸಾಮಾನ್ಯ ಮನುಷ್ಯರು" ಎಂದು ಹೇಳಿದ್ದನ್ನೇ ಮಹಾಪರಾಧ ಮಾಡಿದ ಕನ್ನಡದ ಮಾಧ್ಯಮಗಳು ಅಂತಿಮವಾಗಿ ಪಾಕಿಸ್ತಾನದ ಬಗ್ಗೆ ಸಂಘಪರಿವಾರದ ದ್ವೇಷಮಯ ಧೋರಣೆ ಹೊಂದುವುದು ಮಾತ್ರ ದೇಶಪ್ರೇಮಿ ನಡವಳಿಕೆ ಉಳಿದದ್ದೆಲ್ಲವೂ ದೇಶದ್ರೋಹಿ ಎಂಬಂತೆ ಬಿಂಬಿಸುವಲ್ಲಿ ಯಶಸ್ವಿಯಾಗಿಬಿಟ್ಟವು. 

ನಂತರ "ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ನ ಪಾತ್ರವೇನೂ ಇರಲಿಲ್ಲ. ಅವರು ಹಲವು ಸರ್ತಿ  ಬ್ರಿಟಿಷರ  ಜೊತೆ ಕೈಗೂಡಿಸಿದ್ದರು" ಎಂಬ ಹೇಳಿಕೆಯನ್ನು ಹಿಡಿದುಕೊಂಡು ಮಾಧ್ಯಮಗಳು ಅತ್ಯಂತ ನಿರ್ಲಜ್ಜವಾಗಿ ಆರೆಸ್ಸೆಸ್ ಪರ ಬ್ಯಾಟಿಂಗ್ ಮಾಡುತ್ತಿವೆ. .ಒಂದೆಡೆ ಇದು ಟಿಆರ್ಪಿಗಾಗಿ ನಡೆಸುವ ಕಸರತ್ತು ಮಾತ್ರ ಎಂದು ನಮ್ಮಂಥ ಹಲವರು ಅದನ್ನು ಕಡೆಗಣನೆ ಮಾಡುತ್ತಿದ್ದರೆ,  ಕೋಮುವಾದಿಗಳಲ್ಲದ ಆದರೆ ಅವಕಾಶವಾದಿಗಳಾದ ಕಾಂಗ್ರೆಸ್ಸಿಗರನ್ನು ಒಳಗೊಂಡಂತೆ ಹಲವು ರಾಜಕಾರಣಿಗಳು ರಮ್ಯ ಅರೆಹುಚ್ಚಿ ಎಂಬಂತಲೋ ಅಥವಾ ತಿಳಿಯದೇ ಮಾತನಾಡುತ್ತಿದ್ದಾಳೆ ಎಂತಲೋ ಹೇಳಿಕೆ ನೀಡುತ್ತಿದ್ದಾರೆ. ಮಾಧ್ಯಮಗಳು ನಡೆಸುತ್ತಿರುವ ಕೆಲವು ಪೂರ್ವನಿರ್ಧಾರಿತ ಚರ್ಚೆಯೆಂಬ ಖೆಡ್ಡಾಗಳಲ್ಲಿ ಭಾಗವಹಿಸುತ್ತಿರುವ ಕೋಮುವಾದಿಗಳಲ್ಲದ ಹಲವು ಪತ್ರಕರ್ತರು ಮತ್ತು ಬುದ್ಧಿಜೀವಿಗಳು ಆರೆಸ್ಸೆಸ್ ನ ಕೋಮುವಾದಿ ರಾಜಕಾರಣದ ಬಗ್ಗೆ ಮಾತ್ರ ಮಾತಾಡುತ್ತಾ ಕೆಲವೊಮ್ಮೆ ಪ್ರತ್ಯಕ್ಷವಾಗಿ ಹಲವೊಮ್ಮೆ ಪರೋಕ್ಷವಾಗಿ ಆರೆಸ್ಸೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಿರಬಹುದೆಂಬ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. 

ಸ್ನೇಹಿತರೇ, ಇದು ಅತ್ಯಂತ ದುರ್ದೈವದ ಸಂಗತಿ. ಈ ಪ್ರಕ್ರಿಯೆಯಲ್ಲಿ ಆರೆಸ್ಸೆಸ್ ಮತ್ತವರ ಪರಿವಾರ ಇತಿಹಾಸದಲ್ಲಿ ಅವರು ಮಾಡಿದ ಅತ್ಯಂತ ಹೇಯ ದೇಶದ್ರೋಹಕ್ಕೂ ಮತ್ತು  ವರ್ತಮಾನದಲ್ಲಿ ಅವರು  ಜನದ್ರೋಹದಕ್ಕೂ  ಸುಳ್ಳು ರಾಷ್ಟ್ರೀಯತೆಯ ಪರದೆಯನ್ನು ಮುಚ್ಚಿ ಮರೆಮಾಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಮಾತ್ರವಲ್ಲ. ಭಾರತ ರಾಷ್ಟೀಯತೆಯೆಂದರೆ ಹಿಂದೂ ರಾಷ್ಟ್ರೀಯತೆಯೆಂಬ ಫ್ಯಾಸಿಸ್ಟ್ ರಾಜಕಾರಣಕ್ಕೆ ಜನಮತವನ್ನು ರೂಢಿಸಿಕೊಳ್ಳುತ್ತಿದ್ದಾರೆ. ಯುದ್ಧವನ್ನೇ ಮಾಡದೇ ಕೇವಲ ನಮ್ಮ ಮೌನ ಮತ್ತು ಇನ್ನುಳಿದವರ ಅವಕಾಶವಾದದ ಬೆಂಬಲದಿಂದ ಭಾರತವೆಂಬ ಆಶಯದ ಮೇಲೆ ನಡೆಸುತ್ತಿರುವ  ಕಾಳಗದಲ್ಲಿ  ಒಂದೊಂದೇ ಗೆಲುವು ಸಾಧಿಸುತ್ತಿದ್ದಾರೆ. 

ಹೀಗಾಗಿ ಇದು ಇನ್ನು  ರಮ್ಯ  ಅಥವಾ ಕಾಂಗ್ರೆಸ್ಸಿಗೆ ಮಾತ್ರ  ಸಂಬಂಧಿಸಿದ ಸಂಗತಿಯಾಗಿ ಉಳಿದಿಲ್ಲ. ಅದಕ್ಕಿಂತ ಹೆಚ್ಚಾಗಿ ಇಂಥಾ ಸಂಗತಿಗಳನ್ನು ಅವರಿಗೆ ಬಿಟ್ಟುಕೊಡುವ ಬೇಜವಾಬ್ದಾರಿಯನ್ನೂ ಮಾಡುವಂತೆಯೂ ಈಗಿಲ್ಲ. ಏಕೆಂದರೆ,  ಆರೆಸ್ಸೆಸ್ ಪ್ರತಿನಿಧಿಸುವ ಕಾರ್ಪೊರೇಟ್ ಮತ್ತು ಹಿಂದೂತ್ವವಾದಿ ಫ್ಯಾಸಿಸ್ಟ್ ರಾಜಕಾರಣದ ವಿರುದ್ಧ ಪ್ರಜಾತಂತ್ರವಾದಿಗಳು ಬಳಸುತ್ತಿದ್ದ ಭಾರತ ರಾಷ್ಟೀಯತೆಯೆಂಬ ಅಸ್ತ್ರವನ್ನೇ ಕಸಿದುಕೊಂಡುಬಿಡುವ ಹುನ್ನಾರ ಇದರಲ್ಲಿದೆ. ಹೀಗಾಗಿ ಜವಾಬ್ದಾಯುಳ್ಳವರು ಮಾಧ್ಯಮ ಮತ್ತು ಆರೆಸ್ಸೆಸ್ನ ಈ ಜಂಟಿ ಹುನ್ನಾರವನ್ನು ಬಯಲಿಗೆಳೆಯುವ ಅಗತ್ಯವಿದೆ ಎಂದು ನನ್ನ ಖಚಿತ ಅಭಿಪ್ರಾಯ. 

ಕನ್ನಡ ಮಾಧ್ಯಮ ರಂಗದಲ್ಲಿ ಅಳಿದುಳಿದ ಲಿಬರಲ್ ಸ್ಪೇಸನ್ನು ಮತ್ತು ವ್ಯಕ್ತಿಗಳನ್ನು ಕಿತ್ತುಹಾಕಿ ಸಂಪೂರ್ಣ ಬಲಪಂಥೀಯಗೊಳಿಸುತ್ತಿರುವ ಸುದ್ದಿಗಳು ಹಲವು ಕಡೆಯಿಂದ ಬರುತ್ತಿದೆ. ಸತ್ಯವನ್ನು ಸುಳ್ಳೆಂದು ಮತ್ತು ಸುಳ್ಳನ್ನೇ ಸತ್ಯವೆಂದು ಮಾಡಿ ಜನರನ್ನು ತಮ್ಮ ಕೈಯಿಂದಲೇ ತಮ್ಮ ಕಣ್ಣನ್ನು ಚುಚ್ಚಿಕೊಳ್ಳುವಂತೆ ಮಾಡುದ ಮನುವಾದಿಗಳ ಈ  ಹೊಸದಿರಿಸಿನ ಹಳೆ ಹುನ್ನಾರವನ್ನು ಸೋಲಿಸುವುದು ಹೇಗೆ?  ಕನ್ನಡಿಯಲ್ಲಿ ಕಾಣುವ ಬಿಂಬವೇ ನಮ್ಮದಲ್ಲವಾದಾಗ ತಿದ್ದುವುದೇನು? ಕಟ್ಟುವುದೇನು? 

ಈ ಹಿನ್ನೆಲೆಯಲ್ಲೇ  ವಿನಂತಿ ಪೂರ್ವಕವಾಗಿ  ಈ ಪತ್ರವನ್ನು ಬರೆಯುತ್ತಿದ್ದೇನೆ. ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ನ ನಿಜವಾದ ಪಾತ್ರವೇನು ಎಂಬುದನ್ನು ಇನ್ನಷ್ಟು ಖಚಿತಪಡಿಸುವ ಕೆಲವು ದಾಖಲೆಗಳನ್ನೂ, ಮಾಹಿತಿಗಳನ್ನೂ ಕಲೆಹಾಕಿ ಕಳಿಸುತ್ತಿದ್ದೇನೆ. ಇವೆಲ್ಲಾ ನಿಮಗೆ ತಿಳಿದಿರುವಂಥದ್ದೇ.. ಇದನ್ನು ಅಥವಾ ನಿಮ್ಮ ಬಳಿಯಿರುವ , ಗೊತ್ತಿರುವ ಇತರ ಆಕರಗಳನ್ನು ಬಳಸಿಕೊಂಡು ನಿಮಗೆ ಸಾಧ್ಯವಿರುವ ರೀತಿಯಲ್ಲಿ , ಅಂಖ್ತಿಣ್ಹಗ್ದಳನ್ನು ಬರೆಯುವ ಮೂಲಕ, ಸೋಷಿಯಲ್ ಮೀಡಿಯಾದಲ್ಲಿ ಬರೆಯುವ ಮೂಲಕ ಇತ್ಯಾದಿ,  ಸತ್ಯಗಳನ್ನೂ ಯುವಪೀಳಿಗೆಗೆ ತಲುಪಿಸಬೇಕೆಂದು ಆಗ್ರಹಿಸುತ್ತಿದ್ದೇನೆ. ೯೦ರ ನಂತರದ ಪೀಳಿಗೆಗೆ ಸಂಘಪರಿವಾರ ಹೇಳಿದ್ದು ಅಥವಾ ಮಾಧ್ಯಮಗಳು ಹೇಳಿದ್ದೇ ಸತ್ಯವಾಗಿಬಿಡುವ ಅಪಾಯವನ್ನು ತಪ್ಪಿಸಬೇಕಿದೆ. 

ನಿಮ್ಮೊಂದಿಗೆ
ಶಿವಸುಂದರ್

(ಸ್ವಾತಂತ್ರ್ಯ  ಹೋರಾಟದಲ್ಲಿ ಆರೆಸ್ಸೆಸ್ ಪಾತ್ರವೇನೂ ಇರಲಿಲ್ಲ ಎಂಬುದು ನಮ್ಮೆಲ್ಲರಿಗೂ ಗೊತ್ತು. ಅಷ್ಟು ಮಾತ್ರವಲ್ಲ. ಸಂವಿಧಾನದಲ್ಲಿ ನಾವು ಆಶಯಿಸಿರುವ ಭಾರತವೆಂಬ ಪರಿಕಲ್ಪನೆಗೇ ಆರೆಸ್ಸೆಸ್ ವಿರುದ್ಧವಿದ್ದದ್ದು ಮಾತ್ರವಲ್ಲದೆ ಹಲವು ಬಾರಿ ಅಮ್ಥ ಭಾರತದ ಐಡಿಯಾ ಸಾಕಾರವಾಗಬಾರದೆಂಬ ಸಂಚಿನಲ್ಲಿ ಬ್ರೀಟಿಷರ ಜೊತೆ ಕೈಗೂಡಿಸಿದ್ದೂ ಭಾರತದ ಇತಿಹಾಸದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಇಂದಿನ ಭಾರತೀಯ ಜನತಾ ಪಕ್ಷದ ಪೂರ್ವಜನಾಗಿರುವ ಭಾರತೀಯ  ಜನಸಂಘದ ಜನಕ ಶಾಮ್ ಪ್ರಸಾದ್ ಮುಖರ್ಜೀ ಕ್ವಿಟ್ ಇಂಡಿಯಾ ಚಳವಳಿಯ ವಿರುದ್ಧವಾಗಿ  ಬ್ರಿಟಿಷ ವೈಸ್ ರಾಯಿಯ ಮಂತ್ರಿಮಂಡಲ ಸೇರಿಕೊಂಡಿದ್ದು ಮಾತ್ರವಲ್ಲದೆ ಮುಸ್ಲಿಂ ಲೀಗಿನ ಫಜ್ಲುಲ್ ಹಕ್ಕಿನ ಜೊತೆಗೂಡಿ ಬಂಗಾಳ ಪ್ರಾಂತ್ಯದಲ್ಲಿ ಬ್ರಿಟಿಷರ ಪರವಾಗಿ ಜನತೆಯ ಮೇಲೆ ಅಮಾನುಷ ದಮನ ಮಾಡಿದ್ದೂ ಇತಿಹಾಸದಲ್ಲಿ ದಾಖಲಾಗಿದೆ. ಆರೆಸ್ಸೆಸ್ ಮತ್ತು ಹಿಂದೂ ಮಹಾ ಸಭಾ ಎರಡೂ ಸಹ ಸ್ವಾತಂತ್ರ್ಯ ಹೊರಾಟವೆಂದರೆ ಬ್ರಿಟಿಷ್ ವಿರೋಧೀ  ಹೋರಾಟವಲ್ಲವೆಂದೂ ಹಲವು ಸರ್ತಿ ಭಾರತೀಯ ಜನರನ್ನು ಒಪ್ಪಿಸಲು ಪ್ರಯತ್ನಿಸಿದ್ದಾರೆ. ತಮ್ಮ ರಾಷ್ಟ್ರೀಯತೆಯ ಪರಿಕಲ್ಪನೆಗೆ ಪ್ರೇರಣೆ ಇಟಲಿಯ ಫ್ಯಾಸಿಸಮ್ ಮತ್ತು ಜರ್ಮನಿಯ ನರಹಂತಕ ನಾಜಿಸಂ ಎಂಬುದನ್ನು ಆರೆಸ್ಸೆಸ್ ನ ಸಂಸ್ಥಾಪಕ ಹೆಗಡೆವಾರ್ , ಗೋಳ್ವಾಲ್ಕರ್ ಮತ್ತು ಹಿಂದೂ ಮಹಾ ಸಭದ ಸಾವರ್ಕರ್ ತಮ್ಮ ಸಂಘಗಳ ಅಧಿಕೃತ ದಸ್ತಾವೇಜುಗಳಲ್ಲೇ ಸ್ಪಷ್ಟಪಡಿಸಿದ್ದಾರೆ. 

ಅದರ ಕೆಲವು ಮಾಹ್ತಿಗಳು ಮತ್ತು ಪೂರಕ ದಾಖಲೆಗಳು ಅಡಕದಲ್ಲಿವೆ. ದಯವಿಟ್ಟು ಬಳಸಿಕೊಳ್ಳಿ) 


1.Golwalkar on "waht is freedom ovement"-  In all fairness to Golwalkar, he did not claim that the RSS had been opposed to the British rule. During the course of a speech delivered before the top-level cadres of the RSS drawn from whole of India at Indore on March 5, 1960 he said,

 “Many people worked with the inspiration to free the country by throwing the British out. After formal departure of the British this inspiration slackened. In fact there was no need to have this much inspiration. We should remember that in our pledge we have talked of the freedom of the country through defending religion and culture. There is no mention of departure of the British in that"

 Source: Shri Guruji Samagar Darshan, (collected works of Golwalkar in Hindi), Vol IV, Bharatiya Vichar Sadhana, Nagpur, nd, pp. 39-40. Hereafter referred as SGSD.

2. Golwalkar on how colonialism is not Unjust: The RSS was not even willing to regard colonial domination as an injustice. In a speech of June 8, 1942, at a time when India was reeling under unprecedented British repression, delivered at the conclusion of the all India training programme of the cadres at the Nagpur RSS headquarters, Golwalkar declared: 

"Sangh does not want to blame anybody else for the present degraded state of the society. When the people start blaming others, then there is basically weakness in them. It is futile to blame the strong for the injustice done to the weak…Sangh does not want to waste its invaluable time in abusing or criticizing others. If we know that large fish eat the smaller ones, it is outright madness to blame the big fish. Law of nature whether good or bad is true all the time. This rule does not change by terming it unjust.”

Source: Shri Guruji Samagar Darshan, (collected works of Golwalkar in Hindi), Vol 1, pp 11-12, , Bharatiya Vichar Sadhana, Nagpur, nd, pp. 39-40. Hereafter referred as SGSD.

3.Golwalkar on How anti Britishism is not patriotism!:  During the 1940s also the RSS aggressively campaigned for Hindu Rashtra, but stayed tenaciously aloof from the anti-British struggle. Golwalkar in fact made it clear that the variety of nationalism which the RSS espoused had no anti-British or anti-imperialist content whatsoever:

 “The theories of territorial nationalism and of common danger, which formed the basis for our concept of nation, had deprived us of the positive and inspiring content of our real Hindu Nationhood and made many of the ‘freedom movements’ virtually anti-British movements. AntiBritishism was equated with patriotism and nationalism. This reactionary view has had disastrous effects upon the entire course of the freedom movement, its leaders and the common people.”

Source: MS Golwalkar, Bunch of Thoughts, Sahitya Sindhu, Bangalore, 1996, p. 138. 

4.Savarkar in support of Nazism:  The other great mentor of the RSS, Savarkar also had great liking for Hitler’s Nazism and the Fascism of Mussolini. While delivering the Presidential address to the 22nd Session of the Hindu Mahasabha at Madura in 1940 he declared,

 “There is no reason to suppose that Hitler must be a human monster because he passes off as a Nazi or Churchill is a demi-God because he calls himself a democrat. Nazism proved undeniably the saviour of Germany under the set of circumstances Germany was placed in…”

Source: VD Savarkar, Hindu Rashtra Darshan, Puna, 1963, p. 418.

5. Savarkar in support of holocaust :  Savarkar went on to support Hitler’s anti-Jewish pogroms and on October 14, 1938, he suggested the same solution for the Muslim problem in India: 

“A Nation is formed by the majority living therein. What did the Jews do in Germany? They being in a minority were driven out from Germany”

 Source:  (MSA, Home Special Department, 60 D(g) Pt III, 1938, ‘Translation of the verbatim speech made by V D Savarkar at Malegaon on October 14, 1938).


Moonje on Fascism: (after meeting mussaloni in Italy)."  ...The idea of fascism vividly brings out the conception of unity amongst people...India and particularly Hindu India need some such institution for the military regeneration of the Hindus:  Our institution of Rashtriya Swayamsewak Sangh of Nagpur under Dr Hedgewar is of this kind, ".

Source:NMML, Moonje papers, subject files

7.  Hindu Maha sabha in support of Holocaust: On March 25, 1939 the Hindu party made the following statement:

" Germany’s solemn idea of the revival of the Aryan culture, the glorification of the Swastika, her patronage of Vedic learning and the ardent championship of the tradition of Indo-Germanic civilisation are welcomed by the religious and sensible Hindus of India with a jubilant hope... I think that Germany’s crusade against the enemies of Aryan culture will bring all the Aryan nations of the world to their senses and awaken the Indian Hindus for the restoration of their lost glory"

Source: The declaration contained in Auswartiges Amt-Politischen Archiv (AA-PA, Bonn)/Pol VII, statement by the spokesman of the Hindu Mahasabha, March 25, 1939, is quoted by M Hauner, op cit, p 66).

8. Ambedkar on Savarkar : Ambedkar  ruthlessly critiques the Hindu Mahasabha by stating:
 "The Hindu nationalist who hopes that Britain will coerce the Muslims into abandoning Pakistan, forgets that the right of nationalism to freedom from an aggressive foreign imperialism and the right of a minority to freedom from an aggressive majority's nationalism are not two different things, nor does the former stand on a more sacred footing than the latter."
"strange as it may seem, Mr. Savarkar and Mr. Jinnah instead of being opposed to each other on the two nations issue, are in complete agreement about it".

Source: PAKISTAN OR THE PARTITION OF INDIA

೯.  RSS ನ ವಿಷಯ ಬಂದಾಗ ಅದರ ಸ್ಥಾಪಕ ಹಡಗೆವಾರ್ ೧೯೨೦ರಲ್ಲಿ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದನ್ನು ಮತ್ತು ೧೯೩೦ರ ನಾಗರೀಕ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದನ್ನು ಉಲ್ಲೇಖೀಸಲಾಗುತ್ತದೆ. ಆದರೆ ಆರೆಸ್ಸೆಸ್ ಸ್ಥಾಪನೆಯಾಗಿದ್ದು ೧೯೨೫ರಲ್ಲಿ. ೧೯೩೦ರ ಉಪ್ಪಿನ ಸತ್ಯಾಗ್ರಹದಲ್ಲಿ ಆರೆಸ್ಸೆಸ್ ತನ್ನ ಎಲ್ಲ ಶಾಖೆಗಳಿಗೂ ಯಾವ ಕಾರಣಕ್ಕೂ ಆರೆಸ್ಸೆಸ್ ಒಂದು ಸಂಘಟನೆಯಾಗಿ ಈ ಚಳವಳಿಯಲ್ಲಿ ಭಾಗವಹಿಸಬಾರದೆಂದು ನಿರೂಪ ಹೊರಡಿಸಿ ಯಾರಾದರೂ ಆಸಕ್ತರು ಬೇಕಿದ್ದಲ್ಲಿ ವ್ಯಕ್ತಿಗಳಾಗಿ ಭಾಗವಹಿಸಬಹುದೆಂದು ಸೂಚನೆ ನೀಡಿರುತ್ತಾರೆ. ಅದರಂತೆ ತಾನು ಸಹ ಒಬ್ಬ ವ್ಯಕ್ತಿಯಾಗಿ ಮಾತ್ರ ಅದರಲ್ಲಿ ಭಾಗವಹಿಸುತ್ತಾರೆ. 

ಎಲ್ಲಕ್ಕಿಂತ ಹೆಚ್ಚಾಗಿ ೧೯೨೯ರ ಲಾಹೋರ್ ಅಧಿವೇಶನದಲ್ಲಿ ಕಾಂಗ್ರೆಸ್ ಸಂಪೂರ್ಣ ಸ್ವಾತಂತ್ರ್ಯವೇ ತನ್ನ ಗುರಿ ಎಂದು ಘೋಷಿಸಿ ೧೯೩೦ರ ಜನವರಿ ೨೬ರನ್ನು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಬೇಕೆಂದು ಕರೆಕೊಡುತ್ತದೆ. ಅಗ ಹೆಗಡೆವರ್ ಅವರು ಎಲ್ಲ ಶಾಖೆಗಳಲ್ಲೂ ತ್ರಿವರ್ಣ ಧ್ವಜದ ಬದಲಾಗಿ ಭಾಗವಾಧ್ವಜವನ್ನು ಹಾರಿಸಬೇಕೆಂದು ಮತ್ತು ತಮ್ಮ ಅರ್ಥದ ಸ್ವಾತಂತ್ರ್ಯವೇನೆಂಬುದನ್ನು ಜನರಿಗೆ ಈ ಅವಕಾಶವನ್ನು ಬಳಸಿಕೊಂಡು ಹೇಳಬೇಕೆಂದೂ  ಕರೆಕೊಡುತ್ತಾರೆ. ಹಾಗೆಯೆ  ಸ್ವಾತಂತ್ರ್ಯದ  ಹೆಸರಲ್ಲಿ  ಭಾಗವಾಧ್ವಜವನ್ನು ಹಾರಿಸುತ್ತಾರೆ. ಮಾತ್ರವಲ್ಲ ೧೯೩೦ರ ನಂತರ  ಆರೆಸ್ಸೆಸ್ ಶಾಖೆಗಳಲ್ಲಿ   ಮುಂದೆಂದೂ  ಸ್ವಾತಂತ್ರ್ಯ ದಿನ ಆಚರಿಸುವುದಿಲ್ಲ. 

ಮಹಾರಾಷ್ಟ್ರದ  ದೇಶಸ್ಥ ಬ್ರಾಹ್ಮಣ ಹಿನ್ನೆಲೆಯ ಹೆಗಡೇವರ್ ಮೂಲಭೂತವಾಗಿ 'ತಿಲಕ್ ' ವಾದೀ  ಹಿಂದೂ ರಾಷ್ಟ್ರೀಯತೆಯ ಹಿನ್ನೆಲೆಯಲ್ಲೇ ರಾಜಕೀಯಕ್ಕೆ ಬಂದವರು. ೧೯೨೦ರ ಅಸಹಕಾರ ಚಳವಳಿಯಲ್ಲಿ ವ್ಯಕ್ತವಾದ  ಹಿಂದೂ ಮುಸ್ಲಿಂ ಐಕ್ಯತೆಯಿಂದ ಕಂಗಾಲಾಗಿ ಪ್ರತ್ಯೇಕ ಹಿಂದೂ ರಾಷ್ಟ್ರೀಯವಾದವನ್ನು ಪ್ರಸರಿಸಲೆಂದೇ ಆರೆಸ್ಸೆಸ್ ಕಟ್ಟುತ್ತಾರೆ. ಅದನ್ನು ೧೯೪೦ರ ನಂತರ ಗೋಳ್ವಲ್ಕರ್ ಇನ್ನು ಸ್ಪಷ್ಟವಾಗಿ ಮುಸ್ಲಿಮರ ವಿರುದ್ಧವಾಗಿ, ದಲಿತ ಮತ್ತು ಮಹಿಳೆಯರ ವಿರುದ್ಧವಾಗಿ  ಮಾತ್ರವಲ್ಲ ಬ್ರಿಟಿಷರ ಪರವಾಗಿ ಬೆಳಸುತ್ತಾರೆ.