ಶುಕ್ರವಾರ, ಜೂನ್ 29, 2012

ಜಾನಪದ ಅಕಾಡೆಮಿಯ ಮುಂದಿರುವ ಪ್ರಶ್ನೆಗಳು

ಜಾನಪದ ಅಕಾಡೆಮಿಯ ಮುಂದಿರುವ ಪ್ರಶ್ನೆಗಳು

  • June 28, 2012
  • Share  
  • [-]
  • Text
  • [+]

ಕರ್ನಾಟಕ ಜಾನಪದ ಅಕಾಡಮಿಗೆ ಹೊಸ ಅಧ್ಯಕ್ಷರ ನೇಮಕವಾಗಿದೆ. ಇನ್ನಷ್ಟೇ  ಕೆಲಸ  ಆರಂಭವಾಗಬೇಕಿದೆ. ಈ ಹೊತ್ತಲ್ಲಿ ಅಕಾಡಮಿ ಕೆಲಸಗಳ ಪುನರಾವಲೋಕನ ಮತ್ತು ಮುಂದಿನ ಹೆಜ್ಜೆಗಳ ಸಾಧ್ಯತೆಯ ಬಗ್ಗೆ ಚರ್ಚಿಸುವ ಅಗತ್ಯವಿದೆ. 


ಹಿಂದಿನ ಅಧ್ಯಕ್ಷರಾದ ಗೋ.ರು. ಚನ್ನಬಸಪ್ಪ ಅವರು ಜಾನಪದದ ಸಾಂಪ್ರದಾಯಿಕ ತಿಳುವಳಿಕೆಯ ಚೌಕಟ್ಟಿನಲ್ಲೇ ಕೆಲವು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಜಾನಪದ ಕಲಾವಿದರ ಕ್ಷೇಮಾಭಿವೃದ್ಧಿ ನಿಧಿ ಒಳಗೊಂಡಂತೆ, ಜಾನಪದ ವಿಶ್ವವಿದ್ಯಾಲಯ ಸ್ಥಾಪನೆ, ಅಖಿಲ ಭಾರತ ಜಾನಪದ ಸಮ್ಮೇಳನ, ಜಾನಪದ ನಿಘಂಟು ರಚನೆ ಮುಂತಾದವುಗಳನ್ನು ಹೆಸರಿಸಬಹುದು. ಒಟ್ಟಾರೆ ಜಡವಾಗಿದ್ದ ಅಕಾಡೆಮಿಗೆ ಒಂದು ಚಲನೆಯನ್ನು ಗೊ.ರು.ಚ ತಂದಿದ್ದರು.

ಜಾನಪದದ ಬಗೆಗಿನ ಸಾಂಪ್ರದಾಯಿಕ ತಿಳುವಳಿಕೆಯಲ್ಲೇ ಅಕಾಡೆಮಿಯ ಬಹುಪಾಲು ಕೆಲಸ ಕಾರ್ಯಗಳು ನಡೆದಿವೆ. ಆದರೆ ಇಂದು ಜಾನಪದ ಬಗೆಗಿನ ಸಾಂಪ್ರದಾಯಿಕ ತಿಳುವಳಿಕೆಯಿಂದ ಹೊರಬರುವ ಅಗತ್ಯವಿದೆ. ಜನಸಮುದಾಯಗಳ ಒಡನಾಟದ  ಹೊಸ ವಲಯಗಳ ಒಳಗೂ ಹೊಸ ಜಾನಪದ ಹುಟ್ಟುತ್ತಿದೆ.
 
ಉದಾ: ಬೆಂಗಳೂರಿನಲ್ಲಿ ಬೇರೆ ಬೇರೆ ಕೆಲಸಗಳಿಗೆ ವಲಸೆ ಬಂದ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದ ಜನರನ್ನು ಮಾತನಾಡಿಸಿದರೆ, ಅವರದೇ ಆದ ಬೆಂಗಳೂರು ಕಥನವನ್ನು ಕಟ್ಟಿಕೊಡುತ್ತಾರೆ. ಇದು ಮಿರಿಮಿರಿ ಮಿಂಚುವ ಬೆಂಗಳೂರಿನ ಅಬ್ಬರದ ಚಿತ್ರಕ್ಕಿಂತ ಬೇರೆಯದೇ ಆದ ಚಿತ್ರವನ್ನು ಕೊಡುತ್ತದೆ. ಇಂತಹದ್ದೇ ಅನೇಕ ಉದಾಹರಣೆಗಳನ್ನು ಕೊಡಬಹುದು.

ಜಾಗತಿಕವಾಗಿಯೂ ಜಾನಪದ ಅಧ್ಯಯನಗಳು ಈ ಬಗೆಯ ಸಾಂಪ್ರದಾಯಿಕ ಸಂಗತಿಗಳಾಚೆಯೂ ಚಲಿಸಿದೆ. ಇಂಟರ್‌ನೆಟ್‌ನಲ್ಲಿ ಹುಟ್ಟುವ ಜಾನಪದ, ಮಾಧ್ಯಮಗಳಲ್ಲಿ ಹುಟ್ಟುವ `ಸುದ್ದಿ ಜಾನಪದ` ಮುಂತಾದ ಹೊಸ ಸಂಗತಿಗಳ ಕಡೆ ಗಮನ ನೆಟ್ಟಿವೆ. `ಫೋಕ್ ಹೈಸ್ಕೂಲ್` ಮೂಲಕ ಒಂದು ಜನಪದ ಶಿಕ್ಷಣ ಪದ್ದತಿಯನ್ನೇ ರೂಪಿಸಿವೆ. ಇಂತಹ ಎಲ್ಲಾ ಬಗೆಯ ಚಲನೆಗಳನ್ನು ಗಮನಿಸುತ್ತಲೇ ಕನ್ನಡ ಜಾನಪದದ ತಿಳುವಳಿಕೆಯನ್ನು ಪುನರ್ ನಿರ್ವಚಿಸಿಕೊಳ್ಳಬೇಕಿದೆ.

ಜಾನಪದ ಕಲಾವಿದರಿಗೂ, ಶಾಸ್ತ್ರೀಯ ಕಲಾವಿದರಿಗೂ ಇರುವ ಸಂಭಾವನೆಯ ನೆಲ ಮುಗಿಲಿನಂತರವನ್ನು ಬದಲಿಸಬೇಕಾಗಿದೆ. ಜನಪದ ಕಲಾವಿದರನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸುವವರಿಗೆ ಒಂದು ಕಲೆಗೆ, ಕಲಾವಿದರಿಗೆ ಈ ಕಾಲಮಾನಕ್ಕೆ ತಕ್ಕ ಹಾಗೆ ಇಂತಿಷ್ಟು ಗೌರವಯುತವಾದ ಸಂಭಾವನೆಯನ್ನು ನಿಗದಿ ಮಾಡಬೇಕಾಗಿದೆ. ಅವರನ್ನು ನಡೆಸಿಕೊಳ್ಳುವ ಬಗ್ಗೆಯೂ ನೀತಿ ಸಂಹಿತೆಯನ್ನು ರೂಪಿಸಬೇಕಿದೆ. 

ಅಂತೆಯೇ ಒಂದು ಕಲೆಯ ಒಂದೇ ತಂಡವನ್ನೇ ಎಲ್ಲಾ ಕಡೆ ಸವಲತ್ತೀಕರಿಸುವ ಬದಲು ಅದೇ ಕಲಾಪ್ರಕಾರದ ಪ್ರಾದೇಶಿಕ ಭಿನ್ನತೆಗಳನ್ನು ಆಯ್ದುಕೊಳ್ಳಬೇಕಾಗಿದೆ. ಮುಖ್ಯವಾಗಿ ಜಾನಪದ ಕಲಾವಿದರಿಗೆ ಮಾಸಾಶನ ದೊರೆಯುವ ವಯಸ್ಸನ್ನು ಕಡಿತಗೊಳಿಸುವ ಅಗತ್ಯವಿದೆ. ಕಾರಣ ಈಗಿರುವ ಅರವತ್ತು ವರ್ಷದ ಅವಧಿಯನ್ನು ಪೂರೈಸುವುದೇ ದೊಡ್ಡ ಸಂಗತಿಯಾಗಿದೆ.

ಕರ್ನಾಟಕದಲ್ಲಿಯೇ ಜಾನಪದ ಭಿನ್ನವಾಗಿ ಹೊಸ ನಡಿಗೆ ಕಂಡಿದೆ. ಮಹಿಳೆಯರು ಜನಪದ ಕಲೆಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ. ಅಂತೆಯೇ ಕೆಲವು ಹಳ್ಳಿಗಳ ಮಹಿಳಾ ಸಂಘಗಳು ಒಂದೊಂದು ಜನಪದ ಕಲೆಯನ್ನು ಕಲಿತು ಬೇರೆ ಬೇರೆ ಕಡೆ ಪ್ರದರ್ಶನ ಮಾಡುತ್ತಿವೆ. ಮುಖ್ಯವಾಗಿ ಗ್ರಾಮೀಣ ಯುವ ಪಡೆ ಜಾನಪದಕ್ಕೆ ಪ್ರವೇಶಿಸುತ್ತಿದೆ.
 
ಈ ಬಗೆಯ ಜಾನಪದದ ಹೊಸ ಚಲನೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ. ಗುಡಿಕೈಗಾರಿಕೆಯನ್ನು ಅಭಿವೃದ್ಧಿಪಡಿಸುವ ಹಾಗೆ ಯುವಕರಿಗೆ ಜನಪದ ಕಸಬುಗಳನ್ನು ಆಧರಿಸಿದ ಸ್ವಉದ್ಯೋಗ ತರಬೇತಿಗಳನ್ನು ಮಾಡಿಸಬಹುದಾಗಿದೆ. 

ನಾಟಕದ ರೆಪರ್ಟರಿಗಳ ಹಾಗೆ ರಾಜ್ಯದಾದ್ಯಂತ ಸಂಚರಿಸುವ ವಿವಿಧ ಜನಪದಕಲೆಗಳ ರೆಪರ್ಟರಿಗಳನ್ನು ಮಾಡುವ ಅಗತ್ಯವಿದೆ. ಮುಖ್ಯವಾಗಿ ಜಾನಪದವನ್ನು ಮೋಹಿಸುವ ಸಂಶೋಧನೆಗಿಂದ ಜಾನಪದವನ್ನು ವಿಮರ್ಶಾತ್ಮಕವಾಗಿ ಮಂಡಿಸುವ ಸಂಶೋಧನೆಗಳಿಗೆ, ಜಾನಪದವನ್ನು ಮ್ಯೂಜಿಯಂ ನ ಐಟಮ್ ಆಗಿ ನೋಡುವ ಚಿಂತನಾ ಕ್ರಮಗಳಿಗಿಂತ ಅದನ್ನೊಂದು ಚಲನಶೀಲ ಸಂಗತಿಯನ್ನಾಗಿ ನೋಡುವ ಸಂಶೋಧನೆಗಳಿಗೆ ಸೆಮಿನಾರುಗಳಲ್ಲಿ ಹೆಚ್ಚಿನ ಆದ್ಯತೆ ಕೊಡಬೇಕಾಗಿದೆ. ಆಯಾ ಜಿಲ್ಲಾ ಸಂಸ್ಕೃತಿ ಇಲಾಖೆಯನ್ನು ಆಯಾ ಭಾಗದ ಜಾನಪದದ ಹೊಸ ಚಲನೆಯನ್ನು ಗುರುತಿಸುವ ಹಾಗೆ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ.

ಜಾನಪದ ಅಕಾಡೆಮಿಯ ವೆಬ್‌ಸೈಟ್ ಇದೆ. ಇದು ಆರಂಭವಾದದ್ದು ಬಿಟ್ಟರೆ ಈವರೆಗೂ ಅದು ಅಪ್‌ಡೇಟ್ ಆಗಿಲ್ಲ. ಅಕಾಡೆಮಿಯ ಎಲ್ಲಾ ಬಗೆಯ ಕೆಲಸ ಕಾರ್ಯಗಳನ್ನು ಬಿಂಬಿಸುವಂತೆ ವೆಬ್‌ಸೈಟ್‌ನ್ನು ಅಭಿವೃದ್ಧಿಪಡಿಸಬೇಕಿದೆ. ಜಾನಪದ ಅಕಾಡೆಮಿ ಪ್ರಕಟಿಸಿದ ಪುಸ್ತಕಗಳ ಇ ಪ್ರತಿಗಳು ವೆಬ್‌ಸೈಟಿನಲ್ಲಿ  ಸಿಗುವಂತಾಬೇಕು. ಈಗಿರುವ ತಂತ್ರಜ್ಞಾನದ ಎಲ್ಲಾ ಅವಕಾಶಗಳನ್ನು ಅಕಾಡೆಮಿ ಜರೂರಾಗಿ ಬಳಸಿಕೊಳ್ಳುವ ಅಗತ್ಯವಿದೆ. ಜಾನಪದ ಕಲೆಗಳ ವಿಡಿಯೋ ಕ್ಲಿಪಿಂಗ್‌ನ್ನು `ಯೂಟ್ಯೂಬ್` ನಲ್ಲಿ  ಸಿಗುವಂತೆ ಮಾಡಬಹುದಾಗಿದೆ. 

ಅಂತೆಯೇ ಪ್ರತಿ ಕಲೆಯ ಕಲಾವಿದರ ಮಾಹಿತಿಯನ್ನು ನೀಡಬಹುದಾಗಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಆರಂಭವಾಗಿರುವುದರಿಂದ, ಪುನರಾವರ್ತನೆಯಾಗದಂತೆ ಪ್ರತ್ಯೇಕವಾಗಿ ಜಾನಪದ ಅಕಾಡೆಮಿಯ ಕೆಲಸಗಳ ಸ್ವರೂಪದ ಬಗ್ಗೆಯೂ ಖಚಿತಪಡಿಸಿಕೊಳ್ಳಬೇಕಿದೆ.

ಕರ್ನಾಟಕದ ಜನಪದ ಕಲೆಗಳಿಗೆ ಯುನೆಸ್ಕೋ ಮನ್ನಣೆ ದೊರೆಯುವಂತೆ ಮಾಡಬೇಕಾಗಿರುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ. ವಿಶ್ವಸಂಸ್ಥೆಯ ಭಾಗವಾದ ಯುನೆಸ್ಕೋ ಅಳಿದು ಹೋಗುತ್ತಿರುವ ಕಲೆಗಳ ಪುನರುಜ್ಜೀವನಕ್ಕೆ ವಿಶೇಷ ಅನುದಾನ ನೀಡುತ್ತಿದೆ. ಈ ಅನುದಾನವು ಜಗತ್ತಿನ ಅನೇಕ ನತದೃಷ್ಟ ಕಲೆಗಳಿಗೆ ಜೀವದಾನ ಮಾಡಿದೆ. 

ಭಾರತದ ಪೂರ್ವ ಭಾಗದಲ್ಲಿ ವಿಶೇಷವಾಗಿ ಪಶ್ಚಿಮ ಬಂಗಾಳ-ಓಡಿಶಾ ಗಡಿಪ್ರಾಂತದಲ್ಲಿ ಪ್ರಚಲಿತದಲ್ಲಿರುವ ಆಕರ್ಷಕ ಚಾವು ಕುಣಿತ, ಕೇರಳದ ಚಿತ್ತಾಕರ್ಷಕ ಮುಡಿಯೇಟ್ಟು, ಮತ್ತು ರಾಜಸ್ಥಾನದ ಕಲಬೇಲಾ ಜನಪದ ಕಲೆಗಳನ್ನು ಯುನೆಸ್ಕೊ ಈಚೆಗೆ “ಮನುಕುಲ ಸೃಜಿಸಿದ ಅಪೂರ್ವ ಕಲಾಪ್ರಕಾರಗಳು” ಎಂದು ಗುರುತಿಸಿ, ಅವುಗಳ ಪುನರುತ್ಥಾನಕ್ಕೆ ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತಿದೆ. 

ಕೇರಳದ “ಕುಟಿಯಾಟ್ಟಂ` ಎಂಬ ಪ್ರಾಚೀನ ಕಲೆಗೆ 2000ನೇ ಇಸವಿಯಲ್ಲಿ ಯುನೆಸ್ಕೋ ಮನ್ನಣೆ ನೀಡಿ, “ಮನುಕುಲದ ಅತ್ಯಂತ ಪ್ರಶಸ್ತ ಕಲೆ` ಎಂದು ಘೋಷಿಸಿತು.10 ವರ್ಷಗಳಲ್ಲಿ ಕುಟಿಯಾಟ್ಟಂನ ಸಂರಕ್ಷಣೆಗೆ ಸುಮಾರು 90 ಕೋಟಿ ರೂಪಾಯಿಗಳಷ್ಟು ಬಿಡುಗಡೆ ಆಗಿದೆ. 

ಆದರೆ ಕರ್ನಾಟಕದ ಯಾವುದೇ ಕಲೆಗೆ ಇಂಥ ಮನ್ನಣೆ ದೊರೆತಿಲ್ಲ. ಹಾಗೆ ದೊರೆಯುವಂತೆ ಮಾಡುವ ಗಂಭೀರ ಪ್ರಯತ್ನಗಳೂ ನಡೆದಿಲ್ಲ. ಹೀಗೆ ಮಾಡಲು ಯುನೆಸ್ಕೊ ಬಿಡುಗಡೆ ಮಾಡಿದ ನಿಗದಿತ ಅರ್ಜಿ ಫಾರಂ ಒಂದನ್ನು ಬಹಳ ಎಚ್ಚರಿಕೆಯಿಂದ ತುಂಬುವುದು. ಮತ್ತು ಯಾವ ಕಲೆಯ ಬಗ್ಗೆ ಬೇಡಿಕೆ ಸಲ್ಲಿಸಲಾಗುವುದೋ ಆ ಕಲೆಯ ಬಗ್ಗೆ ಐದರಿಂದ ಆರು ನಿಮಿಷಗಳ ಅವಧಿಯ ಒಳ್ಳೆಯ ಸಾಕ್ಷ್ಯಚಿತ್ರವೊಂದನ್ನು ಅರ್ಜಿ ಜೊತೆ ಲಗತ್ತೀಕರಿಸುವುದು. 

ಇದು ಸರಳವಾದ ಕೆಲಸವೇನಲ್ಲ, ಸವಾಲಿನದ್ದು. ಇಂತಹ ಕೆಲಸವನ್ನು ಜಾನಪದ ಅಕಾಡೆಮಿಯು ಮಾಡಬೇಕಾಗಿದೆ. ಈ ಬಗ್ಗೆ ಜಾನಪದ ವಿದ್ವಾಂಸ ಡಾ.ಪುರುಷೋತ್ತಮ ಬಿಳಿಮಲೆ ಅವರು ಕೆಲ ತಿಂಗಳುಗಳ ಹಿಂದೆ ಗಮನ ಸೆಳೆದಿದ್ದರು.

ಹೀಗೆ ಕರ್ನಾಟಕ ಜಾನಪದ ಅಕಾಡೆಮಿಯ ನೂತನ ಅಧ್ಯಕ್ಷರಾದ ಬಾನಂದೂರು ಕೆಂಪಯ್ಯ ಅವರ ಮುಂದೆ ಇಂತಹ ಹತ್ತಾರು ಪ್ರಶ್ನೆಗಳು ಎದುರಾಗುತ್ತವೆ. ಅದನ್ನು ಅವರು ಹೇಗೆ ನಿಭಾಯಿಸುತ್ತಾರೆಂದು ಕಾಯ್ದು ನೋಡಬೇಕಾಗಿದೆ.

ಸೋಮವಾರ, ಜೂನ್ 25, 2012

ನೇಪಾಳದ ಖಟಮಂಡುವಿನಲ್ಲಿ ೪ನೇ ಅಂತರಾಷ್ಟ್ರೀಯ ಜಾನಪದ ಕಾಂಗ್ರೇಸ್




   ೧೯೯೫ ರಲ್ಲಿ ಆರಂಭವಾದ ನೇಪಾಳಿ ಫೋಕ್ ಲೋರ್ ಸೋಸೈಟಿಯು ಜಾನಪದಕ್ಕೆ ಸಂಬಂಧಿಸಿದ ಕೆಲಸಗಳನ್ನು ಕ್ರಿಯಾಶೀಲವಾಗಿ ಮಾಡುತ್ತಾ ಬಂದಿದೆ. ಜಾಗತಿಕವಾಗಿ ನಡೆಯುವ ಜಾನಪದ ಚಿಂತನೆಗಳನ್ನು ಒಂದು ವೇದಿಕೆಯಲ್ಲಿ ತಂದು ಚರ್ಚಿಸುವುದು, ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳುವುದು ಆ ಮೂಲಕ ನೇಪಾಳಿ ಜಾನಪದದ ಆಲೋಚನೆಯನ್ನು ವಿಸ್ತರಿಕೊಳ್ಳುವುದು ಇದರ ಮೂಲ ಉದ್ದೇಶ. ಇದರ ಭಾಗವಾಗಿ ೨೦೦೧ ರಿಂದ ಅಂತರಾಷ್ಟ್ರೀಯ ಜಾನಪದ ಕಾಂಗ್ರೇಸ್ ನ್ನು ಆಯೋಜಿಸುತ್ತಾ ಬಂದಿದೆ. ೨೦೦೧, ೨೦೦೩, ೨೦೦೬ ರಲ್ಲಿ ಈಗಾಗಲೆ ಮೂರು ಅಂತರಾಷ್ಟ್ರೀಯ ಜಾನಪದ ಕಾಂಗ್ರೇಸ್ ನ್ನು ಆಯೋಜಿಸಿ, ಅಂತರಾಷ್ಟ್ರೀಯ ಜಾನಪದ ವಿದ್ವಾಸಂರನ್ನು ಒಂದೆಡೆ ತಂದು ಚರ್ಚಿಸಿ ಜಗತ್ತಿನ ಜಾನಪದ ವಿದ್ವಾಂಸರನ್ನು ಗಮನ ಸೆಳೆದಿದೆ.

   ೪ ನೇ ಅಂತರಾಷ್ಟ್ರೀಯ ಜಾನಪದ ಕಾಂಗ್ರೇಸ್ ೨೦೧೨ ಆಗಷ್ಟ್ ೧೭ ರಿಂದ ೧೯ ರ ತನಕ ನಡೆಯಲಿದೆ. ಇದಕ್ಕೆ ಜಗತ್ತಿನಾದ್ಯಾಂತ ಜಾನಪದ ವಿದ್ವಾಂಸರು ಆಗಮಿಸುತ್ತಾರೆ. ಈ ಬಾರಿಯ ಜಾನಪದ ಕಾಂಗ್ರೇಸ್ ನ ಥೀಮ್  `folklore and folklife studies: special focus on intangible cultural heritage’  ಇದನ್ನು ಒಳಗೊಂಡಂತೆ ಜಾನಪದ ಮತ್ತು ಅಭಿವೃದ್ಧಿ ಸಂಗತಿಗಳು, ಜಾನಪದ: ಮಹಿಳೆ ಮತ್ತು ಶಕ್ತಿಕೇಂದ್ರಗಳು, ಜಾನಪದ: ಸೃಜನಶೀಲ ಬರಹ ಮತ್ತು ಕಾವ್ಯ, ಜಾನಪದ: ಪ್ರದರ್ಶನಾತ್ಮಕ ಕಲೆಗಳ ಬದಲಾವಣೆ, ಜಾನಪದ: ಸಾಂಸ್ಕೃತಿಕ ಅನನ್ಯತೆ ಮತ್ತು ಪ್ರತ್ಯೇಕತೆ, ಜಾನಪದ: ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವಾಣಿಜ್ಯೀಕರಣ, ಸೃಜನಶೀಲ ಬರವಣಿಗೆಯಲ್ಲಿ ಜಾನಪದದ ಪ್ರಭಾವ, ಜಾನಪದ: ವಿದ್ವಜ್ಜನರ ಸಾಂಸ್ಕೃತಿಕ ಆಸ್ತಿ ಮತ್ತು ಕಾನೂನು ಸಂಬಂದಿ ಸಂಗತಿಗಳು, ಜಾನಪದ: ಶಿಕ್ಷಣ ಮತ್ತು ಸಾಂಸ್ಕೃತಿಕ ಯಾಜಮಾನಿಕೆ, ಜಾನಪದ: ಸೃಜನಶೀಲ ನೆಲೆಗಳು ಮತ್ತು ಆಧುನಿಕ ಸೂಕ್ಷ್ಮ ಸಂವೇದನೆ, ಜಾನಪದ: ಪಾರಂಪರಿಕ ಜ್ಞಾನ ಮತ್ತು ಸಾಂಸ್ಕೃತಿಕ ಹಕ್ಕುದಾರಿಕೆ, ಜಾನಪದ: ಮಾಹಿತಿ ತಂತ್ರಜ್ಞಾನ, ಜಾನಪದ: ಸೈದ್ಧಾಂತಿಕ ಮತ್ತು ತಾತ್ವಿಕ ಸಂಗತಿಗಳು ಈ ವಿಷಯಗಳು ಈ ಸೆಮಿನಾರಿನಲ್ಲಿ ಚರ್ಚೆಗೆ ಒಳಗಾಗುತ್ತವೆ. 

  ಸಂತಸದ ಸಂಗತಿಯೆಂದರೆ, ನನಗೆ ಈ ಸೆಮಿನಾರಿನಲ್ಲಿ ಕರ್ನಾಟಕ ಜನಪದ ಪ್ರದರ್ಶನಾತ್ಮಕ ಕಲೆಗಳ ಸ್ಥಿತ್ಯಂತರಗಳ ಬಗ್ಗೆ ಮಾತನಾಡಲು ಅವಕಾಶ ದೊರೆತಿದೆ. ಈ ನೆಪದಲ್ಲಿ ಕರ್ನಾಟಕದ ಜಾನಪದ ಅಧ್ಯಯನದ ಒಲವು, ಜಾನಪದ ವಿಶ್ವವಿದ್ಯಾಲಯದ ಸ್ಥಾಪನೆ ಕುರಿತಂತೆ ಮಾತನಾಡಲು ತಯಾರಿ ನಡೆಸಿದ್ದೇನೆ.






ಮಂಗಳವಾರ, ಜೂನ್ 19, 2012

ಬಾನಂದೂರು ಕೆಂಪಯ್ಯ ಜಾನಪದ ಅಕಾಡೆಮಿಯ ನೂತನ ಅಧ್ಯಕ್ಷರು




  ಈಚೆಗೆ ಜಾನಪದ ಅಕಾಡೆಮಿಯ ಅಧ್ಯಕ್ಷ ಸ್ಥಾನ ಗೊ.ರು.ಚ ಅವರ ನಂತರ ಕಾಲಿಯಾಗಿಯೇ ಉಳಿದಿತ್ತು. ಈ ಸ್ಥಾನಕ್ಕೆ ಬಾನಂದೂರು ಕೆಂಪಯ್ಯ ಅವರನ್ನು ಸರಕಾರ ಆಯ್ಕೆ ಮಾಡಿದೆ. ಬಾನಂದೂರು ಕೆಂಪಯ್ಯ ಅವರು ಜಾನಪದ ಹಾಡುಗಾರರು. ಅವರು ಕೆಲವು ಜಾನಪದ ಗೀತೆಗಳನ್ನು ಮತ್ತೆ ಮತ್ತೆ ಹಾಡಿ ಜನಪ್ರಿಯ ಗೊಳಿಸಿದ್ದಾರೆ. ಅದರಲ್ಲಿ ಬಿದಿರು ನಾನಾರಿಗಲ್ಲದವಳು ಎನ್ನುವ ಹಾಡು ಪ್ರಸಿದ್ಧಿಯನ್ನು ಹೊಂದಿದೆ.


   ಅಕಾಡೆಮಿಕ್ ಆಗಿ ಅಷ್ಟೇನು ಬರವಣಿಗೆ ಮಾಡದ, ಜಾನಪದ ಕ್ಷೇತ್ರಕಾರ್ಯವನ್ನೂ ಹೆಚ್ಚ  ಮಾಡದ ಕೆಂಪಯ್ಯ ಅವರು ಜಾನಪದ ಅಕಾಡೆಮಿಯನ್ನು ಹೇಗೆ ಮುನ್ನೆಡೆಸುತ್ತಾರೆ ಎನ್ನುವ ಕುತೂಹಲವಂತೂ ಇದ್ದೇಇದೆ. ಜಾನಪದ ವಿದ್ವಾಂಸರ ಜತೆ ಸಂವಾದ ಮಾಡಿ, ಜಾನಪದವನ್ನು ವಿಶೇಷವಾಗಿ ಹೊಸ ಕಾಲಕ್ಕೆ ಅನ್ವಯಿಸುವ ಹಾಗೆ ಮುನ್ನೆಡಸಬೇಕಾದ ಅನಿವಾರ್ಯತೆ ಇಂದು ಜಾನಪದ ಅಕಾಡೆಮಿಗೆ ಇದೆ. ಅದನ್ನು ಕೆಂಪಯ್ಯ ಅವರು ಹೇಗೆ ನಿರ್ವಹಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಷ್ಟೆ.

  ಏನೇ ಇರಲಿ, ಈ ಹೊತ್ತು ಜಾನಪದ ಅಕಾಡೆಮಿಯ ನೂತನ ಅಧ್ಯಕ್ಷರಾದ ಬಾನಂದೂರು ಕೆಂಪಯ್ಯ ಅವರಿಗೆ ಕನ್ನಡ ಜಾನಪದ ಬ್ಲಾಗ್ ಅಭಿನಂದನೆ ಸಲ್ಲಿಸುತ್ತದೆ.

ಭಾನುವಾರ, ಜೂನ್ 17, 2012

ಜಾನಪದ ವಿಶ್ವವಿದ್ಯಾಲಯದ  ಉದ್ಘಾಟನೆಯ ಚಿತ್ರಲೋಕ


ಇಲ್ಲಿನ ಚಿತ್ರಗಳನ್ನು ಶಿಗ್ಗಾಂ ನ ವೇದಾರಾಣಿ ಸೊಲಬಕ್ಕನವರ್ ಕಳಿಸಿಕೊಟ್ಟಿದ್ದಾರೆ. ಅವರಿಗೆ ಕನ್ನಡ ಜಾನಪದ ಬ್ಲಾಗ್ ಧನ್ಯವಾದಗಳನ್ನು ಸಲ್ಲಿಸುತ್ತದೆ.


ಶನಿವಾರ, ಜೂನ್ 16, 2012

ಜಾನಪದ ವಿಶ್ವವಿದ್ಯಾಲಯದ ಆರಂಭದ ಸಂಭ್ರಮ

ಜಾನಪದ ವಿಶ್ವವಿದ್ಯಾಲಯದ ಆರಂಭದ ಸಂಭ್ರಮ




  ಶಿಗ್ಗಾವಿನ ಪರಿಸರದಲ್ಲಿ ಜಾನಪದ ವಿಶ್ವವಿದ್ಯಾಲಯದ ಉದ್ಘಾಟನೆಯ ಸಂಭ್ರಮ ತುಂಬಿ ತುಳುಕುತ್ತಿತ್ತು. ಹಳ್ಳಿಗಳಿಂದ ಜನರು ಗೊಟಗೋಟಿ ಬಳಿ ದಾವಿಸಿದ್ದರು. ಪೋಲೀಸರ ಸರ್ಪಗಾವಲಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳನ್ನೊಳಗೊಂಡು ಮಂತ್ರಿ ಮಹೋದಯರ ದಂಡೇ  ನೆರೆದಿತ್ತು. ಭಾರತದಲ್ಲಿಯೇ ಮೊಟ್ಟಮೊದಲ ಜಾನಪದ ವಿಶ್ವವಿದ್ಯಾಲಯವನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಸಮಾಳ ಬಾರಿಸುವ ಮೂಲಕ ಶನಿವಾರ ನಾಡಿಗೆ ಅರ್ಪಿಸಿದರು.  ಇದಕ್ಕೆ ರಾಜ್ಯದ ಸಚಿವರು, ಜಾನಪದ ತಜ್ಞರು, ವಿದ್ವಾಂಸರು, ಕಲಾವಿದರು ಕನ್ನಡ ಪರ ಹೋರಾಟಗಾರರು, ಸಾಹಿತಿಗಳು ಸಾಕ್ಷಿಯಾದರು. ಜನರು ಜೈಕಾರ ಹಾಕಿದರು.

   ಮುಖ್ಯಮಂತ್ರಿ ಸದಾನಂದ ಗೌಡ ಅವರು ಮಾತನಾಡಿ, `ಜನಪದ ಸಂಸ್ಕೃತಿಯು ಒಂದು ನಾಡು, ದೇಶದ ಹೆಮ್ಮೆಯ ಸಂಗತಿಯಾಗಿದೆ. ಒಂದು ದೇಶದ ಶ್ರೀಮಂತಿಕೆ ಹಾಗೂ ಬಡತನ ಅಲ್ಲಿರುವ ಕಲೆ, ಸಂಸ್ಕೃತಿಯ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಎದುರಾಳಿ ದೇಶವನ್ನು ನಾಶ ಇಲ್ಲವೇ ಅಧಃಪತನಗೊಳಿಸಬೇಕಾದರೆ, ಅದರ ಜತೆಗೆ ಯುದ್ಧವನ್ನೇ ಮಾಡಬೇಕೆಂದೇನಿಲ್ಲ. ಅಲ್ಲಿನ ಕೆಲ, ಸಂಸ್ಕೃತಿ, ಆಚಾರ, ವಿಚಾರಗಳ ಮೇಲೆ ದಾಳಿ ನಡೆಸಿ ಅವುಗಳು ನಶಿಸುವಂತೆ ಮಾಡಿದರೆ, ಆ ದೇಶ ತನ್ನಿಂದ ತಾನೆ ನಾಶವಾಗುತ್ತದೆ` ಎಂದು ನುಡಿದರು.

  ಮುಂದುವರಿದು `ನಮ್ಮ ದೇಶದ ಮೇಲೆ ಹಲವಾರು ದಾಳಿಗಳು ನಡೆದರೂ ದೇಶವನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ.  ನಮ್ಮಲ್ಲಿ ಆಳವಾಗಿ ಬೇರು ಬಿಟ್ಟಿರುವ ಸಂಸ್ಕೃತಿಯೇ ಇದಕ್ಕೆ ಮೂಲ ಕಾರಣ. ದೇಶದ ಸಂಸ್ಕೃತಿ, ಸಂಪ್ರದಾಯಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶದಿಂದಲೇ ಈ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ` ಎಂದು ಹೇಳಿದರು. 





ಯಾಂತ್ರಿಕ ಜೀವನದಿಂದ ಮನುಷ್ಯ ಸಂಸ್ಕೃತಿ ಮತ್ತು ವಿಕೃತಿ ನಡುವಿನ ವ್ಯತ್ಯಾಸವನ್ನು ಕಂಡುಕೊಳ್ಳದೇ ತನ್ನತನವನ್ನು ಕಳೆದುಕೊಳ್ಳುತ್ತಿದ್ದಾನೆ. ಪ್ರತಿಯೊಬ್ಬ ಮನುಷ್ಯನಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದುನ್ನು ತಿಳಿಸಿಕೊಡಲು ಕಲೆ, ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯಗಳ ಅರಿವು ಅಗತ್ಯವಿದೆ ಎಂದರು.

  1970 ರ ದಶಕದಿಂದಲೂ ಜಾನಪದ ವಿಶ್ವವಿದ್ಯಾಲಯದ ಕೂಗು ಜೀ.ಶಂ.ಪರಮಶಿವಯ್ಯ ಅವರಿಂದಲೂ ಇತ್ತು. ಅದು ಗೋ.ರು.ಚ ಅವರು ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ, ಈ ಕನಸಿಗೆ ಜೀವ ತುಂಬಿ, ಅದನ್ನು ಜಪದಂತೆ ಮಾಡಿ,  ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವ ಉದ್ದೇಶದಿಂದ ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ  ಅವರ ನೆರವಿನಿಂದ ಈ ವಿಶ್ವವಿದ್ಯಾಲಯ ಸ್ಥಾಪಿಸುವ ನಿರ್ಧಾರ ಕೈಗೊಂಡರು. ಅದೀಗ ಅರಳಿ ನಿಂತಿದೆ. ವಿಶ್ವವಿದ್ಯಾಲಯವು ನಡೆವ ದಾರಿ ಮಹತ್ವದ್ದಾಗಿದೆ.


  ಜಾನಪದ ವಿವಿಯ ಆರಂಭದಿಂದಲೂ  ವಿವಿಯ ರೂಪುರೇಶೆ, ಅದು ಆರಂಭವಾಗುವ ಬಗ್ಗೆ ಸದಾ ಕನ್ನಡ ಜಾನಪದ ಬ್ಲಾಗ್ ದ್ವನಿಯಾಗುತ್ತಲೇ ಬಂದಿದೆ. ಈಗಲೂ ಜಾನಪದ ವಿವಿಯ  ಆರಂಭವನ್ನು ಸಂಭ್ರಮಿಸುತ್ತದೆ. ಈ ಹೊತ್ತಲ್ಲಿ ಜಾನಪದ ವಿವಿಯ ರಚನೆಗೆ ಕಾರಣವಾದ  ಎಲ್ಲಾ ಕಾಣದ ಕೈಗಳನ್ನೂ ಶಕ್ತಿ ಯುಕ್ತಿಗಳನ್ನೂ ಕನ್ನಡ ಜಾನಪದ ಬ್ಲಾಗ್ ಅಭಿನಂದಿಸುತ್ತದೆ. ಹಾಗೆಯೆ ಜಾನಪದ ವಿವಿಯ ಕನಸನ್ನು ನನಸು ಮಾಡುವಲ್ಲಿ ಶ್ರಮಿಸುತ್ತಿರುವ ಪ್ರೊ. ಅಂಬಳಿಕೆ ಹಿರಿಯಣ್ಣ ಮತ್ತು ಜಾನಪದ ವಿದ್ವಾಂಸರ, ಕನ್ನಡದ ಚಿಂತಕರ ದೊಡ್ಡ ಬಳಗಕ್ಕೆ ಕನ್ನಡ ಜಾನಪದದ ಪರವಾಗಿ ಧನ್ಯವಾಗಳು.


ಬುಧವಾರ, ಜೂನ್ 13, 2012

16ರಂದು ಜಾನಪದ ವಿವಿ ಉದ್ಘಾಟನೆ


16ರಂದು ಜಾನಪದ ವಿವಿ ಉದ್ಘಾಟನೆ


ಕೃಪೆ: ಪ್ರಜಾವಾಣಿ

ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯಲ್ಲಿ ಈ ತಿಂಗಳ 16ರಿಂದ ವಿಧ್ಯುಕ್ತವಾಗಿ ಕಾರ್ಯಾರಂಭ ಮಾಡಲಿದೆ.

`ಅಂದು ನಡೆಯುವ ಸಮಾರಂಭದಲ್ಲಿ ಜಾನಪದ ವಿ.ವಿ.ಯನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಉದ್ಘಾಟಿಸುವರು` ಎಂದು ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಗೊಟಗೋಡಿಯಲ್ಲಿ ಪ್ರವಾಸೋದ್ಯಮ ಇಲಾಖೆಯು ನಿರ್ಮಿಸಿರುವ ಹೆದ್ದಾರಿ ಸೌಲಭ್ಯ ಕಟ್ಟಡವನ್ನು ಬಾಡಿಗೆ ಆಧಾರದ ಮೇಲೆ ಪಡೆದುಕೊಂಡಿದ್ದು, ಆ ಕಟ್ಟಡದಲ್ಲಿ ವಿ.ವಿ.ಯ ಕೇಂದ್ರ ಕಾರ್ಯಾಲಯದ ಚಟುವಟಿಕೆಗಳಿಗೆ ಚಾಲನೆ ನೀಡಲಾಗುವುದು.
ಅದೇ ದಿನ ವಿ.ವಿ.ಯ ಕಟ್ಟಡಗಳ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. 45.35 ಎಕರೆ ಜಾಗದಲ್ಲಿ ವಿ.ವಿ.ಯ ವಿವಿಧ ಕಟ್ಟಡಗಳ ನಿರ್ಮಾಣ ಕಾರ್ಯವನ್ನು ಹದಿನಾರು ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಇದೆ. ಇದಕ್ಕಾಗಿ ಮೊದಲ ಹಂತದಲ್ಲಿ ಸರ್ಕಾರ ರೂ. 7.5 ಕೋಟಿ ಅನುದಾನ ಮಂಜೂರು ಮಾಡಿದೆ` ಎಂದು ಅವರು ಹೇಳಿದರು.

`ನಮ್ಮ ವಿ.ವಿ.ಯು ವಿಶ್ವದಲ್ಲೇ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದಿರುವ ಜಾನಪದ ವಿ.ವಿ. ಆಗಿದೆ. ಆರು ವಿಭಾಗಗಳ ಅಡಿಯಲ್ಲಿ 17 ಸ್ನಾತಕೋತ್ತರ (ಎಂ.ಎ., ಎಂ.ಎಸ್ಸಿ, ಎಂ.ಬಿ.ಎ.) ಕೋರ್ಸ್‌ಗಳನ್ನು ಪ್ರಾರಂಭಿಸುವ ಉದ್ದೇಶವಿದೆ. ಈ ಕೋರ್ಸುಗಳ ಪಠ್ಯಕ್ರಮಗಳನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಮಾರ್ಗಸೂಚಿ ಅಂಶಗಳ ಆಧಾರದಲ್ಲಿ ಸಿದ್ಧಪಡಿಸಿ, ಕುಲಾಧಿಪತಿಯವರ ಅಂಕಿತಕ್ಕೆ ಕಳುಹಿಸಿಕೊಡಲಾಗಿದೆ` ಎಂದು ಅವರು ವಿವರಿಸಿದರು.

`ಸ್ನಾತಕೋತ್ತರ ಕೋರ್ಸ್‌ಗಳಲ್ಲದೇ 10 ಸರ್ಟಿಫಿಕೇಟ್, 3 ಡಿಪ್ಲೊಮಾ ಕೋರ್ಸುಗಳಿಗೂ ಪಠ್ಯಕ್ರಮವನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ. ವಿ.ವಿ.ಯು ಪಾರಂಪರಿಕ ಜ್ಞಾನ ಪದ್ಧತಿಗಳನ್ನು ಪುನಶ್ಚೇತನಗೊಳಿಸುವ ಹಾದಿಯಲ್ಲಿ ಅಂತಹ ಜ್ಞಾನಗಳ ರಕ್ಷಣೆ ಮತ್ತು ಸಂವರ್ಧನೆಗಾಗಿ ಶ್ರಮಿಸಲಿದೆ. 

ಜಿಲ್ಲೆಗೊಂದರಂತೆ 30 ಕಿರು ಸಂಶೋಧನೆ ನಡೆಸಲು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕಿರು ಸಂಶೋಧನಾರ್ಥಿಗಳನ್ನು ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು` ಎಂದು ಅವರು ಹೇಳಿದರು.

`ಒಟ್ಟು 449 ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಗೆ ಅನುಮೋದನೆ ನೀಡುವಂತೆ ಸರ್ಕಾರವನ್ನು ಕೇಳಿಕೊಳ್ಳಲಾಗಿತ್ತು. 

ಆದರೆ ಸರ್ಕಾರ 21 ಬೋಧಕ ಮತ್ತು 35 ಬೋಧಕೇತರ ನೌಕರರ ನೇಮಕಾತಿಗೆ ಮಂಜೂರಾತಿ ನೀಡಿದೆ. ವಿ.ವಿ.ಯೇ ನೇರವಾಗಿ ವರ್ಷಕ್ಕೆ ಮೂವರು ಜನಪದ ಕಲಾವಿದರನ್ನು ನೇಮಕ ಮಾಡಿಕೊಳ್ಳಬಹುದಾಗಿದೆ. ಬೀದರ್, ಉಡುಪಿ ಸೇರಿದಂತೆ ರಾಜ್ಯದ ಆರು ಕಡೆ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸಲಾಗುವುದು` ಎಂದು ಅವರು ತಿಳಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ, ಕುಲಸಚಿವ ಪ್ರೊ.ಸಿ.ಎ.ಸೋಮಶೇಖರಪ್ಪ ಸೇರಿದಂತೆ ಇತರರು ಗೋಷ್ಠಿಯಲ್ಲಿ ಹಾಜರಿದ್ದರು.

ಮಂಗಳವಾರ, ಜೂನ್ 12, 2012

ಜಾನಪದ ವಿಶ್ವವಿದ್ಯಾಲಯದ ಉದ್ಘಾಟನ ಸಮಾರಂಭದ ಆಹ್ವಾನ ಪತ್ರಿಕೆ











ಹಾಲು, ಹುತ್ತ, ಲಿಂಗ ಮತ್ತು ಹಸುಗಳ ಕತೆ


  
– ಪುರುಷೋತ್ತಮ ಬಿಳಿಮಲೆ
 ನನ್ನ ಹುಟ್ಟೂರಾದದಕ್ಷಿಣಕನ್ನಡಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಪಂಜ ಎಂಬ ಪುಟ್ಟಊರಿದೆ. ಅಲ್ಲಿನಎಡಮಂಗಲ ಎಂಬ ಹಳ್ಳಿಯಲ್ಲಿ ಹರಿಯುವ ನದಿಯಒಂದು ಭಾಗಕ್ಕೆ ನಾಕೂರುಗಯ ಎಂದು ಹೆಸರು. ಅಲ್ಲಿಜನಪ್ರಿಯವಾಗಿರುವಐತಿಹ್ಯವೊಂದುಇಂತಿದೆ-
    ಬಹಳ ಹಿಂದೆಇಲ್ಲಿದನಕಾಯುವ ಹುಡುಗನೊಬ್ಬನಿದ್ದ.ದನಗಳನ್ನು ಮೇಯಿಸಿ ಸಾಯಂಕಾಲ ಹಟ್ಟಿಗೆ ದನಗಳನ್ನು ಹೊಡೆದುಕೊಂಡು ಬರುವುದು ಅವನ ದಿನನಿತ್ಯದ ಕೆಲಸ. ಒಂದು ದಿನ ದನಗಳ ಯಜಮಾನ ಕಾವಲಿನ ಹುಡುಗನನ್ನು ಗದರಿಸಿ-’ಕಪಿಲೆ ದನದ ಕೆಚ್ಚಲು ಬರಿದಾಗಿದೆ. ಕಾಡಿನಲ್ಲಿ ದನಗಳನ್ನು ಮೇಯಿಸುವುದು ಬಿಟ್ಟು ಹಾಲು ಕುಡಿಯಲುಕಲಿತಿದ್ದೀಯಾ….?’ಎಂದು ನಾಲ್ಕು ಬಾರಿಸುತ್ತಾನೆ. ಮೂರನೇ ದಿವಸ ಹುಡುಗದನದ ಬೆನ್ನು ಹಿಡಿದು ಕಾಡೊಳಕ್ಕೆ ಸಾಗುತ್ತಾನೆ. ಕಪಿಲೆ ಕಾಡೊಳಕ್ಕೆ ಮುನ್ನುಗುತ್ತದೆ. ಹುಡುಗ ಮುಂದೆ ನೋಡುತ್ತಿರುವಂತೆದನವು ಪೊದರಿನಲ್ಲಿಅವಿತಿದ್ದ ಹುತ್ತವೊಂದಕ್ಕೆ ಹಾಲೂಡಿಸತೊಡಗುತ್ತದೆ. ಛಂಗನೆ ನೆಗೆದ ಹುಡುಗ ಕಪಿಲೆಯ ಬಾಲ ಹಿಡಿಯುತ್ತಾನೆ. ಆಗ ನೆಗೆದೋಡಿದ ಕಪಿಲೆಯು ನೇರವಾಗಿ ನಾಕೂರು ಹೊಳೆಗೆ ಹಾರಿತು. ಜೊತೆಗೆ ಹುಡುಗನನ್ನೂಕೊಂಡೊಯ್ದಿತು. ಹಾಗೆ ಕಪಿಲೆ ದನವು ಹುಡುಗನೊಡನೆ ಮರೆಯಾದಜಾಗದಲ್ಲಿ ಲಿಂಗರೂಪೀದೈವವೊಂದಿತ್ತು. ಆ ದೈವಕ್ಕೆಒಂದುಚಾವಡಿ (ಗುಡಿ)ಯೂಇತ್ತು. ಆದರೆ ಈಗ ಅದು ನದಿಯ ನಡುವೆ ಮುಳುಗಿ ಹೋಗಿರುವುದರಿಂದ ಬೇರೆಯವರಿಗೆಕಾಣಿಸುವುದಿಲ್ಲ. ಆದರೆ ನದಿಯಲ್ಲಿ ನೀರುಕಡಿಮೆಆದಾಗ, ಮಡಿವಂತರಿಗೆ ದೇವಳದ ಕಳಶ ಕಾಣಿಸುವುದುಂಟು. ಬೇಸಗೆಯಲ್ಲಿ ನಾನು ಏನಡ್ಕಕ್ಕೆ ಹೋದಾಗಲೆಲ್ಲ ಹೊಳೆಯಲ್ಲಿ ಗುಡಿಕಾಣಿಸುವಿದೇಅಂತಇಣಿಕಿ ನೋಡಿದ್ದುಂಟು.

    ಈಗಲೂ ಈ ಕತೆ ಹೇಳುವ ಜನರು ‘ನಾಕೂರುಗಯ’ವನ್ನು ಬೆರಳಿಂದ ತೋರಿಸಿ, ಲಿಂಗ-ಕಳಶ ಇರುವ ಸ್ಥಳವನ್ನು ನಿಸ್ಸಂಶಯವಾಗಿತೋರಿಸುತ್ತಾರೆ. ಕಪಿಲೆ, ಹಾಲು, ಹುಡುಗ, ಲಿಂಗ, ನೀರು, ಕಳಶಗಳ ನಿರೂಪಣೆಯು ನಮ್ಮ ಗಮನ ಸೆಳೆಯುತ್ತದೆ. ಯಾವುದೋ ಕೆಲಸಕ್ಕೆ ಹಾವೇರಿಗೆ ಹೋಗಿದ್ದಾಗಅಲ್ಲೊಂದುಇಂತದ್ದೇಕತೆ ಕೇಳಿದ್ದೆ- ದನವೊಂದು ಮೇಯಲು ಹೋದಾಗ, ಕಾಡಿನಲ್ಲಿತನ್ನ ಕೆಚ್ಚಲನ್ನು ಹುತ್ತವೊಂದಕ್ಕೆಒಡ್ಡುತ್ತದೆ. ಹುತ್ತದಲ್ಲಿದ್ದಕರಿನಾಗರವೊಂದು ಹಸುವಿನ ಕೆಚ್ಚಲಿನಿಂದ ಹಾಲು ಕುಡಿಯುತ್ತದೆ. ಈ ಮಹಿಮೆಯನ್ನು ತಿಳಿದ ಜನರು ನಾಗಪ್ಪನಿಗೊಂದುಗುಡಿಕಟ್ಟಿಸುತ್ತಾರೆ. ಗುಡಿಯೊಳಗೆ ಈಗಲೂ ಕರಿಯಪ್ಪದೈವ ವಾಸವಾಗಿದ್ದಾನೆ, ಈ ಕತೆಯು ಮೊದಲನೆಯದಕ್ಕಿಂತ ಸ್ವಲ್ಪ ಬೇರೆಯಾಗಿದೆ. ಉತ್ತರಕನ್ನಡಜಿಲ್ಲೆಯ ಸಿದ್ಧಾಪುರದ ಬಳಿಯ ದೊಡ್ಡಮನೆ ಎಂಬಲ್ಲಿರುವ ನಂಬಿಕೆಯ ಪ್ರಕಾರ ಕರು ಹಾಕದ, ಗರ್ಭಧರಿಸದ ಎಳೆಯ ಹೆಣ್ಣುಕರುವೊಂದುಕಾಡಿನಲ್ಲಿರುವ ಹುತ್ತದ ಬಳಿ ಸುಳಿದಾಡುತ್ತದೆ. ಆಗ ಇದ್ದಕ್ಕಿದ್ದಂತೆಅದರ ಕೆಚ್ಚಲು ತುಂಬುತ್ತದೆ. ಕರು ಕೆಚ್ಚಲ ಹಾಲನ್ನು ಪೊದರಲ್ಲಿರುವ ಹುತ್ತಕ್ಕೆಎರೆಯುತ್ತದೆ. ಜನರುಅದಕ್ಕೆ ಗುಡಿಕಟ್ಟಿಸಿ ಪೂಜೆ ಮಾಡುತ್ತಾರೆ. ದಕ್ಷಿಣಕನ್ನಡಜಿಲ್ಲೆ ಪುತ್ತೂರುತಾಲೂಕಿನ ಬಿಳಿನೆಲೆಯಲ್ಲಿ ಲಭ್ಯವಿರುವಕತೆಯ ಪ್ರಕಾರ, ಗೊಡ್ಡಿದನವೊಂದುಕಾಡಿನಲ್ಲಿರುವ ಲಿಂಗಕ್ಕೆ ಕ್ಷೀರಾಭಿಷೇಕ ಮಾಡುತ್ತದೆ. ಹಾಸನ ಜಿಲ್ಲೆಯ ಸಕಲೇಶಪುರತಾಲ್ಲೂಕಿನಕೂಡುರಸ್ತೆ ಎಂಬಲ್ಲಿ ಜನಜನಿತವಾಗಿರುವಐತಿಹ್ಯದ ಪ್ರಕಾರ, ‘ಗೊಡ್ಡಿದನ ಹುತ್ತಕ್ಕೆ ಹಾಲೆರೆದಆನಂತರ ಹಟ್ಟಿಗೆ ಹಿಂದಿರುಗಿ, ತನ್ನಯಜಮಾನನಿಗೂ ಹಾಲು ಕೊಡುತ್ತದೆ”
   ಕೊಡಗುಜಿಲ್ಲೆಯ ಸೋಮವಾರಪೇಟೆತಾಲೂಕಿನಐಗೂರು ಎಂಬಲ್ಲಿ ಪ್ರಚಲಿತದಲ್ಲಿರುವ ಹೇಳಿಕೆಯ ಪ್ರಕಾರ ಹಸುವೊಂದು ಹಟ್ಟಿಯಲ್ಲಿಕರುವಿಗೆ ಹಾಲೂಡಿಸುವುದೇಇಲ್ಲ. ಅದುತನ್ನಕರುವನ್ನುಕರೆದುಕೊಂಡುಕಾಡಿಗೆ ಹೋಗುತ್ತದೆ. ಕಾಡಿನಲ್ಲಿಕರು ಹಾಲು ಕುಡಿಯುವಾಗ, ಅದರದವಡೆಯಿಂದ ಹಾಲು ತೊಟ್ಟಿಕ್ಕುತ್ತದೆ. ಹೀಗೆ ತೊಟ್ಟಿಕ್ಕಿದ ಹಾಲು ಹುತ್ತದೊಳಗಣ ಲಿಂಗಕ್ಕೆ ಅಭಿಷೇಕವಾಗುತ್ತದೆ. ಬೆಳಗಾವಿ ಜಿಲ್ಲೆಯಕಿತ್ತೂರಿನಲ್ಲಿರುವಐತಿಹ್ಯದ ಪ್ರಕಾರ ಹಸು ಕಾಡಿಗೆ ಹೋಗಿ ಲಿಂಗಕ್ಕೆ ಹಾಲೂಡಿಸಿದ ಆನಂತರ ಹಟ್ಟಿಗೆ ಹಿಂದಿರುಗಿ ಬಂದುತನ್ನಕರುವಿಗೆಕೂಡಾ ಹಾಲೂಡಿಸುತ್ತದೆ.

    ಹುತ್ತದೊಳಗೆ ಕರಿಯಪ್ಪ ( ಹಾವು) ಮತ್ತು ಲಿಂಗಪ್ಪ ( ಶಿವಲಿಂಗ) ವಾಸವಾಗಿರುವಂತೆ, ಮುನಿಗಳೂ, ವೆಂಕಟೇಶ್ವರ, ಶ್ರೀಕೃಷ್ಣ ಮತ್ತಿತರರು ವಾಸವಾಗಿರುವಕುರಿತು ಕತೆಗಳು ಲಭಿಸುತ್ತವೆ. ಪ್ರಖ್ಯಾತವಾದ ಶ್ರೀ ಎಡೆಯೂರಿನಲ್ಲಿ ಬಿಳಿ ದನವೊಂದು ಹುತ್ತದೊಳಗೆ ಧ್ಯಾನಸ್ಥರಾಗಿದ್ದ ಸಿದ್ಧಲಿಂಗಯತಿಗಳಿಗೆ ಹಾಲು ಕುಡಿಸುತ್ತದೆ. ಕೋಲಾರಜಿಲ್ಲೆಯ ಬಂಗಾರಪೇಟೆಯ ತಮಿಳರ ನಡುವೆ ಪ್ರಚಲಿತರದಲ್ಲಿರುವ ನಂಬಿಕೆಯಂತೆ, ಶ್ರೀ ವಿಷ್ಣುವೇ ಕರುವಿನ ರೂಪದಲ್ಲಿ ಬಂದು ಕಪಿಲೆಯ ಹಾಲು ಕುಡಿಯುತ್ತಾನೆ.
   ಮಂಗಳೂರು ತಾಲ್ಲೂಕಿನ ಮುಡಿಪು ಎಂಬಲ್ಲಿರುವಐತಿಹ್ಯದ ಪ್ರಕಾರ-’ ದಲಿತ ಹೆಂಗಸೊಬ್ಬಳು ನೇಜಿ ನೆಡುತ್ತಿರುವಾಗ ಮಗುವಿನ ಅಳುವನ್ನು ಆಲಿಸುತ್ತಾಳೆ. ತಕ್ಷಣಆಕೆಯ ಮೊಲೆಯಿಂದ ಹಾಲು ಒಸರಲುಆರಂಭವಾಗುತ್ತದೆ. ಆಕೆ ಓಡೋಡಿ ಬಂದು ಮಗುವನ್ನುಎತ್ತಿಕೊಂಡುಅದಕ್ಕೆ ಹಾಲೂಡಿಸುತ್ತಾಳೆ. ಆಗ ಏಳು ಹೆಡೆಯ ಸರ್ಪವೊಂದುತಾಯಿ-ಮಗುವಿಗೆ ನೆರಳಾಗುತ್ತದೆ. ಇಲ್ಲಿದನದಜಾಗದಲ್ಲಿದಲಿತ ಮಹಿಳೆಯಿದ್ದಾಳೆ. ತುಮಕೂರುಜಿಲ್ಲೆಯಲ್ಲಿರುವ ಕತೆಗಳಲ್ಲಿ ಹಾಲು ಮಾರಲು ಹೋಗುತ್ತಿದ್ದ ಗೊಲ್ಲತಿಯೊಬ್ಬಳಿಗೆ, ಹುತ್ತದೊಳಗಿನಿಂದ ಮಗುವಿನ ಅಳು ಕೇಳಿಸುತ್ತದೆ. ಆಗ ಆಕೆ ಹಾಲನ್ನು ಹುತ್ತಕ್ಕೆ ಎರೆಯುತ್ತಾಳೆ. ದಕ್ಷಿಣಕನ್ನಡಜಿಲ್ಲೆಯಗುತ್ತಿಗಾರುಗ್ರಾಮದ ಒಳಲಂಬೆ ಎಂಬಲ್ಲಿ ದೊರಕುವಐತಿಹ್ಯವುಇನ್ನೂರೋಚಕವಾಗಿದೆ. ಅದರ ಪ್ರಕಾರ ಬ್ರಾಹ್ಮಣ ಹುಡುಗಿಯೊಬ್ಬಳು ಮದುವೆಗೆ ಮುನ್ನ ಮುಟ್ಟಾಗುತ್ತಾಳೆ. ಇದು ಸಂಪ್ರದಾಯಕ್ಕೆ ವಿರುದ್ಧವಾಗಿರುವುದರಿಂದ, ನಿಯಮದಂತೆತಂದೆಆಕೆಯನ್ನು ನದಿಯ ಮಧ್ಯದಲ್ಲಿ ನಿಲ್ಲಿಸಿ, ನೀರುಕೊಚ್ಚಿಕೊಂಡು ಹೋಗಲಿ ಎಂದು ಪ್ರಾಥರ್ಿಸಿ ಹಿಂದಿರುಗುತ್ತಾನೆ. ಆದರೆ ಹೊಳೆ ಕೊಚ್ಚಿಕೊಂಡು ಹೋಗುವುದಿಲ್ಲ. ನಿಧಾನವಾಗಿ ಹುಡುಗಿಯ ಸುತ್ತ ಹುತ್ತ ಬೆಳೆಯುತ್ತದೆ. ಹುತ್ತದೊಳಗೊಂದು ಲಿಂಗ ಮೂಡುತ್ತದೆ. ಹುಡುಗಿ ಲಿಂಗಕ್ಕೆ ಹಾಲೂಡಿಸುತ್ತಾಳೆ. ರಾಯಚೂರುಜಿಲ್ಲೆಯ ಲಿಂಗಸುಗೂರು ಎಂಬಲ್ಲಿನಐತಿಹ್ಯದಂತೆ ಹುಡುಗಿಯೊಬ್ಬಳು ತನ್ನಅಣ್ಣಂದಿರಇದಿರಿಗೆ ನಗ್ನಳಾಗಿ ನಿಲ್ಲುತ್ತಾಳೆ. ಕೋಪಗೊಂಡಅಣ್ಣಂದಿರುಆಕೆಯಎರಡೂ ಮೊಲೆಗಳನ್ನು ಕತ್ತರಿಸಿ ಕಳ್ಳಿ ಗಿಡದತ್ತಎಸೆದು ಬಿಡುತ್ತಾರೆ. ತುಂಡಾದ ಮೊಲೆಗಳು ಕಳ್ಳಿ ಗಿಡದ ಬುಡದಲ್ಲಿರುವ ಲಿಂಗಕ್ಕೆ ಕ್ಷೀರಾಭಿಷೇಕ ಮಾಡುತ್ತವೆ. ಇನ್ನು ಕೆಲವೆಡೆಗಳಲ್ಲಿ ಪೊದರು ಸವರುವಾಗಕತ್ತಿತಾಗಿ ಲಿಂಗದಿಂದರಕ್ತಒಸರುತ್ತದೆ. ಆಶ್ಚರ್ಯದ ಸಂಗತಿಎಂದರೆ, ಲಿಂಗವು ‘ಪುರುಷ’ನೇ ಆಗಿರಬೇಕಾಗಿಲ್ಲಎನ್ನುವುದು. ಅದು ‘ಸ್ತ್ರೀ’ಯನ್ನು ಕೂಡಾ ಪ್ರತಿನಿಧಿಸುತ್ತದೆ. ಮಲೆನಾಡಿನಲ್ಲಿ ಮಾರಿಯಮ್ಮ, ದುಗರ್ಾದೇವಿ, ಹೊಲೇರಮ್ಮ, ಮಹಾಂಕಾಳಿಯಮ್ಮಂದಿರನ್ನು ಲಿಂಗದರೂಪದಲ್ಲಿ ಕಲ್ಪಿಸಿ ಆರಾಧಿಸಲಾಗುತ್ತದೆ.
   ಇಂಥ ಅನೇಕ ಕತೆಗಳನ್ನು ನಾವು ಕೇಳಿದ್ದೇವೆ. ಈ ಕತೆಗಳ ಸುತ್ತಇನ್ನಷ್ಟು ನಂಬಿಕೆಗಳೂ ಆಚರಣೆಗಳೂ ಸೇರಿಕೊಂಡುತುಂಬ ಸಂಕೀರ್ಣವಾದ ಮತ್ತು ವೈವಿಧ್ಯಮಯವಾದರಚನೆಯೊಂದು ಪ್ರತೀತಗೊಂಡಿದೆ. ಈಚಿಗೆತೀರಿಕೋಡ ನನ್ನತಾಯಿ ಹಾಲು ಕರೆದು ಬರುವಾಗ, ಮನೆಯ ಮೆಟ್ಟಿಲು ಹತ್ತುವ ಮುನ್ನ, ಸೊಪ್ಪಿನತುದಿಯಲ್ಲಿ ಹನಿ ಹಾಲನ್ನಿರಿಸಿ ಕೈಮುಗಿಯುತ್ತಾಳೆ. ಯಾಕಮ್ಮಾ? ಎಂದು ಕೇಳಿದ್ರೆ ಅಂಗಾರ ಎಂಬ ದೈವಕ್ಕೆ ಹಾಲು ನೀಡಿದರೆ, ದನದ ಕೆಚ್ಚಲಲ್ಲಿ ಹಾಲು ಹೆಚ್ಚುತ್ತದೆ ಎನ್ನುತ್ತಿದ್ದಳು.
   ಈ ಹಾಲು, ಹುತ್ತ, ಲಿಂಗ ಮತ್ತು ಹಸುಗಳ ಕತೆರೋಚಕವಾಗಿದೆ. ಅವುಗಳ ವೈವಿಧ್ಯಅಸಾಧಾರಣವಾದುದು. ಈ ಕತೆ ನಮ್ಮ ದೇವಾಲಯಗಳಲ್ಲಿ ನಿರೂಪಣೆಗೊಂಡದ್ದನ್ನುಚಿತ್ರದಲ್ಲಿ ಗಮನಿಸಬಹುದು.

ಗುರುವಾರ, ಜೂನ್ 7, 2012

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಜೂನ್ 16 ರಂದು ಉದ್ಘಾಟನೆ



ಕರ್ನಾಟಕ ಜಾನಪದ ವಿಶ್ವವಿದ್ಯಾಲಯ  ಉದ್ಘಾಟನೆಗಾಗಿ ಬಹುದಿನಗಳಿಂದ ಕಾಯುತ್ತಿತ್ತು. ಅದೀಗ  ನನಸಾಗುತ್ತಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಹಾವೇರಿ ಜಿಲ್ಲೆಯ ಶಿಗ್ಗಾಂವಿ ಸಮೀಪದ ಗೊಟಗೋಡಿಯಲ್ಲಿ ಇದೇ 16ರಂದು ಉದ್ಘಾಟನೆಗೊಳ್ಳಲಿದೆ. ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ವಿ.ವಿ. ಉದ್ಘಾಟನೆ ನೆರವೇರಿಸಲಿದ್ದಾರೆ. 


 ವಿ.ವಿ. ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಒಪ್ಪಿದ್ದಾರೆ ಎಂದು ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ ಪತ್ರಿಕೆಗಳಿಗೆ ತಿಳಿಸಿದ್ದಾರೆ. 


ಈ ವಿಶ್ವವಿದ್ಯಾಲಯ ಸ್ಥಾಪನೆಗೆ ಗೊ.ರು.ಚ ಅವರ ಶ್ರಮ ದೊಡ್ಡದು. ವಿವಿಯ ಮೊದಲ ಕುಲಪತಿಗಳಾದ ಪ್ರೊ. ಅಂಬಳಿಕೆ ಹಿರಿಯಣ್ಣ ಅವರು ವಿವಿಯನ್ನು ಜನರ ಆಲೋಚನಾ ಕ್ರಮದ ಮೂಲಕ ಅಭಿವೃದ್ಧಿ ಪಡಿಸುವ ಕನಸುಗಳನ್ನು ಹೇಳಿಕೊಂಡಿದ್ದಾರೆ. ಅದು ನೆರವೇರಲಿ. ಜಾನಪದ ವಿಶ್ವವಿದ್ಯಾಲಯ ಉದ್ಘಟನೆಗೊಳ್ಳುತ್ತಿರುವ  ಈ ಹೊತ್ತಲ್ಲಿ ಕನ್ನಡ ಜಾನಪದ ಬ್ಲಾಗ್ ಶುಭ ಕೋರುತ್ತದೆ.